Skip to main content

Blog number 2221. ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ ರಂಗಶಿಕ್ಷಣ ಪಡೆದ ಚಾಲೆಂಜಿಂಗ್ ಸ್ಟಾರ್ ದಶ೯ನ್ ಅಲ್ಲಿನ ಜನಸಾಮಾನ್ಯರ ಜೊತೆಯ ಒಡನಾಟ ಹಣ ಖ್ಯಾತಿಯ ಉತ್ತುಂಗಕ್ಕೆ ಏರಿದರೂ ಮರೆಯಲಿಲ್ಲ.

#ಸಾಗರ_ತಾಲ್ಲೂಕಿನ_ನೀನಾಸಂ_ಹೆಗ್ಗೋಡಿನ_ವಿದ್ಯಾರ್ಥಿ_ದರ್ಶನ್_ತೂಗುದೀಪ್

#ಹದಿನಾರು_ತಿಂಗಳ_ಹೆಗ್ಗೋಡಿನ_ವಾಸ_ವ್ಯಾಸಂಗ_ಹೇಗಿತ್ತು?

#ಕನ್ನಡದ_ಚಲನಚಿತ್ರರಂಗದ_ಸೂಪರ್_ಸ್ಟಾರ್_ಆದಮೇಲೆ?

#ಇಲ್ಲಿನ_ದರ್ಶನ್_ಪರಮಾಪ್ತರು_ಯಾರ್ಯಾರು?


    ಕನ್ನಡದ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದಾರೆ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
   ವಿರೋದಿಗಳು ಮಾತ್ರ ಗೂಳಿ ಗುಂಡಿಗೆ ಬಿದ್ದರೆ ಆಳಿಗೊಂದು ಕಲ್ಲು ಎಂಬ ಗಾದೆ ನೆನಪು ಆಗುವಂತೆ ಮಾಡಿದ್ದಾರೆ.
   ಈಗ ಇವರ ಮೇಲಿನ ಅಪರಾದ ನ್ಯಾಯಾಲಯದ ತೀರ್ಪಿನ ಮೇಲೆ ಅ೦ತ್ಯದ ಪಲಿತಾಂಶಕ್ಕೆ ಕಾಯುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಏನೇನೋ ಚರ್ಚೆ ನಡೆಯುತ್ತಿದೆ.
   ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣರ ನಿನಾಸಂ ಸಂಸ್ಥೆಯಲ್ಲಿ 10 ತಿಂಗಳ ನಟನಾ ತರಬೇತಿ ಮತ್ತು 6 ತಿಂಗಳ ನೀನಾಸಂ ತಿರುಗಾಟ ಎಂಬ ಶಿಭಿರಾರ್ಥಿಗಳು ರಾಜ್ಯಾದ್ಯಂತ ನೀಡುವ ಪ್ರದರ್ಶನಗಳಲ್ಲಿ ದರ್ಶನ್ ಭಾಗವಹಿಸಿದ್ದರು.
   ಸುಮಾರು 16 ತಿಂಗಳು ಮಲೆನಾಡಿನ ಹೆಗ್ಗೋಡಿನಲ್ಲಿ ತಮ್ಮ ರಂಗ ತರಬೇತಿಯಲ್ಲಿ ದರ್ಶನ್ ವಿಧೇಯ ವಿದ್ಯಾರ್ಥಿ ಆಗಿದ್ದರು.
  ಅವರ ಹೆಚ್ಚು ಒಡನಾಟ ಮತ್ತು ಗೆಳೆತನ ಅತ್ಯಂತ ಸಾಮಾನ್ಯ ಜನರ ಜೊತೆ ಜೊತೆಗೆ ಇತ್ತು ಎನ್ನುವುದು ಸೋಜಿಗದ ಸಂಗತಿ ಆಗ ದರ್ಶನ್ ಕೂಡ ಸೆಲೆಬ್ರಿಟಿ ಆಗಿರಲಿಲ್ಲ.
  ಸೆಲೆಬ್ರಿಟಿ ಸ್ಟಾರ್ ಆದಾಗ ಹೆಚ್ಚಿನವರು ಇಂತಹ ನೆನಪು ಗೆಳೆತನ ಮರೆತು ಬಿಡುತ್ತಾರೆ ಆದರೆ ದರ್ಶನ್ ಅದನ್ನೆಲ್ಲ ಮರೆತಿಲ್ಲ ಎಂಬುದಕ್ಕೆ ಅವರ ನಡತೆ ಸಾಕ್ಷಿ ಆಗಿದೆ.
  ಮಲೆನಾಡಿನ ಜನರ ಸ್ವಭಾವ ಒಂದಿದೆ ತಮ್ಮ ಜೊತೆ ಒಡನಾಟದ ವ್ಯಕ್ತಿ ಅಧಿಕಾರ ಅಂತಸ್ತು ಹಣಗಳಿಸಿ ಪ್ರಖ್ಯಾತನಾದಾಗ ಆತನ ಹತ್ತಿರ ಸಹಾಯ ಇತ್ಯಾದಿ ಕೇಳಲು ಹೋಗುವುದಿಲ್ಲ ಕಾರಣ ಪ್ರಖ್ಯಾತಿ ಪಡೆದವನಿಗೆ ಹಿಂದಿನ ನೆನಪು ಇಲ್ಲದಿದ್ದರೆ ಅಥವ ಇಲ್ಲದಂತೆ ವರ್ತಿಸಿದರೆ ಎನ್ನುವ ಕಾರಣ.
   ಆದರೆ ದರ್ಶನ್ ಮಾತ್ರ ಅದನ್ನು ಮರೆಯಲಿಲ್ಲ ಕೊರಾನಾ ನಂತರ ಹೆಗ್ಗೋಡಿಗೆ ಬಂದು ಅವರೆಲ್ಲರ ಮನೆಗೆ ಭೇಟಿ ನೀಡಿದ್ದಾರೆ ಕಷ್ಟದಲ್ಲಿದ್ದವರಿಗೆ ಆರ್ಥಿಕ ಸಹಾಯ ನೀಡಿದ್ದಾರೆ.
  ಹೆಗ್ಗೋಡಿನಲ್ಲಿ ದರ್ಶನ್ ಗೆ ಅತ್ಯಾಪ್ತ ಅವರ ಗೆಳೆಯ ಏಸು ಪ್ರಕಾಶ್ ಅವರ ಮನೆಯಲ್ಲಿ ಅನೇಕ ಬಾರಿ ಊಟ ತಿಂಡಿ ಮಾಡಿದ್ದಾರೆ ಮತ್ತು ಅವರ ಮೂರು ಸಿನಿಮಾದಲ್ಲಿ ಏಸು ಪ್ರಕಾಶರಿಗೆ ಅಭಿನಯದ ಅವಕಾಶ ನೀಡಿದ್ದರು.
   ನೀನಾಸಂನಲ್ಲಿ ಯೋಗಾ ಶಿಕ್ಷಕರಾಗಿದ್ದ ಪಣಿಯಮ್ಮನಿಗೆ ಮೇಡಂ ಅಂತ ಕರೆಯುತ್ತಿದ್ದ ದರ್ಶನ್ ಪಣಿಯಮ್ಮನ ಮನೆಯ ನಾನ್ ವೆಜ್ ಅಡಿಗೆ ಊಟ ಮಾತ್ರ ತಪ್ಪಿಸುತ್ತಿರಲಿಲ್ಲ.
  ಸ್ಟಾರ್ ಆಗಿ ಬಂದಾಗಲೂ ಪಣಿಯಮ್ಮರ ಅತಿಥ್ಯ ಮರೆಯಲಿಲ್ಲ.
  ಈಗ ಸಾಗರದ ಜೋಗ್ ರಸ್ತೆಯಲ್ಲಿ ಖಾದಿ ಮನೆ ನಡೆಸುವ ಭಾಗೀರಥಿ ಅವರನ್ನ ನೀನಾಸಂನಲ್ಲಿ ಅಕ್ಕ ಎಂದು ಕರೆಯುತ್ತಿದ್ದ ದರ್ಶನ್ ಅವರ ಊಟದ ಕ್ಯಾರಿಯರ್ ಕಸಿದುಕೊಂಡು ಅವರು ತರುತ್ತಿದ್ದ ಉಪಹಾರದ ರುಚಿ ಸವಿಯುವ ಕಿಲಾಡಿತನ ಅವರು ಸ್ಟಾರ್ ಆದರೂ ಬಿಟ್ಟಿರಲಿಲ್ಲ.
   ಹೆಗ್ಗೋಡಿಗೆ ಬಂದಾಗ ಹೀಗೆ ಅವರ ಊಟದ ಕ್ಯಾರಿಯರ್ ಕಸಿದುಕೊಂಡಿದ್ದಾರೆ ಸಂಜೆ ಮನೆ ಸೇರಿದ ಭಾಗೀರಥಿ ಚೀಲದಲ್ಲಿ ಐದು ಸಾವಿರ ರೂಪಾಯಿ ನೋಡಿ ಚಕಿತರಾಗಿದ್ದಾರೆ ಇದು ದರ್ಶನ್ ಪ್ರೀತಿಯಿಂದ ಅಕ್ಕ ಭಾಗಿರಥಿಗೆ ನೀಡಿದ ಉಡುಗೊರೆ.
ನೀನಾಸಂ ಸ್ವಚ್ಚತ ಕಾರ್ಮಿಕ ಬಂಗಾರಣ್ಣ ದರ್ಶನ್ ಗೆ ಪರಮಾಪ್ತ, ಬಂಗಾರಣ್ಣರ ಪತ್ನಿ ನೇತ್ರಾವತಿ ಮಹಿಳಾ ಡೊಳ್ಳು ಕಲಾವಿದೆ ದರ್ಶನ್ ಹೆಗ್ಗೋಡಿಗೆ ಬಂದಾಗ ಬಂಗಾರಣ್ಣರ ಮನೆಗೆ ಹೊಸ ಪ್ರಿಜ್ ಒಂದು ತಂದು ಉಡುಗೊರೆ ನೀಡಿದ್ದರು.
  ಅವರು ನೀನಾಸಂ ವಿದ್ಯಾರ್ಥಿ ಆಗಿದ್ದಾಗ ನೀನಾಸಂ ಕ್ಯಾಂಟೀನ್ ನಡೆಸುತ್ತಿದ್ದವರು ಶ್ರೀಧರ್ ಮತ್ತು ರತ್ನಮ್ಮ ದಂಪತಿಗಳು ಅವರ ಬಗ್ಗೆ ದರ್ಶನ್ ಗೆ ಅಪಾರ ಪ್ರೀತಿ.
   ಚಿತ್ರನಟ ರಮೇಶ್ ಅವರ #ವೀಕೆಂಡ್_ವಿತ್_ರಮೇಶ್ ಟೀವಿ ಕನ್ನಡ ವಾಹಿನಿಯಲ್ಲಿ ಅವರನ್ನ ಆಹ್ವಾನಿಸಿದ್ದರು.
  ನೀನಾಸಂ ಕ್ಯಾಂಟೀನ್ ಶ್ರೀಧರ್ ಕ್ಯಾನ್ಸರ್ ಗೆ ತುತ್ತಾದಾಗ ಚಾಲೆಂಜಿಂಗ್ ಸ್ಟಾರ್ ಬಂದು ಅವರಿಗೆ ನೈತಿಕ ದೈಯ೯ ಮತ್ತು ಆರ್ಥಿಕ ಸಹಾಯ ನೀಡಿದ್ದರು.
  ಇಂತಹ ಮಾನವೀಯ ಗುಣದ ದರ್ಶನ್ ಈಗ ಸಂಕಷ್ಟದಲ್ಲಿ ಇದ್ದಾರೆ ಸಿನಿಮಾ ಲೋಕದಲ್ಲಿ ಅನೇಕ ವಿರೋದದ ಜನರ ಮದ್ಯೆ ಎಲ್ಲರನ್ನೂ  ಏಕಾಂಗಿ ಆಗಿ ವಿರೋಧಿಸಿ ತನ್ನ ಸ್ಥಾನ ಭದ್ರ ಪಡಿಸಿ ಕೊಂಡಿದ್ದ ದರ್ಶನ್ ಈಗ   ಸಂಕಷ್ಟದಲ್ಲಿದ್ದಾರೆ.
  ಸಾರ್ವಜನಿಕ ಜೀವನದಲ್ಲಿ ಉತ್ತುಂಗಕ್ಕೆ ಏರಿದಾಗ ಬಂದು ಸೇರುವ ಪರಾವಲಂಬಿ ಅವಕಾಶವಾದಿಗಳಿಂದ ಇಂತಹ ಅಪಾಯ ಸಹಜ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ