Skip to main content

3446. ಜೋಗ್ ಫಾಲ್ಸ್ ಹೋಮ್ ಸ್ಟೇ ಪ್ರಾಜೆಕ್ಟ್ ಭಾಗ-3

#ಭಾಗ_3.

#ಜೋಗ್_ಪಾಲ್ಸ್_ಪರಿಸರದಲ್ಲಿ_ಹೊಂ_ಸ್ಟೇ

#ನನ್ನ_ಹೊಂ_ಸ್ಟೇ_ಸರಣಿ_ಲೇಖನಕ್ಕೆ

#ಈ_ಭಾಗದ_ಮನ್ಮನೆ_ಸಮೀಪದ_ಪ್ರಖ್ಯಾತ_ಅಜ್ಜನಮನೆ_ಹೊಂ_ಸ್ಟೇ

#ಮಾಲಿಕ_ಪತ್ರಕರ್ತ_ರಾಘವೇಂದ್ರಶರ್ಮಾರ_ಪ್ರತಿಕ್ರಿಯೆ.


#Jogfalls #Homestay #Project #Karnatakatourism #Shivamogga #Ajjanamane

  ಜೋಗ್ ಫಾಲ್ಸ್ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿಗೆ ಸೇರಿಕೊಂಡ ವಿಶ್ವ ವಿಖ್ಯಾತ ಜಲಪಾತ.

   ಇಲ್ಲಿಗೆ ಬರುವ ಪ್ರವಾಸಿಗರು ಮೂಲ ಸೌಕರ್ಯಗಳ ಕೊರತೆಯಿಂದ ಬಹುತೇಕರು ಇಲ್ಲಿ ತಂಗುವುದಿಲ್ಲ.

   ಈಗಾಗಲೇ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರ ಕೊಟ್ಯಾಂತರ ಹಣ ವಿನಿಯೋಗಿಸಿ ಕಾಮಗಾರಿ ನಡೆಸಿದೆ.

   ಇದನ್ನು ಬಳಸಿಕೊಂಡು ದೊಡ್ಡ ದೊಡ್ಡ ಸ್ಟಾರ್ ಹೋಟೆಲ್ ಗಳು ಇಲ್ಲಿ ಬರಲಿದೆ ಎಂಬ ಸುದ್ದಿ ಇದೆ ಈ ರೀತಿಯ ಸ್ಟಾರ್ ಹೋಟೆಲ್ ಗಳು ದುಬಾರಿ ಮತ್ತು ಸಮಾಜದ ಪ್ರತಿಷ್ಟಿತ ಶ್ರೀಮಂತ ಪ್ರವಾಸಿಗರಿಗೆ ಮೀಸಲು.

   ಇದರ ಜೊತೆಗೆ ಜೋಗ್ ಫಾಲ್ಸ್ ಪ್ರವಾಸೋಧ್ಯಮದಲ್ಲಿ ಸ್ಥಳೀಯರೂ ಪರೋಕ್ಷ  ಪಾಲುದಾರರಾಗಿ ಎಲ್ಲಾ ವರ್ಗದ ಪ್ರವಾಸಿಗಳಿಗೆ (ಬಜೆಟ್ ಟೂರಿಸ್ಟ್) ಅನುಕೂಲ ಮಾಡಿಕೊಡುವ ಮೂಲಕ ಪ್ರವಾಸೋದ್ಯದಕ್ಕೆ ಅವರದೇ ಆದ ರೀತಿಯಲ್ಲಿ ಕೊಡುಗೆ ನೀಡಬಹುದು.

    ಜೋಗ್ ಪಾಲ್ಸ್ ಪರಿಸರದಲ್ಲಿ ಪ್ರಾರಂಭವಾದ ಮೊದಲ ಹೊಂ ಸ್ಟೇ #ಮುತ್ತುಗ ನಂತರ ಈ ಭಾಗದಲ್ಲಿ #ಅಜ್ಜನಮನೆ ಸೇರಿದಂತೆ ಅನೇಕ ಹೊಂ ಸ್ಟೇಗಳ ನಿರ್ಮಾಣವಾಗಿದೆ.

   ಇದರಿಂದ ಸ್ಥಳೀಯರಿಗೂ ಆದಾಯ -ಉದ್ಯೋಗ ಸಾಧ್ಯ ಎಂದು ಖಾಸಾಗಿ ಪ್ರವಾಸೋದ್ಯಮ ಸಂಸ್ಥೆ ಈ ಭಾಗದಲ್ಲಿ ಸಮೀಕ್ಷೆ ನಡೆಸಿದೆ.

    ಅದರ ಸಮೀಕ್ಷೆ ಪ್ರಕಾರ ಜೋಗ್ ಜಲಪಾತದ ಪ್ರದೇಶ (ಸಾಗರ ಮತ್ತು ಸಿದ್ದಾಪುರ ತಾಲ್ಲೂಕು ಸೇರಿ) ಕನಿಷ್ಟ 200 ಹೊಂ ಸ್ಟೇ ನಡೆಯಲು ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದಿದೆ.

   ಈ ಸಂಸ್ಥೆ ಹೊಂ ಸ್ಟೇ ನಡೆಸಲು ಮುಂದೆ ಬರುವ ಸ್ಥಳೀಯರಿಗೆ ತರಬೇತಿ ನೀಡಿ ಅವರ ವಾಸದ ಮನೆಯನ್ನು ಹೊಂ ಸ್ಟೇ ಮಾಡಲು ಆರ್ಥಿಕ ನೆರವು ಮತ್ತು ಬುಕಿಂಗ್ ಸೌಲಭ್ಯ ಒದಗಿಸಲಿದೆ.

   ಈ ಹೊಂ ಸ್ಟೇ ಯೋಜನೆ ಈ ಭಾಗದ ಕನಿಷ್ಟ 200 ಕುಟುಂಬಗಳಿಗೆ ಆದಾಯದ ಮೂಲ ಆಗಲಿದೆ ಎಂಬ ಕಾರಣದಿಂದ ಎಲ್ಲಾ ರೀತಿಯ ಮಾಹಿತಿ ಮತ್ತು ಪ್ರಚಾರ ನೀಡಲು ನಾನು ಈ ಸರಣಿ ಲೇಖನ ಬರೆಯುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದೇನೆ.

  ಇವತ್ತು ನನ್ನ ಹೊಂ ಸ್ಟೇ ಸರಣಿ ಲೇಖನಕ್ಕೆ ಪ್ರತಿಕ್ರಿಯೆ ನೀಡಿದವರು ಸಾಗರ ತಾಲೂಕಿನ ತಲವಾಟದ ಪತ್ರಕರ್ತರಾದ #ರಾಘವೇಂದ್ರಶರ್ಮ ಅವರು ತಾಳಗುಪ್ಪ ಮಾವಿನಗುಂಡಿ ಮಾರ್ಗದಲ್ಲಿ ಮನ್ಮನೆಯಿಂದ ತಲವಾಟಕ್ಕೆ ಹೋಗುವ ಮಾರ್ಗದಲ್ಲಿ  ಒಂದು ಅತ್ಯುತ್ತಮವಾದ ಹೊಂ ಸ್ಟೇ ದಶಕದ ಹಿಂದೆಯೇ ನಿರ್ಮಿಸಿ ಯಶಸ್ವಿಯಾಗಿ  ನಡೆಸುತ್ತಿದ್ದಾರೆ ಅದರ ಹೆಸರು #ಅಜ್ಜನಮನೆ,

    ಯಾವುದೇ ಪ್ರವಾಸೋದ್ಯಮ ಇಲಾಖೆ ಸಹಾಯ ಇಲ್ಲದ ದಶಕದ ಹಿಂದೆ ಇದನ್ನು ಇವರು ನಿರ್ಮಿಸಿದ್ದಾರೆ ಇಲ್ಲಿ ಮಲೆನಾಡಿನ ಪರಿಸರದ ಸಸ್ಯಹಾರಿ ಆಹಾರ ವ್ಯವಸ್ಥೆ ಮಾಡುತ್ತಾರೆ, ತೊಟ್ಟಿಮನೆ ಮಾದರಿಯ ಈ ಅಜ್ಜನ ಮನೆ ಹೊಂ ಸ್ಟೇ ಅವರು ಶುಚಿ-ರುಚಿಗಳಿಂದ ಮತ್ತು ಅತ್ಯುತ್ತಮ ನಿರ್ವಹಣೆ ಮಾಡಿ ಖ್ಯಾತಿ ಗಳಿಸಿದ್ದಾರೆ.

    ಇದನ್ನು ನಿರ್ಮಿಸುವಾಗ ಸ್ಥಳೀಯರೇ ಅವರಿಗೆ ಅನೇಕ ತೊಂದರೆ ನೀಡಿದ್ದನ್ನೆಲ್ಲ ಅವರು ಎದುರಿಸಿದ್ದಾರೆ.

    ನನ್ನ ಹೊಂ ಸ್ಟೇ ಲೇಖನಕ್ಕೆ ಅವರ ಪ್ರತಿಕ್ರಿಯೆ ನೋಡಿ ...
"ಕಷ್ಟ ಇದೆ ಆಗುವುದಿಲ್ಲ, ಜುಲೈ ಇಂದ ಡಿಸೆಂಬರ್ ವರೆಗೆ ಆಗತ್ತೆ, ಆಮೇಲೆ ಬಹಳ ಕಷ್ಟ" ಎಂದಿದ್ದಾರೆ.

   ಇದಕ್ಕೆ #ಗಣಪತಿಭಟ್_ಜಿಗಳಿಮನೆ ಅವರು ಪ್ರತಿಕ್ರಿಯಿಸಿದ್ದು...
"Raghavendra Sharma ಸ್ವತಃ ಮಾಡಿನೋಡಿ ಅನುಭವದಿಂದ ಹೇಳಿದ ಮಾತು." ಎಂದಿದ್ದಾರೆ.

  ಜೋಗ್ ಜಲಪಾತ ಅಭಿವೃದ್ಧಿ ಬಗ್ಗೆ ವಿಶೇಷ ಆಸಕ್ತಿ ಮತ್ತು ಯೋಜನೆಗಳ ಹೊಂದಿರುವ ಮಾವಿನಗುಂಡಿ #ಅಶೋಕ್_ಹೆಗಡೆ ಅಮೇರಿಕಾದ ಕೆನಡಾದಿಂದ ಪ್ರತಿ ಕ್ರಿಯಿಸಿದ್ದು...
"Raghavendra Sharma ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳು ಬಹುತೇಕ ಮೂರರಿಂದ ಆರು ತಿಂಗಳ ಕಾಲ ಮಾತ್ರ ಎಲ್ಲಾ ಆಕರ್ಷಕ -ವೈಶಿಷ್ಟ್ಯಗಳಲ್ಲಿ ದಕ್ಷಿಣ ಭಾರತದ ದೇವಸ್ಥಾನಗಳು,ಸಿಂಗಾಪುರ- ದುಬೈ ಯಂಥವುಗಳು ಹೊರತಾಗಿರಬಹುದು." ಎಂದಿದ್ದಾರೆ.

   ಇದಕ್ಕೆಲ್ಲ ನಾನು ಉತ್ತರ ನೀಡಿದ್ದು...
Raghavendra Sharma  ದೊಡ್ಡ ಬಂಡವಾಳದ ಅದರ ಮೇಲೆ ಅವಲಂಬಿತವಾದರೆ ನೀವು ಹೇಳಿದಂತೆ ಕಷ್ಟ ಆದರೆ ನಾನು ಬರೆದಿರುವುದು ಸ್ಥಳೀಯರು ಕಡಿಮೆ ಬಂಡವಾಳದಲ್ಲಿ ಅವರ ವಾಸದ ಮನೆಯನ್ನೆ ಹೊಂ ಸ್ಟೇ ಆಗಿ ಪರಿವರ್ತಿಸಿ ನಡೆಸಿದರೆ ಆದಾಯ ಸಾಧ್ಯವಿದೆ.
   ಅವರಿಗೆ ವ್ಯವಸ್ಥಿತವಾಗಿ ತರಬೇತಿ,ಬುಕಿಂಗ್ ಸೌಲಭ್ಯ ಮತ್ತು ಹಣಕಾಸು ಸೌಲಭ್ಯ ನೀಡುವ ಸಂಸ್ಥೆ ಮುಂದೆ ಬಂದಿದೆ.

    ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಮಲೆನಾಡಿನ ಜೋಗ್ ಜಲಪಾತದ ಪ್ರದೇಶದಲ್ಲಿ ಎಲ್ಲಾ ಋತುಗಳಲ್ಲಿಯೂ ಪ್ರವಾಸಿಗಳನ್ನ ಆಕರ್ಷಿಸ ಬಹುದಾದ ಶರಾವತಿ ಹಿನ್ನೀರಿನ ಪ್ರದೇಶಗಳು, ದಟ್ಟ ಅರಣ್ಯಗಳು, ಪ್ರಸಿದ್ಧ ದೇವಾಲಯಗಳು, ಐತಿಹಾಸಿಕವಾದ ಕೋಟೆ ಪ್ರದೇಶಗಳು, ಜಲಪಾತಗಳು ಇಲ್ಲಿರುವುದನ್ನ ಬಳಸುವ ಮೂಲಕ ಈ ಹೊಂ ಸ್ಟೇ ಯೋಜನೆ ಲಾಭದಾಯಕ ಉದ್ಯಮ ಮಾಡುವ ನೀಲನಕ್ಷೆ ತಯಾರಾಗುತ್ತಿದೆ.
 
   ದೇಶ, ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ಮಾಡಲಿರುವ ಆ ಸಂಸ್ಥೆ ಬುಕಿಂಗ್ ಸೌಲಭ್ಯ ಕೂಡ ನೀಡುವುದರಿಂದ ಈ ಯೋಜನೆ ಸಕ್ಸಸ್ ಆಗುವ ಸಾಧ್ಯತೆ ಇದೆ.

   ಸ್ಥಳೀಯರ ಸಹಬಾಗಿತ್ವದ ಪರಿಸರ ಸ್ನೇಹಿ ಹೊಂ ಸ್ಟೇ ಗಳು ಈ ಭಾಗದಲ್ಲಿ ಪ್ರಾರಂಭವಾದರೆ ಮಾತ್ರ ಹೆಚ್ಚು ಪ್ರಮಾಣದಲ್ಲಿ ಪ್ರವಾಸಿಗರು ಇಲ್ಲಿಗೆ ಬರಲು ಸಾಧ್ಯವಿದೆ.

   ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಕಾಮೆಂಟ್ ನಲ್ಲಿರುವ ವಾಟ್ಟಪ್ ಗುಂಪಿಗೆ Join ಆಗಿ.

    ಈ ಭಾಗದ ಪ್ರಖ್ಯಾತ #ಅಜ್ಜನ_ಮನೆ ಹೊಂ ಸ್ಟೇ ಲಿಂಕ್ ಕೂಡ ಕಾಮೆಂಟ್ ನಲ್ಲಿದೆ ನೋಡಿ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...