Skip to main content

3459. ಸನ್ ರೂಪ್ ಕಾರುಗಳು

#ಪೋಷಕರೆ_ಬೇಜವಾಬ್ದಾರಿ_ಆದರೆ....

#ಮಕ್ಕಳು_ಏನಾಗಬೇಕು?

#ವಾಹನ_ಚಾಲನೆ_ಕಲಿತರೆ_ಸಾಕಾಗುವುದಿಲ್ಲ

#ವಾಹನ_ನಿಯಂತ್ರಣ_ಮತ್ತು_ನಿಲ್ಲಿಸುವುದು_ಕಲಿತಿರ_ಬೇಕು.


#Safetydrive #Seatbelt #Car #Driving #Childcare.#Necesity #Comfort #luxurycars 
#sunroofcar 

   ಈ ಲೇಖನದ ಕಾಮೆಂಟ್ ನ ವಿಡಿಯೋ ನೋಡಿ ನಿನ್ನೆ ಬೆಂಗಳೂರಿನಲ್ಲಿ ಕೆಂಪು ಬಣ್ಣದ ಕಾರಿನ ರೂಪ್ ಟಾಪ್ ತೆರೆದು ಅಲ್ಲಿ ಬಾಲಕನೋರ್ವನನ್ನ ನಿಲ್ಲಿಸಿದ್ದಾರೆ, ಮುಂದಿನ ರೈಲ್ವೆ ಕ್ರಾಸಿಂಗ್ ನಲ್ಲಿ ಬೃಹತ್ ವಾಹನ ಪ್ರವೇಶಿಸದಂತೆ ಹಾಕಿರುವ ಕಬ್ಬಿಣದ ಅಡ್ಡ ಪಟ್ಟಿಗೆ ಈ ಬಾಲಕನ ತಲೆ ತಾಗಿ ಅಪಘಾತ ಆಗಿದೆ.

    ಮೊದಲೆಲ್ಲ ಕಾರ್ ಎಂದರೆ ಲಗ್ಜುರಿ & ಕಂಪರ್ಟ್ ಹಣ ಇದ್ದವರಿಗೆ ಮಾತ್ರ ಮೀಸಲು ಎಂಬ ಭಾವನೆ ಮತ್ತು ಹಣ ಇಲ್ಲದವರು ಕಾರು ತರಲು ಸಾಧ್ಯವಿರಲಿಲ್ಲ.

   ಈಗ ಬದಲಾದ ಕಾಲ ಕಾರು ನೆಸೆಸರಿ & ಕಂಫರ್ಟ ಆಗಿದೆ ಅದು ವಿಲಾಸಿ ಅಲ್ಲ ಅನಿವಾಯ೯ ಮತ್ತು ಕಾರು ತರಲು ನಿಮ್ಮ ಹಣ ಬೇಡ ಪೂರ್ತಿ ಬ್ಯಾಂಕ್ ಸಾಲ ನೀಡುತ್ತದೆ.

   ಆದ್ದರಿಂದ ಎಲ್ಲರ ಮನೆಯಲ್ಲೂ ಕಾರು ಇದೆ ಆದರೆ ಅನೇಕರು ಕಾರು ಬೈಕ್ ಹೊಂದಿದ್ದರು ಅದನ್ನು ಸುರಕ್ಷಿತವಾಗಿ ಚಾಲನೆ ಮಾಡಲು ಮಾತ್ರ ಹಿಂದುಳಿದಿದ್ದಾರೆ.

  ಹೆಲ್ಮೆಟ್ ಕಡ್ಡಾಯ ಧರಿಸಬೇಕು ಇದು ನಮ್ಮ ರಕ್ಷಣೆಗೆ ಆದರೆ ಇದು ಪೋಲಿಸರಿಂದ ತಪ್ಪಿಸಿ ಕೊಳ್ಳಲು ಅನ್ನುವಂತೆ ವರ್ತಿಸುತ್ತಾರೆ.

   ಕಾರ್ ಚಾಲನೆ ಕಲಿಯದೇ ಕಾರು ಖರೀದಿಸಿದವರು ನಂತರ ಅದರ ಚಾಲನೆ ಕಲಿಯಲು ಹೆಚ್ಚು ಗಮನ ಕೊಡುವುದಿಲ್ಲ ತಕ್ಷಣ ಸಂಸಾರ ಸಮೇತ ಕಾರಿನಲ್ಲಿ ಪ್ರವಾಸ ಹೊರಡುತ್ತಾರೆ.

   ವಾಹನ ಚಾಲನೆ ಕಲಿತರೆ ಮಾತ್ರ ಸಾಕಾಗುವುದಿಲ್ಲ ಚಾಲನೆಯಲ್ಲಿ ಜಡ್ಜ ಮೆಂಟ್ ಕಲಿಯಬೇಕು, ವಾಹನಗಳ ನಿಯಂತ್ರಣ, ಸರಿಯಾದ ಸಮಯ ಮತ್ತು ದೂರದಲ್ಲಿ ವಾಹನದ ಬ್ರೇಕ್ ಬಳಸಿ ವಾಹನ ನಿಲ್ಲಿಸುವ ಚಾಕಚಕ್ಯತೆ ಹಾಗೂ ವಾಹನ ಹಿಮ್ಮುಖ ಚಾಲನೆ (ರಿವರ್ಸ್) ಕಲಿಯ ಬೇಕು.

    ವಾಹನ ಚಾಲನೆಯಲ್ಲಿ ಪರಿಣಿತರಾದ ಮೇಲೆ ಸಂಸಾರದ ಜೊತೆ ಪ್ರಯಾಣಕ್ಕೆ ವಾಹನದ ಡ್ರೈವಿಂಗ್ ಸೀಟ್ ನಲ್ಲಿ ಕೂರಬೇಕು.

  ಪ್ರಯಾಣಿಸುವವರೂ ಸೀಟ್ ಬೆಲ್ಟ್ ಕಡ್ಡಾಯ ಧರಿಸಬೇಕು.

    ರೂಪ್ ಟಾಪ್ ಹಾಕಿ ಹೆಚ್ಚಿನ ಬೆಲೆಗೆ ಕಾರು ಮಾರಾಟ ಮಾಡುವ ಕಾರು ತಯಾರಕ ಕಂಪನಿಗಳು ಮತ್ತು ರೂಪ್ ಟಾಪ್ ಕಾರನ್ನೇ ಖರೀದಿಸು ಗ್ರಾಹಕರು ಈಗ ಹೆಚ್ಚುತ್ತಿದ್ದಾರೆ.

  ಕಾರಿನಲ್ಲಿ ರೂಫ್ ಟಾಪ್ ನ ಉಪಯೋಗವೇನು?
ನೈಸರ್ಗಿಕ ಬೆಳಕನ್ನು ಹೆಚ್ಚಿಸುತ್ತದೆ, ಒಳಾಂಗಣವನ್ನು ಪ್ರಕಾಶಮಾನವಾಗಿ ಮತ್ತು ಹೆಚ್ಚು ಮುಕ್ತವಾಗಿ ಕಾಣುವಂತೆ ಮಾಡುತ್ತದೆ ,AC ಬಳಸದೆಯೇ ಕಾರನ್ನು ತಂಪಾಗಿಸಲು ಸಹಾಯ ಮಾಡುತ್ತದೆ,ಸೌಂದರ್ಯದ ಆಕರ್ಷಣೆಯನ್ನು ನೀಡುತ್ತದೆ ಮತ್ತು ಕಾರಿಗೆ ಪ್ರೀಮಿಯಂ ನೋಟವನ್ನು ನೀಡುತ್ತದೆ.

   ಭಾರತದಲ್ಲಿ ಒಂದೇ ಒಂದು "ಮೊದಲ" ಸನ್‌ರೂಫ್ ಕಾರು ಇರಲಿಲ್ಲ ಆದರೆ ಕ್ರಮೇಣ  ಮರ್ಸಿಡಿಸ್-ಬೆನ್ಜ್, BMW ಮತ್ತು ಆಡಿಯಂತಹ ಐಷಾರಾಮಿ ಬ್ರಾಂಡ್‌ಗಳು 1990 ರ ದಶಕದ ಅಂತ್ಯದಲ್ಲಿ ಮತ್ತು 2000 ರ ದಶಕದ ಆರಂಭದಲ್ಲಿ ಸನ್‌ರೂಫ್‌ಗಳನ್ನು ನೀಡುತ್ತಿದ್ದವು ನಂತರ ಸ್ಕೋಡಾ, ಒಪೆಲ್ ಮತ್ತು ಚೆವ್ರೊಲೆಟ್‌ನಂತಹ ಬ್ರ್ಯಾಂಡ್‌ಗಳು ತಮ್ಮ ಪ್ರೀಮಿಯಂ ಮಾದರಿಗಳಲ್ಲಿ ಸನ್‌ರೂಫ್‌ಗಳನ್ನು ನೀಡುತ್ತಿದ್ದವು. 

   2008 ರಲ್ಲಿ ಆರಂಭಿಕ ಹಂತದ ಹ್ಯಾಚ್‌ಬ್ಯಾಕ್‌ಗಳಲ್ಲಿ ಸನ್‌ರೂಫ್‌ಗಳನ್ನು ನೀಡಿದ ಮೊದಲ ಕಾರುಗಳಲ್ಲಿ ಹುಂಡೈ i10 ಮತ್ತು i20 ಸೇರಿವೆ, ಇದು ವೈಶಿಷ್ಟ್ಯವನ್ನು ಹೆಚ್ಚು ಪ್ರವೇಶಿಸುವಂತೆ ಮಾಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

    ಸನ್‌ರೂಫ್‌ನ ಮೊದಲ ಅಳವಡಿಕೆ 1930 ರ ದಶಕದ ಆರಂಭದಲ್ಲಿ ಪ್ರಾರಂಭವಾಯಿತು ಮತ್ತು ಇದನ್ನು #ವೆಬಾಸ್ಟೊ ಎಂಬ ಜರ್ಮನ್ ತಯಾರಕರು ಕಂಡುಹಿಡಿದರು, ಸನ್‌ರೂಫ್ ಎನ್ನುವುದು ಕಾರಿನ ಛಾವಣಿಯಲ್ಲಿರುವ ಒಂದು ಫಲಕವಾಗಿದ್ದು ಅದನ್ನು ಕಿಟಕಿಯನ್ನು ತೆರೆದಂತೆ ತೆರೆಯಬಹುದು, ಇದರಿಂದಾಗಿ ವಾಹನದ ಒಳಭಾಗಕ್ಕೆ ಸೂರ್ಯನ ಬೆಳಕು ಮತ್ತು ತಾಜಾ ಗಾಳಿ ಪ್ರವೇಶಿಸಲು ಸಾಧ್ಯವಾಗುತ್ತದೆ.

   ಕಾರಿನ ತೆರೆದ ಮೇಲ್ಛಾವಣಿಯ ಮೇಲೆ ನಿಲ್ಲುವುದು ಕಾನೂನುಬಾಹಿರ ಮತ್ತು ಅಪಾಯಕಾರಿ, ಮತ್ತು ಇದಕ್ಕೆ RTO ಯಿಂದ ಯಾವುದೇ ಅನುಮತಿ ಇಲ್ಲ.

   ಮೋಟಾರು ವಾಹನ ಕಾಯ್ದೆಯಡಿಯಲ್ಲಿ 177 (ಸಾಮಾನ್ಯ ಅಪರಾಧಗಳು) ಮತ್ತು 184 (ಅಪಾಯಕಾರಿ ಚಾಲನೆ) ನಂತಹ ವಿಭಾಗಗಳ ಅಡಿಯಲ್ಲಿ ಇದನ್ನು ನಿಷೇಧಿಸಲಾಗಿದೆ.

ಇದು ದಂಡ ಮತ್ತು ದಂಡಗಳಿಗೆ ಕಾರಣವಾಗಬಹುದು. ಬೀಳುವ ವಸ್ತುಗಳಿಂದ ಅಥವಾ ಹಠಾತ್ ಬ್ರೇಕ್ ಮಾಡುವಾಗ ಗಾಯಗೊಳ್ಳುವುದು ಸೇರಿದಂತೆ ಪ್ರಯಾಣಿಕರು ಮತ್ತು ಇತರ ರಸ್ತೆ ಬಳಕೆದಾರರಿಗೆ ಗಂಭೀರ ಸುರಕ್ಷತಾ ಅಪಾಯಗಳಿರುವುದರಿಂದ ಕರ್ನಾಟಕ ಪೊಲೀಸರು ಮತ್ತು ಇತರ ಅಧಿಕಾರಿಗಳು ಇದಕ್ಕೆ ಎಚ್ಚರಿಕೆ ನೀಡಿದ್ದಾರೆ. 

   ಮೇಲ್ಛಾವಣಿ ತೆರೆದು ನಿಲ್ಲುವುದರಿಂದ ವಾಹನದಿಂದ ಎಸೆಯಲ್ಪಡುವ, ಅವಶೇಷಗಳಿಂದ ಗಾಯಗೊಳ್ಳುವ ಅಥವಾ ಹಠಾತ್ ನಿಲ್ದಾಣಗಳ ಸಮಯದಲ್ಲಿ ವಾಹನದ ರಚನೆಗಳಿಂದ ಹಾನಿಯಾಗುವ ಗಮನಾರ್ಹ ಅಪಾಯವಿದೆ. 

  ಕಾಯಿದೆಯಲ್ಲಿ ನಿರ್ದಿಷ್ಟವಾಗಿ ವ್ಯಾಖ್ಯಾನಿಸದ ಅಪರಾಧಗಳಿಗೆ ಪೊಲೀಸರು ದಂಡ ವಿಧಿಸಬಹುದು, ಇದು ಮೇಲ್ಛಾವಣಿಯ ತೆರೆದು ಮೇಲೆ ನಿಲ್ಲುವುದನ್ನು ಕಾನೂನುಬಾಹಿರ ಕ್ರಮವೆಂದು ಪರಿಗಣಿಸುತ್ತದೆ. 

ಸೆಕ್ಷನ್ 184 ಈ ಸೆಕ್ಷನ್ ಅಪಾಯಕಾರಿ ಚಾಲನೆಯನ್ನು ಒಳಗೊಳ್ಳುತ್ತದೆ ಮತ್ತು ಛಾವಣಿಯ ಮೇಲೆ ವ್ಯಕ್ತಿ ನಿಂತಿರುವ ಚಲಿಸುವ ವಾಹನವನ್ನು ಅಪಾಯಕಾರಿ ಚಾಲನೆ ಎಂದು ಪರಿಗಣಿಸಲಾಗುತ್ತದೆ.

   ಪ್ರಯಾಣಿಕರು ಸೀಟ್‌ಬೆಲ್ಟ್‌ಗಳನ್ನು ಧರಿಸಬೇಕು ಮತ್ತು ಛಾವಣಿಯ ಮೇಲೆ ನಿಲ್ಲುವುದು ಈ ನಿಯಮಗಳನ್ನು ಉಲ್ಲಂಘಿಸುತ್ತದೆ, ಇದು ಶಿಕ್ಷಾರ್ಹ ಅಪರಾಧವಾಗಿದೆ.
  
  ಕಾನೂನು ದಂಡಗಳು
ಉಲ್ಲಂಘನೆಗಳಿಗೆ ಪೊಲೀಸರು ದಂಡ ವಿಧಿಸಬಹುದು. 

    ಕಾರು ಮಾಲೀಕರು ಮತ್ತು ಚಾಲಕ ಇಬ್ಬರೂ ಹೊಣೆಗಾರರಾಗಬಹುದು. 

ಈ ಪದ್ಧತಿಯನ್ನು ಜೀವಕ್ಕೆ ಅಪಾಯವನ್ನುಂಟುಮಾಡುವ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 336 ರ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಇದು ದಂಡ ಮತ್ತು ಸಂಭಾವ್ಯ ಜೈಲು ಶಿಕ್ಷೆಗೆ ಒಳಪಡುತ್ತದೆ.
  
   ಮೇಲ್ಛಾವಣಿಯ ಮೇಲೆ ನಿಲ್ಲಲು ಪ್ರಾದೇಶಿಕ ಸಾರಿಗೆ ಕಚೇರಿಯಿಂದ (RTO) ಅನುಮತಿ ಪಡೆಯಲು ಸಾಧ್ಯವಿಲ್ಲ ಏಕೆಂದರೆ ಅದು ನಿಷೇಧಿತ ಮತ್ತು ಅಪಾಯಕಾರಿ ಚಟುವಟಿಕೆಯಾಗಿದೆ.
 
ಅಧಿಕಾರಿಗಳು ಇಂತಹ ಅಸುರಕ್ಷಿತ ಅಭ್ಯಾಸಗಳನ್ನು ತಡೆಗಟ್ಟುವತ್ತ ಗಮನ ಹರಿಸಿದ್ದಾರೆ.

    ಕಾನೂನು ಹೀಗಿರುವಾಗ ರೂಪ್ ಟಾಪ್ ಅಥವ ಸನ್ ಟಾಪ್ ಇರುವುದು ಅದನ್ನು ತೆರೆದು ಅಲ್ಲಿ ನಿಂತುಕೊಂಡು ಪ್ರಯಾಣಿಸಲಾ?... ಇದೆಲ್ಲ ಯೋಚಿಸದಿದ್ದರಿಂದ ಇಂತಹ ಅವಘಡಗಳು ಆಗುತ್ತದೆ.

   ನಮ್ಮ ಜಿಲ್ಲೆಯ ಆಗುಂಬೆ ಘಾಟಿಯ ತಿರುವುಗಳಲ್ಲಿ ರೂಪ್ ಟಾಪ್ ತೆರೆದು ಮಕ್ಕಳನ್ನು ಅಲ್ಲಿ ನಿಲ್ಲಿಸಿ ವೇಗವಾಗಿ ಕಾರು ಚಲಾಯಿಸುವ ಪೋಷಕರನ್ನ ನಿತ್ಯ ನೀವು ನೋಡ ಬಹುದು.

  ನಿಮ್ಮ ಕಾರುಗಳು ನಿಮ್ಮ ಸುರಕ್ಷಿತ ಪ್ರಯಾಣದ ವಾಹನ ಮಾತ್ರ ಆಗಬೇಕು, ಅದರ ಟೈರ್ - ಬ್ರೇಕ್ ಸರಿ ಇದಿಯಾ ಮೊದಲು ನೋಡಿ ಖಾತ್ರಿ ಮಾಡಿಕೊಳ್ಳ ಬೇಕು ನಂತರ ಸೀಟ್ ಬೆಲ್ಟ್ ಧರಿಸಿ ರಸ್ತೆಯ ಇಕ್ಕೆಲದಲ್ಲಿ ಸೂಚಿಸಿದ ವೇಗದಲ್ಲಿ ಮತ್ತು ಮುಂದೆ ಬರುವ ಹಂಪ್ - ರೈಲ್ವೆ ಕ್ರಾಸಿಂಗ್- ತಿರುವುಗಳ ತಿಳಿದು ವಾಹನ ಚಲಾಯಿಸ ಬೇಕು.

   ಕೇವಲ ಕಾರು ಖರೀದಿಸುವುದು ಮಾತ್ರ ಅಲ್ಲ ಪ್ರಯಾಣಿಸುವ ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆ ಕಾಪಾಡಲು ನಿಮಗೆ ಸಾಧ್ಯವಾಗುವುದಿಲ್ಲವಾದರೆ ನೀವು ಟ್ಯಾಕ್ಸಿಯಲ್ಲಿ ಪ್ರಯಾಣಿಸುವುದು ಸೂಕ್ತ ಮತ್ತು ಸುರಕ್ಷಿತ.

   ಕಾಮೆಂಟ್ ನಲ್ಲಿರುವ ವಿಡಿಯೋ ನೋಡಿ ಮತ್ತು ನಿಮ್ಮ ಆಪ್ತರಿಗೆ ಶೇರ್ ಮಾಡಿ ವಾಹನ ಚಾಲನೆ ಸುರಕ್ಷತೆಗೆ ಮುಂದಾಗಿ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...