Skip to main content

3488. ಕುಂದಾದ್ರಿ ಪರ್ವತ ಜೈನರ ಪವಿತ್ರ ಸ್ಥಳ

#ಕುಂದಾದ್ರಿ

#ಇಲ್ಲಿಂದ_360_ಡಿಗ್ರಿಯಲ್ಲಿ_ಪಶ್ಚಿಮ_ಘಟ್ಟದ_ಸುಂದರ_ದೃಶ್ಯ

#ಸೂರ್ಯೋದಯ_ಸೂರ್ಯಾಸ್ತ_ವೀಕ್ಷಣೆ

#ಕ್ಷಣ_ಕ್ಷಣಕ್ಕೂ_ಬದಲಾಗುವ_ದೃಶ್ಯಗಳು

#ಕುವೆಂಪು_ಕುಂದಾದ್ರಿಗೆ_ಚಾರಣ_ಮಾಡಿದ್ದನ್ನ_ಬರೆದಿದ್ದಾರೆ.

#ಕು೦ದಾದ್ರಿ_ಎಂಬ_ಸುಂದರ_ಪವ೯ತ_ಕುOದಾದ್ರಿ_ಬೆಟ್ಟ.

#ಶಿವಮೊಗ್ಗ_ಜಿಲ್ಲೆಯ_ತೀರ್ಥಳ್ಳಿ_ತಾಲ್ಲೂಕಿನಲ್ಲಿದೆ

#ತೀರ್ಥಹಳ್ಳಿ_ಆಗುಂಬೆ_ಮಾರ್ಗದಲ್ಲಿದೆ


#kundadrihills #thirthahalli #augumbe #jainism 

  ಶಿವಮೊಗ್ಗದಿಂದ 80 ಕಿಮಿ ದೂರದಲ್ಲಿದೆ ಕುಂದಾದ್ರಿ ಹಿಲ್ಸ್ ಇದು ಸಮುದ್ರ ಮಟ್ಟದಿಂದ 826 ಮೀಟರ್ ಅಥವ 2783 ಅಡಿ  ಎತ್ತರದಲ್ಲಿದೆ.

  ಇಲ್ಲಿಂದ ಪಶ್ಚಿಮ ಘಟ್ಟದ ಸುಂದರವಾದ ವಿಹಂಗಮ ದೃಶ್ಯ, ಸೂರ್ಯೋದಯ ಸೂರ್ಯಾಸ್ತ 360 ಡಿಗ್ರಿ ಕೋನದಲ್ಲಿ ವೀಕ್ಷಿಸಲು ಇಲ್ಲಿಗೆ ಹೆಚ್ಚು ಪ್ರವಾಸಿಗಳು ಬರುತ್ತಾರೆ.

   ಒಂದು ವಿಶೇಷ ಅಂದರೆ ಪ್ರತಿ ಕ್ಷಣವೂ ಇಲ್ಲಿಂದ ಕಾಣುವ ದೃಶ್ಯ ನಿತ್ಯನೂತನ, ಮಳೆಗಾಲ - ಚಳಿಗಾಲ - ಬೇಸಿಗೆ - ಬೆಳಿಗ್ಗೆ - ಮದ್ಯಾಹ್ನ - ಸಂಜೆ ಕ್ಷಣ ಕ್ಷಣದ ಬದಲಾಗುತ್ತಿರುವ ದೃಶ್ಯ ವಿಶೇಷ.

    ಮಳೆಗಾಲದ ಬೆಳಿಗ್ಗೆ ಮೋಡಗಳು ಕುಂದಾದ್ರಿಯ ಕೆಳಗೆ ಸಾಗುವ ದೃಶ್ಯ ರೋಮಾಂಚಕಾರಿ, ಇಲ್ಲಿಂದ ಶೃಂಗೇರಿ ಭಾಗದಿಂದ ಹರಿದು ಬರುವ ತುಂಗೆ ಕಾಣುತ್ತಾಳೆ ತಿರುಗಿದರೆ ವರಾಹಿಯೂ ಘೋಚರಿಸುತ್ತಾಳೆ.

    ಕೆಳಗಿನಿಂದ ಚಾರಣ ಮಾಡಿದರೆ ಮೂರು ಗಂಟೆ ಕಾಲ ಬೇಕು ಇಲ್ಲಿಗೆ ತಲುಪಲು ಅಥವ ನಿಮ್ಮ ವಾಹನದಲ್ಲಿಯೇ ಇಲ್ಲಿಗೆ ತಲುಪಲು  ಡಾಂಬಾರ್ ಘಾಟಿ ರಸ್ತೆ ಇದೆ ಅಲ್ಲಿಂದ ಮೆಟ್ಟಿಲು ಹತ್ತಿ ಮೇಲೆ ಹೋದರೆ ಕುಂದಾದ್ರಿ ಹಿಲ್ ಟಾಪ್ ವೀವ್ ಪಾಯಿಂಟ್ ತಲುಪುತ್ತೀರಿ.

    ಅಲ್ಲಿಂದ ಪಶ್ಚಿಮ ಘಟ್ಟದ ಸುಂದರ ದೃಶ್ಯ ವೀಕ್ಷಿಸಬಹುದು.
 
    ತೀಥ೯ಹಳ್ಳಿಯಿಂದ ಆಗುಂಬೆ
 ಮಾಗ೯ದಲ್ಲಿ ಸಾಗಿ ಗುಡ್ಡೆಕೇರಿ ಎಂಬ ಊರಿಂದ ಎಡಕ್ಕೆ ಹೋದರೆ ಕುಂದಾದ್ರಿ ಬೆಟ್ಟಕ್ಕೆ ಹೋಗುವ ರಸ್ತೆ ಇದೆ ಇಲ್ಲಿ೦ದ ಆಗುOಬೆ ಸಮೀಪದಲ್ಲಿದೆ.

    ಕುವೆಂಪುರವರು ಕುಂದಾದ್ರಿ ಬೆಟ್ಟದಲ್ಲಿ ಸೂಯೋ೯ದಯ ವೀಕ್ಷಿಸಲಿಕ್ಕಾಗಿ ಸಮೀಪದ ಸಂಬಂದಿಗಳ ಮನೆಯಲ್ಲಿ ರಾತ್ರಿ ತಂಗಿ ಬೆಳಗಾಗುವ ಮುನ್ನ ಬೆಟ್ಟ ಏರಿ ಸೂಯೋ೯ದಯ ವೀಕ್ಷಿಸಿದ ಅನುಭವ ಅವರ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.

    ಹೊಸನಗರ ತಾಲ್ಲೂಕಿನ ಹೊಂಬುಜ ಜೈನ ಮಠದ ಸುಪದಿ೯ಯಲ್ಲಿರುವ ಈ ಸ್ಥಳ ಇತ್ತೀಚಿನವರೆಗೆ ನಕ್ಸಲೇಟ ಪೀಡಿತ ವ್ಯಾಪ್ತಿ ಪ್ರದೇಶವಾದ್ದರಿಂದ ಪ್ರವಾಸಿಗಳಿಗೆ ಪ್ರವೇಶಕ್ಕೆ ಮಿತಿ ಇತ್ತು, ಈಗ ಅಂತಹ ನಿಬ೯೦ದವಿಲ್ಲ.

   ಸುಮಾರು 2000 ವಷ೯ದ ಹಿಂದೆ ಜೈನ ಆಚಾಯ೯ ಮುನಿಗಳಾದ #ಕುಂದ_ಕುಂದಾಚಾಯ೯ರು ದಟ್ಟಡವಿಯ ಸಮುದ್ರ ಮಟ್ಟದಿಂದ 3200 ಅಡಿ ಎತ್ತರದ ಈ ಪರ್ವತದಲ್ಲಿ ತಪಸ್ಸು ಮಾಡಿದ್ದರು.

  ಜೈನರ ಪವಿತ್ರ ಗ್ರಂಥ #ಅನುಸರಣ ಇಲ್ಲೇ ರಚಿಸಿದ್ದರಿಂದ ಈ ಸ್ಥಳ ದೇಶದ ಜೈನರಿಗೆ ಅತ್ಯಂತ ಪವಿತ್ರ ಮತ್ತು ಪುಣ್ಯ ಸ್ಥಳವಾಗಿದೆ.

   ಇಲ್ಲಿ ಪಾರ್ಶನಾಥ ತೀರ್ಥಂಕರರಿಗೆ ಸಮರ್ಪಿತವಾದ ಜೈನ ದೇವಾಲಯವಿದೆ.

  ಈಗ ಇಲ್ಲಿಗೆ ವಾಹನಗಳು ಸರಾಗವಾಗಿ ತಲುಪುತ್ತದೆ ಆದರೂ ಕಡಿದಾದ ತಿರುವು, ಅಲ್ಲಿಂದ ಅತ್ಯಂತ ಆಳದಲ್ಲಿ ಕಾಣುವ ಊರು, ಮನೆಗಳು ನೋಡುವವರಿಗೆ ಭಯ ಉoಟು ಮಾಡುತ್ತದೆ.

   ಶ್ರೀಮತಿ ಕಾಡಮ್ಮ ನಾಗಪ್ಪ ಹೆಗ್ಗಡೆ ದಂಪತಿಗಳು ಇಲ್ಲಿಗೆ ರಸ್ತೆ ಮಾಡಿಸಿಕೊಟ್ಟ ದಾನಿಗಳOತೆ.

   ಇತ್ತೀಚಿಗೆ ಬೆಟ್ಟದ ತುದಿಯಲ್ಲಿ ಪಾವಟಿಗೆ ಅಳವಡಿಸಿ, ಸುಂದರವಾದ ಪ್ರವಾಸಿಗಳು ಕುಳಿತು ವಿಶ್ರಮಿಸಿಕೊಳ್ಳುತ್ತಾ ಸುತ್ತಲಿನ ಪರಿಸರ ವೀಕ್ಷಣೆಗೆ ಗೋಪುರ ನಿಮಿ೯ಸಿದ್ದಾರೆ.

   ಆಯುರ್ವೇದ ಸಂಶೊದನೆಗಾಗಿ 200 ಎಕರೆ ಅರಣ್ಯವನ್ನ ರಕ್ಷಣಾ ಬೇಲಿ ನಿಮಿ೯ಸಿ ಸಂರಕ್ಷಿಸುವ ಕೆಲಸ  ಮಾಡಿದ್ದಾರೆ.

  ಬೆಟ್ಟದಲ್ಲಿ ಕೊಳದ ಸುತ್ತ, ಬOಡೆಯ ಸುತ್ತ ರಕ್ಷಣಾ ಬೇಲಿ ನಿಮಿ೯ಸಿದ್ದರಿಂದ ಪ್ರವಾಸಿಗಳಿಗೆ ಮೊದಲಿನಂತೆ ಅಪಾಯವಿಲ್ಲ.

   ಇಲ್ಲಿ ಒಬ್ಬಿಬ್ಬರು ಮಾತ್ರ ಹೋಗಲು ಭಯ ಆಗುತ್ತೆ, ರಾತ್ರಿ ಹೊತ್ತು ಇರುವುದ೦ತು ಅಸಾಧ್ಯ ಆದರೆ 2000 ವಷ೯ದ ಹಿಂದೆ ಇಲ್ಲಿನ ಗುಹೆಯಲ್ಲಿದ್ದು ಸಾದನೆ ಮತ್ತು ಗ್ರOಥ ರಚನೆ ಮಾಡಿದ್ದರೆಂದರೆ ಅವರು ಜೀವ ಮತ್ತು ಜೀವನದ ಬಗ್ಗೆ ಎಂತಹ ತ್ಯಾಗಿಗಳಾಗಿದ್ದರೆಂದು ಅಥ೯ವಾಗುತ್ತೆ.

  ಶಿವಮೊಗ್ಗ ಜಿಲ್ಲೆಯಲ್ಲಿಯೇ ಇಲ್ಲಿಂದ ಕಾಣುವಷ್ಟು ಸುಂದರ ಪ್ರಕೃತಿ ಬೇರೆಲ್ಲೂ ನೋಡಲು ಸಿಗುವುದಿಲ್ಲ.

    ಈ ಸ್ಥಳದ ಲೊಕೇಶನ್ ಕಾಮೆಂಟ್ ನಲ್ಲಿದೆ ನೋಡಿ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...