Skip to main content

Blog number 2197. ಹಲಸಿನ ಕಡಿಯ ಟೇಸ್ಟೀ ಬಿರಿಯಾನಿ

#ಮಲೆನಾಡಿನಲ್ಲಿನ_ಸೀಮಿತ_ಸಂಪ್ರದಾಯಿಕ_ಅಡಿಗೆಗೆ

#ಚಿಪ್ಸ್_ಹಪ್ಪಳಕ್ಕೆ_ಹೆಚ್ಚು_ಬಳಕೆ_ಮಾಡುತ್ತಿದ್ದ_ಹಲಸಿನ_ಕಡಿ

#ತನ್ನ_ರೆಸಿಪಿ_ವಿಸ್ತಾರಗೊಂಡು_ಅಂತರಾಷ್ಟ್ರೀಯ_ಮಟ್ಟದಲ್ಲಿ_ಬೇಡಿಕೆ_ಪಡೆದಿದೆ.

#ವಿಶ್ವದಾದ್ಯಂತ_ಪ್ರೋಜನ್‌_ಟೆಂಡರ್_ಜಾಕ್_ಪ್ರೊಟ್_ಹೊಸ_ಶಕೆ_ಪ್ರಾರಂಭ_ಆಗಿದೆ.

#ಹಲಸಿಗೆ_ವಿಶ್ವ_ಮಾನ್ಯತೆ_ಇದೆ.

#ಹಲಸಿನ_ಕಡಿಯಿಂದ_ತಯಾರಿಸಿದ_ಬಿರಿಯಾನಿ

#ಸಸ್ಯಹಾರಿ_ಮಾಂಸಹಾರಿಗಳೂ_ಪ್ರಿಯ

#ಅಮೇಜಾನ್_300_ಗ್ರಾಂ_ಹಲಸಿನ_ಕಡಿ_ಹೋಳು_180_ರೂಪಾಯಿಗೆ_ಮಾರುತ್ತಿದೆ.

#ವೀಗನ್_ನವರಿಗೆ_ಮಾಂಸದ_ಪರ್ಯಾಯ.

#ವಿಶ್ವದಲ್ಲಿ_ಅತಿ_ಹೆಚ್ಚು_ಹಲಸು_ಬೆಳೆಯುವ_ದೇಶ_ಭಾರತ.

  ಇದರಿಂದ ಮಾಡಿದ ಬಿರಿಯಾನಿ ಮಾತ್ರ ಸೂಪರ್, ಮಟನ್ ಬಿರಿಯಾನಿ ಮೀರಿಸುವಂತಾ ರುಚಿ, ಸ್ವಾದ ಮತ್ತು ಆರೋಮ ಹಲಸಿನ ಕಡಿಯಲ್ಲಿದೆ.
 . ಮಾಂಸಹಾರದ ಬಿರಿಯಾನಿ ಮಾಡಿದಂತೆಯೇ ಹಲಸಿನ ಕಡಿ ಕತ್ತರಿಸಿ ಮೊಸರು, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅರಿಶಿಣ ಪುಡಿ ಮತ್ತು ಉಪ್ಪಿನೊಂದಿಗೆ ಅರ್ದ ಗಂಟೆ ಮ್ಯಾರಿನೇಟ್ ಮಾಡಿ ನಂತರ ತುಪ್ಪದಲ್ಲಿ ಚೆನ್ನಾಗಿ ರೋಸ್ಟ್ ಆಗಿ ಹುರಿದು ನಂತರ ನಿಮ್ಮದೇ ರೀತಿಯಲ್ಲಿ ಬಿರಿಯಾನಿ ಮಾಡದರೆ ಆಯಿತು ಇದು ಸುಲಭ ಕೂಡ.   
 ಇದರಲ್ಲೇ ದಂ ಬಿರಿಯಾನಿ, ಹೈದರಾಬಾದ್ ಬಿರಿಯಾನಿ, ಲಕ್ನೋ ಬಿರಿಯಾನಿ, ಸಿಂಪಲ್ ಬಿರಿಯಾನಿ ಎಲ್ಲಾ ಮಾಡಬಹುದು.
  ವಿಶ್ವದಾದ್ಯಂತ ವೀಗನ್ ಬಳಗದವರು (ಪ್ರಾಣಿಜನ್ಯ ಯಾವುದೇ ವಸ್ತು ಹಾಲು ಕೂಡ ಬಳಸದವರು) ಮಾಂಸದ ರುಚಿಯ ಈ ಪರ್ಯಾಯ ಎಳೆ ಹಲಸು ಹೆಚ್ಚು ಬಳಸಲು ಪ್ರಾರಂಬಿಸಿದ್ದರು ಇವರಿಂದ ಪ್ರೇರೇಪಣೆ ಪಡೆದು ಸಸ್ಯಹಾರಿಗಳೂ ಇದನ್ನು ಬಳಸುತ್ತಿದ್ದಾರೆ ಈಗ ಮಾಂಸಹಾರಿಗಳೂ ಇದನ್ನು ಇಷ್ಟ ಪಡುತ್ತಿದ್ದಾರೆ.
  ಆದ್ದರಿಂದಲೇ ಇದು ಪಟ್ಟಣ ವಾಸಿಗಳಿಗೆ, ಹಲಸು ಬೆಳೆಯದ ದೇಶಗಳಲ್ಲೂ ಸುಲಭವಾಗಿ ಸಿಗುವಂತೆ ಸಾವಿರಾರು ಆಹಾರ ಉತ್ಪಾದನಾ ಕಂಪನಿಗಳು ತಮ್ಮ ತಮ್ಮ ಬ್ರಾಂಡ್ ಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.
  ವಿಶ್ವದಲ್ಲೇ ಅತ್ಯಂತ ಹೆಚ್ಚು ಹಲಸು ಬೆಳೆಯುವ ದೇಶ ಭಾರತ ಅದರಲ್ಲಿ ಕೇರಳ, ತಮಿಳುನಾಡು ಮತ್ತು ಒರಿಸ್ಸಾ ರಾಜ್ಯ ಅಗ್ರ ಸ್ಥಾನದಲ್ಲಿದೆ.
  ಹಲಸಿನ ಹಣ್ಣು ಮಾತ್ರ ಬಳಕೆಯಲ್ಲಿದ್ದ ಸಂಪ್ರದಾಯದ ಕಾಲ ಬದಲಾಗಿದೆ, ಹಲಸಿನ ಬೀಜ ಕೂಡ ವಿವಿದ ಬಳಕೆ ಪ್ರಾರಂಭ ಆಗಿದೆ ಈಗ ಹಲಸಿನ ಕಡಿ (Tender Jack Fruit) ವಿಶ್ವ ಮಾನ್ಯತೆ ಪಡೆಯುತ್ತಿರುವುದರಿಂದ ಹಲಸು ಜನಪ್ರಿಯ.
   ನಮ್ಮ ಮನೆಯ ಹಲಸಿನ ಕಡಿಯಿಂದ ತಯಾರಿಸಿದ ಬಿರಿಯಾನಿ ನೋಡಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...