Skip to main content

3479 ತಾಳಗುಂದ ಶಾಸನ ಸಂಶೋದಕರಿಗೆ

#ಕನ್ನಡದ_ಮೊದಲ_ಶಾಸನ

#ತಾಳಗುಂದ_ಕನ್ನಡ_ಶಾಸನ

#ಶಿವಮೊಗ್ಗ_ಜಿಲ್ಲೆಯ_ಶಿಕಾರಿಪುರ_ತಾಲ್ಲೂಕಿನ_ತಾಳಗುಂದದಲ್ಲಿದೆ

#ಇದನ್ನು_ಉತ್ಖನದಿಂದ_ಸಂಶೋಧಿಸಿದ

#ಡಾಕ್ಟರ್_ಟಿ_ಎಂ_ಕೇಶವರಿಗೆ_ಹೃದಯ_ಪೂರ್ವಕ_ಅಭಿನಂದನೆ_ಸಲ್ಲಿಸಿದ

#ಶಿವಮೊಗ್ಗ_ಜಿಲ್ಲೆಯ_ಇತಿಹಾಸ_ಸಂಶೋಧಕ_ರಮೇಶ್_ಬಿ_ಹಿರೇಜಂಬೂರ್ 

#ಕನ್ನಡ_ನಾಡು_ನುಡಿಗಾಗಿ_ಈ_ಅಮೋಘ_ಇತಿಹಾಸದ_ಸಂಶೋದನೆ

#ಸುವರ್ಣಾಕ್ಷರದಲ್ಲಿ_ಬರೆದಿಡಬೇಕಾದ_ಮಹತ್ತರ_ಕಾರ್ಯ.


#History #kannada #Talagunda #Kadamba #Halmidi #Shivamogga #Shikaripura #DrTMKeshava 
#Rameshhirejambur

  ಕನ್ನಡದ ಮೊದಲ ಶಾಸನ ತಾಳಗುಂದ ಶಾಸನದ ಸಂಶೋದನೆ.

    ಈ ಸಂಶೋಧನೆ ಮಾಡಿದವರು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ ಬೆಂಗಳೂರು ವಲಯದ ಅದೀಕ್ಷಕರಾಗಿದ್ದ ಡಾ. ಟಿ.ಎಂ. ಕೇಶವರವರು.

     ಇವರನ್ನು ಅಭಿನಂದಿಸಿ ತಮ್ಮ ಪೇಸ್ ಬುಕ್ ನಲ್ಲಿ ಲೇಖನ ಬರೆದವರು ಶಿವಮೊಗ್ಗ ಜಿಲ್ಲೆಯ ಇತಿಹಾಸ ಸಂಶೋದಕರಾದ ರಮೇಶ್. ಬಿ. ಹಿರೇಜಂಜೂರ್.

    ಕನ್ನಡ ನಾಡು ನುಡಿಗಾಗಿ ಈ ಅಮೋಘ ಇತಿಹಾಸದ ಸಂಶೋದನೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಮಹತ್ತರ ಕಾರ್ಯ.

   ರಮೇಶ್ ಬಿ. ಹಿರೇಜಂಬೂರ್ ಅವರ ಲೇಖನ ನಾಡಿನ ಸಮಸ್ತ ಕನ್ನಡಿಗರಿಗಾಗಿ ಮತ್ತು ಇತಿಹಾಸ ಆಸಕ್ತರಿಗಾಗಿ ಇಲ್ಲಿದೆ ಓದಿ....

    #ಇವರ_ಹೆಸರು_ಶ್ರೀಕೇಶವ_ತಿರುಮಲೈ ( Keshava Thirumalai)

    ಕನ್ನಡ ನಾಡಿನ ಪ್ರತಿಯೊಬ್ಬ ಕನ್ನಡ ಪ್ರೇಮಿಯೂ ಇವರನ್ನು ಎದೆಯಲ್ಲಿಟ್ಟುಕೊಳ್ಳಬೇಕಾದ ವ್ಯಕ್ತಿ.

   ಕನ್ನಡದ ಶಾಸನ ಪುರಾತನತೆಯನ್ನು ಕ್ರಿ.ಶ.450ಕ್ಕೂ ಹಿಂದೆ ಕೊಂಡೋಯ್ದ ಮಹಾಪುರುಷರು. 

   ತಾಳಗುಂದ ಉತ್ಖನನದ ರೂವಾರಿಗಳಾಗಿರುವ ಇವರು ಅತಿ  ಆಸಕ್ತಿಯಿಂದ
ತಾಳಗುಂದದ ಸಿಂಹ ಕಟಾಂಜನ ಪತ್ತೆ ಹಚ್ಚಿ, ಕನ್ನಡಕ್ಕೆ ಮತ್ತಷ್ಟು ಹಿರಿಮೆಯನ್ನು ನೀಡಿದ್ದಾರೆ.

 ತಾಳಗುಂದದ ಕದಂಬರ ಸ್ಥಂಭ ಶಾಸನದಲ್ಲಿ ಉಲ್ಲೇಖವಾಗಿರುವ ಶಾತಕರ್ಣಿ ಎಂಬ ಶಬ್ದವು ಇವರನ್ನು ತುಂಬಾ ಚಿಂತನೆಗೆ ಒಳಪಡಿಸಿದೆ.

   ಇಲ್ಲಿ ಶಾತವಾಹನರ ಕುರಿತಾದ ಇನ್ನಷ್ಟು ವಿವರ ಸಿಗಬಹುದು ಆ ಮೂಲಕ ಕರುನಾಡಿನ ಶಾಸನೋಕ್ತ ಪುರಾತನತೆಯನ್ನು ಕ್ರಿಸ್ತ ಪೂರ್ವದಲ್ಲೂ ಕಾಣಬಹುದು ಎಂಬ ಮಹದಾಸೆಯಿಂದ 2013-14ನೇ ಸಾಲಿನಲ್ಲಿ ಪ್ರಾಯೋಗಿಕ ಉತ್ಖನನ ಪ್ರಾರಂಭಿಸಿದ ಕೇಶವಸರ್ ರವರಿಗೆ ಸಿಕ್ಕಿದ್ದು  "#ಕನ್ನಡದ_ಮೊದಲ_ಶಾಸನ". ಚಿನ್ನ ಹುಡುಕಲು ಹೊರಟವರಿಗೆ ವಜ್ರ ಸಿಕ್ಕಿದಂತಾಯಿತು.
    
    ಉತ್ಖನನದ ಅನುಕ್ಷಣದಲ್ಲೂ ಕಣ ಕಣವನ್ನೂ ಪರಾಂಬರಿಸುತ್ತಿದ್ದ ಕೇಶವ ಸರ್ ಗೆ "ಸಿಂಹ ಕಟಾಂಜನ " ರಚನೆ ಗೋಚರಿಸಿತು. 

   ಅದರ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಖಂಡಿಸಿದ ಅಕ್ಕರಗಳ
ಸಾಲುಗಳು ಒಂದಷ್ಟು ಆಸಕ್ತಿ ಹೆಚ್ಚಿಸಿದವು.

   ತುಂಬಾ ಪಳೆಯುಳಿಕೆ ರೂಪದಲ್ಲಿದ್ದ ಶಾಸನವನ್ನು ಎಚ್ಚರಿಕೆಯಿಂದ ಸ್ವಚ್ಚಗೊಳಿಸಿ ಅದರ ಪ್ರತಿ ಪಡೆದು ಅಧ್ಯಯನಗೈದಾಗ ಆ ಅಕ್ಕರಗಳು ಹುಣ್ಣಿಮೆಯ ಪ್ರಭೆಯಾಗಿ ಪ್ರಜ್ವಲಿಸಿದವು. 

    ಮತ್ತೆ ಮತ್ತೆ ಮೂಲ ಪ್ರತಿಯಲ್ಲಿನ ಲಿಪಿಯ ಪ್ರತಿವಕ್ರತೆ
ಮತ್ತು ಲಿಪಿ ವಿನ್ಯಾಸವನ್ನು ಪರೀಕ್ಷಿಸಿ ಶಾಸನ ಮಾಹಿತಿಯನ್ನು ದೃಡಪಡಿಸಿಕೊಂಡು ಅದನ್ನು ಹಲವಾರು ಸುಪ್ರಸಿದ್ಧ ಹಿರಿಯ ಇತಿಹಾಸಕಾರರಲ್ಲಿ ಚರ್ಚಿಸಿ ಖಚಿತ ಮಾಡಿಕೊಂಡು ಸ್ಪಷ್ಟವಾದ ನಿಖರವಾದ ಮಾಹಿತಿಯೊಂದಿಗೆ ವರದಿಯನ್ನು ASI ಗೆ ನೀಡಿದರು.

    ASI  ಡಿಸೆಂಬರ್ 2016 ರಲ್ಲಿ ಅಧಿಕೃತ ವರದಿ ಬಿಡುಗಡೆ ಮಾಡಿತು.

        ಉತ್ಖನನದ ವೇಳೆಯಲ್ಲಿ ದೊರೆತ ಪ್ರತಿಕಣದ ಮಾಹಿತಿ ದಾಖಲಿಸಿರುವ ಶ್ರೀಯುತರು
ಶಾಸನವನ್ನು ಅತ್ಯಂತ ವೈಜ್ಞಾನಿಕವಾಗಿ ಅದು ಮೊದಲಿದ್ದ ಸ್ಥಿತಿಯಲ್ಲೇ ಇರಿಸಿದ್ದಾರೆ.

    ವಿಘಟಕವಲ್ಲದ ವಸ್ತುಗಳಿಂದ ಅದನ್ನು ಭದ್ರಪಡಿಸಿ ಅದರ ಸಂಪೂರ್ಣ ಚಿತ್ರಗಳನ್ನು ಸೆರೆ ಹಿಡಿದು ಅತ್ಯಂತ ಸೂಕ್ತ ರೀತಿಯಲ್ಲಿ ಸಂರಕ್ಷಣೆ ಮಾಡಿದ್ದಾರೆ. 

   ಅತ್ಯಂತ ಹಳೆಯ ಹಾಗೂ fragmented ಸ್ಥಿತಿಯಲ್ಲಿದ್ದ ಶಾಸನವನ್ನು ತಾನಿದ್ದ ಮೊದಲಿನ ಸ್ವಸ್ಥಿತಿಯಲ್ಲಿ ಹಾಗೂ ಸ್ವ ನೆಲೆಯಲ್ಲಿ ಸಂರಕ್ಷಿಸಿಟ್ಟಿರುವುದು ನಿಜಕ್ಕೂ ಅವರ ಮೇರು ಜ್ಞಾನದ ಪ್ರತಿಕತೆಯನ್ನು ಬಿಂಬಿಸುತ್ತದೆ. 

   ಕನ್ನಡದ ಶಾಸನ ಎಂದು ನಿಖರವಾದ ವಾದ ಹೊಂದಿರುವ ಹಾಗೂ ಶಾಸನದ ಅವಧಿಯ ವಿಷಯದಲ್ಲಿ ಲಿಪಿಶಾಸ್ತ್ರದ ಸ್ಪಷ್ಟ ಪರಿಜ್ಞಾನ ಹಾಗೂ ಅನುಭವದ  ಹಿನ್ನಲೆಯಲ್ಲಿ ವರದಿ ಸಿದ್ಧಪಡಿಸಿ ಕನ್ನಡಿಗರಿಗೆ ಅರ್ಪಿಸಿರುವ ಕೇಶವ ಸರ್ ಗೆ ಕನ್ನಡ ನಾಡಿನ ಪ್ರತಿಯೊಬ್ಬ ಕನ್ನಡಿಗರೂ ಯಾವತ್ತೂ
ಋಣಿಯಾಗಿದ್ದಾರೆ.

    ಪ್ರಸ್ತುತ ASI ಯಿಂದ ನಿವೃತ್ತಿ ಹೊಂದಿರುವ ಶ್ರೀಯುತರು ಈ ಶಾಸನದ ಕುರಿತಾಗಿ ವಿಶೇಷ ಆಸಕ್ತಿವಹಿಸಿ ಪ್ರತಿಯೊಬ್ಬ ಕನ್ನಡಿಗರ ಕಣ್ಮಣಿಯಾಗಿದ್ದಾರೆ.
 
 ಪೂಜ್ಯರೇ... ನಿಮಗೆ ಈ ಕರ್ನಾಟಕದ ಎಲ್ಲಾ ಕನ್ನಡಿಗರ ಪರವಾಗಿ ಈ ನೆಲದ ಮಕ್ಕಳಾದ ನಾವು ಅನಂತ ಅನಂತ ಪ್ರಣಾಮಗಳನ್ನು ಸಲ್ಲಿಸುತ್ತಿದ್ದೇವೆ. ಇಂತಹ ಮಹೋನ್ನತ ಕಾರ್ಯಕ್ಕೆ  ಎಲ್ಲಾ ಕನ್ನಡಿಗರ ಮನದಲ್ಲಿ ಶಾಶ್ವತ ಸ್ಥಾನ ಖಂಡಿತಾ ಪಡೆದಿದ್ದೀರಿ. 

   ಸ್ನೇಹಿತರೇ ಈ ನೆಲದ ಪವಿತ್ರತೆ ಮತ್ತು ಪುರಾತನತೆಯನ್ನು ಜಗದಗಲಕ್ಕೆ ತೆರೆದಿಟ್ಟ ಈ ಪೂಜ್ಯರ ಈ ಪವಿತ್ರ ಕಾರ್ಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ತಲುಪಿಸಿ. 

  ಇಂದ:
    #ರಮೇಶ_ಬಿ_ಹಿರೇಜಂಬೂರು

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...