Skip to main content

3452. ಪ್ರವಾಸಿ ಕಂಡ ಇಂಡಿಯಾ

#ನೀವು_ಇತಿಹಾಸ_ಆಸಕ್ತರಾಗಿದ್ದರೆ_ಈ_ಎಂಟು_ಸಂಪುಟ_ಓದಲೇ_ಬೇಕು

#ಪ್ರವಾಸಿ_ಕಂಡ_ಇಂಡಿಯಾ

#ಕನ್ನಡದ_ಇತಿಹಾಸ_ಸಂಶೋದಕರು_ಈ_ಗ್ರಂಥಗಳನ್ನು_ಓದದಿದ್ದರೆ 

#ಅವರ_ಸಂಶೋದನ_ಜ್ಞಾನ_ಪೂರ್ಣ_ಆಗಲಾರದು.

#ಜನಪದ_ಲೋಕ_ನಿರ್ಮಿಸಿದ_ಹೆಚ್_ಎಲ್_ನಾಗೇಗೌಡರು .

#1963ರಲ್ಲಿ_ಶಿವಮೊಗ_ಜಿಲ್ಲಾದಿಕಾರಿಗಳಾಗಿದ್ದವರು


#history #researchers #historian 
#ಪ್ರವಾಸಿಕಂಡಇಂಡಿಯಾ #kuvempu #janapadaloka #HLNagegowda #mysoreuniversity #mandya #ramanagara

  ಪ್ರತಿಯೊಬ್ಬ ಕನ್ನಡಿಗರೂ ಓದಲೇ ಬೇಕಾದ ನಮ್ಮ ಇತಿಹಾಸ ಪ್ರವಾಸಿ ಕಂಡ ಇಂಡಿಯಾ ಪುಸ್ತಕ ಇದನ್ನು ಬರೆದವರು ಹೆಚ್. ಎಲ್.ನಾಗೇಗೌಡರು.

  ಹೆಚ್.ಎಲ್.ನಾಗೇಗೌಡರು ಕನ್ನಡ ಭಾಷೆಗೆ ಅನುವಾದಿಸಿದ ವಿದೇಶಿ ಪ್ರವಾಸಿಗಳ ಪತ್ರ, ದಿನಚರಿಗಳ  ಸುಮಾರು 4000 ಪುಟಗಳ 8 ಸಂಪುಟಗಳು ಅತ್ಯುತ್ತಮ ಇತಿಹಾಸದ ಪುಸ್ತಕಗಳು.

  ಕುವೆಂಪು ಸಂಪಾದಕತ್ವವೂ ಇದಕ್ಕೆ ಇದೆ, ಐಬಿಹೆಚ್ ಪ್ರಕಾಶನ 1972 ರಲ್ಲಿ ಮೊದಲ ಮುದ್ರಣ ಮಾಡಿತ್ತು ಅಪಾರ ಬೇಡಿಕೆಯಿಂದ 2007ರಲ್ಲಿ ಪುನರ್ ಮುದ್ರಣ ಮಾಡಿದ್ದಾರೆ.

  ಈ ಸಂಪುಟಗಳ ವಿಶೇಷ ಅಂದರೆ ಕ್ರಿ.ಪೂ 3000 ದಿಂದ ಮೂರು ಹಂತಗಳಲ್ಲಿ ಭಾರತದ ಇತಿಹಾಸ ವಿಂಗಡಿಸಿ ಸಂಗ್ರಹಿಸಿ ದಾಖಲಿಸಿದ್ದಾರೆ.

  #ಪ್ರಾಚೀನ_ಭಾರತದ_ಇತಿಹಾಸ
ಪುರಾತನ ಕಾಲದಿಂದ 12 ನೇ ಶತಮಾನದ ವರೆಗಿನದ್ದು 

#ಮಧ್ಯಕಾಲ_ಇತಿಹಾಸ
13 ನೇ ಶತಮಾನದಿಂದ 18ನೇ ಶತಮಾನದವರೆಗೆ

#ಆದುನಿಕ_ಇತಿಹಾಸ
  18ನೇ ಶತಮಾನದಿಂದ ಈವರೆಗಿನದ್ದು.
 ಈ ಎಂಟು ಸಂಪುಟಗಳು ಓದಿದರೆ ಭಾರತದ ಇತಿಹಾಸದ ಸಂಪೂರ್ಣ ಜ್ಞಾನ ಲಭ್ಯವಿದೆ.
   
    ಅವರು ದಾಖಲೆ ಮಾಡುತ್ತಾ ಹೋಗಿರುವ ಕ್ರಮ ಓದಲು ಶುರು ಮಾಡಿದರೆ ಎಂಟು ಸಂಪುಟವೂ ರಾತ್ರಿ ಹಗಲೆನ್ನದೆ ಓದಿ ಮುಗಿಯುವವರೆಗೆ ಮುಂದುವರಿಯುವುದಷ್ಟೆ ಅಲ್ಲ ಪುನಃ ಪುನಃ ಓದುವ ಮನಸ್ಸು ಆಗುತ್ತದೆ.

  ಕನ್ನಡದ ಇತಿಹಾಸ ಸಂಶೋದಕರು ಈ ಗ್ರಂಥಗಳನ್ನು ಓದದಿದ್ದರೆ ಅವರ ಸಂಶೋದನ ಜ್ಞಾನ ಪೂರ್ಣ ಆಗಲಾರದು.

  ಹೆಚ್.ಎಲ್.ನಾಗೇಗೌಡರು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಹೆರಗಾನಹಳ್ಳಿಯಲ್ಲಿ 22- ಸೆಪ್ಟೆಂಬರ್ -1915 ರಲ್ಲಿ ಜನಿಸಿ 2005 ರಲ್ಲಿ ಇಹಲೋಕ ತ್ಯಜಿಸಿದರು.

  ವಿಜ್ಞಾನ ಮತ್ತು ಕಾನೂನು ಪದವೀದರಾಗಿ 1940 ರಲ್ಲಿ ಮೈಸೂರು ಸಿವಿಲ್ ಸರ್ವಿಸ್ ಪಾಸ್‌ ಮಾಡಿದರು, 1963 ರಲ್ಲಿ ಶಿವಮೊಗ್ಗ ಜಿಲ್ಲಾದಿಕಾರಿಗಳಾಗಿ ಸೇವೆ ಸಲ್ಲಿಸುತ್ತಾರೆ. 

  ಮಂಡ್ಯ ಜಿಲ್ಲೆಯಲ್ಲಿನ ರಾಮನಗರದಲ್ಲಿ ಇವರು 1986ರಿಂದ ಕೆಲಸ ಪ್ರಾರಂಬಿಸಿ 1994 ರಲ್ಲಿ ಲೋಕಾರ್ಪಣೆ ಮಾಡಿಸಿದ #ಜನಪದ_ಲೋಕ ಜನಪದ ಕಲೆಯ ಸಂಸ್ಕೃತಿಯ  ಅತಿದೊಡ್ಡ ಮ್ಯೂಸಿಯಂ ಆಗಿದೆ,

  1979 ರಲ್ಲಿ ಇವರೇ ಜನಪದ ಪರಿಷತ್ ಸ್ಥಾಪಿಸುತ್ತಾರೆ.

     ಗಾಂಧೀಜಿಯವರು ದೇಶ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂಬ ಕರೆಯನ್ನು ಮೈಸೂರು ವಿಶ್ವವಿದ್ಯಾಲಯ ದೇಶದಲ್ಲೇ ಮೊದಲನೆಯದಾಗಿ ಪ್ರಾದೇಶಿಕ ಬಾಷೆಗೆ ಅಗ್ರಸ್ಥಾನ ನೀಡುವ ದ್ವಿಭಾಷಾ ಸೂತ್ರ ಅಂಗಿಕರಿಸಿ ಅಗ್ರಸ್ಥಾನದಲ್ಲಿರುವ ಸಂದರ್ಭದಲ್ಲಿ ಹೆಚ್.ಎಲ್.ನಾಗೇಗೌಡರ ಈ ಗ್ರಂಥಗಳಿಗೆ ಕುವೆಂಪು ಪ್ರದಾನ ಸಂಪಾದಕರಾಗಿ ಪ್ರಕಟನೆ ಮಾಡಿರುವುದು ಕನ್ನಡಿಗರಿಗೆ ಅತಿ ದೊಡ್ಡ ಆಸ್ತಿ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...