Skip to main content

3450.ಶಿವಮೊಗ್ಗದ ಮಲ್ನಾಡ್ ಕೆಫೆ ಭಾಷಾ

#ಕೆಫೆ_ಮಲ್ನಾಡ್_ಭವನ_ಪ್ರಾರಂಭವಾಗಿ_17_ತಿಂಗಳು

#ಶಿವಮೊಗ್ಗದ_ನೆಹರು_ರಸ್ತೆಯ_ಎರಡನೆ_ಕ್ರಾಸಲ್ಲಿ_ಪ್ರಸಿದ್ದಿ_ಪಡೆದಿದೆ

#ಇಪ್ಪತ್ತೆರೆಡು_ವರ್ಷ_M_H_ಕಾಫಿಶಾಪ್_ನಿರಂತರ_ನಡೆಸುತ್ತಿರುವ

#ಇದರ_ಮಾಲಿಕ_ಬಾಷಾರಿಗೆ_ರೆಸ್ಟೋರಾಂಟ್_ಮಾಡಬೇಕೆನ್ನುವುದು_ಜೀವಮಾನದ_ಕನಸು

#ಈಗ_ಅವರ_ಕನಸು_ನನಸಾಗಿದೆ

#ಒಮ್ಮೆ_ಬೇಟಿ_ನೀಡಿ.


#Cafemalnadbhavana #shivamogga #neharuroad #shivamoggarestoraunt #hotel #MHCafe #Basha
#besthotel 

    ಶಿವಮೊಗ್ಗದ ನೆಹರೂ ರಸ್ತೆಯ ಎರಡನೇ ಕ್ರಾಸಿನಲ್ಲಿ ಶೋಭಾ ಸ್ಟೋರ್ ಪಕ್ಕದ ಕಿರಿದಾದ ಓಣಿಯಲ್ಲಿದೆ MH ಕಾಫೀ ಶಾಪ್ ಇಲ್ಲಿನ ಉತ್ಕೃಷ್ಟ ಪಿಲ್ಟ್ ರ್ ಕಾಫೀ ಮತ್ತು ಟೀಗಾಗಿ ಜನ ಹುಡುಕಿಕೊಂಡು ಬರುತ್ತಾರೆ.

   ಈಗ ಈ ಕಾಫಿ ಶಾಪ್ ಪಕ್ಕದಲ್ಲೇ #ಕೆಫೆ_ಮಲ್ನಾಡ್_ಭವನ ಪ್ರಾರಂಭ ಆಗಿ 17 ತಿಂಗಳಾಯಿತು ಈಗ ಯಶಸ್ವಿಯಾಗಿ ಶುಚಿ-ರುಚಿಯ ಆಹಾರದ ಉದ್ಯಮ ನಡೆಯುತ್ತಿದೆ.

   ಇಷ್ಟು ಚಿಕ್ಕ ಜಾಗದಲ್ಲಿ ಅದೂ ಅತ್ಯಂತ ಸಣ್ಣ ಒಣಿ ಒಳಗೆ ಹೇಗೆ ಸಾಧ್ಯ ಅಂತ ಹೋಟೆಲ್ ಉದ್ಯಮ ನಡೆಸುವವರಿಗೆ ಅನ್ನಿಸದೇ ಇರಲಾರದು.

    ಹೋಟೆಲ್ ಉದ್ಯಮದಲ್ಲಿ ಇರುವವರು ಇದನ್ನು ಪ್ರತ್ಯಕ್ಷ ನೋಡಿ ಬರಲೇ ಬೇಕು.

    ಇಲ್ಲಿ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನದ ಊಟ  ಲಭ್ಯವಿದೆ.

     ಹಳೆಯ ಎಂ. ಹೆಚ್. ಕಾಫಿ ಶಾಪಿನ #ಭಾಷಾ ರವರೇ ಈ ಹೊಸ ಕೆಫೆ ಮಲ್ನಾಡ್ ಭವನದ ಮಾಲೀಕರು, ಅವರ 22 ವರ್ಷದ MH ಕಾಫಿ ಶಾಪ್ ಭಾಷಾ ಸ್ವತಃ ನಡೆಸುತ್ತಿದ್ದಾರೆ ಪಕ್ಕದ ಕೆಫೆ ಮಲ್ನಾಡ್ ಭವನ ಅವರ ಸಿಬ್ಬಂದಿಗಳು ನಡೆಸುತ್ತಾರೆ.

ಎಂ ಹೆಚ್ ಕಾಫಿ ಶಾಪ್ ಪಕ್ಕದಲ್ಲಿ ಮೊದಲು #ಜನ_ಹೋರಾಟ_ಪತ್ರಿಕೆ ಕಾರ್ಯಾಲಯ ಮತ್ತು ಅವರ ಪ್ರಿಂಟಿಂಗ್ ಪ್ರೆಸ್ ಇತ್ತು.

   ಜನ ಹೋರಾಟ ದಿನ ಪತ್ರಿಕೆಯ ಕಚೇರಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಿದ್ದರಿಂದ ಖಾಲಿ ಇದ್ದ ಆ ರೂಮಗಳನ್ನು ಕೆಫೆ ಮಲ್ನಾಡ್ ಭವನ ಆಗಿ ಬದಲಾಯಿಸಿದ್ದಾರೆ ಭಾಷಾ.
   
  ಇಂತಹ ಒಂದು ರೆಸ್ಟೋರೆಂಟ್ ಮಾಡಬೇಕೆನ್ನುವುದು ಭಾಷಾರವರ ಕನಸು ಆ ಕನಸು ಈಡೇರಿದೆ.

   ನೀವು ಶಿವಮೊಗ್ಗ ಹೋದರೆ ನೆಹರು ರೋಡ್ ಸೆಕೆಂಡ್ ಕ್ರಾಸ್ ತಿರುಗಿ ಅಲ್ಲಿ ಎಡ ಭಾಗದಲ್ಲಿ ಶೋಭಾ ಸ್ಟೋರ್ ಪಕ್ಕದ ಓಣಿಯಲ್ಲಿ ಹೋದರೆ ಅಲ್ಲಿದೆ ಕೆಫೆ ಮಲ್ನಾಡ್ ಭವನ ಅಲ್ಲೇ ಉತ್ಕೃಷ್ಟ ಚಹಾ ಕಾಫಿ ರುಚಿ ರುಚಿಯಾದ ಬಿಸಿಬಿಸಿಯಾದ ಉಪಹಾರ ಮತ್ತು ಮಧ್ಯಾಹ್ನದ ಊಟ ನಿತ್ಯ ಲಭ್ಯವಿದೆ ಅಲ್ಲಿ ಹಸನ್ಮುಖಿ ಕನಸುಗಾರ ಭಾಷಾ ಇರುತ್ತಾರೆ.

   ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಸು ಕಾಣುತ್ತಾರೆ ಅದನ್ನು ನನಸಾಗಿಸಲು ನಿರಂತರ ತಪಸ್ಸಿನಂತೆ ಶ್ರಮಿಸಿದರೆ ಯಶಸ್ವಿ ಆಗುತ್ತಾರೆ ಅಂತಹ ಕನಸು ನನಸು ಮಾಡಿದ ಶ್ರಮಿಕ ಯುವಕ ಭಾಷಾ ಹೋಟೆಲ್ ಉದ್ಯಮದಲ್ಲಿರುವವರಿಗೆ ರೋಲ್ ಮಾಡೆಲ್ ಆಗಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...