Skip to main content

3436. ವರದಳ್ಳಿಯ ತಪಸ್ವಿನಿ ಪಾರ್ವತಮ್ಮ

#ವರದಳ್ಳಿಯ_ತಪಸ್ವಿನಿ_ಮಾಹಿತಿ_ಗೊತ್ತಾ?

#ಈಗ_ಜಗಮಗಿಸುತ್ತಿರುವ_ಶ್ರೀಧರತೀರ್ಥ_ದಟ್ಟಾರಣ್ಯ_ಕಾಡಾಗಿದ್ದು 

#ಶ್ರೀಧರ_ಸ್ವಾಮಿಗಳು_ಪ್ರವೇಶಿಸುವುದಕ್ಕಿಂತ_ಮುಂಚೆ_ಒಬ್ಬ_ಯುವತಿ_ಏಕಾಂತ_ಅನುಷ್ಟಾನ_ಮಾಡುತ್ತಿದ್ದಳು.

#ಅವಳ_ಹೆಸರು_ಪಾರ್ವತಮ್ಮ_ಎಂದಿತ್ತು.


#Varadalli #Tapaswini #Parvathamma #Sridharswamy #Sagar #Ganapathibhat 

   ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವರದಳ್ಳಿ #ಶ್ರೀದರಸ್ವಾವಿಗಳ ತಪೋಭೂಮಿ ಅಲ್ಲಿ ಅವರ ಪಾದಾರ್ಪಣೆಗೆ ಮೊದಲೇ ಅಲ್ಲಿ ತಪೋ ಸಾಧನೆ ಮಾಡುತ್ತಿದ್ದ #ಪಾರ್ವತಿ ಎಂಬ ತಪಸ್ವಿನಿ ಅಲ್ಲಿದ್ದರೆಂಬ ಸುದ್ದಿ ಜನ ಮರೆತಿದ್ದಾರೆ.

   ಈ ವಿಚಾರವನ್ನು ಹಿರಿಯರಾಗಿದ್ದ ಎಡಜೆಗಳೆಮನೆಯ ಅಣ್ಣಪ್ಪ ಆಚಾರ್ ಅವರಿಂದ ಒಮ್ಮೆ ಕೇಳಿದ್ದೆ ಈಗ ಅವರು ಇಹ ಲೋಕ ತ್ಯಜಿಸಿದ್ದಾರೆ ಅವರು ಶ್ರೀಧರ ಸ್ವಾಮಿಗಳ ತಪಸ್ಸಿನ ಗುಡಿಸಲು ದುರಸ್ತಿ ಮಾಡಿದವರು.

    ಇದೇ ವಿಚಾರ ಶೀಧರ ಸ್ವಾಮಿಗಳ ಭಕ್ತರಾದ ಜಿಗಳೆಮನೆ ಗಣಪತಿ ಭಟ್ಟರು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಬರೆದಿದ್ದಾರೆ ಆದರ ಯಥಾನಕಲು ಕೆಳಗಿದೆ ಓದಿ....

     ಈಗ ಜಗಮಗಿಸುತ್ತಿರುವ ಶ್ರೀಧರತೀರ್ಥ ದಟ್ಟಾರಣ್ಯ ಕಾಡಾಗಿದ್ದು ಶ್ರೀಧರಸ್ವಾಮಿಗಳು ಪ್ರವೇಶಿಸುವುದಕ್ಕಿಂತ ಮುಂಚೆ ಒಬ್ಬ ಯುವತಿ ಏಕಾಂತ ಅನುಷ್ಟಾನ ಮಾಡುತ್ತಿದ್ದಳು  ಅವಳ ಹೆಸರು #ಪಾರ್ವತಮ್ಮ ಎಂದಿತ್ತು.

    ಅಕೆ ಎಸ್ಕಿಮೋ ಮನೆಗಳ ತರಹದ ಒಂದು ಗುಹೆ ಕಟ್ಟಿಸಿಕೊಂಡು ಅದರಲ್ಲಿ ಏಕಾಂಗಿಯಾಗಿ ಇರುತ್ತಿದ್ದಳು.

     ಈಗಿನ ಆಫೀಸ್ ಅಜುಬಾಜಿನಲ್ಲಿ ದಟ್ಟ ಕಾನನದ ನಡುವೆ ಈ ಗುಹೆ ಇತ್ತು ಈ ಗುಹೆ ಬಿಟ್ಟರೆ ಮತ್ತೇ ಅಡಿಗೆಮನೆ ಇತ್ಯಾದಿ ಯಾವುದು ಇರಲಿಲ್ಲ ಆ ಯುವತಿ ಯಾವುದೇ ಅಡುಗೆ ತಯಾರು ಮಾಡುವ ವ್ಯವಸ್ಥೆ ಇಟ್ಟುಕೊಂಡಿದ್ದು ಕಂಡು ಬರುತ್ತಿರಲಿಲ್ಲ.

   ಆಗಿನ ದಿನ ಗಳಲ್ಲಿ ಹುಲಿಗಳು ಸಹ ಈ ಪ್ರದೇಶದಲ್ಲಿ  ಅಡ್ಡಾಡುತ್ತಿದ್ದವು 1956- 57 ಅಜುಬಾಜಿನಲ್ಲಿ ಈಕೆ ಇದ್ದಳೆಂದು ನನ್ನ ಅಂದಾಜು.

     ಜಿಗಳೇಮನೆ ಊರಿನವರು ಅಕೆಗೆ ಹಣ್ಣು ಹಂಪಲು, ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಮಾಡಿದ ಸಿಹಿ ತಿನಿಸು ಇತ್ಯಾದಿ ತೆಗೆದುಕೊಂಡು ಹೋಗಿಕೊಡುತ್ತಿದ್ದರು. 

   ನನ್ನ ಅಮ್ಮ ಹೀಗೆ ಕೊಡಲು ಹೋಗುತ್ತಿದ್ದಾಗ ನಾನೂ ಅವಳೊಟ್ಟಿಗೆ ಹೋಗುತ್ತಿದ್ದೆ.

    ಸಮೃದ್ಧಿ ನೀರು ಹರಿಯುತ್ತಿತ್ತು ನಮ್ಮ ಪಕ್ಕದ ಮನೆಯ ಭವಾನಮ್ಮ ಅವರು ಆ ಯುವತಿಯ ಅಧಿಕೃತ ವಕ್ತಾರರು, ಪರ್ಸನಲ್ ಸೆಕ್ರೆಟರಿ ಆಗಿದ್ದರು. 

   ದೇವಿ ದೇವಸ್ಥಾನ ಕ್ಕೆ ಶ್ರೀಧರ ಸ್ವಾಮಿಗಳ ಪದಾರ್ಪಣೆ ಆಗಿತ್ತು ಆದರೆ ಶ್ರೀಧರ ತೀರ್ಥ ಎಂದು ಕರೆಯುವ ಭಾಗ ಯಾರ ಗಮನದಲ್ಲಿ ಇದ್ದಂತಿರಲಿಲ್ಲ.

    ಈಗ ಶ್ರೀಧರ ತೀರ್ಥ ಎಂದು ಹೆಸರಿಸಲ್ಪಡುವ ಆ ಭಾಗಕ್ಕೆ ಯಾವ ಹೆಸರಿತ್ತು ನನಗೆ ಗೊತ್ತಿಲ್ಲ ನನಗೆ ಆಗ 5-6 ವರ್ಷ.

    ಪಾರ್ವತಮ್ಮ ಸೊಂಟಕ್ಕೆ ಟವಲ್ ತರಹದ್ದು ಸುತ್ತಿಕೊಳುತ್ತಿದ್ದಳು, ಕೊರಳಲ್ಲಿ ಮೂರ್ನಾಲ್ಕು ರುದ್ರಾಕ್ಷಿ ಸರ ಹಾಕಿ ಕೊಳ್ಳುತ್ತಿದ್ದಳು.

   ಭಕ್ತರೇನು ಯಾರು ಹೆಚ್ಚಿರಲಿಲ್ಲ, ನಾವು ಹೊದಾಗಲೆಲ್ಲಾ ಆಕೆ ಗುಹೆಯ ಬಾಗಿಲು ಹಾಕಿಕೊಂಡಿರುತ್ತಿದ್ದಳು, ನನ್ನ ಅಮ್ಮ ಕರೆದು ಬಾಗಿಲು ತೆಗೆಸುತ್ತುದ್ದಳು,ಬಾಗಿಲು ಎಂದರೆ ಒಬ್ಬರು ನುಸುಳಿಕೊಂಡು ಹೋಗುವಷ್ಟಿತ್ತು.

   ಶ್ರೀಧರ ತೀರ್ಥದ ಕತೆ ವಾಸ್ತವಿಕ ವಾಗಿ ಇಲ್ಲಿಂದ ಪ್ರಾರಂಭವಾಗ ಬೇಕಾಗಿತ್ತು ಆದರೆ ಯಾರೂ ಇದನ್ನು ದಾಖಲಿಸಿದಂತೆ ಕಂಡು ಬಂದಿಲ್ಲ.

    ಇದು ವರದಳ್ಳಿಯ ವಿಶೇಷ ಕೂಡ ಈ ಬಗ್ಗೆ ತಿಳಿದವರೂ ಮಾಹಿತಿ ದಾಖಲಿಸ ಬೇಕು.

    ಜಿಗಳೆಮನೆ ಗಣಪತಿ ಭಟ್ಟರ ಪೇಸ್ ಬುಕ್ ಪೇಜ್ ಲಿಂಕ್ ಕಾಮೆಂಟ್ ನಲ್ಲಿದೆ ನೋಡಿ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...