Skip to main content

3479 ತಾಳಗುಂದ ಶಾಸನ ಸಂಶೋದಕರಿಗೆ

#ಕನ್ನಡದ_ಮೊದಲ_ಶಾಸನ

#ತಾಳಗುಂದ_ಕನ್ನಡ_ಶಾಸನ

#ಶಿವಮೊಗ್ಗ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ತಾಳಗುಂದದಲ್ಲಿದೆ

#ಇದನ್ನು_ಉತ್ಖನದಿಂದ_ಸಂಶೋಧಿಸಿದ

#ಡಾಕ್ಟರ್_ಟಿ_ಎಂ_ಕೇಶವರಿಗೆ_ಹೃದಯ_ಪೂರ್ವಕ_ಅಭಿನಂದನೆ_ಸಲ್ಲಿಸಿದ

#ಶಿವಮೊಗ್ಗ_ಜಿಲ್ಲೆಯ_ಇತಿಹಾಸ_ಸಂಶೋಧಕ_ರಮೇಶ್_ಬಿ_ಹಿರೇಜಂಬೂರ್ 

#ಕನ್ನಡ_ನಾಡು_ನುಡಿಗಾಗಿ_ಈ_ಅಮೋಘ_ಇತಿಹಾಸದ_ಸಂಶೋದನೆ

#ಸುವರ್ಣಾಕ್ಷರದಲ್ಲಿ_ಬರೆದಿಡಬೇಕಾದ_ಮಹತ್ತರ_ಕಾರ್ಯ.


#History #kannada #Talagunda #Kadamba #Halmidi #Shivamogga #Shikaripura #DrTMKeshava 
#Rameshhirejambur

  ಕನ್ನಡದ ಮೊದಲ ಶಾಸನ ತಾಳಗುಂದ ಶಾಸನದ ಸಂಶೋದನೆ.

    ಈ ಸಂಶೋಧನೆ ಮಾಡಿದವರು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಬೆಂಗಳೂರು ವಲಯದ ಅದೀಕ್ಷಕರಾಗಿದ್ದ ಡಾ. ಟಿ.ಎಂ. ಕೇಶವರವರು.

     ಇವರನ್ನು ಅಭಿನಂದಿಸಿ ತಮ್ಮ ಪೇಸ್ ಬುಕ್ ನಲ್ಲಿ ಲೇಖನ ಬರೆದವರು ಶಿವಮೊಗ್ಗ ಜಿಲ್ಲೆಯ ಇತಿಹಾಸ ಸಂಶೋದಕರಾದ ರಮೇಶ್. ಬಿ. ಹಿರೇಜಂಜೂರ್.

    ಕನ್ನಡ ನಾಡು ನುಡಿಗಾಗಿ ಈ ಅಮೋಘ ಇತಿಹಾಸದ ಸಂಶೋದನೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಮಹತ್ತರ ಕಾರ್ಯ.

   ರಮೇಶ್ ಬಿ. ಹಿರೇಜಂಬೂರ್ ಅವರ ಲೇಖನ ನಾಡಿನ ಸಮಸ್ತ ಕನ್ನಡಿಗರಿಗಾಗಿ ಮತ್ತು ಇತಿಹಾಸ ಆಸಕ್ತರಿಗಾಗಿ ಇಲ್ಲಿದೆ ಓದಿ....

    #ಇವರ_ಹೆಸರು_ಶ್ರೀಕೇಶವ_ತಿರುಮಲೈ ( Keshava Thirumalai)

    ಕನ್ನಡ ನಾಡಿನ ಪ್ರತಿಯೊಬ್ಬ ಕನ್ನಡ ಪ್ರೇಮಿಯೂ ಇವರನ್ನು ಎದೆಯಲ್ಲಿಟ್ಟುಕೊಳ್ಳಬೇಕಾದ ವ್ಯಕ್ತಿ.

   ಕನ್ನಡದ ಶಾಸನ ಪುರಾತನತೆಯನ್ನು ಕ್ರಿ.ಶ.450ಕ್ಕೂ ಹಿಂದೆ ಕೊಂಡೋಯ್ದ ಮಹಾಪುರುಷರು. 

   ತಾಳಗುಂದ ಉತ್ಖನನದ ರೂವಾರಿಗಳಾಗಿರುವ ಇವರು ಅತಿ  ಆಸಕ್ತಿಯಿಂದ
ತಾಳಗುಂದದ ಸಿಂಹ ಕಟಾಂಜನ ಪತ್ತೆ ಹಚ್ಚಿ, ಕನ್ನಡಕ್ಕೆ ಮತ್ತಷ್ಟು ಹಿರಿಮೆಯನ್ನು ನೀಡಿದ್ದಾರೆ.

 ತಾಳಗುಂದದ ಕದಂಬರ ಸ್ಥಂಭ ಶಾಸನದಲ್ಲಿ ಉಲ್ಲೇಖವಾಗಿರುವ ಶಾತಕರ್ಣಿ ಎಂಬ ಶಬ್ದವು ಇವರನ್ನು ತುಂಬಾ ಚಿಂತನೆಗೆ ಒಳಪಡಿಸಿದೆ.

   ಇಲ್ಲಿ ಶಾತವಾಹನರ ಕುರಿತಾದ ಇನ್ನಷ್ಟು ವಿವರ ಸಿಗಬಹುದು ಆ ಮೂಲಕ ಕರುನಾಡಿನ ಶಾಸನೋಕ್ತ ಪುರಾತನತೆಯನ್ನು ಕ್ರಿಸ್ತ ಪೂರ್ವದಲ್ಲೂ ಕಾಣಬಹುದು ಎಂಬ ಮಹದಾಸೆಯಿಂದ 2013-14ನೇ ಸಾಲಿನಲ್ಲಿ ಪ್ರಾಯೋಗಿಕ ಉತ್ಖನನ ಪ್ರಾರಂಭಿಸಿದ ಕೇಶವಸರ್ ರವರಿಗೆ ಸಿಕ್ಕಿದ್ದು  "#ಕನ್ನಡದ_ಮೊದಲ_ಶಾಸನ". ಚಿನ್ನ ಹುಡುಕಲು ಹೊರಟವರಿಗೆ ವಜ್ರ ಸಿಕ್ಕಿದಂತಾಯಿತು.
    
    ಉತ್ಖನನದ ಅನುಕ್ಷಣದಲ್ಲೂ ಕಣ ಕಣವನ್ನೂ ಪರಾಂಬರಿಸುತ್ತಿದ್ದ ಕೇಶವ ಸರ್ ಗೆ "ಸಿಂಹ ಕಟಾಂಜನ " ರಚನೆ ಗೋಚರಿಸಿತು. 

   ಅದರ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಖಂಡಿಸಿದ ಅಕ್ಕರಗಳ
ಸಾಲುಗಳು ಒಂದಷ್ಟು ಆಸಕ್ತಿ ಹೆಚ್ಚಿಸಿದವು.

   ತುಂಬಾ ಪಳೆಯುಳಿಕೆ ರೂಪದಲ್ಲಿದ್ದ ಶಾಸನವನ್ನು ಎಚ್ಚರಿಕೆಯಿಂದ ಸ್ವಚ್ಚಗೊಳಿಸಿ ಅದರ ಪ್ರತಿ ಪಡೆದು ಅಧ್ಯಯನಗೈದಾಗ ಆ ಅಕ್ಕರಗಳು ಹುಣ್ಣಿಮೆಯ ಪ್ರಭೆಯಾಗಿ ಪ್ರಜ್ವಲಿಸಿದವು. 

    ಮತ್ತೆ ಮತ್ತೆ ಮೂಲ ಪ್ರತಿಯಲ್ಲಿನ ಲಿಪಿಯ ಪ್ರತಿವಕ್ರತೆ
ಮತ್ತು ಲಿಪಿ ವಿನ್ಯಾಸವನ್ನು ಪರೀಕ್ಷಿಸಿ ಶಾಸನ ಮಾಹಿತಿಯನ್ನು ದೃಡಪಡಿಸಿಕೊಂಡು ಅದನ್ನು ಹಲವಾರು ಸುಪ್ರಸಿದ್ಧ ಹಿರಿಯ ಇತಿಹಾಸಕಾರರಲ್ಲಿ ಚರ್ಚಿಸಿ ಖಚಿತ ಮಾಡಿಕೊಂಡು ಸ್ಪಷ್ಟವಾದ ನಿಖರವಾದ ಮಾಹಿತಿಯೊಂದಿಗೆ ವರದಿಯನ್ನು ASI ಗೆ ನೀಡಿದರು.

    ASI  ಡಿಸೆಂಬರ್ 2016 ರಲ್ಲಿ ಅಧಿಕೃತ ವರದಿ ಬಿಡುಗಡೆ ಮಾಡಿತು.

        ಉತ್ಖನನದ ವೇಳೆಯಲ್ಲಿ ದೊರೆತ ಪ್ರತಿಕಣದ ಮಾಹಿತಿ ದಾಖಲಿಸಿರುವ ಶ್ರೀಯುತರು
ಶಾಸನವನ್ನು ಅತ್ಯಂತ ವೈಜ್ಞಾನಿಕವಾಗಿ ಅದು ಮೊದಲಿದ್ದ ಸ್ಥಿತಿಯಲ್ಲೇ ಇರಿಸಿದ್ದಾರೆ.

    ವಿಘಟಕವಲ್ಲದ ವಸ್ತುಗಳಿಂದ ಅದನ್ನು ಭದ್ರಪಡಿಸಿ ಅದರ ಸಂಪೂರ್ಣ ಚಿತ್ರಗಳನ್ನು ಸೆರೆ ಹಿಡಿದು ಅತ್ಯಂತ ಸೂಕ್ತ ರೀತಿಯಲ್ಲಿ ಸಂರಕ್ಷಣೆ ಮಾಡಿದ್ದಾರೆ. 

   ಅತ್ಯಂತ ಹಳೆಯ ಹಾಗೂ fragmented ಸ್ಥಿತಿಯಲ್ಲಿದ್ದ ಶಾಸನವನ್ನು ತಾನಿದ್ದ ಮೊದಲಿನ ಸ್ವಸ್ಥಿತಿಯಲ್ಲಿ ಹಾಗೂ ಸ್ವ ನೆಲೆಯಲ್ಲಿ ಸಂರಕ್ಷಿಸಿಟ್ಟಿರುವುದು ನಿಜಕ್ಕೂ ಅವರ ಮೇರು ಜ್ಞಾನದ ಪ್ರತಿಕತೆಯನ್ನು ಬಿಂಬಿಸುತ್ತದೆ. 

   ಕನ್ನಡದ ಶಾಸನ ಎಂದು ನಿಖರವಾದ ವಾದ ಹೊಂದಿರುವ ಹಾಗೂ ಶಾಸನದ ಅವಧಿಯ ವಿಷಯದಲ್ಲಿ ಲಿಪಿಶಾಸ್ತ್ರದ ಸ್ಪಷ್ಟ ಪರಿಜ್ಞಾನ ಹಾಗೂ ಅನುಭವದ  ಹಿನ್ನಲೆಯಲ್ಲಿ ವರದಿ ಸಿದ್ಧಪಡಿಸಿ ಕನ್ನಡಿಗರಿಗೆ ಅರ್ಪಿಸಿರುವ ಕೇಶವ ಸರ್ ಗೆ ಕನ್ನಡ ನಾಡಿನ ಪ್ರತಿಯೊಬ್ಬ ಕನ್ನಡಿಗರೂ ಯಾವತ್ತೂ
ಋಣಿಯಾಗಿದ್ದಾರೆ.

    ಪ್ರಸ್ತುತ ASI ಯಿಂದ ನಿವೃತ್ತಿ ಹೊಂದಿರುವ ಶ್ರೀಯುತರು ಈ ಶಾಸನದ ಕುರಿತಾಗಿ ವಿಶೇಷ ಆಸಕ್ತಿವಹಿಸಿ ಪ್ರತಿಯೊಬ್ಬ ಕನ್ನಡಿಗರ ಕಣ್ಮಣಿಯಾಗಿದ್ದಾರೆ.
 
 ಪೂಜ್ಯರೇ... ನಿಮಗೆ ಈ ಕರ್ನಾಟಕದ ಎಲ್ಲಾ ಕನ್ನಡಿಗರ ಪರವಾಗಿ ಈ ನೆಲದ ಮಕ್ಕಳಾದ ನಾವು ಅನಂತ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇವೆ. ಇಂತಹ ಮಹೋನ್ನತ ಕಾರ್ಯಕ್ಕೆ  ಎಲ್ಲಾ ಕನ್ನಡಿಗರ ಮನದಲ್ಲಿ ಶಾಶ್ವತ ಸ್ಥಾನ ಖಂಡಿತಾ ಪಡೆದಿದ್ದೀರಿ. 

   ಸ್ನೇಹಿತರೇ ಈ ನೆಲದ ಪವಿತ್ರತೆ ಮತ್ತು ಪುರಾತನತೆಯನ್ನು ಜಗದಗಲಕ್ಕೆ ತೆರೆದಿಟ್ಟ ಈ ಪೂಜ್ಯರ ಈ ಪವಿತ್ರ ಕಾರ್ಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ತಲುಪಿಸಿ. 

  ಇಂದ:
    #ರಮೇಶ_ಬಿ_ಹಿರೇಜಂಬೂರು

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...