Skip to main content

Blog number 1930. ಭಾಗ - 2 ವಿದ್ಯಾಮಂತ್ರಿ ಎ.ಆರ್. ಬದರಿ ನಾರಾಯಣ ಅಯ್ಯಂಗಾರ್ ನೆನಪುಗಳು

#ಭಾಗ_2.

#ಆನಂದಪುರಂ_ವೇದನಾರಾಯಣ_ಭಟ್ಟರ_ಕಿರಿಯ_ಪುತ್ರ

#ಕೆ_ವಿ_ಸುರೇಶ್_ಕುಮಾರ್_ನೆನಪಿನ_ಸುರಳಿಯಲ್ಲಿ

#ವಿದ್ಯಾಮಂತ್ರಿ_ಆನಂದಪುರಂ_ಆರ್_ಬದರಿನಾರಾಯಣ_ಅಯ್ಯಂಗಾರ್_ನೆನಪುಗಳು.

#ಆಗಿನ_ಮುಖ್ಯಮಂತ್ರಿ_ನಿಜಲಿಂಗಪ್ಪನವರ_ವಿರುದ್ದ_ಬಂಡಾಯದ_ಗುಪ್ತ_ಸಭೆ_ಆನಂದಪುರಂನಲ್ಲಿ 

https://youtu.be/ZVQVnSJCCzI?feature=shared

  ರಾಜಕಾರಣದ ಬಂಡಾಯ ಈಗಿನದ್ದೇನಲ್ಲ ನಿಜಲಿಂಗಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ದೇವರಾಜ ಅರಸರ ನೇತೃದಲ್ಲಿ ನಿಜಲಿಂಗಪ್ಪನವರ ವಿರೋದಿಗಳು ಆನಂದಪುರಂನ ಎ.ಆರ್. ಬದರಿ ನಾರಾಯಣರ ತೋಟದ ಮನೆಯಲ್ಲಿ ಅನೇಕ ರಹಸ್ಯ ಸಭೆಗಳು ನಡೆಯುತ್ತಿದ್ದವು.
   ಆಗೆಲ್ಲ ಬಂದ ಅತಿಥಿಗಳಿಗೆ ಸತ್ಕಾರ ಮಾಡುವ ಜವಾಬ್ದಾರಿ ಸುರೇಶ್ ಕುಮಾರ್ ಮತ್ತು ಅವರಣ್ಣ ರಂಗನಾಥ ಭಟ್ಟರದ್ದು.
  ಗ್ರಾಮ ಲೆಖ್ಖಿಗರಾಗಿದ್ದ ರಂಗನಾಥ ಭಟ್ಟರಿಗೆ ದೂರದ ಊರಿಗೆ ವಗಾ೯ವಣೆ ಆದಾಗ ರಾಜಕಾರಣದಿಂದ ನಿವೃತ್ತರಾಗಿದ್ದ ಬದರಿ ನಾರಾಯಣ ಅಯ್ಯಂಗಾರ್ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರ ಮನೆಗೆ ಸ್ವತಃ ಬಂದು ವರ್ಗಾವಣೆ ಆದೇಶ ರದ್ದು ಮಾಡಿಸುತ್ತಾರೆ ಆಗ ಮುಖ್ಯಮಂತ್ರಿ PS ಆಗಿದ್ದವರು ತಾಳಗುಪ್ಪ ರಾಮಪ್ಪನವರು.
   ದೇವರಾಜ ಅರಸು ಸಂಪುಟದಲ್ಲಿ ವಿದ್ಯಾಮಂತ್ರಿ ಆಗಿದ್ದ ಬದರಿ ನಾರಾಯಣ ಅಯ್ಯಂಗಾರ್ ಕರ್ನಾಟಕ ನಾಮಕರಣಕ್ಕೆ ಪ್ರಮುಖ ಕಾರಣ ಕರ್ತರು.

Comments