#ನಿಮ್ಮ_ಜೋಗಜಲಪಾತ_ಪ್ರವಾಸದ_ಮಾರ್ಗದಲ್ಲಿದೆ
#ಬಂಗಾರ_ಕುಸುಮ_ಜಲಪಾತ
#ದೇಶದ_ಏಕೈಕ_ಪರಿಸರವಾದಿ_ಹೆಸರಿನ_ಜಲಪಾತ
#ಗೇರುಸೊಪ್ಪೆ_ಸಮೀಪದ_ಕೆಪ್ಪ_ಜೋಗಕ್ಕೆ_ಪರಿಸರವಾದಿಗಳು
#ಖ್ಯಾತ_ಪರಿಸರ_ಹೋರಾಟಗಾರ್ತಿ_ಡಾಕ್ಟರ್_ಕುಸುಮ_ಸೊರಬ_ಹೆಸರು
#ಚಿರಸ್ಥಾಯಿಗೊಳಿಸುವ_ಕೆಲಸವಾಗಿ_ಬಂಗಾರ_ಕುಸುಮ_ಜಲಪಾತ_ಎಂದು_ನಾಮಕರಣ_ಮಾಡಿದ್ದಾರೆ.
#mavinagundi #jogfalls #bangarakusumafalls
#kusumasoraba #honnavara
ನೀವು ಜೋಗ್ ಫಾಲ್ಸ್ ನೋಡಿದ ನಂತರ ಸಮೀಪದ #ಮಾವಿನಗುಂಡಿ ವೃತ್ತದಿಂದ ಗೇರುಸೊಪ್ಪ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 30 ಕಿಲೋ ಮೀಟರ್ ಪ್ರಯಾಣಿಸಿದರೆ ಸಮೀಪದ ಮಾಸ್ತಿಕಾಂಬಾ ದೇವಾಲಯದ ಸಮೀಪ ಬಲಭಾಗದಲ್ಲಿದೆ #ಬಂಗಾರ_ಕುಸುಮ_ಜಲಪಾತ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಎಲ್ಲರಿಗೂ ಪಕ್ಕದ ಸಹ್ಯಾದ್ರಿ ಗಿರಿ ಶ್ರೇಣಿಯಿಂದ ದುಮುಕುವ ಈ ಜಲಪಾತ ಈ ಮಾರ್ಗದಲ್ಲಿ ಮಳೆಗಾಲ ಪೂರ್ತಿ ಮತ್ತು ಜನವರಿ ತಿಂಗಳ ತನಕ ಜಲಪಾತದ ಸುಂದರ ದೃಶ್ಯ ನೋಡಲು ಸಿಗುತ್ತದೆ.
ಈ ಜಲಪಾತದ ಹೆಸರಿನ ನಾಮಫಲಕ ಅಲ್ಲೆಲ್ಲೂ ಇಲ್ಲವಾದ್ದರಿಂದ ಈ ಜಲಪಾತ ನೋಡಿದವರಿಗೆ ಇದರ ಹೆಸರು ಗೊತ್ತೇ ಇಲ್ಲ.
ಈ ಜಲಪಾತಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಹರಿದು ಬರುವ ಹೊಳೆ ಮಳೆಗಾಲದಲ್ಲಿ ಜಲಪಾತವಾಗಿ ಶರಾವತಿ ನದಿಗೆ ಸೇರಿ ಅರಬೀ ಸಮುದ್ರ ಸೇರುತ್ತದೆ.
ಈ ಜಲಪಾತಕ್ಕೆ ಈ ಹೆಸರು ಬರಲು ಸಕಾರಣವಿದೆ ಮತ್ತು ಪರಿಸರಾಸಕ್ತರ ಕಾಳಜಿ ಕೂಡ ಕಾರಣ.
ಗೇರುಸೊಪ್ಪೆ ಸಮೀಪದ ಕೆಪ್ಪ ಜೋಗಕ್ಕೆ ಪರಿಸರವಾದಿಗಳು ಖ್ಯಾತ ಪರಿಸರ ಹೋರಾಟಗಾರ್ತಿ ಡಾಕ್ಟರ್ ಕುಸುಮ ಸೊರಬ ಹೆಸರು ಚಿರಸ್ಥಾಯಿಗೊಳಿಸುವ ಕೆಲಸವಾಗಿ ಬಂಗಾರ ಕುಸುಮ ಜಲಪಾತ ಎಂದು ನಾಮಕರಣ ಮಾಡಿದ್ದಾರೆ.
ಜೋಗ್ ಜಲಪಾತ ನೋಡಿ ಮಾವಿನಗುಂಡಿ ಜಂಕ್ಷನ್ ನಿಂದ ಹೊನ್ನಾವರದ ಮಾರ್ಗದಲ್ಲಿ ಘಟ್ಟ ಇಳಿದು ಗೇರುಸೊಪ್ಪೆಯಿಂದ ಮುಂದೆ ಸಾಗಿದರೆ ಬಲಬಾಗದಲ್ಲಿ
ಮಾಸ್ತಿಕಾಂಭಾ ದೇವಾಲಯವಿದೆ ಅದರ ಹಿಂಬದಿಯಿಂದ ಗೇರುಸೊಪ್ಪೆ ಡ್ಯಾಂ ನಿರ್ಮಾಣದ ಸಮಯದಲ್ಲಿ ಕಲ್ಲು ಮಣ್ಣು ಸಾಗಿಸಲು ಮಾಡಿದ ಕಚ್ಚಾ ರಸ್ತೆಯಲ್ಲಿ ಒಂದು ಕಿ.ಮಿ ಸಾಗಿದರೆ ಬಂಗಾರ - ಕುಸುಮ ಜಲಪಾದ ಸಮೀಪ ತಲುಪಿ ಜಲಪಾತದ ಪಾದ ದಶ೯ನವಾಗುತ್ತದೆ.
ಈ ಮಾರ್ಗದಲ್ಲಿ ಸಂಚರಿಸುವವರಿಗೆ ಅನೇಕ ಕೋನಗಳಿಂದ ಮಳೆಗಾಲದಿಂದ ಜನವರಿ ತಿಂಗಳವರೆಗೆ ಈ ಜಲಪಾತ ದರ್ಶನ ಆಗುತ್ತದೆ.
ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಒಳಬಾಗದ ಲಂಬಾಪುರ ಮತ್ತು ಇಟಗಿಯ ಹೊಳೆ ಎತ್ತರದ ಗುಡ್ಡದ ಮೇಲಿಂದ ದಟ್ಟ ಅರಣ್ಯದಲ್ಲಿ ಹಂತ ಹಂತವಾಗಿ ಬಿದ್ದು ಚದುರಿ ನಂತರ ಶರಾವತಿ ನದಿಗೆ ಸೇರಿ ಅರಬ್ಬಿ ಸಮುದ್ರ ಸೇರುತ್ತದೆ.
ಇದನ್ನು ಕೆಪ್ಪ ಜೋಗ ಎಂಬ ಹೆಸರಲ್ಲಿ ಮತ್ತು ಚಿಕ್ಕ ಜಲಪಾತ ಎಂದಲೂ ಸ್ಥಳಿಯ ಜನ ಕರೆಯುತ್ತಿದ್ದರು.
ಈ ಜಲಪಾತದ ಎತ್ತರವೂ ಅಧಿಕೃತವಾಗಿ ಈವರೆಗೆ ಅಳತೆ ಆಗಿ ದಾಖಲಾಗಿಲ್ಲ!!.
ಉತ್ತರ ಕನ್ನಡ ಜಿಲ್ಲೆಯ ಪರಿಸರವಾದಿಗಳು ಈ ಜಲಪಾತಕ್ಕೆ ಖ್ಯಾತ ಪರಿಸರವಾದಿ #ಡಾ_ಕುಸುಮಾ_ಸೊರಬ ಅವರ ಹೆಸರು ಮತ್ತು ಸ್ಥಳಿಯ ಬಂಗಾರು ಮಕ್ಕಿ ದೇವಾಲಯದ ಹೆಸರು ಸೇರಿಸಿ #ಬಂಗಾರ_ಕುಸುಮ_ಜಲಪಾತ ಎಂದು ನಾಮಕರಣ ಮಾಡಿದ್ದಾರೆ.
ಹಿಮಾಚಲಪ್ರದೇಶ ರಾಜ್ಯದ ಪ್ರಸಿದ್ಧ ನೋಹಾಕಾಲಿಕಾ ಜಲಪಾತಕ್ಕೆ ಇದೇ ರೀತಿ ಸ್ಥಳೀಯರು ನಾಮಕರಣ ಮಾಡಿದ ಹೆಸರೇ ಪ್ರಸಿದ್ಧಿ ಪಡೆದಿದೆ.
ಡಾ. ಕುಸುಮಾ ಸೊರಬ ಹೊನ್ನಾವರ ಸಮೀಪದ ಕೆರವಳ್ಳಿಯಲ್ಲಿ 1937 ರಲ್ಲಿ ಜನಿಸಿದವರು.
ನಂತರ MBBS - MS General Surgen ಮಾಡಿ ಮುಂಬೈನಲ್ಲಿ ಸೇವೆ ಸಲ್ಲಿಸಿ ನಂತರ ತಮ್ಮ ಹುಟ್ಟೂರು ಸಮೀಪದ ಹೊನ್ನಾವರದ ಕಾಸರಕೋಡಿನಲ್ಲಿ ಹನ್ನೊಂದು ಎಕರೆ ಜಮೀನು ಖರೀದಿಸಿ ಅಲ್ಲಿ ಸ್ನೇಹ ಕುಂಜ ವಿವೇಕಾನಂದ ಆರೋಗ್ಯ ದಾಮ ನಿರ್ಮಿಸಿದ್ದರು.
ಗಾಂಧೀವಾದಿ ಪರಿಸರ ಹೋರಾಟಗಾರ್ತಿ ಆದ ಡಾ. ಕುಸುಮಾ ಸೊರಬ ಸಾಗರ ತಾಲ್ಲೂಕಿನ ಹಂದಿಗೋಡು ನಿಗೂಡ ಕಾಯಿಲೆ ಸಂಶೋದನೆಗಾಗಿ 1985 ರಲ್ಲಿ ಸ್ವಯಂ ಬಾಗಿ ಆಗಿದ್ದವರು.
ಅವರು ರಾತ್ರಿ ಪ್ರಯಾಣದಲ್ಲಿ ಬಸ್ಸಿನಿಂದ ಇಳಿದಾಗ ಅಪಘಾತವಾಗಿ ಇಹಲೋಕ ತ್ಯಜಿಸಿದರು ಅವರ ಪಶ್ಚಿಮ ಘಟ್ಟ ಉಳಿಸುವ, ಪರಿಸರ ಸಂರಕ್ಷಣೆ, ಜಲಮೂಲ - ನದಿ ಮೂಲಗಳ ಸಂರಕ್ಷಣೆಗಾಗಿ ಜನ ಜಾಗೃತಿ ಮತ್ತು ಹೊರಾಟಗಳನ್ನು ಮಾಡಿದವರು.
ಅವರ ಈ ಹೋರಾಟಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರೋದ ಕಟ್ಟಿಕೊಂಡಿದ್ದರು ಅವರ ಸ್ಮರಣೆಗಾಗಿ ಪರಿಸರವಾದಿಗಳು ಅವರ ಹೆಸರು ಚಿರಸ್ಥಾಯಿ ಮಾಡುವ ಕೆಪ್ಪ ಜೋಗ ಜಲಪಾತಕ್ಕೆ ಬಂಗಾರ ಕುಸುಮ ಜಲಪಾತ ಎ೦ದು ನಾಮಕರಣ ಮಾಡಿ ಯೋಗ್ಯ ಕೆಲಸ ಮಾಡಿದ್ದಾರೆ.
Comments
Post a Comment