Skip to main content

3441. ತುಂಗಭದ್ರಾ ಶುಗರ್ಸ್ ಶಿವಮೊಗ್ಗ

#ತುಂಗಭದ್ರಾ_ಶುಗರ್ಸ್

#ಮಯೂರ್_ಮಾದ್ವಾನಿ

#ಶಿವಮೊಗ್ಗದಲ್ಲಿ_ಮರೆತು_ಹೋದ_ಹೆಸರುಗಳು.

#ಭಾರತೀಯ_ಮೂಲದ_ಉಗಾಂಡದ_ಉದ್ಯಮಿ

#ಮಯೂರ್_ಮಾದ್ವಾನಿ_1958ರಲ್ಲಿ_ಶಿವಮೊಗ್ಗದಲ್ಲಿ_ಸಕ್ಕರೆ_ಕಾರ್ಖಾನೆ_ಪ್ರಾರಂಬಿಸಿದ್ದರು

#ಪ್ರಖ್ಯಾತ_ಹಿಂದಿ_ಚಿತ್ರತಾರೆ_ಮುಮ್ತಾಜ್_ಇವರ_ಪತ್ನಿ.

#ಇವರ_ಪುತ್ರಿ_ನತಾಶ_ನಟ_ಪಿರೋಜ್_ಖಾನ್_ಪುತ್ರ_ನಟ_ಪರ್ದೀನ್_ಖಾನ್_ವಿವಾಹ_ಆಗಿದ್ದಾರೆ


#Shivamogga #Malagoppa #Tungabhadrasugars #Mayurmadwani #Uganda #Bollywood #Mumtaj.

   ಶಿವಮೊಗ್ಗದಲ್ಲಿ ಭದ್ರಾವತಿ ರಸ್ತೆಯ ಮಲವಗೊಪ್ಪದಲ್ಲಿ 1958 ರಲ್ಲಿ ಪ್ರಾರಂಭವಾಗಿದ್ದ ಸಕ್ಕರೆ ಕಾರ್ಖಾನೆ ಈಗ ಇಲ್ಲ.

   ಇದನ್ನು ಪ್ರಾರಂಬಿಸಿದವರು ಗುಜರಾತಿನ ಬ್ರಾಹ್ಮಣ ಕುಟುಂಬದ #ಮಯೂರ್_ಮಾದ್ವಾನಿ ಅವರು ಭಾರತಿಯ ಮೂಲದ ಉಗಾಂಡದ ಕೈಗಾರಿಕೋಧ್ಯಮಿ.

   1974 ರಲ್ಲಿ ಉದ್ಯಮಿ ಮಯೂರ್ ಮಾಧ್ವಾನಿ ಹಿಂದಿ ಚಿತ್ರರಂಗದ ಪ್ರಖ್ಯಾತ ನಟಿ ಮುಮ್ತಾಜ್ ಅವರನ್ನ ವಿವಾಹ ಆಗುತ್ತಾರೆ.

   ನಟಿ ಮುಮ್ತಾಜ್ ಶಿವಮೊಗ್ಗಕ್ಕೆ ಬಂದರೆ ತಂಗಲಿಕ್ಕಾಗಿ ಶಿವಮೊಗ್ಗದ ಜ್ಯೂವೆಲ್ ರಾಕ್ ಹಿಂಬಾಗದ ವಿಶಾಲವಾದ ಜಾಗದಲ್ಲಿ ದೊಡ್ಡ ಬಂಗಲೆ ನಿರ್ಮಿಸಿದ್ದರು ಅಲ್ಲಿ ಸ್ವಿಮ್ಮಿಂಗ್ ಪೂಲ್ ಕೂಡ ಇತ್ತಂತೆ ಈಗ ಅದು ಸ್ಥಳೀಯ ಶಿವಮೊಗ್ಗದ ವ್ಯಾಪಾರಸ್ಥರು ಖರೀದಿಸಿದ್ದಾರೆ.

    ಆ ಕಾಲದಲ್ಲಿ ಉದ್ಯಮಿ ಮಯೂರ್ ಮಾದ್ವಾನಿ ತುಂಗಭದ್ರಾ ಶುಗರ್ ಪ್ಯಾಕ್ಟರಿಗಾಗಿ ಒಂದು ಸಾವಿರ ಎಕರೆ ಜಮೀನು ಖರೀದಿಸಿದ್ದರು.

   ರಾಜ್ಯ ಸರ್ಕಾರದಿಂದ 1400 ಎಕರೆ ಲೀಸ್ ಗೆ ಪಡೆದಿದ್ದರು.

   1958 ರಿಂದ 1996 ರವರೆಗೆ 38 ವರ್ಷ ಕಾರ್ಯನಿರ್ವಹಿಸಿದ ಈ ಕಾರ್ಖಾನೆ ನಂತರ ನಷ್ಟದಿಂದ ಸಕ್ಕರೆ ಉತ್ಪಾದನೆ ಸ್ಥಗಿತವಾಯಿತು.

     ಮಯೂರ್ ಮಾಧ್ವಾನಿ ಜನನ 1949 ರಲ್ಲಿ ಅವರು ಭಾರತೀಯ ಮೂಲದ ಉಗಾಂಡಾದ ಉದ್ಯಮಿ.

   ಅವರು ಉಗಾಂಡಾದ ಕಾಕಿರಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮಾಧ್ವಾನಿ ಗ್ರೂಪ್ ಆಫ್ ಕಂಪನಿಗಳ ಮಾಲಿಕರು.

   ಈ ಸಂಸ್ಥೆಯ ಅಂತರರಾಷ್ಟ್ರೀಯ ಮಾಸ್ಟರ್ ಆಫ್ ಹ್ಯೂಮನ್ ರಿಸೋರ್ಸ್ ಮತ್ತು ಜನರಲ್ ಮ್ಯಾನೇಜ್ಮೆಂಟ್,  ಅಂತರರಾಷ್ಟ್ರೀಯ ಮಾಸ್ಟರ್ ಆಫ್ ಇಂಟರ್ನ್ಯಾಷನಲ್ ಬ್ಯುಸಿನೆಸ್ ಮತ್ತು ಕಂಪನಿ ಲಾ ಸಂಸ್ಥೆಗಳ ಮಾಲಿಕತ್ವ ಹೊಂದಿದೆ.

 ನ 1972 ರಲ್ಲಿ ಉಗಾಂಡಾದ ಸರ್ವಾಧಿಕಾರಿ ಇದಿ ಅಮೀನ್ ಉಗಾಂಡದಲ್ಲಿನ ಏಷ್ಯನ್ನರ ಪೌರತ್ವವನ್ನು ಲೆಕ್ಕಿಸದೆ ಎಲ್ಲಾ ಏಷ್ಯನ್ನರನ್ನು ಉಗಾಂಡಾದಿಂದ ಹೊರಹಾಕಿದರು.

   ಇದರಿಂದ ಮಯೂರ್ ಮತ್ತು ಇತರ ಕುಟುಂಬ ಸದಸ್ಯರು ಲಂಡನ್‌ಗೆ ಸ್ಥಳಾಂತರಗೊಂಡರು.

    1976ರಲ್ಲಿ ಇದೀಅಮೀನ್ ಪದಚ್ಯುತಗೊಂಡ ನಂತರ ಮಾಧ್ವಾನಿಗಳು ಉಗಾಂಡಾಗೆ ಮರಳಿದರು ಮತ್ತು ತಮ್ಮ ಆಸ್ತಿಗಳನ್ನು ಮರಳಿ ಪಡೆದರು.

     ಅವರ ಕುಟುಂಬದ ಪ್ರಮುಖ ಕಂಪನಿಯಾದ ಕಾಕಿರಾ ಶುಗರ್ (KSW) ಲಿಮಿಟೆಡ್ ಅನ್ನು 1985 ರಲ್ಲಿ ಯಶಸ್ವಿಯಾಗಿ ಚೇತರಿಸಿಕೊಳ್ಳುವಂತೆ ಮಾಡಿದರು.

 ಮಾಧ್ವಾನಿ ಕುಟುಂಬದ ನೇತೃತ್ವದಲ್ಲಿ ಅವರು KSW ಅನ್ನು ಪೂರ್ವ ಆಫ್ರಿಕಾದಲ್ಲಿ ಸಂಸ್ಕರಿಸಿದ ಸಕ್ಕರೆಯ ಅತಿದೊಡ್ಡ ಉತ್ಪಾದಕರಾಗಿ ಮುನ್ನಡೆಸಿದ್ದಾರೆ.

   KSW ವಾರ್ಷಿಕವಾಗಿ ಅಂದಾಜು 165,000 ಮೆಟ್ರಿಕ್ ಟನ್ ಸಕ್ಕರೆಯನ್ನು ಉತ್ಪಾದಿಸುತ್ತದೆ, ಇದು 2011 ರಲ್ಲಿ ರಾಷ್ಟ್ರೀಯ ಉತ್ಪಾದನೆಯ ಸುಮಾರು 47 ಪ್ರತಿಶತದಷ್ಟಿದೆ. 

  ಕಾಕಿರಾದಲ್ಲಿ ಸಹ-ಉತ್ಪಾದನೆಗೆ ಗುಂಪು ಮುಂಚೂಣಿಯಲ್ಲಿದೆ ಇದು ಈಗ 52 ಮೆಗಾವ್ಯಾಟ್‌ಗಳ ವಿದ್ಯುತ್ ಅಲ್ಲಿ ಉತ್ಪಾದಿಸುತ್ತದೆ, ಅದರಲ್ಲಿ 20 ಮೆಗಾವ್ಯಾಟ್‌ಗಳನ್ನು ಆಂತರಿಕವಾಗಿ ಬಳಸಲಾಗುತ್ತದೆ ಮತ್ತು 32 ಮೆಗಾವ್ಯಾಟ್‌ಗಳನ್ನು ಉಗಾಂಡದ ರಾಷ್ಟ್ರೀಯ ಗ್ರಿಡ್‌ಗೆ ಮಾರಾಟ ಮಾಡಲಾಗುತ್ತದೆ. 

   2016 ರಲ್ಲಿ ದಿನಕ್ಕೆ ಒಟ್ಟು 60,000 ಲೀಟರ್ ಎಥೆನಾಲ್ ಸಾಮರ್ಥ್ಯದೊಂದಿಗೆ ಎಥೆನಾಲ್ ಡಿಸ್ಟಿಲರಿಯನ್ನು ಸಹ ಸ್ಥಾಪಿಸಿದ್ದಾರೆ.
 
    1974 ರಲ್ಲಿ ಮಯೂರ್ ಮಾದ್ವಾನಿ ಅವರು ಬಾಲಿವುಡ್ ನ ಪ್ರಖ್ಯಾತ ನಟಿ ಮುಮ್ತಾಜ್ ಅವರನ್ನು ವಿವಾಹವಾದರು.

  ಹಿಂದಿ ಚಲನಚಿತ್ರ ನಟಿ ಮುಮ್ತಾಜ್ ಇರಾನ್‌ನ ಮಶಾದ್‌ನಿಂದ ಬಂದ ಅಬ್ದುಲ್ ಸಲೀಂ ಅಸ್ಕರಿ (ಒಣ ಹಣ್ಣುಗಳ ಮಾರಾಟಗಾರ) ಮತ್ತು ಶಾದಿ ಹಬೀಬ್ ಅಘಾ ದಂಪತಿಗಳ ಪುತ್ರಿ ಅವರ ತಂದೆ ಇಮಾಮ್‌ಗಳ ಕುಟುಂಬದಿಂದ ಬಂದವರು.

   ಮುಮ್ತಾಜ್ ಜನಿಸಿದ ಒಂದು ವರ್ಷದ ನಂತರ ಅವರ ಪೋಷಕರು ವಿಚ್ಛೇದನ ಪಡೆದರು, ಮುಮ್ತಾಜ ಅವರ ಅಕ್ಕ ನಟಿ ಮಲ್ಲಿಕಾ , ಅವರು ಕುಸ್ತಿಪಟು ಮತ್ತು ಭಾರತೀಯ ನಟ ರಾಂಧವಾ ಅವರನ್ನು ವಿವಾಹವಾದರು.

    ರಾಂಧವಾ ಅವರು ಕುಸ್ತಿಪಟು ಮತ್ತು ನಟ ದಾರಾ ಸಿಂಗ್ ಅವರ ಕಿರಿಯ ಸಹೋದರ.

      ಶಿವಮೊಗ್ಗದ ತುಂಗಭದ್ರಾ ಸಕ್ಕರೆ ಕಾರ್ಖಾನೆ ಮಾಲಿಕ ದಂಪತಿಗಳಾದ ಮಯೂರ್ ಮಾದ್ವಾನಿ ಮತ್ತು ನಟಿ ಮುಮ್ತಾಜ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು ನತಾಶಾ  ಮತ್ತು ತಾನ್ಯಾ.

    ಅವರಲ್ಲಿ ನತಾಶಾ 2006 ರಲ್ಲಿ ನಟ ಫಿರೋಜ್ ಖಾನ್ ಅವರ ಮಗ ನಟ ಫರ್ದೀನ್ ಖಾನ್ ಅವರನ್ನು ವಿವಾಹವಾದರು.

    ಈ ಕಾರ್ಖಾನೆಯು 1958 ರಿಂದ 1996 ರವರೆಗೆ ಸುಮಾರು 38 ವರ್ಷಗಳ ಕಾಲ ಕಬ್ಬು ಅರೆಯುವ ಖಾಸಗಿ ಘಟಕವಾಗಿತ್ತು.

   ಪುನರಾವರ್ತಿತ ನಷ್ಟಗಳಿಂದಾಗಿ ಅದು 1996 ರಲ್ಲಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತು.

    1999 ರಲ್ಲಿ ಮದ್ರಾಸ್ ಹೈಕೋರ್ಟ್ ಕಾರ್ಖಾನೆಯ ದಿವಾಳಿತನಕ್ಕೆ ಆದೇಶಿಸಿತು ಮತ್ತು ಈಗ ಅದು ತುಂಗಭದ್ರಾ ಶುಗರ್ ವರ್ಕ್ಸ್ ಲಿಮಿಟೆಡ್ ಒಡೆತನದಲ್ಲಿದೆ.

   ತುಂಗಭದ್ರಾ ಶುಗರ್ ವರ್ಕ್ಸ್ ಲಿಮಿಟೆಡ್‌ನ ಪ್ರಸ್ತುತ ಮಾಲೀಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಪಿ. ಮಣಿವೇಲನ್.

    ಮಣಿವೇಲನ್ ವಿಜಯಚಾಮುಂಡೇಶ್ವರಿ , ಚಿನ್ನಸಾಮಿ ರವಿಚಂದ್ರನ್ , ಸುರೇಶ್ ಕುಮಾರ್ ರೈ ಮತ್ತು ಉಮಾಮಹೇಶ್ವರಿ ಅವರೊಂದಿಗೆ ಮಂಡಳಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

   ಇಷ್ಟೆಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರಗಳ ಜ್ಞಾನ ಇರುವ ಮಯೂರ್ ಮಾದ್ವಾನಿ ಒಡೆತನದ ಶಿವಮೊಗ್ಗದ #ತುಂಗಭದ್ರಾ_ಶುಗರ್ಸ್ ದಿವಾಳಿ ಆಗಿದ್ದು ಹೇಗೆ? ಅದು ಬೇರೆಯದೇ ಆದ ಕಥೆ.

    ನಮ್ಮ ಜಿಲ್ಲೆಯಲ್ಲಿ  ತುಂಗಭದ್ರಾ ಶುಗರ್ಸ್ ಮತ್ತು ಭದ್ರಾವತಿಯಲ್ಲಿದ್ದ MPM ಸಕ್ಕರೆ ಕಾರ್ಖಾನೆ ಎರೆಡೂ ಈಗ ಮುಚ್ಚಲ್ಪಟ್ಟಿದೆ.

   ಈ ಸಕ್ಕರೆ ಕಾರ್ಖಾನೆ ಜಾಗ ಗುರುತಿಸುವ, ಅಡಿಪಾಯ ಹಾಕುವ ಮಹತ್ತರ ಕೆಲಸ ಮಾಡಿದವರು ಮಯೂರ್ ಮಾದ್ವಾನಿ ಸಂಬಂಧಿ #ಮೋಹನ್_ಬಾಯಿ_ಕುಟೇಚ ಈಗ ಅವರಿಲ್ಲ ಅವರ ಪುತ್ರ #ಲಲೀತ್_ಕುಟೇಚಾ ಸಂದರ್ಶನ ಮುಂದಿನ ಭಾಗದಲ್ಲಿ ನಿರೀಕ್ಷಿಸಿ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...