Skip to main content

Blog number 2171. ನಮ್ಮ ಮನೆಯ ಗೋಬರ್ ಗ್ಯಾಸ್ ಸ್ಥಾವರದ ಬಾವಿ ಇಂಗು ಗುಂಡಿಯಾಗಿ ಪರಿವರ್ತಿಸಿ ಹತ್ತು ವರ್ಷ ಆಯಿತು ಈ ವರ್ಷದ ಮೊದಲ ಮುಂಗಾರು ಮಳೆ ಕೊಯ್ಲು ಪ್ರಾರಂಭ

#ಈ_ನಮ್ಮ_ಇಂಗು_ಗುಂಡಿ_10_ಅಡಿ_ಆಳ_ಇದೆ

#ಇದರ_ವ್ಯಾಸ_10_ಅಡಿ

#ಇದು_ನಮ್ಮ_ಹಳೆಯ_ಗೋಬರ್_ಗ್ಯಾಸ್_ಬಾವಿ

#ಹತ್ತು_ವರ್ಷದ_ಹಿಂದೆ_ನಮ್ಮಲ್ಲಿ_ಉಳಿದ

#ಕಟ್ಟಡ_ನಿರ್ಮಾಣದ_ಬೋಲ್ಡರ್ಸ್_ಸೋಲಿಂಗ್

#ಜಲ್ಲಿಗಳು_40mm_20mm_ಮರಳು_ಸಾಣಿಸಿದಾಗ

#ತೆಗೆದು_ಹಾಕಿದ_ಮರಳಿನ_ಊರುಳು_ಕಲ್ಲುಗಳು

#ಜಲ್ಲಿ_6mm_ಹಂತ_ಹಂತವಾಗಿ_ಹಾಕಿ_ಅದರ_ಮೇಲೆ

#ಮರಳು_ಇದಕ್ಕೆ_ಇಡೀ_ಅವರಣದ_ಮಳೆ_ನೀರು_ಹರಿದು

#ಬಂದು_ಸಂಗ್ರಹವಾಗಿ_ಇಂಗುತ್ತದೆ.

https://youtube.com/shorts/kCDlPHNl318?feature=shared

ನನ್ನ ಮನೆ ಮತ್ತು ಸಂಸ್ಥೆಯ ಅವರಣದ ಮಳೆ ನೀರು ನಾನು ಸಂಪೂರ್ಣ ಮರುಪೂರಣ ಮಾಡುತ್ತೇನೆ, ನಮ್ಮಲ್ಲಿ ಒಂದು  ಬೋರ್ ವೆಲ್ ಒಂದೂವರೆ ಇಂಚು ನೀರು ನೀಡುತ್ತದೆ ಮತ್ತು ಎರೆಡು ತೆರೆದ ಬಾವಿಗಳು ಇದೆ ಇದರ ಪಕ್ಕದಲ್ಲೇ ಗೋಬರ್ ಗ್ಯಾಸ್ ಗುಂಡಿ ಕಾರ್ಯನಿರ್ವಹಿಸದೆ ನಿಂತಿದ್ದು ಅದನ್ನು ಶಿಲೆ ಕಲ್ಲಿನಿಂದ ಕಟ್ಟಿಸಿದ್ದರು ನಮ್ಮ ತಂದೆ.
  ನಾನು ಅದಕ್ಕೆ ಕಟ್ಟಿದ್ದ ಸೈಜು ಕಲ್ಲು ತೆಗೆಸಿದೆ, ಆ ಗುಂಡಿ ನೆಲದಿಂದ 8 ಅಡಿ ಆಳದವರೆಗೆ ಗಟ್ಟಿ ಮ್ಯಾಂಗನೀಸ್ ಅಂಶದ ಜಂಬಿಟ್ಟಿಗೆ ತೆಗೆದು ಮಾಡಿದ ಗುಂಡಿ ಆದ್ದರಿಂದ ಅದನ್ನು ನಾನು ಬೋಲ್ಡರ್ಸ್ - ಸೋಲಿಂಗ್ - 40 mm ಜಲ್ಲಿ - ನಂತರ 20 mm - ಅದರ ಮೇಲೆ ಮರಳು ಸಾಣಿಸಿ ಉಳಿದ ಊರುಟು ಮರಳು ಕಲ್ಲು- 6 mm ಜಲ್ಲಿ ಇದೆಲ್ಲದರ ಮೇಲೆ ಮರಳು ಹಂತ ಹಂತವಾಗಿ ಹಾಕಿ ಸುತ್ತಲೂ ಕಲ್ಲಿನ ಎತ್ತರದ ಕಟ್ಟೆ ಕಟ್ಟಿ ಮಳೆ ನೀರು ಇಂಗುವಂತೆ ಮಾಡಿದ್ದೇನೆ. 
   ಭೂಮಿ ತನ್ನ ಸಾಮರ್ಥ್ಯದ ಇಂಗುವಿಕೆ ದಾರಣೆ ಮುಗಿದ ಮೇಲೆ ಉಹೂಂ ... ಒಂದು ಹನಿಯನ್ನು ಒಳತೆಗೆದು ಕೊಳ್ಳುವುದಿಲ್ಲ... ಆಗ ಇಂಗದ ಹೆಚ್ಚುವರಿ ನೀರು ತನ್ನಿಂದ ತಾನೇ ಕೆರೆಗೆ ಹೋಗುವಂತೆ ಮಾಡಿದ್ದೇನೆ.
   ಇದು ಕಳೆದ 12 ವರ್ಷದಿಂದ ನಡೆಯುತ್ತಿದೆ ಆದರೂ ನಮ್ಮ ಎರಡು ತೆರೆದ ಬಾವಿಗಳು ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಬೇಸಿಗೆಯ ಕೊನೆಯಲ್ಲಿ ನೀರು ನೀಡಲು ಸಾಧ್ಯವಾಗುತ್ತಿರಲಿಲ್ಲ ಆದರೆ ಈ ವರ್ಷದ ಬಿರು ಬೇಸಿಗೆಯ ಆಶ್ಚರ್ಯ.. ನಮ್ಮ ತೆರೆದ ಬಾವಿಗಳು ಬೋರ್ ವೆಲ್ ಗೆ ಸರಿಸಮನಾಗಿ ಪೈಪೋಟಿಯಿಂದ ನೀರು ನೀಡಿದೆ.
  ಭೂಮಿ ಒಳಗಿನ ವಿಜ್ಞಾನ ನನಗೆ ಅರ್ಥವಾಗುತ್ತಿಲ್ಲ, ಕಡಿಮೆ ಮಳೆ ಮತ್ತು ವಿಪರೀತ ತಾಪ ಮಾನ ನಮ್ಮ ಬಾವಿಗಳು ಕೈ ಕೊಡುತ್ತದೆಂದು ಬಾವಿಸಿದ್ದು ಹುಸಿ ಆಯಿತು ನಿರಂತರ ನೀರು ಇಂಗುವಿಕೆ ಇಂತ ಆಪತ್ಕಾಲದಲ್ಲಿ ತನ್ನ ಚಮತ್ಕಾರ ತೋರಿಸಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...