#ನೀವು_ಇತಿಹಾಸ_ಆಸಕ್ತರಾಗಿದ್ದರೆ_ಈ_ಎಂಟು_ಸಂಪುಟ_ಓದಲೇ_ಬೇಕು
#ಪ್ರವಾಸಿ_ಕಂಡ_ಇಂಡಿಯಾ
#ಕನ್ನಡದ_ಇತಿಹಾಸ_ಸಂಶೋದಕರು_ಈ_ಗ್ರಂಥಗಳನ್ನು_ಓದದಿದ್ದರೆ
#ಅವರ_ಸಂಶೋದನ_ಜ್ಞಾನ_ಪೂರ್ಣ_ಆಗಲಾರದು.
#ಜನಪದ_ಲೋಕ_ನಿರ್ಮಿಸಿದ_ಹೆಚ್_ಎಲ್_ನಾಗೇಗೌಡರು .
#1963ರಲ್ಲಿ_ಶಿವಮೊಗ_ಜಿಲ್ಲಾದಿಕಾರಿಗಳಾಗಿದ್ದವರು
#history #researchers #historian
#ಪ್ರವಾಸಿಕಂಡಇಂಡಿಯಾ #kuvempu #janapadaloka #HLNagegowda #mysoreuniversity #mandya #ramanagara
ಪ್ರತಿಯೊಬ್ಬ ಕನ್ನಡಿಗರೂ ಓದಲೇ ಬೇಕಾದ ನಮ್ಮ ಇತಿಹಾಸ ಪ್ರವಾಸಿ ಕಂಡ ಇಂಡಿಯಾ ಪುಸ್ತಕ ಇದನ್ನು ಬರೆದವರು ಹೆಚ್. ಎಲ್.ನಾಗೇಗೌಡರು.
ಹೆಚ್.ಎಲ್.ನಾಗೇಗೌಡರು ಕನ್ನಡ ಭಾಷೆಗೆ ಅನುವಾದಿಸಿದ ವಿದೇಶಿ ಪ್ರವಾಸಿಗಳ ಪತ್ರ, ದಿನಚರಿಗಳ ಸುಮಾರು 4000 ಪುಟಗಳ 8 ಸಂಪುಟಗಳು ಅತ್ಯುತ್ತಮ ಇತಿಹಾಸದ ಪುಸ್ತಕಗಳು.
ಕುವೆಂಪು ಸಂಪಾದಕತ್ವವೂ ಇದಕ್ಕೆ ಇದೆ, ಐಬಿಹೆಚ್ ಪ್ರಕಾಶನ 1972 ರಲ್ಲಿ ಮೊದಲ ಮುದ್ರಣ ಮಾಡಿತ್ತು ಅಪಾರ ಬೇಡಿಕೆಯಿಂದ 2007ರಲ್ಲಿ ಪುನರ್ ಮುದ್ರಣ ಮಾಡಿದ್ದಾರೆ.
ಈ ಸಂಪುಟಗಳ ವಿಶೇಷ ಅಂದರೆ ಕ್ರಿ.ಪೂ 3000 ದಿಂದ ಮೂರು ಹಂತಗಳಲ್ಲಿ ಭಾರತದ ಇತಿಹಾಸ ವಿಂಗಡಿಸಿ ಸಂಗ್ರಹಿಸಿ ದಾಖಲಿಸಿದ್ದಾರೆ.
#ಪ್ರಾಚೀನ_ಭಾರತದ_ಇತಿಹಾಸ
ಪುರಾತನ ಕಾಲದಿಂದ 12 ನೇ ಶತಮಾನದ ವರೆಗಿನದ್ದು
#ಮಧ್ಯಕಾಲ_ಇತಿಹಾಸ
13 ನೇ ಶತಮಾನದಿಂದ 18ನೇ ಶತಮಾನದವರೆಗೆ
#ಆದುನಿಕ_ಇತಿಹಾಸ
18ನೇ ಶತಮಾನದಿಂದ ಈವರೆಗಿನದ್ದು.
ಈ ಎಂಟು ಸಂಪುಟಗಳು ಓದಿದರೆ ಭಾರತದ ಇತಿಹಾಸದ ಸಂಪೂರ್ಣ ಜ್ಞಾನ ಲಭ್ಯವಿದೆ.
ಅವರು ದಾಖಲೆ ಮಾಡುತ್ತಾ ಹೋಗಿರುವ ಕ್ರಮ ಓದಲು ಶುರು ಮಾಡಿದರೆ ಎಂಟು ಸಂಪುಟವೂ ರಾತ್ರಿ ಹಗಲೆನ್ನದೆ ಓದಿ ಮುಗಿಯುವವರೆಗೆ ಮುಂದುವರಿಯುವುದಷ್ಟೆ ಅಲ್ಲ ಪುನಃ ಪುನಃ ಓದುವ ಮನಸ್ಸು ಆಗುತ್ತದೆ.
ಕನ್ನಡದ ಇತಿಹಾಸ ಸಂಶೋದಕರು ಈ ಗ್ರಂಥಗಳನ್ನು ಓದದಿದ್ದರೆ ಅವರ ಸಂಶೋದನ ಜ್ಞಾನ ಪೂರ್ಣ ಆಗಲಾರದು.
ಹೆಚ್.ಎಲ್.ನಾಗೇಗೌಡರು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹೆರಗಾನಹಳ್ಳಿಯಲ್ಲಿ 22- ಸೆಪ್ಟೆಂಬರ್ -1915 ರಲ್ಲಿ ಜನಿಸಿ 2005 ರಲ್ಲಿ ಇಹಲೋಕ ತ್ಯಜಿಸಿದರು.
ವಿಜ್ಞಾನ ಮತ್ತು ಕಾನೂನು ಪದವೀದರಾಗಿ 1940 ರಲ್ಲಿ ಮೈಸೂರು ಸಿವಿಲ್ ಸರ್ವಿಸ್ ಪಾಸ್ ಮಾಡಿದರು, 1963 ರಲ್ಲಿ ಶಿವಮೊಗ್ಗ ಜಿಲ್ಲಾದಿಕಾರಿಗಳಾಗಿ ಸೇವೆ ಸಲ್ಲಿಸುತ್ತಾರೆ.
ಮಂಡ್ಯ ಜಿಲ್ಲೆಯಲ್ಲಿನ ರಾಮನಗರದಲ್ಲಿ ಇವರು 1986ರಿಂದ ಕೆಲಸ ಪ್ರಾರಂಬಿಸಿ 1994 ರಲ್ಲಿ ಲೋಕಾರ್ಪಣೆ ಮಾಡಿಸಿದ #ಜನಪದ_ಲೋಕ ಜನಪದ ಕಲೆಯ ಸಂಸ್ಕೃತಿಯ ಅತಿದೊಡ್ಡ ಮ್ಯೂಸಿಯಂ ಆಗಿದೆ,
1979 ರಲ್ಲಿ ಇವರೇ ಜನಪದ ಪರಿಷತ್ ಸ್ಥಾಪಿಸುತ್ತಾರೆ.
ಗಾಂಧೀಜಿಯವರು ದೇಶ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬ ಕರೆಯನ್ನು ಮೈಸೂರು ವಿಶ್ವವಿದ್ಯಾಲಯ ದೇಶದಲ್ಲೇ ಮೊದಲನೆಯದಾಗಿ ಪ್ರಾದೇಶಿಕ ಬಾಷೆಗೆ ಅಗ್ರಸ್ಥಾನ ನೀಡುವ ದ್ವಿಭಾಷಾ ಸೂತ್ರ ಅಂಗಿಕರಿಸಿ ಅಗ್ರಸ್ಥಾನದಲ್ಲಿರುವ ಸಂದರ್ಭದಲ್ಲಿ ಹೆಚ್.ಎಲ್.ನಾಗೇಗೌಡರ ಈ ಗ್ರಂಥಗಳಿಗೆ ಕುವೆಂಪು ಪ್ರದಾನ ಸಂಪಾದಕರಾಗಿ ಪ್ರಕಟನೆ ಮಾಡಿರುವುದು ಕನ್ನಡಿಗರಿಗೆ ಅತಿ ದೊಡ್ಡ ಆಸ್ತಿ.
Comments
Post a Comment