Blog number 1926. ಆಹಾರ ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಆಹಾರ ಕಲಬೆರಕೆಯ ಶಿವಮೊಗ್ಗ ಜಿಲ್ಲೆಯ ಹೈ ಪ್ರೊಪೈಲ್ ಕೇಸ್ ಹಳ್ಳ ಹಿಡಿದ ಘಟನೆ
#ಆಹಾರ_ಕಲಬೆರಕೆಯ_ಹೈಪ್ರೊಪೈಲ್_ಕೇಸ್ #ಸ್ವತಃ_ಆಹಾರಮಂತ್ರಿ_ಭಾಗವಹಿಸಿದ್ದ_ಜಿಲ್ಲಾ_ಪಂಚಾಯತ್_ಸಭೆಯಲ್ಲಿ_ಪ್ರಸ್ತಾವನೆ. #ಕೇಸ್_ದಾಖಲಿಸಲು_ಸೂಚಿಸಿದ_ಆಹಾರ_ಮಂತ್ರಿಗಳು #ರಾಜ್ಯದ_ಅನೇಕ_ಜಿಲ್ಲೆಯ_ಅಂಗನವಾಡಿಗೆ_ಕಲಬೆರಕೆ_ಎಣ್ಣೆ_ಸರಬರಾಜು #ಪ್ರಯೋಗಾಲಯದ_ಪರೀಕ್ಷೆಯಲ್ಲಿ_ಸಾಬೀತು. #ರಾಜಿ_ಪಂಚಾಯಿತಿಗೆ_ಬಂದವರಿಗೆ_ನನ್ನ_ಪ್ರಶ್ನೆ #ನಿಮ್ಮ_ಮಕ್ಕಳ_ಸರ್ಕಾರದ_ಅಂಗನವಾಡಿಗೆ_ಕಳಿಸುತ್ತೀರಾ #ನನ್ನ_ಮಕ್ಕಳನ್ನು_ಸರಕಾರಿ_ಅಂಗನವಾಡಿಯಲ್ಲೇ_ಓದಿಸಿದ್ದೆ #ದಾಖಲಾದ_ಕೇಸ್_ಏನಾಯಿತು? ನಮ್ಮ ಜಿಲ್ಲೆಯವರೇ ಆದ ಜೆ.ಹೆಚ್.ಪಟೇಲರು ಮುಖ್ಯಮಂತ್ರಿಗಳು ಆಗ ಜಿ.ಬಸವಣ್ಯಪ್ಪನವರು ಅವರ ಸಂಪುಟದಲ್ಲಿ ಆಹಾರ ಸಚಿವರು ಮತ್ತು ಶಿವಮೊಗ್ಗ ಉಸ್ತುವಾರಿ ಸಚಿವರು ನಾನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ. ಆಗೆಲ್ಲ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಭಾಗವಹಿಸುತ್ತಿದ್ದರು ಅಂತಹ ಒಂದು ಜಿಲ್ಲಾ ಪಂಚಾಯತ್ ಸಭೆ ಅಧ್ಯಕ್ಷರಾಗಿದ್ದ ಶ್ರೀಮತಿ ಬಲ್ಕೀಷ್ ಬಾನು ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿತ್ತು. ಜೆ. ಹೆಚ್.ಪಟೇಲರ ಸಂಪುಟ ಸಭೆಯಲ್ಲಿ ಆಹಾರ ಕಲಬೆರಕೆ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಾಯ್ದೆಯಲ್ಲಿ ಕೆಲ ಬದಲಾವಣೆಗೆ ಆಹಾರ ಸಚಿವರು ಸಂಪುಟದ ಅನುಮೋದನೆ ಪಡೆದು ಕೆಲ ದಿನಗಳಾಗಿತ್ತು. ನಾನು ಅವತ್ತಿನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಆಹಾರ ಕಲಬೆರಕೆ ನಿಯಂತ್ರಣ...