Skip to main content

Blog number 2159. ತುಮರಿಯಲ್ಲಿ 1999 ಡಿಸೆಂಬರ್ 22ರಂದು ತುಮರಿಯ ಸಜ್ಜನ ರಾಮಣ್ಣ ನನ್ನ ಸಾಗರ ತಾಲ್ಲೂಕ್ ಅಭಿವೃದ್ಧಿ ಹೋರಾಟ ಸಮಿತಿ ಶಾಖೆ ಉದ್ಘಾಟನೆ ಮಾಡಿದ್ದರು.

#ಹೊಳೆ_ಆಚೆನವರು

#ಅಂತಾನೇ_ಸಾಗರ_ತಾಲ್ಲೂಕಿನ_ಶರಾವತಿ_ನದಿ_ಮುಳುಗಡೆ

#ಪ್ರದೇಶದ_ಆಚೆಯ_ಕರೂರು_ಬಾರಂಗಿ_ಹೋಬಳಿಯವರಿಗೆ_ಹೆಸರು

#ಸೂರ್ಯಾಸ್ತದ_ನಂತರ_ಲಾಂಚ್_ಸಾಗಾಟ_ಇರುವುದಿಲ್ಲ

#ಆದ್ದರಿಂದ_ಆ_ಭಾಗದ_ಜನ_ಒಂದು_ದಿನ_ತಾಲ್ಲೂಕು_ಕೇಂದ್ರದಲ್ಲಿ_ಉಳಿಯಲೇ_ಬೇಕು

#ಜನರ_ದೂರು_ದುಮ್ಮಾನಗಳು_ತಾಲ್ಲೂಕಿನ_ಪ್ರಭುಗಳಿಗೆ_ತಲುಪುತ್ತಿರಲಿಲ್ಲ.

#ತುಮರಿಯಲ್ಲಿ_1999ರಲ್ಲಿ_ಸಾಗರ_ತಾಲ್ಲೂಕ್_ಅಭಿವೃದ್ಧಿ_ಹೋರಾಟ_ಸಮಿತಿ

#ಶಾಖೆ_ಸ್ಥಳೀಯ_ಸಜ್ಜನ_ರಾಮಣ್ಣರಿಂದ_ಉದ್ಘಾಟಿಸಲಾಗಿತ್ತು.
    ಕರೂರು -ಬಾರಂಗಿ ಹೋಬಳಿಗಳು ಶರಾವತಿ ನದಿ ಆಣೆಕಟ್ಟಿನಿಂದ ರಸ್ತೆ ಸಂಪರ್ಕ ಕಳೆದುಕೊಂಡು ಲಾಂಚ್ ಸಾಗಾಟ ಅವಲಂಬಿಸಿದೆ ಸಧ್ಯದಲ್ಲೇ ಸೇತುವೆ ಕಾಮಗಾರಿ ಮುಗಿದು ವಾಹನ ಸಂಚಾರ ಪ್ರಾರಂಬದ ಕ್ಷಣಗಣನೆ ಪ್ರಾರಂಭವಾಗಿದೆ.
   2004 ರ ನಂತರ ಈ ಭಾಗದಲ್ಲಿ ಹೊಸ ತಲೆಮಾರಿನ  ಜನಪ್ರತಿನಿದಿಗಳ ಆಡಳಿತ ಮತ್ತು ವಿದ್ಯಾವಂತ  ಯುವಕರ ಹೋರಾಟಗಳು ಆರಂಭವಾಗಿ ಅನೇಕ ಬದಲಾವಣೆಗಳು ಆಗುತ್ತಲಿದೆ.
   ಇದಕ್ಕೂ ಹಿಂದೆ ಈ ಭಾಗದ ಜನರಿಗೆ ಸರ್ಕಾರದ ಕೆಲಸಗಳು ಸರಾಗವಾಗಿ ಮಾಡಿಸಿಕೊಳ್ಳಲು ಕಷ್ಟವಾಗಿತ್ತು ಮಧ್ಯವರ್ತಿಗಳು ಅನಿವಾಯ೯ವಾಗಿತ್ತು, ತಾಲ್ಲೂಕು ಕೇಂದ್ರದ ಆಡಳಿತ ಪಕ್ಷಗಳ ಮರ್ಜಿ ಅನಿವಾರ್ಯವಾಗಿತ್ತು.
  ಸೋತ ಪಕ್ಷದ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಕೊಡಬಾರದ ಅಗೋಚರ ಶಿಕ್ಷೆಗಳು ಇರುತ್ತಿತ್ತು.
   ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತದ ಒಳಗೆ ಮಾತ್ರ ಲಾಂಚ್ ಸಂಚಾರ ಇರುತ್ತಿತ್ತು ಬೆಳಿಗ್ಗೆ ಸರ್ಕಾರಿ ಕಛೇರಿ ಪ್ರಾರಂಭ ಆಗುವ ಬೆಳಿಗಿನ 11 ಗಂಟೆಗೆ ತಲುಪಿ ಮಧ್ಯಾಹ್ನ ಊಟದ ಸಮಯದಲ್ಲಿ ಬಸ್ಸು ಹತ್ತಿ ಹೊಳೆಬಾಗಿಲಿನ ಕೊನೆಯ ಲಾಂಚ್ ಹಿಡಿದರೆ ಮಾತ್ರ ರಾತ್ರಿ ಮನೆ ತಲುಪಬಹುದಾಗಿತ್ತು ಆದರೆ ಸರಕಾರಿ ಕಛೇರಿ ಕೆಲಸ ಅಷ್ಟು ವೇಗವಾಗಿ ಚಲಿಸುವುದಿಲ್ಲ ಆದ್ದರಿಂದ ಮರುದಿನಕ್ಕೆ ಮುಂದೆ ಹಾಕುವುದರಿಂದ ಹೊಳೆಯಾಚೆಗಿನವರು ಸಾಗರ ಪೇಟೆಯಲ್ಲಿ ಲಾಡ್ಜ್ ಗಳಲ್ಲಿ, ಸಂಬಂದಿಗಳ ಮನೆಯಲ್ಲಿ ವಾಸ್ತವ್ಯ ಮಾಡ ಬೇಕಾಗಿತ್ತು.
  ಇದರಿಂದ ಸರಕಾರದ ಸವಲತ್ತುಗಳು ಕಾಮಗಾರಿಗಳು ಆ ಭಾಗದಲ್ಲಿ ಹೇರಾ ಪೇರಿ ಆಗುತ್ತಿತ್ತು ಅದನ್ನು ಯಾರೂ ವಿರೋದಿಸುವಂತೆ ಇರಲಿಲ್ಲ ಅಂತಹ ಸಂದರ್ಭದಲ್ಲಿ ಅನೇಕ ಬಾರಿ ಅಲ್ಲಿನವರು ನನ್ನ ಸಹಾಯ ಸಹಕಾರ ಕೇಳಿ ಬರುತ್ತಿದ್ದರು ಆದ್ದರಿಂದ ಅಲ್ಲಿನ ಅನೇಕರ ಸಲಹೆ ಮೇರೆಗೆ ಮತ್ತು ನನ್ನ ರಾಜಕಾರಣದ ಮಹತ್ವಾಕಾಂಕ್ಷೆಯಿಂದ ತುಮರಿಯಲ್ಲಿ #ಸಾಗರ_ತಾಲ್ಲೂಕ್_ಅಭಿವೃದ್ಧಿ_ಹೋರಾಟ_ಸಮಿತಿ ಶಾಖೆ  ದಿನಾಂಕ 22- ಡಿಸೆಂಬರ್-1999 ರಂದು ತುಮರಿಯ ಸಜ್ಜನ ರಾಮಣ್ಣರಿಂದ ಉದ್ಘಾಟನೆ ಮಾಡಲಾಗಿತ್ತು ಅವತ್ತಿನ ಪೋಟೋ ಸಿಕ್ಕಿದ್ದರಿಂದ ಇದೆಲ್ಲ ನೆನಪಾಯಿತು.
   ಈ ರೀತಿ ಜನ ಜಾಗೃತಿ ಕಾರ್ಯಕ್ರಮಗಳು ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧವಾಗಿದ್ದರಿಂದ ಅವರ ಗೂಂಡಾಗಳು ಒಂದು ದಿನ ಸಾಗರದ ನನ್ನ ಕಛೇರಿ ಲೂಟಿ ಮಾಡಿ ಬೋರ್ಡನ್ನು ಎದುರಿನ ಬಾವಿಗೆ ಹಾಕಿದ್ದರು, ಅಲ್ಲಿ ಓದಲು ಇದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದರು ಆ ಸಂದರ್ಭದಲ್ಲಿ ಪೋಲಿಸರು ಆಡಳಿತಾರೂಡರ ಮಾತು ಮೀರುವ ಸಾಧ್ಯತೆ ಕೂಡ ಇರಲಿಲ್ಲ.
  ಇದೇ ಸಂದರ್ಭದಲ್ಲಿ ಮನೆ ಮಾಲೀಕರಿಗೂ ಒತ್ತಡ ಹಾಕಿ ನನ್ನ ಸಾಗರ ತಾಲ್ಲೂಕಿನ ಅಭಿವೃಧ್ಧಿಯ ಆಶಯದ ಹೋರಾಟ ಸಮಿತಿಯ ಆಫೀಸು ಬೀಗ ಜಡಿಯಲಾಯಿತು 
ಅದರದ್ದೇ ಒಂದು ದೊಡ್ಡ ಕಥೆ ಮುಂದೆ ಎಂದಾದರು ಬರೆಯುತ್ತೇನೆ.
    ಆದರೆ ನಾವು ಪ್ರಾರಂಬಿಸಿದ #ತುಮರಿ_ಸೇತುವೆ, #ಬ್ರಾಡ್_ಗೇಜ್_ರೈಲು,#ಜೋಗ್_ಪ್ರವಾಸೋದ್ಯಮದ_ಅಭಿವೃದ್ಧಿ,#ಹಂದಿಗೋಡು_ನಿಗೂಡ_ಕಾಯಿಲೆ ಇತ್ಯಾದಿ ಪರಿಹಾರಕ್ಕೆ ಒತ್ತಾಯಿಸಿ ನಡೆಸಿದ ಹೋರಾಟಗಳಾದ ದೆಹಲಿ ಚಲೊ ಯಾತ್ರೆ, ಸಾಗರ ತಾಲೂಕಿನಾದ್ಯಂತ ನಡೆಸಿದ ಪಾದಯಾತ್ರೆಗಳ ಜನ ಜಾಗೃತಿ ಹೊಸ ತಲೆಮಾರಿನ ಕಾಲದಲ್ಲಿ ಅನೂಷ್ಟಾನ ಅಗುತ್ತಿರುವುದು ಸಂತೋಷದ ಸಂಗತಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ