Skip to main content

3456. ಬೂದಿ ಬಸಪ್ಪ ನಾಯಕರು

#ದೇಶದ_ಮೊದಲ_ರೈತ_ಹೋರಾಟ

#ಆಗಸ್ಟ್_23_1830ರಂದು

#ಶಿವಮೊಗ್ಗ_ಜಿಲ್ಲೆಯ_ಸಾಗರ_ತಾಲೂಕಿನ_ಆನಂದಪುರಂ_ಹೋಬಳಿಯ 

#ತ್ಯಾಗರ್ತಿ_ಸಮೀಪದ_ಹೊಸಂತೆಯಲ್ಲಿ_ನಡೆದ_ಬೂದಿಬಸಪ್ಪನಾಯಕರ_ರೈತ_ಸಮಾವೇಶ.

#ಈ_ವರ್ಷಕ್ಕೆ_195ನೇ_ವರ್ಷ_ಆಚರಣೆ. 


#Keladikings #Hosante #Tyagarthi #Anandapuram #Sagar #Shivamogga #Raithahorata #Budibasappa

        23 ಆಗಸ್ಟ್ 1830ರಲ್ಲಿ ಮೈಸೂರು ಅರಸರ ಜನವಿರೋದಿ ಭೂಕಂದಾಯವಾಗಿದ್ದ ಸುಂಕದ ವಿರುದ್ದ ಆನಂದಪುರಂ ಹೋಬಳಿಯಲ್ಲಿ ನಡೆದ  ಬೃಹತ್ ರೈತ ಸಮಾವೇಶಕ್ಕೆ 195ನೇ ವರ್ಷಾಚಾರಣೆ.

  ಆನಂದಪುರಂ ಹೋಬಳಿಯ ಹೊಸಂತೆ ಊರಿನಲ್ಲಿ ಬೃಹತ್ ರೈತ ಸಮಾವೇಶವನ್ನು ಬೂದಿ ಬಸಪ್ಪ ನಾಯಕರು ಹಮ್ಮಿಕೊಳ್ಳುತ್ತಾರೆ.

  ಈ ಐತಿಹಾಸಿಕ ರೈತ ಸಮಾವೇಶಕ್ಕೆ ಸಾವಿರಾರು ರೈತರುಗಳು ತಮ್ಮ ನೂರಾರು ಎತ್ತಿನಗಾಡಿಗಳಲ್ಲಿ ಬಂದು ಭಾಗವಹಿಸುತ್ತಾರೆ.

    ದೂರ ದೂರದ ಊರಿನ ಪ್ರತಿನಿಧಿಗಳೂ ಸೇರುತ್ತಾರೆ.

    #ಹೊಸಂತೆಯ  ಈ ರೈತ ಹೋರಾಟದ ಸಮಾವೇಶದ ಕಿಚ್ಚು ದಿನದಿಂದ ದಿನಕ್ಕೆ ಬೃಹದಾಕಾರ ತಾಳಿ ಮೈಸೂರು ಮಹಾರಾಜರಾದ #ಮುಮ್ಮಡಿ_ಕೃಷ್ಣರಾಜ_ಒಡೆಯರ್ ತಮ್ಮ ರಾಜ್ಯ 4ನೇ ಆಂಗ್ಲೋ ಮೈಸೂರು ಯುದ್ದದಿಂದ ಪರೋಕ್ಷವಾಗಿ ಮೈಸೂರು ಆಡಳಿತ ನಡೆಸುತ್ತಿದ್ದ ಬ್ರಿಟೀಷರಿಗೆ ಬಿಟ್ಟುಕೊಡುವಂತಾಗುತ್ತದೆ (9 ಅಕ್ಟೋಬರ್ 1831) ಮುಂದಿನ 50 ವರ್ಷ ಮೈಸೂರು ಆಡಳಿತ ಬ್ರಿಟೀಶರದಾಗುತ್ತದೆ.

   ಹೊಸಂತೆ ರೈತ ಸಮಾವೇಶದ ನಂತರ ಬಿದನೂರು ನಗರ ಪ್ರಾಂತ್ಯದ ರೈತರು ಎಲ್ಲಾ ಕಡೆಗೂ ಈ ಕರನಿರಾಕರಣೆಗಾಗಿ ಬೇವಿನ ಎಲೆಗಳನ್ನೇ ಆಹ್ವಾನ ಪತ್ರಿಕೆಯಂತೆ ಬಳಸುತ್ತಾ ಜನರನ್ನು ಕರನಿರಾಕರಣೆ ಆಹ್ವಾನಿಸುತ್ತಾರೆ.

   ಇದರಿಂದ ಮೈಸೂರು ಅರಸರು ಆಡಳಿತದಲ್ಲಿ ವಿಫಲರಾಗುತ್ತಾರೆ ಈಸ್ಟ್ ಇಂಡಿಯಾ ಕಂಪನಿ ರಾಜರಿಗೆ ಈ ಸ್ಥಳಗಳಿಗೆ ಸ್ವತಃ ಹೋಗಿ ಬಗೆಹರಿಸಲು ಸೂಚಿಸುತ್ತಾರೆ.

  ಬ್ರಿಟೀಷ್ ಅಧಿಕಾರಿಗಳು ಇದನ್ನೆಲ್ಲ ಮದ್ರಾಸ್ ಪ್ರಾವಿನ್ಸಿಗೆ ವರದಿ ಮಾಡುತ್ತಾ ತಟಸ್ಥರಾಗಿರುತ್ತಾರೆ.

      ಈ ಕಾರಣದಿಂದ ಮೈಸೂರು ಒಡೆಯರ್ ಈ ಭಾಗದಲ್ಲಿ ಸಾಗುವಾಗ 7 ಡಿಸೆಂಬರ್ 1830ರಲ್ಲಿ ಹೊನ್ನಾಳಿಯಲ್ಲಿ ಬೂದಿ ಬಸಪ್ಪ ನಾಯಕರ ಪ್ರಚೋದಿತ ರೈತ ಸಮಾವೇಶ ಕುಟ್ಟಂನಲ್ಲಿ (ಕಟ್ಟ0) 20 ಸಾವಿರಕ್ಕೂ ಮಿಕ್ಕಿದ ರೈತರು ಸೇರಿರುತ್ತಾರೆ ಇದನ್ನು ಸಹಿಸದ ಮೈಸೂರು ಮಹಾರಾಜರು ಬಿದನೂರು ನಗರದ ಅವರ ಆಡಳಿತಾಧಿಕಾರಿ ಕಿಶನ್ ರಾವ್ ನೇತೃತ್ವದಲ್ಲಿ ರೈತ ಸಮಾವೇಶದ ಮೇಲೆ ದೊಡ್ಡ ನರಮೇದಕ್ಕೆ ಅವಕಾಶ ನೀಡಿದ್ದು ಇತಿಹಾಸದಲ್ಲಿ ಘನ ಘೋರ ಕಪ್ಪು ಚುಕ್ಕೆ.

    ಆದರೆ ಈ ಘಟನೆ ನಂತರ 50 ವರ್ಷದ ನಂತರ ಪುನಃ ಮೈಸೂರು ಮಹಾರಾಜರೇ ಆಡಳಿತಕ್ಕೆ ಬಂದಿದ್ದರಿಂದ ಈ ಘಟನೆಗಳು ಇತಿಹಾಸದ ಪುಟದಲ್ಲಿ ಕತ್ತಲಲ್ಲಿ ಇಡಲಾಗಿದೆ.

  ಈ ಚಳವಳಿ ನಿರತ ರೈತರ ಮೇಲೆ ನಿರಂತರ ಬಂದೂಕಿನ ಗೋಲಿ ಹಾರಿಸಿ ಚಳವಳಿಗಾರರನ್ನು ಕೊಂದ ನಂತರವೂ ಹೊನ್ನಾಳಿಯ ಮಾರಿಕೊಪ್ಪ ಹಳದಮ್ಮ ದೇವಾಲಯದಲ್ಲಿ ಅಡುಗಿದ್ದ ನೂರಾರು ರೈತ ಹೋರಾಟಗಾರನ್ನು ಹೊನ್ನಾಳಿ ಶಿಕಾರಿಪುರ ಮಾರ್ಗದ ಇಕ್ಕೆಲದಲ್ಲಿನ ಬೇವಿನ ಮರಕ್ಕೆ ನೇಣಿಗೆ ಹಾಕುತ್ತಾರೆ.

   ಹೋರಾಟಕ್ಕೆ ರೈತರನ್ನು ಸೇರಿಸಲು ಬೇವಿನ ಎಲೆಯನ್ನೆ  ಸಾಂಕೇತಿಕ ಆಹ್ವಾನ ಪತ್ರಿಕೆ ಮಾಡಿದ್ದಕ್ಕೆ ಪ್ರತಿಯಾಗಿ ರೈತ ಹೋರಾಟಗಾರರನ್ನ ಬೇವಿನ ಮರಕ್ಕೆ ನೇಣು ಹಾಕುತ್ತಾರೆ ಇದೆಂತಹ ಕ್ರೌರ್ಯ ಯೋಚಿಸಿ.

   12 ಮಾರ್ಚ್ 1831 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸೈನ್ಯ ಹೊನ್ನಾಳಿ ವಶಪಡಿಸುಕೊಳ್ಳುತ್ತದೆ.

      ನಂತರ ಅರಸೊತ್ತಿಗೆ 12 ಜೂನ್ 1831 ರಂದು ರೈತ ಹೋರಾಟಗಾರರೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತದೆ, ಬೂದಿ ಬಸಪ್ಪ ನಾಯಕರು ಹೈದ್ರಾಬಾದ್ ಸಂಸ್ಥಾನದ ಕಡೆ ಪರಾರಿ ಆದರು ಎಂದು ಮತ್ತು ರಂಗಪ್ಪ ನಾಯಕರು ಮರಣ ಹೊಂದಿದರೆಂಬ ಸುದ್ದಿ ಹರಡುತ್ತದೆ.

   ಈ ರೀತಿ ಕೆಳದಿ ರಾಜ್ಯ ಪುನಃ ವಶಪಡಿಸಿಕೊಳ್ಳುವ ಬೂದಿಬಸಪ್ಪನಾಯಕರ ಪ್ರಯತ್ನ ವಿಫಲವಾಗುತ್ತದೆ.

   ಒಂದು ಅಂದಾಜಿನಂತೆ ಬಿದನೂರು ನಗರ ಪ್ರಾಂತ್ಯದ ರೈತ ಹೋರಾಟದಲ್ಲಿ ಜೀವಕಳೆದುಕೊಂಡವರ ಸಂಖ್ಯೆ ಕೆಲವು ಸಾವಿರವಾದರೂ ದಾಖಲೆಗಳಲ್ಲಿ ಇದು 700 ಅಂತ ದಾಖಲಾಗಿದೆ.

  ಬೂದಿಬಸಪ್ಪನಾಯಕ ಬಿದನೂರು ನಗರ ರಾಜರೆಂದು ಘೋಷಿಸಲು ಕಾರಣ ಬೂದಿಬಸಪ್ಪನಾಯಕರು ಹೊನ್ನಾಳಿ ತಾಲ್ಲೂಕಿನ ಚಿನ್ನಿಕಟ್ಟೆಯ ಜಂಗಮ ಕನ್ಯೆ ಮತ್ತು ಕೆಳದಿಯ ಕೊನೆಯ ಅರಸ ಚೆನ್ನಬಸವನಾಯಕರ ಪ್ರೇಮ ವಿವಾಹದಿಂದ ಜನಿಸಿದ ರಾಜವಂಶಸ್ಥ ಆದರೆ ಬ್ರಿಟಿಷರ ವಿರುದ್ಧ  ಮೈಸೂರು ಮಹಾರಾಜರ ವಿರುದ್ಧ ರೈತರನ್ನು ಹೋರಾಟಕ್ಕೆ ತಯಾರು ಮಾಡಿದ್ದ ಬೂದಿ ಬಸಪ್ಪರನ್ನು ದರೋಡೆಕೋರನೆಂದೆ ಅವರೆಲ್ಲ ದುರುದ್ದೇಶದಿಂದ ದಾಖಲಿಸುತ್ತಾರೆ.

  ಇಲ್ಲಿ ಜನಪದದ ಸಾಕ್ಷಿಯೊಂದಿದೆ ಕೆಳದಿ ಅರಸರು ಶಿಕಾರಿಗಾಗಿ ಹೊನ್ನಾಳಿ ಸಮೀಪದ ಬಿದಿರಳ್ಳಿ ಕಣಿವೆಗೆ ಹೋಗುವಾಗ ಕುಂಸಿಯಲ್ಲಿ ತಂಗುತ್ತಿರುತ್ತಾರೆ ನಂತರ ಬಿದಿರಳ್ಳಿ ಕಣಿವೆಗೆ ಸಮೀಪದ ಚಿನ್ನಿಕಟ್ಟೆಯಲ್ಲಿ ವಾಡೆ ನಿರ್ಮಿಸಿ ತಂಗಲು ಪ್ರಾರಂಬಿಸುತ್ತಾರೆ.

   ಆಗ ಅಲ್ಲಿನ ಸುಂದರ ಜಂಗಮ ಕನ್ಯೆಯಲ್ಲಿ ಪ್ರೇಮ ಉಂಟಾಗಿ ಚೆನ್ನಬಸವ ನಾಯಕರು ವಿವಾಹ ಆಗುತ್ತಾರೆ ಆಗ ಚೆನ್ನಬಸವ ನಾಯಕರು ಜಂಗಮ ಕನ್ಯೆಗೆ ನೀಡಿದ ರಾಜ ಮುದ್ರೆ ಉಂಗುರವೇ ಅವರ ಪುತ್ರ ಬೂದಿಬಸಪ್ಪ ನಾಯಕರಿಗೆ ತಾಯಿಯಿಂದ ಬಂದಿರುತ್ತದೆ.

    ಇದು ಇತಿಹಾಸದ ಸತ್ಯಕಥೆ ನಮ್ಮ ದೇಶದ ಮೊದಲ ರೈತ ಹೋರಾಟ ನಡೆಸಿದ ಕೀರ್ತಿ ದಾಖಲೆ ಕೆಳದಿ ವಂಶದ ವೀರ ಬೂದಿಬಸಪ್ಪನಾಯಕರದ್ದು ಮತ್ತು ಈ ಮೊದಲ ರೈತ ಸಮಾವೇಶ ನಡೆದದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ತ್ಯಾಗರ್ತಿ ಸಮೀಪದ ಹೊಸಂತೆಯಲ್ಲಿ ಈ ಸಮಾವೇಶ ನಾಳೆ ಆಗಸ್ಟ್ 23ಕ್ಕೆ 195ನೇ ವರ್ಷಾಚಾರಣೆ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...