#ಡಾಕ್ಟರ್_ಟಿ_ಎಂ_ಕೇಶವ
#ತಾಳಗುಂದ_ಕನ್ನಡ_ಶಾಸನ
#ಕನ್ನಡದ_ಮೊದಲ_ಶಾಸನ_ಸಂಶೋಧಿಸಿದವರು
#ಹಲ್ಮಿಡಿ_ಶಾಸನಕ್ಕಿಂತ_80_ವರ್ಷ_ಮೊದಲಿನದ್ದು.
#Kannada #Sculpture #Halmidi #Talagunda #TMKeshava #Pranaveshwara #Shikaripura #kadamba #Mayurasharma
ಸಾಮಾಜಿಕ ಜಾಲತಾಣದಿಂದ ವಿಶ್ವವೇ ಒಂದು ಹಳ್ಳಿ ಆಗಿದೆ ಏಕೆಂದರೆ ನನ್ನ ತಾಳಗುಂದ ಲೇಖನ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಬೆಂಗಳೂರು ವಲಯದ ನಿವೃತ್ತ ಅದೀಕ್ಷಕ ಪುರಾತತ್ವ ಶಾಸ್ತ್ರಜ್ಞರಾದ ಡಾ.ಟಿ.ಎಂ. ಕೇಶವರ ಸಂಪರ್ಕ ಆಯಿತು.
ಇವರೇ 2013ರಲ್ಲಿ ಕನ್ನಡದ ಮೊದಲ ಶಾಸನ #ತಾಳಗುಂದ_ಕನ್ನಡ_ಶಾಸನ ಉತ್ಪನದ ಮೂಲಕ ಸಂಶೋಧಿಸಿದವರು.
2017ರಲ್ಲಿ ಕೇಂದ್ರ ಪುರಾತತ್ವ ಇಲಾಖೆ #Early_Kannada_Inscription_found ಎಂದು ಘೋಷಿಸಿದೆ ಇದು ಒಂದು ಮಹತ್ವದ ಆರ್ಕಾಲಾಜಿಕ್ ಎವಿಡೆನ್ಸ್ ಆಗಿದೆ.
ಡಾ.ಟಿ.ಎಂ. ಕೇಶವರ ಪೂರ್ಣ ಹೆಸರು ತಿರುಮಲೈ ಮದುರಾನಾಥ ಕೇಶವ ಇವರ ತಂದೆ ಮದುರನಾಥರು ಪೋಲಿಸ್ ಅಧಿಕಾರಿ ಆದವರು.
ಈ ಶಾಸನವನ್ನು ( ತಾಳಗುಂದ ) ಕಂಡು ಹಿಡಿದಿದ್ದು ಕೇಂದ್ರ ಪುರಾತತ್ವ ಇಲಾಖೆಯ ಪರವಾಗಿ ಡಾ. ಟಿ.ಎಂ. ಕೇಶವರವರು.
ಚಿತ್ರದಲ್ಲಿರುವುದು ತಾಳಗುಂದದ ದಕ್ಷಿಣ kataanja ನಾಡ ಶಾಸನ, ಉತ್ತರ ಕಟಾಂಜನ ದ ಶಾಸನದಲ್ಲಿ ಹಲಿಮಿ, ನಾಲ್ಕು, ಮಾಸೆ, ಕೊಟ್ಟರ್, ಇತ್ಯಾದಿ ಕನ್ನಡ ಪದಗಳಿವೆ.
ಇದನ್ನು ಇತಿಹಾಸ ದರ್ಪಣ ಪುಸ್ತಕ 31-32 (ಸಂಯುಕ್ತ ವಿಶೇಷ ಸಂಚಿಕೆ), ಮಾರ್ಚ್ -2017,ಪರಿಶೋಧ ಆವೃತಿಯಲ್ಲಿ ಟಿ. ಎಂ. ಕೇಶವ, ಎಸ್. ಕಾರ್ತಿಕ್ ಹೆಸರಿನಲ್ಲಿ 135-156 ಪುಟಗಳಲ್ಲಿ ಪ್ರಕಟಿಸಲಾಗಿದೆ.
ಈ ಲೇಖನದಲ್ಲಿ ತಾಳಗುಂದ ಪ್ರಣವೇಶ್ವರ ದೇಗುಲದ ಆವರಣದಲ್ಲಿ ( ಶಾಸನ ಪ್ರಕಾರ ಮಹಾದೇವ ) ನಡೆಸಿದ excavation ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ನಾಡಿನ ಭಾಷೆಯ ಶಾಸನೋಕ್ತ ಪ್ರಾಚೀನತೆಯ ಸಂಶೋಧಕರು ಶ್ರೀಯುತ ಕೇಶವ ತಿರುಮಲೈ ಅವರು.
ಶ್ರೀಯುತರ ಅನನ್ಯವಾದ ಸಂಶೋಧನಾ ಅನುಭವ, ಅವಿರತ ಶ್ರಮ, ಭಾಷಾ ಪ್ರೇಮ, ಸೇವಾ ನಿಷ್ಠೆಯ ಪ್ರತಿಫಲವೇ ಹಲ್ಮಿಡಿ ಶಾಸನಕ್ಕಿಂತಲೂ ಪೂರ್ವದ ಕನ್ನಡದ ಮೊದಲ ಶಿಲಾಶಾಸನ ದೊರಕಲು ಸಾಧ್ಯವಾಗಿದ್ದು.
2013-14ನೇ ಸಾಲಿನಲ್ಲಿ ASI ನ ಬೆಂಗಳೂರು ವಲಯದ ಅಧೀಕ್ಷಕರಾಗಿದ್ದ ಶ್ರೀಯುತರು
ತಾಳಗುಂದದಲ್ಲಿ ಪ್ರಾಯೋಗಿಕ ಉತ್ಖನನದ ಪ್ರತಿ ಹಂತವನ್ನು ಸೂಕ್ಷ್ಮವಾಗಿ ಅವಲೋಕಿಸಿ , ದೊರೆತ ಶಾಸನವನ್ನು ನಿರಂತರ ಎರಡು ವರುಷ ಅಧ್ಯಯನ ನಡೆಸಿ ASIಗೆ ತಮ್ಮ ಕಾರ್ಯ ವರದಿಯನ್ನು ಸಲ್ಲಿಸುತ್ತಾರೆ.
2016 ರಲ್ಲಿ ASI ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ವಾರ್ಷಿಕ ವರದಿಯಲ್ಲಿ ಅದನ್ನು ಪ್ರಕಟಿಸುತ್ತದೆ.
ನಂತರ ASI ನಿಂದ ನಿವೃತ್ತಿ ಹೊಂದಿದ ಶ್ರೀಯುತರು ಬನವಾಸಿಯ ಕದಂಬೋತ್ಸವ ಸೇರಿದಂತೆ ಹಲವಾರು ಕಡೆ "ಕನ್ನಡದ ಮೊದಲ ಶಾಸನ -ತಾಳಗುಂದದ ಸಿಂಹ ಕಟಾಂಜನ ಶಾಸನ'' ಎಂದು ತಲೆಬರಹದಡಿ ತಮ್ಮ ಸಂಶೋಧನಾ ಪ್ರಬಂಧವನ್ನು ಮಂಡನೆ ಮಾಡಿದ್ದಾರೆ.
ಆ ಮೂಲಕ ನಾಡಿನ ಭಾಷೆಯ ಶಾಸನೋಕ್ತ ಪ್ರಾಚೀನತೆಯನ್ನು ಹಲ್ಮಿಡಿ ಶಾಸನಕ್ಕಿಂತಲೂ ಸಮಾರು 70 ವರುಷ ಹಿಂದಿರುವುದನ್ನು ಅಧಿಕೃತವಾಗಿ ದೃಡೀಕರಿಸಿದ್ದಾರೆ.
ಶ್ರೀಯುತರ ಈ ಅನನ್ಯ ಕಾರ್ಯಕ್ಕೆ ಕನ್ನಡಿಗರೆಲ್ಲರ ಪರವಾಗಿ ಅನಂತ ಅನಂತ ಪ್ರಣಾಮಗಳು...
Comments
Post a Comment