Skip to main content

3458. ಕವಿ ಶೈಲ ಸ್ಟೋನ್ ಹೆಂಜ್ ಮಾದರಿ

#ಪೂರ್ಣಚಂದ್ರ_ತೇಜಸ್ವಿ_87ನೇ_ಹುಟ್ಟು_ಹಬ್ಬ

#ಕುವೆಂಪು_ಕವಿಶೈಲ

#ಇದು_ಸ್ಟೋನ್_ಹೆಂಜ್_ಮಾದರಿಯಲ್ಲಿದೆ

#ಅಲ್ಲಿ_ರಾಷ್ಟ್ರಕವಿ_ಕುವೆಂಪು_ಸಮಾದಿ_ಇದೆ

#ತೇಜಸ್ವಿ_ಮತ್ತು_ಕಲಾವಿದ_ಶಿವಪ್ರಸಾದರ_ಕಲ್ಪನೆ

#ಸಾಕಾರ_ಆಗುವಲ್ಲಿ_ಕಾಫಿ_ಡೇ_ಸಿದ್ದಾರ್ಥರ_ಶ್ರಮ_ಮತ್ತು_ಸಹಾಯವಿದೆ


#Kuvempu #kavishyla #Kuppalli #Stonehenge #Tejaswi #shivaprakash #cofeeday #Siddarth.

  ಕುಪ್ಪಳ್ಳಿಯ ಕುವೆಂಪು ಮನೆ- ಕವಿಶೈಲ ಲೋಕಾರ್ಪಣೆ ಆಗಿ ಸರ್ಕಾರದ ಟ್ರಸ್ಟ್ ನಿರ್ವಹಣೆ ಮಾಡುತ್ತಿದೆ.

   ಇವತ್ತು ಕುವೆಂಪು ಪುತ್ರರಾದ #ಪೂರ್ಣಚಂದ್ರ_ತೇಜಸ್ವಿ ಅವರ ಹುಟ್ಟು ಹಬ್ಬ 8 - ಸೆಪ್ಟೆಂಬರ್- 1938 ಅವರ ಜನ್ಮ ದಿನ ಮತ್ತು 5 - ಏಪ್ರಿಲ್ - 2007 ಅವರು ಇಹಲೋಕ ತ್ಯಜಿಸಿದ ದಿನ.

    ಕುವೆಂಪು ಅವರ ಪಾರ್ಥಿವ ಶರೀರ ಕುಪ್ಪಳ್ಳಿಯ ಕವಿ ಶೈಲದಲ್ಲಿ  ಅಗ್ನಿ ಸ್ಪರ್ಶ ಮಾಡಿದ ಸ್ಥಳವನ್ನ ಸ್ಮರಣೀಯ ಮಾಡುವ ತೀಮಾ೯ನ ರಾಜ್ಯ ಸರ್ಕಾರ ಮತ್ತು ಟ್ರಸ್ಟ್ ಮಾಡಿದಾಗ ಅದರ ವಿನ್ಯಾಸ ಅಂತಿಮ ಮಾಡುವ ಜವಾಬ್ದಾರಿ ತೇಜಸ್ವಿ ಅವರಿಗೆ ಕೋರಲಾಗಿತ್ತು.

   ಅವರು ಖ್ಯಾತ ಕಲಾವಿದ ಅವರ ಮಿತ್ರರಾದ ಹಾಸನದ ಕೆ.ಟಿ.ಶಿವಪ್ರಸಾದರಿಗೆ ಈ ಬಗ್ಗೆ ವಿನಂತಿಸುತ್ತಾರೆ.

    ಅಂತಿಮವಾಗಿ ಅವರು ನಿರ್ಧರಿಸುವುದು ಕವಿ ಶೈಲದ ಕಲ್ಲು ಗುಡ್ಡದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ನ ವಿಲ್ಟ್ ಶೈರ್ ನಲ್ಲಿರುವ ಇತಿಹಾಸ ಪೂರ್ವ ಸ್ಮಾರಕವಾದ #ಸ್ಟೋನ್_ಹೆಂಜ್ ಮಾದರಿ.

#ಸ್ಟೋನ್_ಹೆಂಜ್
ಯುನೈಟೆಡ್ ಕಿಂಗ್‌ಡಂನ ಅತ್ಯಂತ ಪ್ರಸಿದ್ಧ ಹೆಗ್ಗುರುತುಗಳಲ್ಲಿ ಒಂದಾದ ಸ್ಟೋನ್‌ಹೆಂಜ್ ಅನ್ನು ಬ್ರಿಟಿಷ್ ಸಾಂಸ್ಕೃತಿಕ ಐಕಾನ್ ಎಂದು ಪರಿಗಣಿಸಲಾಗಿದೆ. 
   ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯ್ದೆ 1882 ಅಂಗೀಕರಿಸಲ್ಪಟ್ಟಾಗಿನಿಂದ ಇದು ಕಾನೂನುಬದ್ಧವಾಗಿ ಸಂರಕ್ಷಿತ ನಿಗದಿತ ಸ್ಮಾರಕವಾಗಿದೆ .

   ಈ ಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು 1986 ರಲ್ಲಿ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿಸಲಾಯಿತು.

   ಸ್ಟೋನ್‌ಹೆಂಜ್ ಕ್ರೌನ್ ಎಸ್ಟೇಟ್ ಒಡೆತನದಲ್ಲಿದೆ ಮತ್ತು ಇಂಗ್ಲಿಷ್ ಹೆರಿಟೇಜ್ ನಿರ್ವಹಿಸುತ್ತದೆ, ಸುತ್ತಮುತ್ತಲಿನ ಭೂಮಿಯನ್ನು ರಾಷ್ಟ್ರೀಯ ಟ್ರಸ್ಟ್ ಒಡೆತನದಲ್ಲಿದೆ.

   ಸ್ಟೋನ್‌ಹೆಂಜ್ ಆರಂಭದಿಂದಲೂ ಸಮಾಧಿ ಸ್ಥಳವಾಗಿದ್ದಿರಬಹುದು, ಮಾನವ ಮೂಳೆಯನ್ನು ಹೊಂದಿರುವ ನಿಕ್ಷೇಪಗಳು ಕ್ರಿ.ಪೂ 3000 ದಷ್ಟು ಹಿಂದಿನವು, ಕಂದಕ ಮತ್ತು ದಂಡೆಯನ್ನು ಮೊದಲು ಅಗೆದಾಗ ಮತ್ತು ಕನಿಷ್ಠ 500 ವರ್ಷಗಳ ಕಾಲ ಮುಂದುವರೆಯಿತು.

  ಕವಿಶೈಲಕ್ಕೆ ಒಬ್ಬನೇ ಒಬ್ಬ "ಪ್ರಸಿದ್ಧ ವಾಸ್ತುಶಿಲ್ಪಿ" ಇಲ್ಲ ಬದಲಾಗಿ ಇದು ಸ್ಟೋನ್‌ಹೆಂಜ್ ಅನ್ನು ಹೋಲುವಂತೆ ವಿನ್ಯಾಸಗೊಳಿಸಲಾದ ಮೆಗಾಲಿಥಿಕ್ ಬಂಡೆಗಳ ಸ್ಮಾರಕವಾಗಿದ್ದು, ಇದನ್ನು ಕವಿ ಕುವೆಂಪು ಅವರಿಗೆ ಸಮರ್ಪಿಸಲಾಗಿದೆ ಮತ್ತು ಅವರ ಪರಂಪರೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯುತ ಟ್ರಸ್ಟ್‌ನಿಂದ ನಿರ್ಮಿಸಲಾಗಿದೆ. 

  ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಟ್ರಸ್ಟ್ , ಕುವೆಂಪು ಮತ್ತು ಅವರ ಕೃತಿಗಳನ್ನು ಉತ್ತೇಜಿಸಲು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ.

   ಇದನ್ನು ಮಲೆನಾಡಿನ ಪರಿಸರದ ಹಿನ್ನೆಲೆಯಲ್ಲಿ ಸ್ಟೋನ್ ಹೆಂಜ್ ಕಲಾಕೃತಿಯ ಭವ್ಯ ಕಲಾಕೃತಿಯ ಅಂತಿಮ ಚಿತ್ರ ಶಿವಪ್ರಕಾಶರು ಪೂರ್ಣಗೊಳಿಸಿದ ನಂತರ ಟ್ರಸ್ಟ್ ಅನುಮೋದಿಸಿ ಕಾರ್ಯಾಚರಣೆಗೆ ಮುಂದಾಯಿತು.

   ಇದಕ್ಕೆ ಇಪ್ಪತ್ತು ಬೃಹತ್ ಬಂಡೆಗಳು ಬೇಕಾಗಿತ್ತು ಅದನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯ ಕವಿಶೈಲದ ಕಲ್ಲು ಗುಟ್ಟಕ್ಕೆ ಸಾಗಾಣಿಕೆ ಮಾಡಲು ಬೃಹತ್ ಟ್ರಕ್ ಗಳು ಅದನ್ನು ಏರಿಳಿಸಲು ಮತ್ತು ಅಲ್ಲಿ ಸ್ಥಾಪಿಸಲು ಬೃಹತ್ ಕ್ರೇನ್ ಗಳು ಬೇಕಾಗಿತ್ತು.

   ಟ್ರಸ್ಟ್ ನಲ್ಲಿ ಇದನ್ನು ಪೂರೈಸುವಷ್ಟು ಹಣ ಇರಲಿಲ್ಲ ಆಗ ತೇಜಸ್ವಿ ಅವರು #ಕಾಫಿ_ಡೇ #ಸಿದ್ದಾರ್ಥರಲ್ಲಿ ಕೇಳಿ ಕೊಳ್ಳುತ್ತಾರೆ.

   ಸಿದ್ಧಾರ್ಥರ ಕುವೆಂಪು ಅವರ ಕಲ್ಪನೆಗಳಿಗೆ ಜೀವ ತುಂಬಿದ ಭವ್ಯವಾದ ಕಲಾಕೃತಿ ಕಲ್ಲಿನ ಸ್ಟೋನ್ ಹೆಂಜ್ ಮಾದರಿಯಲ್ಲಿ ನಿರ್ಮಿಸಲು ಬೇಕಾದ 20 ಬೃಹತ್ ಶಿಲಾ ಬಂಡೆಗಳನ್ನು, ಅದನ್ನು ಸಾಗಿಸಲು ಬೇಕಾದ ಕ್ರೇನ್ ಮತ್ತು ಟ್ರಕ್ ಗಳ ಪ್ರಾಯೋಜಿಸಲು ಪೂರ್ಣ ಹೃದಯದಿಂದ ಒಪ್ಪಿಕೊಳ್ಳುತ್ತಾರೆ.

  ಈ ಮಹತ್ವದ ಯೋಜನೆ ಕೇವಲ ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಿ ಕೊಡುತ್ತಾರೆ.

  ಕಲಾವಿದ ಕೆ.ಟಿ. ಶಿವಪ್ರಸಾದ್‌ರವರ ಕಲ್ಪನೆಯಲ್ಲಿ ಈ ಅನುಭೂತಿ ಬೆಳೆದು ಬೃಹತ್   ಶಿಲ್ಪಕಲಾಕೃತಿಯ ರೂಪದಲ್ಲಿ ನಿಂತಿದೆ. ‘ಸ್ಥಳ ನಿರ್ದೆಶಿತ ಕಲಾಕೃತಿಗೆ’ ಉತ್ತಮ ಉದಾಹರಣೆ ಈ ಶಿಲ್ಪಗಳು.

   ಕಲಾವಿದ ಕೆ.ಟಿ. ಶಿವಪ್ರಸಾದ್‌ರವರ ಕಲ್ಪನೆಯಲ್ಲಿ ಈ ಅನುಭೂತಿ ಬೆಳೆದು ಬೃಹತ್   ಶಿಲ್ಪಕಲಾಕೃತಿಯ ರೂಪದಲ್ಲಿ ನಿಂತಿದೆ. ‘ಸ್ಥಳ ನಿರ್ದೆಶಿತ ಕಲಾಕೃತಿಗೆ’ ಉತ್ತಮ ಉದಾಹರಣೆ ಈ ಶಿಲ್ಪಗಳು.

ಕೆ.ಟಿ. ಶಿವಪ್ರಸಾದ್ ಅವರು ನಾಡಿನ ಹೆಸರಾಂತ ಚಿತ್ರಕಲಾವಿದರು, ಶಿಲ್ಪ ಕಲಾವಿದರು, ಛಾಯಾಗ್ರಾಹಕರು,  ಸಾಮಾಜಿಕ ಬದ್ಧತೆಯ ಚಿಂತಕರು ಮತ್ತು ಹೋರಾಟಗಾರರು.  ತಮಗೆ ಸಂದ ದೊಡ್ಡ ಪ್ರಶಸ್ತಿಯಾದ ವರ್ಣಶಿಲ್ಪಿ ವೆಂಕಟಪ್ಪ  ಪ್ರಶಸ್ತಿಯನ್ನೂ, ಅದರ ಹಣವನ್ನೂ ಸರ್ಕಾರಕ್ಕೆ ಹಿಂದೆ ಮುಂದೆ ನೋಡದೆ ಹಿಂದಿರುಗಿಸಿದವರು.

   #ಕಲಾವಿದ_ಕೆ_ಟಿ_ಶಿವಪ್ರಸಾದ್
ಹಾಸನದ ಮೂಲದವರಾದ ಶಿವಪ್ರಸಾದ್ ಕಾರ್ಲೆ ಅವರು 1947ರ ಆಗಸ್ಟ್ 5ರಂದು ಜನಿಸಿದರು.  ತಮ್ಮ ತಂದೆ ರಾಜಕೀಯ ಮತ್ತು ಉದ್ಯಮದಲ್ಲಿ ಹೆಸರಾಗಿದ್ದರೂ,  ತಾವು ಸಾಮಾನ್ಯತೆಯ ಬಾಳನ್ನು ಹಿಡಿದವರು.  ಮುಂಬೈ ವಿಶ್ವವಿದ್ಯಾಲಯದಲ್ಲಿ ಓದಿದರು.

ಕಲಾವಿದರಾಗಿ ಪ್ರಯೋಗಶೀಲರಾಗಿ ಹೆಸರಾದ ಶಿವಪ್ರಸಾದ್ ಅವರ ಕಲಾಕೃತಿಗಳು, ಅನೇಕ ಪ್ರದರ್ಶನಗಳು, ಚಿತ್ರ ಗ್ಯಾಲರಿಗಳು ಮತ್ತು ಕಲಾರಸಿಕರ ಸಂಗ್ರಹಗಳಲ್ಲಿ ಕಂಗೊಳಿಸಿವೆ. 

ಅವರು ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿಯೊಂದಿಗೆ ಸಕ್ರಿಯರಾದವರು. ಅವರು ವಾಸ್ತುಶಿಲ್ಪಿ ಮತ್ತು ಛಾಯಾಗ್ರಾಹಕರಾಗಿಯೂ ಕ್ರಿಯಾಶೀಲರಾಗಿದ್ದಾರೆ. 

ಶಿವಪ್ರಸಾದ್ ಅವರ ಕಲಾಕೃತಿಗಳಿಗಾಗಿ ಅನೇಕ ಪ್ರಶಸ್ತಿಗಳು ಸಂದಿವೆ.  ಸೈದ್ಧಾಂತಿಕ ನೆಲೆಯಲ್ಲಿ ಹಲವು ಗೌರವಗಳನ್ನು ಹಿಂದಿರುಗಿಸಿದ್ದಾರೆ.

#ಕವಿಶೈಲ
ಕವಿಶೈಲವು ಬೃಹತ್ ಶಿಲಾ ಶಿಲೆಗಳಿಂದ ಮಾಡಲ್ಪಟ್ಟ ಒಂದು ಶಿಲಾ ಸ್ಮಾರಕವಾಗಿದ್ದು, ಕುವೆಂಪುಗೆ ಸಮರ್ಪಿತವಾಗಿದೆ. 

  ಇದು ಕುಪ್ಪಳಿಯಲ್ಲಿರುವ ಒಂದು ಸಣ್ಣ ಬೆಟ್ಟದ ತುದಿಯಲ್ಲಿದೆ.

   ವೃತ್ತಾಕಾರದಲ್ಲಿ ಜೋಡಿಸಲಾದ ಈ ಬಂಡೆಗಳನ್ನು ಇಂಗ್ಲೆಂಡ್‌ನಲ್ಲಿರುವ ಸ್ಟೋನ್‌ಹೆಂಜ್ ಅನ್ನು ಹೋಲುವಂತೆ ಇರಿಸಲಾಗಿದೆ .

   ಈ ಶಿಲಾ ಸ್ಮಾರಕದ ಮಧ್ಯಭಾಗದಲ್ಲಿ ಕುವೆಂಪು ಅವರ ಮರಣದ ನಂತರ ಸಮಾಧಿ ಮಾಡಿದ ಸ್ಥಳವಿದೆ ಮತ್ತು ಆ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ. 

 ಈ ಸ್ಮಾರಕದ ಬಳಿ, ಕುವೆಂಪು ಅವರು ತಮ್ಮ ಇತರ ಸಾಹಿತಿಗಳೊಂದಿಗೆ ಸಾಹಿತ್ಯ ಮತ್ತು ಇತರ ವಿಷಯಗಳ ಬಗ್ಗೆ ಕುಳಿತು ಚರ್ಚಿಸುತ್ತಿದ್ದ ಒಂದು ಸಣ್ಣ ಬಂಡೆಯಿದೆ.

   ಕುವೆಂಪು, ಬಿ.ಎಂ. ಶ್ರೀಕಂಠಯ್ಯ ಮತ್ತು ಟಿ.ಎಸ್. ವೆಂಕಣ್ಣಯ್ಯ ಅವರ ಕೆತ್ತಿದ ಸಹಿಗಳನ್ನು ಹೊಂದಿರುವ ಬಂಡೆಯು ಸ್ಮಾರಕದ ಬಳಿ ಇದೆ. 

   ನಂತರ ಪೂರ್ಣಚಂದ್ರ ತೇಜಸ್ವಿ ಅವರ ಸಹಿಯನ್ನು ಅದೇ ಬಂಡೆಯ ಮೇಲೆ ಕೆತ್ತಿದ್ದಾರೆ.

   ಕೆತ್ತಿದ ಕವಿತೆಗಳು ಮತ್ತು ಕುವೆಂಪು ಅವರ ಉಲ್ಲೇಖಗಳನ್ನು ಹೊಂದಿರುವ ಗ್ರಾನೈಟ್ ಚಪ್ಪಡಿಗಳನ್ನು ಸ್ಮಾರಕದ ಬಳಿ ಇರಿಸಲಾಗಿದೆ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...