Skip to main content

3461. ಭಾಗ - 5 ಜೋಗ್ ಫಾಲ್ಸ್ ಹೋಮ್ ಸ್ಟೇ ಅವಕಾಶಗಳು

#ಭಾಗ_5.

#ಜೋಗ್_ಪಾಲ್ಸ್_ಪರಿಸರದಲ್ಲಿ

#ಇನ್ನೂರಕ್ಕೂ_ಹೆಚ್ಚು_ಹೋಮ್_ಸ್ಟೇ_ಲಾಭದಾಯಕವಾಗಿ_ನಡೆಯಲಿದೆ.

#ಸ್ಥಳೀಯರು_ಈ_ಯೋಜನೆಯಲ್ಲಿ_ಸೇರಿ_ಸ್ವಯಂ_ಉದ್ಯೋಗ_ಪಡೆದುಕೊಳ್ಳುವ_ಸಾಧ್ಯತೆ.

#ಸ್ಥಳೀಯ_ಆಹಾರ_ಸ್ಥಳೀಯ_ಸ್ಥಳಗಳನ್ನೂ_ಪರಿಚಯಿಸ_ಬಹುದು.

#Worldfamouse #Jogfalls #Westernghats #Malenadu #Homestayprojects #Localinvolvement #Tourism #GovtofKarnataka

   ಜೋಗ್ ಜಲಪಾತ ಅಭಿವೃದ್ಧಿ ಕಾಮಗಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಡೆಯುತ್ತಿದೆ.

    ಇದರಿಂದ ಮುಂದಿನ ದಿನಗಳಲ್ಲಿ ದೇಶ -ವಿದೇಶಗಳ ಪ್ರವಾಸಿಗಳು ಹೆಚ್ಚು ಬರಲಿದ್ದಾರೆ.

   ಈ ಪ್ರವಾಸೋಧ್ಯಮದಲ್ಲಿ ಸ್ಥಳೀಯರ ಭಾಗವಹಿಸುವ ಮೂಲಕ ಅವರು ಉದ್ಯೋಗ ಮತ್ತು ಲಾಭ ಪಡೆಯಲು ಈ ಪ್ರದೇಶದಲ್ಲಿ ಹೋಮ್ ಸ್ಟೇಗಳನ್ನು ಪ್ರಾರಂಬಿಸಬಹುದು.

   ಈ ಮೂಲಕ ಪ್ರವಾಸಿಗಳಿಗೆ ಅತಿಥ್ಯ ನೀಡಬಹುದು ಇದರಿಂದ ಪ್ರವಾಸಿಗಳಿಗೆ ಅವರ ಬಜೆಟ್ ಸಾಮರ್ಥ್ಯದಲ್ಲಿ ತಂಗಲು,ಊಟ ಉಪಚಾರ ಪಡೆಯಲು ಸಾಧ್ಯವಿದೆ.

   ಸ್ಥಳೀಯ ಮಲೆನಾಡಿನ ಸಂಪ್ರದಾಯಿಕ ಆಹಾರಗಳನ್ನ ಪರಿಚಯಿಸ ಬಹುದು ಜೊತೆಗೆ ಜೋಗ್ ಫಾಲ್ಸ್ ಮಾತ್ರವಲ್ಲ ಸ್ಥಳೀಯ ಅನೇಕ ಜಲಪಾತಗಳನ್ನು, ಶರಾವತಿ ನದಿಯ ಹಿನ್ನೀರಿನ ಪ್ರದೇಶಗಳನ್ನು, ಈ ಭಾಗದ ಪ್ರಸಿದ್ಧ ದೇವಾಲಯಗಳು, ಜೈನ ಬಸದಿಗಳು, ಐತಿಹಾಸಿಕ ಸ್ಮಾರಕಗಳು ,ಕೋಟೆ ಕೊತ್ತಲಗಳನ್ನು ಸ್ಥಳೀಯ ಇಲಾಖೆಗಳ ಪೂರ್ವಾನುಮತಿ ಪಡೆದು ತೋರಿಸ ಬಹುದು.

    ಮಲೆನಾಡ ಪರಿಸರದಲ್ಲಿ ಚಾರಣ ಪ್ರವಾಸ ಏರ್ಪಡಿಸಬಹುದು ಇದಕ್ಕೆಲ್ಲ ಹೋಮ್ ಸ್ಟೇ ಅವರೇ ಗೈಡ್ ಆಗಿ ಕಾರ್ಯನಿರ್ವಹಿಸ ಬಹುದು.

   ಹೀಗೆ ಒಮ್ಮೆ ಪ್ರವಾಸೋಧ್ಯಮದಲ್ಲಿ ಭಾಗಿ ಆದರೆ ನಿಮಗೆ ಅರಿವಿಗೆ ಬರದಂತೆ ಸಂಪೂರ್ಣ ತೊಡಗಿಸಿಕೊಂಡು ಅದರಲ್ಲಿ ಆದಾಯದ ಜೊತೆ ವಿಶೇಷ ಅನುಭವ ಪಡೆಯುತ್ತಾರೆ ಮತ್ತು ಸಾಮಾಜಿಕವಾಗಿ ಗೌರವದ ಸ್ಥಾನಮಾನದ ಉದ್ಯೋಗವೊಂದು ಅವರ ಕುಟುಂಬಕ್ಕೆ ಹೆಸರು ಖ್ಯಾತಿ ತಂದು ಕೊಡುತ್ತದೆ.

   ಜೋಗ್ ಫಾಲ್ಸ್ ಪರಿಸರದ ಸಾಗರ - ಸಿದ್ದಾಪುರ - ಹೊನ್ನಾವರ ಪ್ರದೇಶದಲ್ಲಿ 200 ಕ್ಕೂ ಹೆಚ್ಚು ಹೋಮ್ ಸ್ಟೇ ಲಾಭದಾಯಕವಾಗಿ ನಡೆಸಲು ಅವಕಾಶ ಇದೆ ಎಂಬ ಸಮೀಕ್ಷೆ ಸ್ಥಳೀಯರಿಗೆ ಆಶಾಕಿರಣ ಆಗಿದೆ.

   ಇದಕ್ಕಾಗಿ ತರಬೇತಿ, ಆರ್ಥಿಕ ನೆರವು ಮತ್ತು ಬುಕಿಂಗ್ ಸೌಲಭ್ಯ in ಬೇಕಾಗುತ್ತದೆ.

 ನನ್ನ ಲೇಖನ ಸರಣಿಗೆ ಕೆಲವರು ತಮ್ಮ ಪ್ರಶ್ನೆ ಕೇಳಿದ್ದಾರೆ ಅದರಲ್ಲಿ ಒಂದು ಇಲ್ಲಿದೆ ನೋಡಿ ಅದಕ್ಕೆ ನನ್ನ ಉತ್ತರ ಕೂಡ....

   Home ಸ್ಟೇ ಅನಾಚಾರಗಳು ಜೋಗ್ ಪಾಲ್ಸ್ ನಲ್ಲಿ ನಡಿಯತ್ತೆ ಕಣ್ಣು ಮುಚ್ಚಿ ಕುಳಿತ ಕಾರ್ಗಲ್ ಪೂಲೀಸ ಇಲಾಖೆ ಅಂದಿದ್ದಾರೆ.

  ನಮ್ಮ ಮಲೆನಾಡು ಸಾಗರ ರೆಸಾರ್ಟ್ - ಹೊಂ ಸ್ಟೇ ಗಳ ದುರುಪಯೋಗ - ವೇಶ್ಯಾವಾಟಿಕೆ - ಡ್ರಗ್ಸ್ ಗಳಾಗಿದೆ.

  ಇಂತಹದ್ದೇ ಕೆಲವರ ಪ್ರಶ್ನೆಗಳು ಬಂದಿದೆ.

   ನನ್ನ ಉತ್ತರ ... 
"ಮಲೆನಾಡಿನಲ್ಲಿ ನಮ್ಮ ಸ್ವಂತ ವಾಸದ ಮನೆಯಲ್ಲಿ ಬರುವ ಪ್ರವಾಸಿಗಳಿಗೆ ಆತಿಥ್ಯದ ವ್ಯವಸ್ಥೆ ಮಾಡುವ ಉದ್ದೇಶ ಹೊಂ ಸ್ಟೇ ದಾಗಿದೆ ಮನೆ ಮಾಲಿಕರೇ ವಾಸ ಇರುವ ಮನೆಯಲ್ಲಿ ಹೋಮ್ ಸ್ಟೇ ಆದರೆ ಇಂತಹದ್ದು ನಡೆಯಲು ಸಾಧ್ಯವಿಲ್ಲ.

  ಮಲೆನಾಡು - ಪಶ್ಚಿಮ ಘಟ್ಟ -ಜಲಪಾತ - ಇತಿಹಾಸ ಮತ್ತು ಇಲ್ಲಿನ ಆಹಾರ ಇಷ್ಟ ಪಟ್ಟು ಬರುವವರಿಗೆ ಆತಿಥ್ಯ ನೀಡಿ ಆದಾಯ ಪಡೆಯುವ ಈ ಯೋಜನೆ ಉಪಯುಕ್ಷ ಸ್ಥಳೀಯರು ಇದನ್ನು ಬಳಸಿಕೊಳ್ಳಬೇಕು.

   ಸ್ಥಳಿಯರು ಇದನ್ನು ಬಳಸಿಕೊಳ್ಳದಿದ್ದರೆ ಹೊರ ರಾಜ್ಯದವರು ಕೊಡಗು ಮತ್ತು ಚಿಕ್ಕಮಗಳೂರುಗಳಲ್ಲಿ ಅತಿ ಹೆಚ್ಚು ಹೋಮ್ ಸ್ಟೇ ನಿರ್ಮಿಸಿದಂತೆ ಇಲ್ಲೂ ನಿರ್ಮಿಸುತ್ತಾರೆ.

   ಇಂತಹ ಮಾಹಿತಿಗಳಿಗಾಗಿ ಕಾಮೆಂಟ್ ನಲ್ಲಿರುವ ವಾಟ್ಸಪ್ ಗ್ರೂಪ್ ಲಿಂಕ್ ಗೆ ಜಾಯಿನ್ ಆಗಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...