Skip to main content

3492. ಮಹಾಲಯ ಅಮಾವಾಸ್ಯೆ

#ಪಿತೃ_ಪಕ್ಷ

#ಮಹಾಲಯ_ಅಮಾವಾಸ್ಯೆ

 #ಸರ್ವಪಿತೃ_ಅಮಾವಾಸ್ಯೆ


#Mahalayaamavasye #Pitrupaksha #Mahabharatha #Karna #Crow 

   ಇವತ್ತು ಮಹಾಲಯ ಅಮಾವಾಸ್ಯೆ ಇದು ಪಿತೃ ಪಕ್ಷದ ಕೊನೆಯ ದಿನ.

   ಮಹಾಲಯ ಅಮಾವಾಸ್ಯೆ ದಿನ ಬಹಳ ವಿಶೇಷ, ಸಾಮಾನ್ಯವಾಗಿ ಪೂರ್ವಜರು ಮೃತಪಟ್ಟ ತಿಥಿ, ದಿನಗಳು ನೆನಪಿದ್ದರೆ ಅಂಥವರಿಗೆ ಆಯಾ ತಿಥಿಯಂದೇ ಶ್ರಾದ್ಧ ಕರ್ಮ ನೆರವೇರಿಸುತ್ತಾರೆ.

   ಆದರೆ ಹಿಂದಿನ ಕಾಲದಲ್ಲಿ ಯಾರಾದರೂ ಮೃತಪಟ್ಟಿದ್ದು ಅವರು ಯಾವ ತಿಥಿಯಲ್ಲಿ ಮೃತರಾದರು ಎಂದು ತಿಳಿಯದೇ ಇದ್ದರೆ ಅಥವಾ ಹಿಂದೆ ಪೂರ್ವಜರು ಮೃತಪಟ್ಟ ದಿನಾಂಕಗಳು, ತಿಥಿಗಳು ನೆನಪಿರದೇ ಇದ್ದರೆ ಅಂಥವರಿಗೆ ಮಹಾಲಯ ಅಮಾವಾಸ್ಯೆ ಅಥವಾ ಸರ್ವಪಿತೃ ಅಮಾವಾಸ್ಯೆ ದಿನ ಶ್ರಾದ್ಧ ಕರ್ಮ, ಪಿಂಡ, ತರ್ಪಣ ಬಿಡುವುದು ವಾಡಿಕೆ. 

   ಈ ರೀತಿ ಮಾಡುವವರಿಗೆ ಸರ್ವಪಿತೃಗಳ ಆಶೀರ್ವಾದ ಇರುತ್ತದೆ ಮತ್ತು ಶುಭ ಫಲವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಆದ್ದರಿಂದ ಪ್ರತಿಯೊಬ್ಬ ಮನುಷ್ಯನೂ ವರ್ಷದ ಪ್ರತಿ ಮಹಾಲಯ ಅಮಾವಾಸ್ಯೆಯಂದು ಅಗಲಿದ ಪಿತೃ ದೇವತೆಗಳಿಗೆ ತರ್ಪಣವನ್ನು ಅರ್ಪಿಸಬೇಕು ಎಂಬ ನಂಬಿಕೆ ಮತ್ತು ಆಚರಣೆ ಇದೆ.

    ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಅಂತ್ಯ ಮತ್ತು ದುರ್ಗಾ ಪೂಜೆಯ ಆರಂಭವನ್ನು ಸೂಚಿಸುವ ಪವಿತ್ರ ದಿನ.

 ದುರ್ಗಾ ದೇವಿ ಭೂಮಿಗೆ ಆಗಮಿಸುವುದನ್ನು ಸಂಕೇತಿಸುವ ಈ ದಿನ ಅತ್ಯಂತ ಶುಭಕರ.

   ಈ ದಿನ ಪೂರ್ವಜರಿಗೆ ತರ್ಪಣ ಮತ್ತು ಪಿಂಡದಾನ ಮಾಡುವ ಪುಣ್ಯಕಾರ್ಯಗಳಿಗೆ ಹೆಚ್ಚಿನ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.

    ಸಸ್ಯಹಾರಿಗಳ ಪದ್ಧತಿ ಪ್ರಕಾರ ತರ್ಪಣ, ಪಿಂಡದಾನ ನಡೆದರೆ ಮಾಂಸಹಾರಿಗಳಲ್ಲಿ ಪೂರ್ವಜರ ಬಾವಚಿತ್ರಗಳಿಗೆ ಪೂಜೆ ಮಾಡಿ ಅವರು ಜೀವಿಸಿದ್ದಾಗ ಅವರಿಗೆ ಇಷ್ಟದ ಮಾಂಸ ಹಾರಿ ಅಡುಗೆ, ಅವರಿಗೆ ಇಷ್ಟವಾಗಿದ್ದ ಮಧ್ಯಪಾನ ಮತ್ತು ದೂಮಪಾನ ವಸ್ತುಗಳನ್ನ ಎಡೆ ಇಟ್ಟು ಲೋಬಾನದ ಆರತಿ ಬೆಳಗಿ ಕಾಗೆಗಳಿಗೆ ಸಮರ್ಪಿಸುತ್ತಾರೆ.

     ಪಿತೃ ಪಕ್ಷದ ಈ ರೀತಿಯ ಅದ್ದೂರಿ ಆಚರಣೆಗಳು ಹಾಸನ-ಮಂಡ್ಯ ಮತ್ತು ಮೈಸೂರು ಭಾಗದ ಒಕ್ಕಲಿಗರಲ್ಲಿ ಹೆಚ್ಚು.

    ಕರಾವಳಿ ಭಾಗದಲ್ಲಿ ಅಳಿಯ ಸಂತಾನದ ಆಚರಣೆಯಂತೆ ದೈವದ ಮನೆಯ ಜಕಣಿ ಎನ್ನುವ ದಿನ ಈ ರೀತಿ ಮಾತೃಗಳಿಗೆ ಎಡೆ ಇಡುವ ಪದ್ದತಿ ಇದೆ.

    ಸನಾತನ ಧರ್ಮದಲ್ಲಿ ಪಿತೃ ಪಕ್ಷಕ್ಕೆ ವಿಶೇಷ ಮಹತ್ವವಿದೆ,ನಂಬಿಕೆಗಳ ಪ್ರಕಾರ ಈ 15 ದಿನಗಳಲ್ಲಿ, ಪೂರ್ವಜರು ತಮ್ಮ ಕುಟುಂಬವನ್ನು ಆಶೀರ್ವದಿಸಲು ಭೂಮಿಗೆ ಬರುತ್ತಾರೆ. 

   ಅವರ ಆತ್ಮದ ಶಾಂತಿಗಾಗಿ ಈ ಅವಧಿಯಲ್ಲಿ ಪಿಂಡದಾನ, ತರ್ಪಣ ಇತ್ಯಾದಿಗಳನ್ನು ಮಾಡಲಾಗುತ್ತದೆ.

   ಪೂರ್ವಜರ ಹೆಸರಿನಲ್ಲಿ ಸರಿಯಾದ ಆಚರಣೆಗಳೊಂದಿಗೆ ತರ್ಪಣ ಇತ್ಯಾದಿಗಳನ್ನು ಮಾಡುವುದರಿಂದ ಸಂತಾನ ವೃದ್ಧಿಯಾಗುವುದು ಮತ್ತು ಪೂರ್ವಜರ ಆಶೀರ್ವಾದದಿಂದ  ಒಬ್ಬ ವ್ಯಕ್ತಿಯು ಸಂತೋಷ ಮತ್ತು ಅದೃಷ್ಟವನ್ನು ಪಡೆಯುತ್ತಾನೆ ಎನ್ನಲಾಗಿದೆ.

   ಶಾಸ್ತ್ರಗಳ ಪ್ರಕಾರ, ಪಿತೃ ಪಕ್ಷದ 15 ದಿನಗಳ ಅವಧಿಯಲ್ಲಿ ನೀವು ಮದುವೆ, ನಿಶ್ಚಿತಾರ್ಥ, ಗೃಹಪ್ರವೇಶ, ಹೊಸ ವ್ಯಾಪಾರ, ವ್ಯವಹಾರವನ್ನು ಪ್ರಾರಂಭಿಸುವಂತಹ ಶುಭ ಕಾರ್ಯಗಳನ್ನು ಮಾಡಬಾರದು.

   ಪಿತೃ ಪಕ್ಷದ ಅವಧಿಯಲ್ಲಿ ನೀವು ಈ ಶುಭ ಕಾರ್ಯಗಳನ್ನು ಮಾಡುವುದರಿಂದ ಪಿತೃಗಳ ಅತೃಪ್ತಿಗೆ ಕಾರಣರಾಗಬಹುದು.

   ಇದರಿಂದ ನೀವು ಮಾಡಿದ ಶುಭ ಕಾರ್ಯಗಳಲ್ಲಿ ವೈಫಲ್ಯವನ್ನು ಕೂಡ ಎದುರಿಸುವಂತಾಗಬಹುದು ಎಂಬುದು ಆಚರಣೆಯಲ್ಲಿದೆ.

   ಹಿಂದೂಗಳಲ್ಲಿ ಮಾಂಸಾಹಾರವನ್ನು ಅನುಮತಿಸುವ ಜಾತಿಗಳಿಗೆ ಸೇರಿದವರಾಗಿದ್ದರೆ ಉದಾಹರಣೆಗೆ ಕ್ಷತ್ರಿಯರು, ಶೂದ್ರಜಾತಿಗಳಿಗೆ ಸೇರಿದವರಾಗಿದ್ದರೆ ಅವರ ಪೂರ್ವಜರು ಮಾಡಿದಂತೆ ಅವರು ಮಾಂಸಾಹಾರವನ್ನು ಸೇವಿಸುವುದನ್ನು ಮುಂದುವರಿಸಬಹುದು.

     ಶ್ರಾದ್ಧ ಪಕ್ಷ ಅಥವಾ ಪಿತೃ ಪಕ್ಷದಲ್ಲಿ ಏನು ತಿಂದರೂ ಅದು ಅವರವರ ಪೂರ್ವಜರಿಗೆ ಹೋಗುತ್ತದೆ ಎಂದು ನಂಬಲಾಗಿದೆ. 

   ಆದ್ದರಿಂದ ಅವರ ಪೂರ್ವಜರು ಮಾಂಸಾಹಾರವನ್ನು ಸೇವಿಸುತ್ತಿದ್ದರೆ ಅವರು ಮಾಂಸವನ್ನು ಸಹ ತಿನ್ನಬಹುದು.

    ಆದರೆ ಮಾಂಸ ಸೇವಿಸದವರಿಗೆ, ಅವರು ಮಾಂಸಹಾರಿ ಕುಟುಂಬದಲ್ಲಿ ಇದ್ದರೂ ಸಹ ಅವರಿಗೆ ಅದನ್ನು ಬಡಿಸಲು ಸಾಧ್ಯವಿಲ್ಲ. 

   ಆದ್ದರಿಂದ ಆಚರಿಸುತ್ತಿರುವ ಪಿತೃಪಕ್ಷದ ಅವರ ಪೂರ್ವಜರು ತಮ್ಮ ಜೀವಿತಾವಧಿಯಲ್ಲಿ ಮಾಂಸವನ್ನು ಸೇವಿಸದಿದ್ದರೆ ಅವರಿಗೆ ಮಾಂಸವನ್ನು ಎಡೆಗೆ ಬಡಿಸಲು ಸಾಧ್ಯವಿಲ್ಲ.

   #ಪಿತೃ_ಪಕ್ಷ_ಆಚರಣೆ_ವಿಧಾನ
  ಪಿತೃ ಪಕ್ಷದಲ್ಲಿ ನಿರ್ದಿಷ್ಟವಾಗಿ ಮಹಾಲಯ ಅಮಾವಾಸ್ಯೆಯಂದು ಪೂರ್ವಜರ ಭಾವಚಿತ್ರಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟು ಪೂಜಿಸಲಾಗುತ್ತದೆ.

#ಎಡೆ_ಇಡುವುದು: 
ಪೂರ್ವಜರು ಅಸುನೀಗಿದ ದಿನದ ತಿಥಿಯನ್ನು ನೆನಪಿನಲ್ಲಿಟ್ಟುಕೊಂಡು ಆ ದಿನದಂದು ವಿಶೇಷವಾಗಿ 'ಎಡೆ' ಇಡಲಾಗುತ್ತದೆ. ಇದು ಊಟದ ಎಲೆಯಲ್ಲಿ ಹಾಲು, ಮೊಸರು, ತುಪ್ಪ, ಅಕ್ಕಿ, ದಾಲ್, ತರಕಾರಿಗಳು ಮುಂತಾದ ಸಸ್ಯಹಾರವನ್ನು ಒಳಗೊಂಡಿರುತ್ತದೆ.

#ಕಾಗೆಗಳಿಗೆ_ಆಹಾರ_ಅರ್ಪಣೆ ತಯಾರಿಸಿದ ಆಹಾರವನ್ನು ಕಾಗೆಗಳಿಗೆ ಅರ್ಪಿಸಲಾಗುತ್ತದೆ, ಕಾಗೆಗಳು ಪೂರ್ವಜರ ಸಂಕೇತವೆಂದು ನಂಬಲಾಗಿದೆ.

#ದಾನ_ಕಾರ್ಯ
ಪಿತೃಪಕ್ಷದ ಸಮಯದಲ್ಲಿ ಬಡವರಿಗೆ, ನಿರ್ಗತಿಕರಿಗೆ ಆಹಾರ ದಾನ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಎಂಬ ನಂಬಿಕೆ ಇದೆ.

#ಬ್ರಾಹ್ಮಣ_ದಾನ
ಬ್ರಾಹ್ಮಣರಿಗೆ ದವಸ ಧಾನ್ಯಗಳನ್ನು ದಾನ ಮಾಡುವುದರಿಂದ ಪಿತೃಗಳು ಪ್ರಸನ್ನರಾಗುತ್ತಾರೆ ಎಂಬ ಸಂಪ್ರದಾಯವಿದೆ.

#ಪೂರ್ವಜರ_ಆಶೀರ್ವಾದ
 ಈ ಆಚರಣೆಗಳ ಮೂಲಕ ಪೂರ್ವಜರು ಭೂಮಿಗೆ ಬಂದು ಆಶೀರ್ವಾದ ಮಾಡುತ್ತಾರೆ ಎಂದು ನಂಬಲಾಗುತ್ತದೆ.

    ಮಹಾಭಾರತ ಯುದ್ಧದಲ್ಲಿ ಪೌರಾಣಿಕ ದಾನಿ ಕರ್ಣ ಮರಣಹೊಂದಿದಾಗ ಅವನ ಆತ್ಮವು ಸ್ವರ್ಗಕ್ಕೆ ಹೋದಾಗ ಅವನು ತೀವ್ರ ಹಸಿವಿನಿಂದ ಬಳಲುತ್ತಿದ್ದನು ಆದರೆ ಅವನು ಮುಟ್ಟಿದ ಯಾವುದೇ ಆಹಾರವು ತಕ್ಷಣವೇ ಚಿನ್ನವಾಗುತ್ತಿತ್ತು.

   ಕರ್ಣ ಮತ್ತು ಸೂರ್ಯ ಇಂದ್ರನ ಬಳಿಗೆ ಹೋಗಿ ಈ ಪರಿಸ್ಥಿತಿಗೆ ಕಾರಣವನ್ನು ಕೇಳಿದರು. 

    ಇಂದ್ರ ಕರ್ಣನಿಗೆ ನಿನ್ನ ಜೀವನದುದ್ದಕ್ಕೂ ಚಿನ್ನವನ್ನು ದಾನ ಮಾಡಿದ್ದೀಯ ಆದರೆ ಶ್ರಾದ್ಧದಲ್ಲಿ ನಿನ್ನ ಪೂರ್ವಜರಿಗೆ ಎಂದಿಗೂ ಆಹಾರವನ್ನು ದಾನ ಮಾಡಿಲ್ಲ ಎಂದು ಹೇಳಿದನು ಆದ್ದರಿಂದ ಕುರು ಪೂರ್ವಜರು ಅವನನ್ನು ಶಪಿಸಿದರು ಎನ್ನುತ್ತಾರೆ.

   ಕರ್ಣನು ತನ್ನ ಪೂರ್ವಜರ ಬಗ್ಗೆ ತಿಳಿದಿಲ್ಲದ ಕಾರಣ ಅವನು ಅವರ ನೆನಪಿನಲ್ಲಿ ಏನನ್ನೂ ದಾನ ಮಾಡಲಿಲ್ಲ ಎಂದು ಹೇಳುತ್ತಾನೆ.

  ಕರ್ಣನು 15 ದಿನಗಳ ಅವಧಿಗೆ ಭೂಮಿಗೆ ಹಿಂತಿರುಗಲು ಅನುಮತಿ ನೀಡಲಾಯಿತು ಇದರಿಂದ ಅವನು ಅವರಿಗೆ ಶ್ರಾದ್ಧವನ್ನು ಮಾಡಿ ಅವರ ನೆನಪಿನಲ್ಲಿ ಆಹಾರ ಮತ್ತು ನೀರನ್ನು ದಾನ ಮಾಡುತ್ತಾನೆ

. ಈ ಅವಧಿಯನ್ನು ಈಗ ಪಿತೃ ಪಕ್ಷ ಎಂದು ಕರೆಯಲಾಗುತ್ತದೆ.

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...