Skip to main content

3476. ಕುಸುಮಸೊರಬ

#ನಿಮ್ಮ_ಜೋಗಜಲಪಾತ_ಪ್ರವಾಸದ_ಮಾರ್ಗದಲ್ಲಿದೆ

#ಬಂಗಾರ_ಕುಸುಮ_ಜಲಪಾತ

#ದೇಶದ_ಏಕೈಕ_ಪರಿಸರವಾದಿ_ಹೆಸರಿನ_ಜಲಪಾತ
 #ಗೇರುಸೊಪ್ಪೆ_ಸಮೀಪದ_ಕೆಪ್ಪ_ಜೋಗಕ್ಕೆ_ಪರಿಸರವಾದಿಗಳು 

#ಖ್ಯಾತ_ಪರಿಸರ_ಹೋರಾಟಗಾರ್ತಿ_ಡಾಕ್ಟರ್_ಕುಸುಮ_ಸೊರಬ_ಹೆಸರು 

#ಚಿರಸ್ಥಾಯಿಗೊಳಿಸುವ_ಕೆಲಸವಾಗಿ_ಬಂಗಾರ_ಕುಸುಮ_ಜಲಪಾತ_ಎಂದು_ನಾಮಕರಣ_ಮಾಡಿದ್ದಾರೆ.


#mavinagundi #jogfalls #bangarakusumafalls 
#kusumasoraba #honnavara

   ನೀವು ಜೋಗ್ ಫಾಲ್ಸ್ ನೋಡಿದ ನಂತರ ಸಮೀಪದ #ಮಾವಿನಗುಂಡಿ ವೃತ್ತದಿಂದ ಗೇರುಸೊಪ್ಪ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 30 ಕಿಲೋ ಮೀಟರ್ ಪ್ರಯಾಣಿಸಿದರೆ ಸಮೀಪದ ಮಾಸ್ತಿಕಾಂಬಾ ದೇವಾಲಯದ ಸಮೀಪ ಬಲಭಾಗದಲ್ಲಿದೆ #ಬಂಗಾರ_ಕುಸುಮ_ಜಲಪಾತ.

   ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಎಲ್ಲರಿಗೂ ಪಕ್ಕದ ಸಹ್ಯಾದ್ರಿ ಗಿರಿ ಶ್ರೇಣಿಯಿಂದ ದುಮುಕುವ ಈ  ಜಲಪಾತ ಈ ಮಾರ್ಗದಲ್ಲಿ ಮಳೆಗಾಲ ಪೂರ್ತಿ ಮತ್ತು ಜನವರಿ ತಿಂಗಳ ತನಕ ಜಲಪಾತದ ಸುಂದರ ದೃಶ್ಯ ನೋಡಲು ಸಿಗುತ್ತದೆ.

  ಈ ಜಲಪಾತದ ಹೆಸರಿನ ನಾಮಫಲಕ ಅಲ್ಲೆಲ್ಲೂ ಇಲ್ಲವಾದ್ದರಿಂದ ಈ ಜಲಪಾತ ನೋಡಿದವರಿಗೆ ಇದರ ಹೆಸರು ಗೊತ್ತೇ ಇಲ್ಲ.

     ಈ ಜಲಪಾತಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಿಂದ ಹರಿದು ಬರುವ ಹೊಳೆ ಮಳೆಗಾಲದಲ್ಲಿ ಜಲಪಾತವಾಗಿ ಶರಾವತಿ ನದಿಗೆ ಸೇರಿ ಅರಬೀ ಸಮುದ್ರ ಸೇರುತ್ತದೆ.

   ಈ ಜಲಪಾತಕ್ಕೆ ಈ ಹೆಸರು ಬರಲು ಸಕಾರಣವಿದೆ ಮತ್ತು ಪರಿಸರಾಸಕ್ತರ ಕಾಳಜಿ ಕೂಡ ಕಾರಣ.

 ಗೇರುಸೊಪ್ಪೆ ಸಮೀಪದ ಕೆಪ್ಪ ಜೋಗಕ್ಕೆ ಪರಿಸರವಾದಿಗಳು ಖ್ಯಾತ ಪರಿಸರ ಹೋರಾಟಗಾರ್ತಿ ಡಾಕ್ಟರ್ ಕುಸುಮ ಸೊರಬ ಹೆಸರು ಚಿರಸ್ಥಾಯಿಗೊಳಿಸುವ ಕೆಲಸವಾಗಿ ಬಂಗಾರ ಕುಸುಮ ಜಲಪಾತ ಎಂದು ನಾಮಕರಣ ಮಾಡಿದ್ದಾರೆ.

   ಜೋಗ್ ಜಲಪಾತ ನೋಡಿ ಮಾವಿನಗುಂಡಿ ಜಂಕ್ಷನ್ ನಿಂದ ಹೊನ್ನಾವರದ ಮಾರ್ಗದಲ್ಲಿ ಘಟ್ಟ ಇಳಿದು ಗೇರುಸೊಪ್ಪೆಯಿಂದ ಮುಂದೆ ಸಾಗಿದರೆ ಬಲಬಾಗದಲ್ಲಿ
ಮಾಸ್ತಿಕಾಂಭಾ ದೇವಾಲಯವಿದೆ ಅದರ ಹಿಂಬದಿಯಿಂದ ಗೇರುಸೊಪ್ಪೆ ಡ್ಯಾಂ ನಿರ್ಮಾಣದ ಸಮಯದಲ್ಲಿ ಕಲ್ಲು ಮಣ್ಣು ಸಾಗಿಸಲು ಮಾಡಿದ ಕಚ್ಚಾ ರಸ್ತೆಯಲ್ಲಿ ಒಂದು ಕಿ.ಮಿ ಸಾಗಿದರೆ ಬಂಗಾರ - ಕುಸುಮ ಜಲಪಾದ ಸಮೀಪ ತಲುಪಿ ಜಲಪಾತದ ಪಾದ ದಶ೯ನವಾಗುತ್ತದೆ.

   ಈ ಮಾರ್ಗದಲ್ಲಿ ಸಂಚರಿಸುವವರಿಗೆ ಅನೇಕ ಕೋನಗಳಿಂದ ಮಳೆಗಾಲದಿಂದ ಜನವರಿ ತಿಂಗಳವರೆಗೆ ಈ ಜಲಪಾತ ದರ್ಶನ ಆಗುತ್ತದೆ.

   ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಒಳಬಾಗದ ಲಂಬಾಪುರ ಮತ್ತು ಇಟಗಿಯ ಹೊಳೆ ಎತ್ತರದ ಗುಡ್ಡದ ಮೇಲಿಂದ ದಟ್ಟ ಅರಣ್ಯದಲ್ಲಿ ಹಂತ ಹಂತವಾಗಿ ಬಿದ್ದು ಚದುರಿ ನಂತರ ಶರಾವತಿ ನದಿಗೆ ಸೇರಿ ಅರಬ್ಬಿ ಸಮುದ್ರ ಸೇರುತ್ತದೆ.

   ಇದನ್ನು ಕೆಪ್ಪ ಜೋಗ ಎಂಬ ಹೆಸರಲ್ಲಿ ಮತ್ತು ಚಿಕ್ಕ ಜಲಪಾತ ಎಂದಲೂ ಸ್ಥಳಿಯ ಜನ ಕರೆಯುತ್ತಿದ್ದರು.

   ಈ ಜಲಪಾತದ ಎತ್ತರವೂ ಅಧಿಕೃತವಾಗಿ ಈವರೆಗೆ ಅಳತೆ ಆಗಿ ದಾಖಲಾಗಿಲ್ಲ!!.

  ಉತ್ತರ ಕನ್ನಡ ಜಿಲ್ಲೆಯ ಪರಿಸರವಾದಿಗಳು ಈ ಜಲಪಾತಕ್ಕೆ ಖ್ಯಾತ ಪರಿಸರವಾದಿ #ಡಾ_ಕುಸುಮಾ_ಸೊರಬ ಅವರ ಹೆಸರು ಮತ್ತು ಸ್ಥಳಿಯ ಬಂಗಾರು ಮಕ್ಕಿ ದೇವಾಲಯದ ಹೆಸರು ಸೇರಿಸಿ #ಬಂಗಾರ_ಕುಸುಮ_ಜಲಪಾತ ಎಂದು ನಾಮಕರಣ ಮಾಡಿದ್ದಾರೆ.

   ಹಿಮಾಚಲಪ್ರದೇಶ ರಾಜ್ಯದ ಪ್ರಸಿದ್ಧ ನೋಹಾಕಾಲಿಕಾ ಜಲಪಾತಕ್ಕೆ ಇದೇ ರೀತಿ ಸ್ಥಳೀಯರು ನಾಮಕರಣ ಮಾಡಿದ ಹೆಸರೇ ಪ್ರಸಿದ್ಧಿ ಪಡೆದಿದೆ.

   ಡಾ. ಕುಸುಮಾ ಸೊರಬ ಹೊನ್ನಾವರ ಸಮೀಪದ ಕೆರವಳ್ಳಿಯಲ್ಲಿ 1937 ರಲ್ಲಿ ಜನಿಸಿದವರು.

   ನಂತರ MBBS - MS General Surgen ಮಾಡಿ ಮುಂಬೈನಲ್ಲಿ ಸೇವೆ ಸಲ್ಲಿಸಿ ನಂತರ ತಮ್ಮ ಹುಟ್ಟೂರು ಸಮೀಪದ ಹೊನ್ನಾವರದ ಕಾಸರಕೋಡಿನಲ್ಲಿ ಹನ್ನೊಂದು ಎಕರೆ ಜಮೀನು ಖರೀದಿಸಿ ಅಲ್ಲಿ ಸ್ನೇಹ ಕುಂಜ ವಿವೇಕಾನಂದ ಆರೋಗ್ಯ ದಾಮ ನಿರ್ಮಿಸಿದ್ದರು.

   ಗಾಂಧೀವಾದಿ ಪರಿಸರ ಹೋರಾಟಗಾರ್ತಿ ಆದ ಡಾ. ಕುಸುಮಾ ಸೊರಬ ಸಾಗರ ತಾಲ್ಲೂಕಿನ ಹಂದಿಗೋಡು ನಿಗೂಡ ಕಾಯಿಲೆ ಸಂಶೋದನೆಗಾಗಿ 1985 ರಲ್ಲಿ ಸ್ವಯಂ ಬಾಗಿ ಆಗಿದ್ದವರು.

   ಅವರು ರಾತ್ರಿ ಪ್ರಯಾಣದಲ್ಲಿ ಬಸ್ಸಿನಿಂದ ಇಳಿದಾಗ ಅಪಘಾತವಾಗಿ ಇಹಲೋಕ ತ್ಯಜಿಸಿದರು ಅವರ ಪಶ್ಚಿಮ ಘಟ್ಟ ಉಳಿಸುವ, ಪರಿಸರ ಸಂರಕ್ಷಣೆ, ಜಲಮೂಲ - ನದಿ ಮೂಲಗಳ ಸಂರಕ್ಷಣೆಗಾಗಿ ಜನ ಜಾಗೃತಿ ಮತ್ತು ಹೊರಾಟಗಳನ್ನು ಮಾಡಿದವರು.

   ಅವರ ಈ ಹೋರಾಟಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರೋದ ಕಟ್ಟಿಕೊಂಡಿದ್ದರು ಅವರ ಸ್ಮರಣೆಗಾಗಿ ಪರಿಸರವಾದಿಗಳು ಅವರ ಹೆಸರು ಚಿರಸ್ಥಾಯಿ ಮಾಡುವ ಕೆಪ್ಪ ಜೋಗ ಜಲಪಾತಕ್ಕೆ ಬಂಗಾರ ಕುಸುಮ ಜಲಪಾತ ಎ೦ದು ನಾಮಕರಣ ಮಾಡಿ ಯೋಗ್ಯ ಕೆಲಸ ಮಾಡಿದ್ದಾರೆ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...