Skip to main content

3494. ಬ್ರಹ್ಮಕಮಲ ಮತ್ತು ರಾತ್ರಿರಾಣಿ ಹೂವು

#ರಾತ್ರಿ_ರಾಣಿ_ಹೂವು​

#ಇದು_ಬಳ್ಳಿಯಲ್ಲಿ_ಅರಳುವ_ಹೂವು​

#ನಮ್ಮ_ಮನೆಯಲ್ಲಿ_ಮಧ್ಯರಾತ್ರಿ_ಅರಳಿತ್ತು.

#ರಾತ್ರಿರಾಣಿ_ಬ್ರಹ್ಮಕಮಲ_ಬೇರೆ_ಬೇರೆ


#flowers​ #flowerlovers​ #nightqueen​ #brahmakamala​ #midnightmemories​ 

   ನಾನು ಈ ರಾತ್ರಿ ರಾಣಿ ಹೂವನ್ನು ಬ್ರಹ್ಮ ಕಮಲ ಎಂದೇ ಭಾವಿಸಿದ್ದೆ, ಕಳೆದ ವರ್ಷ ರಾತ್ರಿ ರಾಣಿ ನಮ್ಮ ಮನೆಯಲ್ಲಿ ಅರಳಿದಾಗ ಬ್ರಹ್ಮ ಕಮಲ ಅರಳಿದೆ ಎಂದು ಪೋಟೋ ಪೋಸ್ಟ್ ಮಾಡಿದ್ದೆ ಆದರೆ ಇದು ರಾತ್ರಿ ರಾಣಿ ಅಂತ ಪ್ರತಿಕ್ರಿಯೆಗಳನ್ನು ಗೆಳೆಯರು ಬರೆದಾಗಲೇ ಗೊತ್ತಾಗಿದ್ದು ಇದು ಬೇರೆ ಬೇರೆ ಅಂತ.

  ಹಿಮಾಲಯ ಶ್ರೇಣಿಯಲ್ಲಿರುವ ಇದೇ ಹೂವಿನ ಹೋಲಿಕೆ ಇರುವ #ಬ್ರಹ್ಮಕಮಲ ಹೂವು ಗಿಡದಲ್ಲಿ ಅರಳುವ ಹೂವು.

     ಈ ಪ್ರಭೇದ ಬಿನ್ನತೆ ಗೊತ್ತಿಲ್ಲದೆ ರಾತ್ರಿ ರಾಣಿ ಹೂವಿಗೆ ಬ್ರಹ್ಮಕಮಲ ಎಂತಲೂ  ಕರೆಯುತ್ತಾರೆ.

     ರಾತ್ರಿ ರಾಣಿ ಹೂವು ಮತ್ತು ಬ್ರಹ್ಮಕಮಲ ಹೂವಿನ ಬಟಾನಿಕಲ್ ನೇಮ್ ಬೇರೆ ಬೇರೆ ಇದೆ.

    #ರಾತ್ರಿಯ_ರಾಣಿ ಹೂವು ವೈಜ್ಞಾನಿಕವಾಗಿ #ಸೆಲೆನಿಸೆರಿಯಸ್_ಗ್ರಾಂಡಿಫ್ಲೋರಸ್ ಎಂದು ಕರೆಯಲ್ಪಡುವ ರಾತ್ರಿಯಲ್ಲಿ ಅರಳುವ ಒಂದು ಹೂವು. 

   ಈ ಸುಂದರವಾದ ಕಳ್ಳಿ ಜಾತಿಯ ಮೂಲ ಉಷ್ಣವಲಯದ ಅಮೆರಿಕ ಮತ್ತು ಇದು ಅಪರೂಪದ ಮತ್ತು ವಿಲಕ್ಷಣ ಹೂವಾಗಿದೆ. 

     ರಾತ್ರಿ ರಾಣಿಯ ದೊಡ್ಡ ಬಿಳಿ ತುತ್ತೂರಿ ಆಕಾರದ ಹೂವುಗಳು ರಾತ್ರಿಯಲ್ಲಿ ಮಾತ್ರ ತೆರೆದುಕೊಳ್ಳುತ್ತವೆ, ಈ ಹೂವು ಅರಳಿದ ಇಡೀ ಪ್ರದೇಶದಲ್ಲಿ ಸಿಹಿ ಪರಿಮಳವನ್ನು ನೀಡುತ್ತವೆ.

   ಅದರ ಸಂಕೀರ್ಣವಾದ ಜೋಡಣೆ ಮತ್ತು ಸೊಗಸಾದ ಪರಿಮಳದೊಂದಿಗೆ ಈ ಹೂವು ಬಹಳ ಅಪರೂಪದ ದೃಶ್ಯವಾಗಿದೆ ಏಕೆಂದರೆ ಇದು ವರ್ಷದ ಒಂದು ರಾತ್ರಿ ಮಾತ್ರ ಅರಳುತ್ತದೆ.

  ವೈಜ್ಞಾನಿಕವಾಗಿ #ಸೌಸುರಿಯಾ_ಒಬುಲಾಟ ಎಂದು ಕರೆಯಲ್ಪಡುವ #ಬ್ರಹ್ಮ_ಕಮಲವು ಹಿಮಾಲಯದ ನಿಗೂಢ ಹೂವು.

   ಸಾಮಾನ್ಯವಾಗಿ ಬ್ರಹ್ಮಕಮಲ್ ಎಂದು ಕರೆಯಲ್ಪಡುವ ಹೂಬಿಡುವ ಸಸ್ಯದ ಒಂದು ಜಾತಿಯಾಗಿದೆ ಇದು ಭಾರತ, ಭೂತಾನ್ , ನೇಪಾಳ , ಪಾಕಿಸ್ತಾನ ಮತ್ತು ನೈಋತ್ಯ ಚೀನಾದಲ್ಲಿ 3,700 ರಿಂದ 4,600 ಮೀಟರ್ ಎತ್ತರದಲ್ಲಿರುವ ಹಿಮಾಲಯದ ಆಲ್ಪೈನ್ ಹುಲ್ಲುಗಾವಲುಗಳಲ್ಲಿ ಬೆಳೆಯುತ್ತಿದೆ.

   ಸಾಮಾಜಿಕ ಜಾಲತಾಣದಲ್ಲಿ ರಾತ್ರಿ ರಾಣಿ ಹೂವಿಗೆ ಬ್ರಹ್ಮಕಮಲ ಎಂದು ಜನ ಕರೆಯುವುದು ನೋಡಿ 
ನಕಲಿ ಬ್ರಹ್ಮಕಮಲ ಎಂದು ಅನೇಕರು ಬರೆದಿದ್ದಾರೆ ಆದರೆ ಪ್ರಕೃತಿಯಲ್ಲಿ ಅಸಲಿ ನಕಲಿ ಹೂವು ಇರಲು ಸಾಧ್ಯವಿಲ್ಲ ಸಾಧ್ಯವಾದರೆ #ಬಳ್ಳಿ_ಬ್ರಹ್ಮಕಮಲ ಎಂದು ಕರೆಯ ಬಹುದೇನೋ? ಯೋಚಿಸಿ.

  ರಾತ್ರಿ ರಾಣಿ ಹೂವಿಗೆ ರಾತ್ರಿ ರಾಜಕುಮಾರಿ ಎಂಬ ಹೆಸರೂ ಇದೆ  ಇದು ಅರಳಿದಾಗ ಸುತ್ತಲೂ ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಗಂದ ಸೂಸುತ್ತದೆ.

  ಸೂರ್ಯೋದಯರಲ್ಲಿ ಸೂರ್ಯನ ರಶ್ಮಿಗೆ ಈ ರಾತ್ರಿ ರಾಣಿ ಹೂವು ಮುದುಡುವುದು ವಿಸ್ಮಯ.

   ನಮ್ಮ ಮನೆಯಲ್ಲಿ ರಾತ್ರಿ ರಾಣಿ ಹೂವಿನ ಒಂದು ಗಿಡದಲ್ಲಿ ಏಕ ಕಾಲದಲ್ಲಿ ನಾಲ್ಕು ರಾತ್ರಿ ರಾಣಿ ಹೂವು ಅರಳಿದೆ ಒಂದ ವಿಶೇಷ ಅಂದರೆ ಇದರ ಎಲೆಯ ಅಂಚಿನಿಂದಲೇ ಹೂವಿನ ಮೊಗ್ಗು ಬಿಟ್ಟು ಅರಳುತ್ತದೆ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...