Skip to main content

3498. ಮಲೆನಾಡಿನ ಒಂಟಿ ಮನೆ ಸುರಕ್ಷತೆ

#ಹಳ್ಳಿಯಲ್ಲಿರುವ_ನಿಮ್ಮ_ಮನೆ_ತಂದೆ_ತಾಯಿಗಳ_ಸುರಕ್ಷತೆ_ಬಗ್ಗೆ_ಯೋಚಿಸಿ.

#ಭಾರತದಲ್ಲಿನ_ತನ್ನ_ಮನೆಗೆ_ಕಳ್ಳರು_ಬಂದಿದ್ದನ್ನು_ಅಮೇರಿಕಾದಲ್ಲಿದ್ದ_ಅವರ_ಪುತ್ರಿ_ಎಚ್ಚರಿಸಿದ_ಘಟನೆ.

#ಮಲೆನಾಡಿನ_ಒ೦ಟಿ_ಮನೆಗಳು_ದರೋಡೆಕೋರರಿಗೆ_ಸುಲಭ_ಟಾಗೆ೯ಟ್.
 
#ಸಕಾ೯ರ_ಮಲೆನಾಡಿನ_ಒ೦ಟಿ_ಮನೆ_ವಾಸಿಗಳಿಗೆ_ಬಂದೂಕು_ಲೈಸೆನ್ಸ್_ನೀಡಬೇಕು.

#ಸಾಗರ_ತಾಲ್ಲೂಕಿನ_ಬ್ಯಾಕೋಡಿನ_ನಿವೃತ್ತ_ಪೋಸ್ಟ್_ಮಾಸ್ಟರ್_ದಂಪತಿ_ಹತ್ಯೆ_ಆಗಿ_ಐದು_ವರ್ಷ


#Westernghats #Malenadu #Selfprotection #Docoits #Softtargets #cctv #Camera #Dogs
 
    ಮಲೆನಾಡಿನ ಒಂಟಿ ಮನೆಗಳು ದರೋಡೆಕೋರರಿಗೆ ಸಾಫ್ಟ್ ಟಾಗೆ೯ಟ್ (ಸುಲಭ ಗುರಿ) ಆಗುತ್ತಿದೆ ಇದಕ್ಕೆ ಸರ್ಕಾರ ಏನು ಮಾಡಬಹುದು? ಸ್ವತಃ ನಾವೇನು ತಯಾರಿ ಮಾಡಿಕೊಳ್ಳಬಹುದು? ಇತ್ತೀಚಿನ ಈ ಕೆಳಗಿನ ಘಟನೆ ನೋಡಿ....

   ಈಗಿನ ಕಾಲದಲ್ಲಿ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ, ಅಮೆರಿಕಾದಲ್ಲಿ ಕುಳಿತು ದೂರದ ಬಾಗಲಕೋಟೆಯ ಮುಧೋಳ ನಗರದಲ್ಲಿ ಏನಾಗುತ್ತಿದೆ ತಮ್ಮ ಮನೆಯ ಹತ್ತಿರ ಯಾರು ಬಂದಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು.

    ಮುಧೋಳದಲ್ಲಿ ನಡೆಯುವ ಘಟನೆಯನ್ನು ದೂರದ ಅಮೆರಿಕಾದಲ್ಲಿ ನೋಡಿ ಅಪರಾಧ ಕೃತ್ಯವನ್ನು ತಪ್ಪಿಸಿದ ಚಾಣಾಕ್ಷ ಘಟನೆಯೊಂದು ನಡೆದಿದೆ.

    ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಹೆಚ್ಚಾಗಿದೆ, ಅಮೇರಿಕಾದಲ್ಲಿ ನೆಲೆಸಿದ ಮಗಳಿಂದ ಕಳ್ಳರ ಕೃತ್ಯ ಬಯಲಾಗಿದೆ. 

   ಹನುಮಂತಗೌಡ ಸಂಕಪ್ಪನವರ ಎಂಬುವವರ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಈ ಸಿಸಿ ಕ್ಯಾಮರಾದ ದೃಶ್ಯಗಳು ತನ್ನ ಮೊಬೈಲ್ ನಲ್ಲಿ ವೀಕ್ಷಿಸುವಂತೆ ಹನುಮಂತಗೌಡ ಸಂಕಪ್ಪನವರ ಮಗಳು ವ್ಯವಸ್ಥೆ ಮಾಡಿಕೊಂಡಿದ್ದರು. 

   ಮನೆಯ ಸಿಸಿ ಕ್ಯಾಮರಾದ ವಿಡಿಯೋ ನೋಡುವಾಗ ರಾತ್ರಿ ವೇಳೆ ತಮ್ಮ ಮನೆಗೆ ಯಾರೋ ಕಳ್ಳರು ಕಂಪೌಂಡ್ ದಾಟಿ ಬಂದಿರುವುದು ಕಂಡಿದೆ, ಅಮೇರಿಕಾದಲ್ಲಿ ಕುಳಿತೇ ತನ್ನ ಮೊಬೈಲ್‌ನಲ್ಲಿ ಸಿಸಿ ಕ್ಯಾಮರಾ ದೃಶ್ಯಗಳನ್ನು ಹನುಮಂತಗೌಡ ಸಂಕಪ್ಪನವರ ಮಗಳು ಶೃತಿ ಗಮನಿಸಿದ್ದಾರೆ. 

   ತಕ್ಷಣವೇ ತಂದೆ ಹನುಮಂತಗೌಡ ಸಂಕಪ್ಪನವರ್ ಗೆ ಕರೆ ಮಾಡಿದ ಮಗಳು ಶೃತಿ ಆಲರ್ಟ್ ಆಗಿರುವಂತೆ ಹೇಳಿದ್ದಾರೆ ನಂತರ‌ ತಂದೆ ಹನುಮಂತಗೌಡ ಸಂಕಪ್ಪನವರ ಬಾಗಿಲು ತೆರೆದಾಗ ಕಳ್ಳರು ಹೆದರಿಕೊಂಡು ಎಸ್ಕೇಪ್ ಆಗಿದ್ದಾರೆ. 

   ಅಮೇರಿಕದಲ್ಲಿ ನೆಲೆಸಿರುವ ಹನುಮಂತಗೌಡ ಸಂಕಪ್ಪನವರ ಮಗಳು ಶೃತಿ ಸಂಕಪ್ಪನವರ ವೃತ್ತಿಯಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.

    ಕಳ್ಳರು ರಾಜಾರೋಷವಾಗಿ ಮನೆಗಳ್ಳತನ ಮಾಡಲು ಬಂದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಧೋಳ ನಗರದ ಸಿದ್ದರಾಮೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ.

  ಒಂದು ಕಾಲದಲ್ಲಿ ಮಲೆನಾಡಿನ ಒಂಟಿ ಮನೆಗಳು ಕಳ್ಳರು ದರೋಡೆಕೋರರಿಂದ ಸುರಕ್ಷಿತವಾಗಿತ್ತು ಇದಕ್ಕೆ ಕಾರಣ ಅವಿಭಕ್ತ ಕುಟುಂಬಗಳಿಂದ ಮನೆ ತುಂಬಾ ಕುಟುಂಬ ಸದಸ್ಯರು ಇರುತ್ತಿದ್ದರು ಮತ್ತು ನಾಯಿಗಳು ಹಾಗು ಪಸಲು ರಕ್ಷಣೆಯ ಬಂದೂಕುಗಳೂ ಒಂದು ಕಾರಣ ಇರಬಹುದು.

   ಆದರೆ ಈಗ ಮಲೆನಾಡು ಬದಲಾಗಿದೆ ವಿಭಕ್ತ ಕುಟು೦ಬಗಳಾಗಿದೆ, ಉದ್ಯೋಗಕ್ಕಾಗಿ ಮಕ್ಕಳು ಪೇಟೆ ಸೇರಿದ್ದಾರೆ ಹಳ್ಳಿ ಮನೆಗಳು ವೃದ್ಧಾಶ್ರಮ ಆಗಿದೆ, ನಾಯಿ ಸಾಕುವುದಿಲ್ಲ, ಪಸಲು ಮತ್ತು ಆತ್ಮ ರಕ್ಷಣೆಗೆ ಬಂದೂಕು ಇಲ್ಲ.

    ಇಂತಹ ಮನೆಗಳ ಮಾಹಿತಿ ಹೆಕ್ಕಿ ಕಳ್ಳರಿಗೆ ಕೊಡುವ ಮಾಹಿತಿದಾರರು ಪ್ರತಿ ಹಳ್ಳಿಗಳಲ್ಲಿದ್ದಾರೆ.

   ಕಳ್ಳರಿಗೆ ದರೋಡೆಕೋರರಿಗೆ ಇಂತಹ ಮಲೆನಾಡಿನ ಹಳ್ಳಿ ಮನೆಯ ಒಂಟಿ ಮನೆಗಳು ಸಾಫ್ಟ್ ಟಾಗೆ೯ಟ್ಗಳಾಗಿದೆ.

  ದೋಚಿದ ನಂತರ ಸುಲಭವಾಗಿ ಹೋಗಲು ರಸ್ತೆ ವಾಹನಗಳು  ಇದೆ.

  ಇದು ಮಲೆನಾಡಿನ ಪ್ರತಿಯೊಂದು ಒಂಟಿ ಮನೆಯ ಪೋಷಕರ ಜೀವ ರಕ್ಷಣೆಗೆ ಹೆಚ್ಚಿನ ಜವಾಬ್ದಾರಿಯನ್ನು ಆ ಕುಟುಂಬದ ಮಕ್ಕಳು ಉದ್ಯೋಗಕ್ಕಾಗಿ ಎಲ್ಲೇ ಇದ್ದರೂ ಜಾಗೃತೆ ವಹಿಸಬೇಕು.

   ಹೀಗಾಗಿ ಮಲೆನಾಡ ಒಂಟಿ ಮನೆಗಳ ವಾಸಿಗಳಿಗೆ ಸಕಾ೯ರ ವಿಶೇಷ ಬಂದೂಕು ಲೈಸೆನ್ಸ್ ನೀಡಲು ಸುಲಭ ಮತ್ತು ಶೀಘ್ರ ಪ್ರಕ್ರಿಯೆಗಳನ್ನ ವಿದಿಸಿ ಬಂದೂಕು ರಕ್ಷಣೆಗೆ ಇಟ್ಟುಕೊಳ್ಳಲು ಅನುವು ಮಾಡಬೇಕು.

   ಒಂಟಿ ಮನೆಯ ಉದ್ಯೋಗಕ್ಕೆ ಪಟ್ಟಣ ಸೇರಿದ ಮಕ್ಕಳು ತಮ್ಮ ಪೋಷಕರ ಆತ್ಮ ರಕ್ಷಣೆಗಾಗಿ ಸಿ.ಸಿ ಕ್ಯಾಮೆರಾ, ಸೈರನ್ ಗಳನ್ನ ಅಳವಡಿಸಿ ತಮ್ಮ ಮೊಬೈಲ್ ಪೋನ್ ನಲ್ಲೇ ಮಾನಿಟರಿಂಗ್ ಮಾಡಬಹುದು.

   ಒಳ್ಳೇ ತಳಿಯ ಎರಡಕ್ಕಿಂತ ಹೆಚ್ಚು ನಾಯಿ ಸಾಕುವ ಅಭ್ಯಾಸ ಕೂಡ ಮಾಡಬೇಕು.

   ಕೊಲೆ ದರೋಡೆ ಮಾಡಿದ ನಂತರ ಅವರನ್ನ ಪೋಲಿಸರು ಹಿಡಿಯುತ್ತಾರೆ ಆದರೆ ಕೊಲೆ ದರೋಡೆ ಆಗದಂತೆ ಮುಂಜಾಗೃತೆ ನಮಗೆ ನಾವೇ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅತಿ ಅವಶ್ಯಕತೆ ಇದೆ ಮತ್ತು ಅನಿವಾಯ೯ ಕೂಡ.

   ಸಾಗರ ತಾಲ್ಲೂಕಿನ ಹಿನ್ನೀರಿನ ಸಿಗಂದೂರು ಕ್ಷೇತ್ರದ ಬ್ಯಾಕೋಡಿನ ಈ ಜೋಡಿ ಕೊಲೆ ಆಪರಾದಿಗಳು ಐದು ವರ್ಷವಾದರೂ ಪೋಲಿಸರಿಗೆ ಸಿಕ್ಕಿಲ್ಲ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...