Skip to main content

3461. ಭಾಗ - 5 ಜೋಗ್ ಫಾಲ್ಸ್ ಹೋಮ್ ಸ್ಟೇ ಅವಕಾಶಗಳು

#ಭಾಗ_5.

#ಜೋಗ್_ಪಾಲ್ಸ್_ಪರಿಸರದಲ್ಲಿ

#ಇನ್ನೂರಕ್ಕೂ_ಹೆಚ್ಚು_ಹೋಮ್_ಸ್ಟೇ_ಲಾಭದಾಯಕವಾಗಿ_ನಡೆಯಲಿದೆ.

#ಸ್ಥಳೀಯರು_ಈ_ಯೋಜನೆಯಲ್ಲಿ_ಸೇರಿ_ಸ್ವಯಂ_ಉದ್ಯೋಗ_ಪಡೆದುಕೊಳ್ಳುವ_ಸಾಧ್ಯತೆ.

#ಸ್ಥಳೀಯ_ಆಹಾರ_ಸ್ಥಳೀಯ_ಸ್ಥಳಗಳನ್ನೂ_ಪರಿಚಯಿಸ_ಬಹುದು.

#Worldfamouse #Jogfalls #Westernghats #Malenadu #Homestayprojects #Localinvolvement #Tourism #GovtofKarnataka

   ಜೋಗ್ ಜಲಪಾತ ಅಭಿವೃದ್ಧಿ ಕಾಮಗಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಡೆಯುತ್ತಿದೆ.

    ಇದರಿಂದ ಮುಂದಿನ ದಿನಗಳಲ್ಲಿ ದೇಶ -ವಿದೇಶಗಳ ಪ್ರವಾಸಿಗಳು ಹೆಚ್ಚು ಬರಲಿದ್ದಾರೆ.

   ಈ ಪ್ರವಾಸೋಧ್ಯಮದಲ್ಲಿ ಸ್ಥಳೀಯರ ಭಾಗವಹಿಸುವ ಮೂಲಕ ಅವರು ಉದ್ಯೋಗ ಮತ್ತು ಲಾಭ ಪಡೆಯಲು ಈ ಪ್ರದೇಶದಲ್ಲಿ ಹೋಮ್ ಸ್ಟೇಗಳನ್ನು ಪ್ರಾರಂಬಿಸಬಹುದು.

   ಈ ಮೂಲಕ ಪ್ರವಾಸಿಗಳಿಗೆ ಅತಿಥ್ಯ ನೀಡಬಹುದು ಇದರಿಂದ ಪ್ರವಾಸಿಗಳಿಗೆ ಅವರ ಬಜೆಟ್ ಸಾಮರ್ಥ್ಯದಲ್ಲಿ ತಂಗಲು,ಊಟ ಉಪಚಾರ ಪಡೆಯಲು ಸಾಧ್ಯವಿದೆ.

   ಸ್ಥಳೀಯ ಮಲೆನಾಡಿನ ಸಂಪ್ರದಾಯಿಕ ಆಹಾರಗಳನ್ನ ಪರಿಚಯಿಸ ಬಹುದು ಜೊತೆಗೆ ಜೋಗ್ ಫಾಲ್ಸ್ ಮಾತ್ರವಲ್ಲ ಸ್ಥಳೀಯ ಅನೇಕ ಜಲಪಾತಗಳನ್ನು, ಶರಾವತಿ ನದಿಯ ಹಿನ್ನೀರಿನ ಪ್ರದೇಶಗಳನ್ನು, ಈ ಭಾಗದ ಪ್ರಸಿದ್ಧ ದೇವಾಲಯಗಳು, ಜೈನ ಬಸದಿಗಳು, ಐತಿಹಾಸಿಕ ಸ್ಮಾರಕಗಳು ,ಕೋಟೆ ಕೊತ್ತಲಗಳನ್ನು ಸ್ಥಳೀಯ ಇಲಾಖೆಗಳ ಪೂರ್ವಾನುಮತಿ ಪಡೆದು ತೋರಿಸ ಬಹುದು.

    ಮಲೆನಾಡ ಪರಿಸರದಲ್ಲಿ ಚಾರಣ ಪ್ರವಾಸ ಏರ್ಪಡಿಸಬಹುದು ಇದಕ್ಕೆಲ್ಲ ಹೋಮ್ ಸ್ಟೇ ಅವರೇ ಗೈಡ್ ಆಗಿ ಕಾರ್ಯನಿರ್ವಹಿಸ ಬಹುದು.

   ಹೀಗೆ ಒಮ್ಮೆ ಪ್ರವಾಸೋಧ್ಯಮದಲ್ಲಿ ಭಾಗಿ ಆದರೆ ನಿಮಗೆ ಅರಿವಿಗೆ ಬರದಂತೆ ಸಂಪೂರ್ಣ ತೊಡಗಿಸಿಕೊಂಡು ಅದರಲ್ಲಿ ಆದಾಯದ ಜೊತೆ ವಿಶೇಷ ಅನುಭವ ಪಡೆಯುತ್ತಾರೆ ಮತ್ತು ಸಾಮಾಜಿಕವಾಗಿ ಗೌರವದ ಸ್ಥಾನಮಾನದ ಉದ್ಯೋಗವೊಂದು ಅವರ ಕುಟುಂಬಕ್ಕೆ ಹೆಸರು ಖ್ಯಾತಿ ತಂದು ಕೊಡುತ್ತದೆ.

   ಜೋಗ್ ಫಾಲ್ಸ್ ಪರಿಸರದ ಸಾಗರ - ಸಿದ್ದಾಪುರ - ಹೊನ್ನಾವರ ಪ್ರದೇಶದಲ್ಲಿ 200 ಕ್ಕೂ ಹೆಚ್ಚು ಹೋಮ್ ಸ್ಟೇ ಲಾಭದಾಯಕವಾಗಿ ನಡೆಸಲು ಅವಕಾಶ ಇದೆ ಎಂಬ ಸಮೀಕ್ಷೆ ಸ್ಥಳೀಯರಿಗೆ ಆಶಾಕಿರಣ ಆಗಿದೆ.

   ಇದಕ್ಕಾಗಿ ತರಬೇತಿ, ಆರ್ಥಿಕ ನೆರವು ಮತ್ತು ಬುಕಿಂಗ್ ಸೌಲಭ್ಯ in ಬೇಕಾಗುತ್ತದೆ.

 ನನ್ನ ಲೇಖನ ಸರಣಿಗೆ ಕೆಲವರು ತಮ್ಮ ಪ್ರಶ್ನೆ ಕೇಳಿದ್ದಾರೆ ಅದರಲ್ಲಿ ಒಂದು ಇಲ್ಲಿದೆ ನೋಡಿ ಅದಕ್ಕೆ ನನ್ನ ಉತ್ತರ ಕೂಡ....

   Home ಸ್ಟೇ ಅನಾಚಾರಗಳು ಜೋಗ್ ಪಾಲ್ಸ್ ನಲ್ಲಿ ನಡಿಯತ್ತೆ ಕಣ್ಣು ಮುಚ್ಚಿ ಕುಳಿತ ಕಾರ್ಗಲ್ ಪೂಲೀಸ ಇಲಾಖೆ ಅಂದಿದ್ದಾರೆ.

  ನಮ್ಮ ಮಲೆನಾಡು ಸಾಗರ ರೆಸಾರ್ಟ್ - ಹೊಂ ಸ್ಟೇ ಗಳ ದುರುಪಯೋಗ - ವೇಶ್ಯಾವಾಟಿಕೆ - ಡ್ರಗ್ಸ್ ಗಳಾಗಿದೆ.

  ಇಂತಹದ್ದೇ ಕೆಲವರ ಪ್ರಶ್ನೆಗಳು ಬಂದಿದೆ.

   ನನ್ನ ಉತ್ತರ ... 
"ಮಲೆನಾಡಿನಲ್ಲಿ ನಮ್ಮ ಸ್ವಂತ ವಾಸದ ಮನೆಯಲ್ಲಿ ಬರುವ ಪ್ರವಾಸಿಗಳಿಗೆ ಆತಿಥ್ಯದ ವ್ಯವಸ್ಥೆ ಮಾಡುವ ಉದ್ದೇಶ ಹೊಂ ಸ್ಟೇ ದಾಗಿದೆ ಮನೆ ಮಾಲಿಕರೇ ವಾಸ ಇರುವ ಮನೆಯಲ್ಲಿ ಹೋಮ್ ಸ್ಟೇ ಆದರೆ ಇಂತಹದ್ದು ನಡೆಯಲು ಸಾಧ್ಯವಿಲ್ಲ.

  ಮಲೆನಾಡು - ಪಶ್ಚಿಮ ಘಟ್ಟ -ಜಲಪಾತ - ಇತಿಹಾಸ ಮತ್ತು ಇಲ್ಲಿನ ಆಹಾರ ಇಷ್ಟ ಪಟ್ಟು ಬರುವವರಿಗೆ ಆತಿಥ್ಯ ನೀಡಿ ಆದಾಯ ಪಡೆಯುವ ಈ ಯೋಜನೆ ಉಪಯುಕ್ಷ ಸ್ಥಳೀಯರು ಇದನ್ನು ಬಳಸಿಕೊಳ್ಳಬೇಕು.

   ಸ್ಥಳಿಯರು ಇದನ್ನು ಬಳಸಿಕೊಳ್ಳದಿದ್ದರೆ ಹೊರ ರಾಜ್ಯದವರು ಕೊಡಗು ಮತ್ತು ಚಿಕ್ಕಮಗಳೂರುಗಳಲ್ಲಿ ಅತಿ ಹೆಚ್ಚು ಹೋಮ್ ಸ್ಟೇ ನಿರ್ಮಿಸಿದಂತೆ ಇಲ್ಲೂ ನಿರ್ಮಿಸುತ್ತಾರೆ.

   ಇಂತಹ ಮಾಹಿತಿಗಳಿಗಾಗಿ ಕಾಮೆಂಟ್ ನಲ್ಲಿರುವ ವಾಟ್ಸಪ್ ಗ್ರೂಪ್ ಲಿಂಕ್ ಗೆ ಜಾಯಿನ್ ಆಗಿ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...