Skip to main content

3467. ಕಡಿದಾಳು ಶಾಮಣ್ಣ ಮತ್ತು ಪಿ. ಪುಟ್ಟಯ್ಯ ಶಿವಮೊಗ್ಗ ಜಿಲ್ಲೆಯ ಹಿರಿಯ ಗೌರವಾನ್ವಿತರು

#ಶಿವಮೊಗ್ಗ_ಜಿಲ್ಲೆಯ_ಹಿರಿಯ_ಗೌರವಾನ್ವಿತರು

#ಕಡಿದಾಳು_ಶಾಮಣ್ಣ_ಮತ್ತು_ಪಿ_ಪುಟ್ಟಯ್ಯ

#ಮೊನ್ನೆ_ಕಡಿದಾಳುಶಾಮಣ್ಣರ_ಮನೆಗೆ_ಹೋಗಿ_ಅವರ_ಆರೋಗ್ಯ_ವಿಚಾರಿಸಿದ_ಪುಟ್ಟಯ್ಯನವರು

#ಈ_ನೆನಪಿನ_ಚಿತ್ರ_ಸೆರೆಹಿಡಿದು_ಕಳಿಸಿದ_ಮಿತ್ರರು_ಅಯನೂರು_ಬೆಲ್ಲದಪ್ರಕಾಶ್


#Kadidalshamanna #PPuttaia #Samajvadi #Shivamogga #Mysore #Tejaswi #kuvempu #Raithasanga 

   ಕಡಿದಾಳು ಶಾಮಣ್ಣ ಮತ್ತು ಪಿ.ಪುಟಯ್ಯ ಇವರಿಬ್ಬರೂ ಶಿವಮೊಗ್ಗ ಜಿಲ್ಲೆಯ ಹಿರಿಯ ಗೌರವಾನ್ವಿತರು.

  ಇವರಿಬ್ಬರ ಈಗಿನ ವಯಸ್ಸು 86 ಅಥವ 87 ಇರಬೇಕು ಇತ್ತೀಚೆಗೆ ಕಡಿದಾಳು ಶಾಮಣ್ಣ ತುಂಬಾ ಬಳಲಿದಂತೆ ಕಾಣುತ್ತಾರೆ.

   ಮೊನ್ನೆ ಇವರಿಬ್ಬರ ಸ್ಮರಣೀಯ ಭೇಟಿಯ ಪರಸ್ಪರ ಆರೋಗ್ಯ ವಿಚಾರಣೆಯ ಫೋಟೋ ಸೆರೆಹಿಡಿದು ಕಳಿಸಿದವರು ಶಿವಮೊಗ್ಗದ ಹಿರಿಯ ಮಿತ್ರರಾದ ಅಯನೂರು ಬೆಲ್ಲದ ಪ್ರಕಾಶ್.

   ಇವರಿಬ್ಬರೂ ಸಮ ವಯಸ್ಕರು ಮೈಸೂರಿನಲ್ಲಿ ವ್ಯಾಸಂಗದಲ್ಲಿ ಜೊತೆಯಾದವರು ಶ್ಯಾಮಣ್ಣ ಮಹಾರಾಜ ಕಾಲೇಜಿನಲ್ಲಿ ಮತ್ತು ಪುಟ್ಟಯ್ಯ ಯುವರಾಜ ಕಾಲೇಜಿನಲ್ಲಿ.

   ಸಮಾಜವಾದಿ ಯುವ ಜನ ಸಭಾ ಮತ್ತು ಕನ್ನಡ ಯುವಜನ ಸಭಾದ ಮೂಲಕ ರಾಜ್ಯದ್ಯಾದಂತ ಜನಜಾಗೃತಿ ಮಾಡಿದವರು.

   ಇವರಿಬ್ಬರೂ ಪ್ರೊಪೆಸರ್ ನಂಜುಂಡ ಸ್ವಾಮಿ, ಅವರ ತಂದೆ ಮಹಾಂತರ ಮತ್ತು
ಅವರ ಗೆಳೆಯರಾದ ನಾಗರಾಜ್ ವಕೀಲರ ಹಾಗೂ ತೇಜಸ್ವಿ, ಕೆ.ವಿ.ಸುಬ್ಬಣ್ಣ, ಸ್ವಾಮಿ ರಾವ್, ಕೆ.ಹೆಚ್.ಶ್ರೀನಿವಾಸ್, ಕೋಣಂದೂರು ಲಿಂಗಪ್ಪ, ಕೋಣಂದೂರು ವೆಂಕಪ್ಪ ಗೌಡರ ಗೆಳೆಯರು.

     ಆ ಕಾಲದ ಈ ತಂಡ ಕರ್ನಾಟಕ ರಾಜ್ಯಕ್ಕೆ ನೀಡಿದ ವೈಚಾರಿಕ ಕೊಡುಗೆ, ಜನಪರ ಹೋರಾಟ ಹಾಗೂ ಸಂಘಟನೆ ಸುವರ್ಣಾಕ್ಷರದಲ್ಲಿ ಬರೆದಿಡುವಂತದ್ದು.

   80 ಮತ್ತು 90ರ ದಶಕದಲ್ಲಿ ಶಿವಮೊಗ್ಗದ ನೆಹರು ರಸ್ತೆಯ ಎರಡನೆ ತಿರುವಿನಲ್ಲಿದ್ದ ಪುಟ್ಟಯ್ಯನವರ #ಪ್ರಕೃತಿ_ಮುದ್ರಣಾಲಯ ಮತ್ತು ಅವರ ಉದಯವಾಣಿ ತರಂಗ ಪತ್ರಿಕೆ ಕಾರ್ಯಾಲಯ ಶಿವಮೊಗ್ಗ ಜಿಲ್ಲೆಯ ಅನುಭವ ಮಂಟಪ ಎಂದೇ ಹೆಸರಾಗಿತ್ತು.

   ಅಲ್ಲಿ ಜಿಲ್ಲೆಯ ವಿಚಾರವಾದಿಗಳು, ಬರಹಗಾರರು, ಪತ್ರಕರ್ತರು, ಸಾಹಿತಿಗಳು, ಹೊರಟಗಾರರು ಮತ್ತು ಸಾಹಿತಿಗಳ ಸಂಗಮ ಆಗುತ್ತಿತು.

   ಅಲ್ಲಿ ಆಗಾಗ್ಗೆ  ದಿಡೀರನೆ ಗಡ್ಡದಾರಿ ಹಸಿರು ಶಾಲಿನ, ಜುಬ್ಬಾ ಪೈಜಾಮು ಮತ್ತು ಬಗಲು ಚೀಲದಾರಿ ಕಡಿದಾಳು ಶಾಮಣ್ಣ ಹಾಜರಾಗಿ ಹಾಗೇ ಮಾಯ ಆಗುತ್ತಿದ್ದರು.

   1995- 2000 ಇಸವಿಯ ಅವಿಬಿಜಿತ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ #ರೈತ_ಸಂಘದಿಂದ_ಸಿದ್ಧಪ್ಪ ಎಂಬ ಸಜ್ಜನರು ಮಿತಭಾಷಿಗಳು ನಮ್ಮ ಜೊತೆ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು.

   ಅವರ ಮುಖಾಂತರ ಕಡಿದಾಳು ಶಾಮಣ್ಣ ಅವರ ಕ್ಷೇತ್ರದ ಒಂದು ಸಮಸ್ಯೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಾತಾಡಲು ಹೇಳಿದ್ದರಂತೆ ಆದರೆ ಆ ಸಬ್ಜೆಕ್ಟ್ ಸಿದ್ದಪ್ಪರಿಗೆ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಂಡಿಸಲು ಸಾಧ್ಯವಾಗದ ಬಗ್ಗೆ ಕಡಿದಾಳು ಶ್ಯಾಮಣ್ಣ ಬೆಂಕಿ ಆಗಿದ್ದರು.

     ಪುಟ್ಟಯ್ಯನವರು ಶಾಮಣ್ಣರಿಗೆ ನನ್ನ ಬಗ್ಗೆ ತಿಳಿಸಿ ಹೇಳಿದ್ದರಿಂದ ಕಡಿದಾಳು ಶಾಮಣ್ಣ ವಿವರಗಳನ್ನು ನನಗೆ ನೀಡಿದ್ದರು.

    ನಾನು ಕಡಿದಾಳು ಶಾಮಣ್ಣರನ್ನ ಜಿಲ್ಲಾ ಪಂಚಾಯತ್ ಸಭೆಯ ಗ್ಯಾಲರಿಯಲ್ಲಿ ಕೂರಿಸಿ ಅವರ ಊರಿನ ಸಮಸ್ಯೆ ಸಭೆಯಲ್ಲಿ ವಿವರಿಸಿ ಪರಿಹರಿಸಿದ್ದು ಕಡಿದಾಳು ಶಾಮಣ್ಣರಿಗೆ ಸಂತೋಷ ತರಿಸಿತ್ತು ಈ ಮೂಲಕ ಕಡಿದಾಳು ಶಾಮಣ್ಣ ನನಗೆ ಆಪ್ತರಾದರು.

   ನಮ್ಮೂರ ಮಾರ್ಗದಲ್ಲಿ ಯಾವಾಗಾದರೂ ಸಂಚರಿಸುವಾಗ ಅವರು ನನ್ನ ಮನೆಗೆ ಬರುತ್ತಿದ್ದರು, ನಮ್ಮ ಊರಲ್ಲಿ ಸಾಹಿತಿ ನಾ. ಡಿಸೋಜ ಬಯಲು ರಂಗಮಂದಿರ ಉದ್ಘಾಟನೆ ಕಡಿದಾಳು ಶಾಮಣ್ಣರಿಂದ ಮಾಡಿಸಿದ್ದೆ.

   ಕಾಗೋಡಿನಿಂದ - ಕಡಿದಾಳಿಗೆ ಕಾಗೋಡು ಹೋರಾಟದ ಸುವರ್ಣ ಜ್ಯೋತಿ ಒಯ್ದಾಗ ತೀರ್ಥಹಳ್ಳಿಯಿಂದ ಕಡಿದಾಳು ಮಂಜಪ್ಪರ ಸಮಾದಿ ತನಕ ಕಡಿದಾಳು ಶಾಮಣ್ಣ ಜಾಥಾದ ಜೊತೆಯಾಗಿದ್ದರು.

   ಅವತ್ತು ನಮ್ಮ #ಕಾಗೋಡು_ಸುವರ್ಣ_ಜ್ಯೋತಿ ಕಡಿದಾಳು ಮಂಜಪ್ಪರ ಸಮಾದಿ ಸ್ಥಳ ತಲುಪಿದ್ದಾಗ ಮಧ್ಯರಾತ್ರಿ ಆಗಿತ್ತು.

   ಅಲ್ಲಿ ಕಡಿದಾಳು ಶಾಮಣ್ಣ ತಮ್ಮ ಮದುರ ಕಂಠದಲ್ಲಿ ಕುವೆಂಪು ಬರೆದ ಗೀತೆ ಹಾಡಿದ್ದರು ಆ ಸಂದರ್ಭ ಮತ್ತು ಸ್ಥಳದಲ್ಲಿ ಅವರು ಹಾಡಿದ ಹಾಡು ನಮಗೆಲ್ಲ ಅದ್ಬುತ ಅನುಭೂತಿ ನೀಡಿತ್ತು

   "ಊರಲ್ಲಿ ದೇವಾಲಯಕ್ಕಿಂತ ಮೊದಲು ಊರ ಶೌಚಾಲಯ" ಎಂಬ ಅವರ ಜನಾಂದೋಲನ ನನಗೆ ಪ್ರೇರಣೆ ಆಗಿತ್ತು.

    ಅದು ನನಗೆ  ನಮ್ಮ ಊರ ಸಮೀಪದ ಆಚಾಪುರ ಎಂಬ ಊರಲ್ಲಿನ ಕೇರಿಯ ಎಲ್ಲಾ ಮನೆಗಳಿಗೆ 1996ರಲ್ಲಿ ಶೌಚಾಲಯ ನಿರ್ಮಾಣ ಮಾಡಲು ಕಾರಣ ಆಗಿತ್ತು.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...