Skip to main content

Blog number 2221. ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ ರಂಗಶಿಕ್ಷಣ ಪಡೆದ ಚಾಲೆಂಜಿಂಗ್ ಸ್ಟಾರ್ ದಶ೯ನ್ ಅಲ್ಲಿನ ಜನಸಾಮಾನ್ಯರ ಜೊತೆಯ ಒಡನಾಟ ಹಣ ಖ್ಯಾತಿಯ ಉತ್ತುಂಗಕ್ಕೆ ಏರಿದರೂ ಮರೆಯಲಿಲ್ಲ.

#ಸಾಗರ_ತಾಲ್ಲೂಕಿನ_ನೀನಾಸಂ_ಹೆಗ್ಗೋಡಿನ_ವಿದ್ಯಾರ್ಥಿ_ದರ್ಶನ್_ತೂಗುದೀಪ್

#ಹದಿನಾರು_ತಿಂಗಳ_ಹೆಗ್ಗೋಡಿನ_ವಾಸ_ವ್ಯಾಸಂಗ_ಹೇಗಿತ್ತು?

#ಕನ್ನಡದ_ಚಲನಚಿತ್ರರಂಗದ_ಸೂಪರ್_ಸ್ಟಾರ್_ಆದಮೇಲೆ?

#ಇಲ್ಲಿನ_ದರ್ಶನ್_ಪರಮಾಪ್ತರು_ಯಾರ್ಯಾರು?


    ಕನ್ನಡದ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ದರ್ಶನ್ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದಾರೆ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
   ವಿರೋದಿಗಳು ಮಾತ್ರ ಗೂಳಿ ಗುಂಡಿಗೆ ಬಿದ್ದರೆ ಆಳಿಗೊಂದು ಕಲ್ಲು ಎಂಬ ಗಾದೆ ನೆನಪು ಆಗುವಂತೆ ಮಾಡಿದ್ದಾರೆ.
   ಈಗ ಇವರ ಮೇಲಿನ ಅಪರಾದ ನ್ಯಾಯಾಲಯದ ತೀರ್ಪಿನ ಮೇಲೆ ಅ೦ತ್ಯದ ಪಲಿತಾಂಶಕ್ಕೆ ಕಾಯುವ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಏನೇನೋ ಚರ್ಚೆ ನಡೆಯುತ್ತಿದೆ.
   ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೆ.ವಿ.ಸುಬ್ಬಣ್ಣರ ನಿನಾಸಂ ಸಂಸ್ಥೆಯಲ್ಲಿ 10 ತಿಂಗಳ ನಟನಾ ತರಬೇತಿ ಮತ್ತು 6 ತಿಂಗಳ ನೀನಾಸಂ ತಿರುಗಾಟ ಎಂಬ ಶಿಭಿರಾರ್ಥಿಗಳು ರಾಜ್ಯಾದ್ಯಂತ ನೀಡುವ ಪ್ರದರ್ಶನಗಳಲ್ಲಿ ದರ್ಶನ್ ಭಾಗವಹಿಸಿದ್ದರು.
   ಸುಮಾರು 16 ತಿಂಗಳು ಮಲೆನಾಡಿನ ಹೆಗ್ಗೋಡಿನಲ್ಲಿ ತಮ್ಮ ರಂಗ ತರಬೇತಿಯಲ್ಲಿ ದರ್ಶನ್ ವಿಧೇಯ ವಿದ್ಯಾರ್ಥಿ ಆಗಿದ್ದರು.
  ಅವರ ಹೆಚ್ಚು ಒಡನಾಟ ಮತ್ತು ಗೆಳೆತನ ಅತ್ಯಂತ ಸಾಮಾನ್ಯ ಜನರ ಜೊತೆ ಜೊತೆಗೆ ಇತ್ತು ಎನ್ನುವುದು ಸೋಜಿಗದ ಸಂಗತಿ ಆಗ ದರ್ಶನ್ ಕೂಡ ಸೆಲೆಬ್ರಿಟಿ ಆಗಿರಲಿಲ್ಲ.
  ಸೆಲೆಬ್ರಿಟಿ ಸ್ಟಾರ್ ಆದಾಗ ಹೆಚ್ಚಿನವರು ಇಂತಹ ನೆನಪು ಗೆಳೆತನ ಮರೆತು ಬಿಡುತ್ತಾರೆ ಆದರೆ ದರ್ಶನ್ ಅದನ್ನೆಲ್ಲ ಮರೆತಿಲ್ಲ ಎಂಬುದಕ್ಕೆ ಅವರ ನಡತೆ ಸಾಕ್ಷಿ ಆಗಿದೆ.
  ಮಲೆನಾಡಿನ ಜನರ ಸ್ವಭಾವ ಒಂದಿದೆ ತಮ್ಮ ಜೊತೆ ಒಡನಾಟದ ವ್ಯಕ್ತಿ ಅಧಿಕಾರ ಅಂತಸ್ತು ಹಣಗಳಿಸಿ ಪ್ರಖ್ಯಾತನಾದಾಗ ಆತನ ಹತ್ತಿರ ಸಹಾಯ ಇತ್ಯಾದಿ ಕೇಳಲು ಹೋಗುವುದಿಲ್ಲ ಕಾರಣ ಪ್ರಖ್ಯಾತಿ ಪಡೆದವನಿಗೆ ಹಿಂದಿನ ನೆನಪು ಇಲ್ಲದಿದ್ದರೆ ಅಥವ ಇಲ್ಲದಂತೆ ವರ್ತಿಸಿದರೆ ಎನ್ನುವ ಕಾರಣ.
   ಆದರೆ ದರ್ಶನ್ ಮಾತ್ರ ಅದನ್ನು ಮರೆಯಲಿಲ್ಲ ಕೊರಾನಾ ನಂತರ ಹೆಗ್ಗೋಡಿಗೆ ಬಂದು ಅವರೆಲ್ಲರ ಮನೆಗೆ ಭೇಟಿ ನೀಡಿದ್ದಾರೆ ಕಷ್ಟದಲ್ಲಿದ್ದವರಿಗೆ ಆರ್ಥಿಕ ಸಹಾಯ ನೀಡಿದ್ದಾರೆ.
  ಹೆಗ್ಗೋಡಿನಲ್ಲಿ ದರ್ಶನ್ ಗೆ ಅತ್ಯಾಪ್ತ ಅವರ ಗೆಳೆಯ ಏಸು ಪ್ರಕಾಶ್ ಅವರ ಮನೆಯಲ್ಲಿ ಅನೇಕ ಬಾರಿ ಊಟ ತಿಂಡಿ ಮಾಡಿದ್ದಾರೆ ಮತ್ತು ಅವರ ಮೂರು ಸಿನಿಮಾದಲ್ಲಿ ಏಸು ಪ್ರಕಾಶರಿಗೆ ಅಭಿನಯದ ಅವಕಾಶ ನೀಡಿದ್ದರು.
   ನೀನಾಸಂನಲ್ಲಿ ಯೋಗಾ ಶಿಕ್ಷಕರಾಗಿದ್ದ ಪಣಿಯಮ್ಮನಿಗೆ ಮೇಡಂ ಅಂತ ಕರೆಯುತ್ತಿದ್ದ ದರ್ಶನ್ ಪಣಿಯಮ್ಮನ ಮನೆಯ ನಾನ್ ವೆಜ್ ಅಡಿಗೆ ಊಟ ಮಾತ್ರ ತಪ್ಪಿಸುತ್ತಿರಲಿಲ್ಲ.
  ಸ್ಟಾರ್ ಆಗಿ ಬಂದಾಗಲೂ ಪಣಿಯಮ್ಮರ ಅತಿಥ್ಯ ಮರೆಯಲಿಲ್ಲ.
  ಈಗ ಸಾಗರದ ಜೋಗ್ ರಸ್ತೆಯಲ್ಲಿ ಖಾದಿ ಮನೆ ನಡೆಸುವ ಭಾಗೀರಥಿ ಅವರನ್ನ ನೀನಾಸಂನಲ್ಲಿ ಅಕ್ಕ ಎಂದು ಕರೆಯುತ್ತಿದ್ದ ದರ್ಶನ್ ಅವರ ಊಟದ ಕ್ಯಾರಿಯರ್ ಕಸಿದುಕೊಂಡು ಅವರು ತರುತ್ತಿದ್ದ ಉಪಹಾರದ ರುಚಿ ಸವಿಯುವ ಕಿಲಾಡಿತನ ಅವರು ಸ್ಟಾರ್ ಆದರೂ ಬಿಟ್ಟಿರಲಿಲ್ಲ.
   ಹೆಗ್ಗೋಡಿಗೆ ಬಂದಾಗ ಹೀಗೆ ಅವರ ಊಟದ ಕ್ಯಾರಿಯರ್ ಕಸಿದುಕೊಂಡಿದ್ದಾರೆ ಸಂಜೆ ಮನೆ ಸೇರಿದ ಭಾಗೀರಥಿ ಚೀಲದಲ್ಲಿ ಐದು ಸಾವಿರ ರೂಪಾಯಿ ನೋಡಿ ಚಕಿತರಾಗಿದ್ದಾರೆ ಇದು ದರ್ಶನ್ ಪ್ರೀತಿಯಿಂದ ಅಕ್ಕ ಭಾಗಿರಥಿಗೆ ನೀಡಿದ ಉಡುಗೊರೆ.
ನೀನಾಸಂ ಸ್ವಚ್ಚತ ಕಾರ್ಮಿಕ ಬಂಗಾರಣ್ಣ ದರ್ಶನ್ ಗೆ ಪರಮಾಪ್ತ, ಬಂಗಾರಣ್ಣರ ಪತ್ನಿ ನೇತ್ರಾವತಿ ಮಹಿಳಾ ಡೊಳ್ಳು ಕಲಾವಿದೆ ದರ್ಶನ್ ಹೆಗ್ಗೋಡಿಗೆ ಬಂದಾಗ ಬಂಗಾರಣ್ಣರ ಮನೆಗೆ ಹೊಸ ಪ್ರಿಜ್ ಒಂದು ತಂದು ಉಡುಗೊರೆ ನೀಡಿದ್ದರು.
  ಅವರು ನೀನಾಸಂ ವಿದ್ಯಾರ್ಥಿ ಆಗಿದ್ದಾಗ ನೀನಾಸಂ ಕ್ಯಾಂಟೀನ್ ನಡೆಸುತ್ತಿದ್ದವರು ಶ್ರೀಧರ್ ಮತ್ತು ರತ್ನಮ್ಮ ದಂಪತಿಗಳು ಅವರ ಬಗ್ಗೆ ದರ್ಶನ್ ಗೆ ಅಪಾರ ಪ್ರೀತಿ.
   ಚಿತ್ರನಟ ರಮೇಶ್ ಅವರ #ವೀಕೆಂಡ್_ವಿತ್_ರಮೇಶ್ ಟೀವಿ ಕನ್ನಡ ವಾಹಿನಿಯಲ್ಲಿ ಅವರನ್ನ ಆಹ್ವಾನಿಸಿದ್ದರು.
  ನೀನಾಸಂ ಕ್ಯಾಂಟೀನ್ ಶ್ರೀಧರ್ ಕ್ಯಾನ್ಸರ್ ಗೆ ತುತ್ತಾದಾಗ ಚಾಲೆಂಜಿಂಗ್ ಸ್ಟಾರ್ ಬಂದು ಅವರಿಗೆ ನೈತಿಕ ದೈಯ೯ ಮತ್ತು ಆರ್ಥಿಕ ಸಹಾಯ ನೀಡಿದ್ದರು.
  ಇಂತಹ ಮಾನವೀಯ ಗುಣದ ದರ್ಶನ್ ಈಗ ಸಂಕಷ್ಟದಲ್ಲಿ ಇದ್ದಾರೆ ಸಿನಿಮಾ ಲೋಕದಲ್ಲಿ ಅನೇಕ ವಿರೋದದ ಜನರ ಮದ್ಯೆ ಎಲ್ಲರನ್ನೂ  ಏಕಾಂಗಿ ಆಗಿ ವಿರೋಧಿಸಿ ತನ್ನ ಸ್ಥಾನ ಭದ್ರ ಪಡಿಸಿ ಕೊಂಡಿದ್ದ ದರ್ಶನ್ ಈಗ   ಸಂಕಷ್ಟದಲ್ಲಿದ್ದಾರೆ.
  ಸಾರ್ವಜನಿಕ ಜೀವನದಲ್ಲಿ ಉತ್ತುಂಗಕ್ಕೆ ಏರಿದಾಗ ಬಂದು ಸೇರುವ ಪರಾವಲಂಬಿ ಅವಕಾಶವಾದಿಗಳಿಂದ ಇಂತಹ ಅಪಾಯ ಸಹಜ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...