Skip to main content

Blog number 2172. ಇವತ್ತು 9 - ಜೂನ್-2024 ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಬಿ.ಕೃಷ್ಣಪ್ಪರ 86ನೇ ಹುಟ್ಟು ಹಬ್ಬದ ಸ್ಮರಣೆಗಳು.

#ದಲಿತ_ಸಂಘರ್ಷ_ಸಮಿತಿ_ಸಂಸ್ಥಾಪಕ

#ಬಿ_ಕೃಷ್ಣಪ್ಪರ_86ನೇ_ಹುಟ್ಟು_ಹಬ್ಬ

#ಬಿ_ಕೃಷ್ಣಪ್ಪರ_ಪರಮಾಪ್ತ_ಗೆಳೆಯ

#ಶಿವಮೊಗ್ಗ_ಮುನೀರ್_ಬಿ_ಕೃಷ್ಣಪ್ಪರ_ಪ್ರೇಮ_ವಿವಾಹಕ್ಕೆಸಾಕ್ಷಿ_ಆದವರು

#ದಲಿತ_ಸಂಘರ್ಷ_ಸಮಿತಿ_ಹುಟ್ಟು_ಸಂಘಟನೆ_ಬಗ್ಗೆ_ಅವರ_ಸಂದರ್ಶನದಲ್ಲಿ_ನೋಡಿ

#ಆನಂದಪುರಂ_ರೈತ_ಬಂದು_ಗ್ರಾಮೋದ್ಯೋಗದ_ಕಾರ್ಮಿಕ_ಹೋರಾಟದಲ್ಲಿ_ಬೆಂಬಲಿಸಿದ್ದರು

#ಚಂದ್ರಗುತ್ತಿ_ಬೆತ್ತಲೆ_ಸೇವೆ_ನಿಷೇದಕ್ಕೆ_ಕಾರಣವಾಗಿತ್ತು_ಅವರ_ಹೋರಾಟ.


  9 ಜೂನ್ 1938 ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೋ.ಬಸಪ್ಪ ಕೃಷ್ಣಪ್ಪ ಅವರ ಜನ್ಮದಿನ ಇವತ್ತು ಅವರ 86ನೇ ಹುಟ್ಟು ಹಬ್ಬ ಬಹಳ ಜನ ಅವರ ಹೆಸರಿನ ಮುಂದಿನ ಬಿ ಅಂದರೆ ಭದ್ರಾವತಿ ಅನ್ನುತ್ತಾರೆ ಆದು ತಪ್ಪು, ಹರಿಹರ ಅವರ ಹುಟ್ಟಿದ ಊರು ಅವರ ಶಿಕ್ಷಣ ಚಿತ್ರದುರ್ಗದಲ್ಲಿ.
   ಬಿ.ಕೃಷ್ಣಪ್ಪರ ಮೊದಲ ಉದ್ಯೋಗ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ತಾತ್ಕಲಿಕ ಉಪನ್ಯಾಸ ಹುದ್ದೆಗೆ ಸೇರುತ್ತಾರೆ, ಆಗ ಕವಿ ಗೋಪಾಲಕೃಷ್ಣ ಅಡಿಗರು ಎಲ್.ಬಿ. ಕಾಲೇಜಿನ ಪ್ರಾಂಶುಪಾಲರು.
   ನಂತರ ಭದ್ರಾವತಿ ಸರ್.ಎಂ. ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ದೀರ್ಘಾವದಿ ಸೇವೆ ಸಲ್ಲಿಸಿದ್ದಾರೆ, ಪ್ರಮುಖ ಕನ್ನಡ ಸಾಹಿತ್ಯ ನಿ
   ಇಡೀ ರಾಜ್ಯದಲ್ಲಿ ದಲಿತರ ಹಕ್ಕುಗಳ ಬಗ್ಗೆ ಜನ ಜಾಗೃತಿಯ ಆಂದೋಲನದ ಜ್ಯೋತಿ ಬೆಳಗಿದ ಅವರ ಹೋರಾಟ ಸಣ್ಣದಲ್ಲ ಅವರ ಯೌವನದಲ್ಲಿ ಅವರು ಫ್ರೋ. ನಂಜುಂಡ ಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಲಂಕೇಶರ ಜೊತೆ ಸಮಾಜವಾದಿ ಯುವ ಜನ ಸಭಾದಲ್ಲಿ ಮುಂಚೂಣಿಯಲ್ಲಿದ್ದರು.
   ಆ ಸಮಯದಲ್ಲೇ ಅವರ ಪ್ರೇಮ ವಿವಾಹ ಕವಿ ಗೋಪಾಲ ಕೃಷ್ಣ ಅಡಿಗರ ಅಣ್ಣನ ಪುತ್ರಿ ಇಂದಿರಾ ಜೊತೆ ಆಗುತ್ತದೆ ಬಿ.ಕೃಷ್ಣಪ್ಪ ಮತ್ತು ಇಂದಿರಾ ವಿವಾಹ ದಲಿತ ಮತ್ತು ಬ್ರಾಹ್ಮಣರ ಅಂತರ್ಜಾತಿ ವಿವಾಹವಾದ್ದರಿಂದ ಆ ಕಾಲದಲ್ಲಿ ಜಾತಿ ಕಲಹಕ್ಕೆ ಕಾರಣವಾಗಿತ್ತು.
   ಚಿಕ್ಕಮಗಳೂರಿನಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ಸಮಾಜವಾದಿ ಯುವಜನ ಸಭಾ ಸಮಾವೇಶದ ಸಂದರ್ಭದಲ್ಲಿ ಪೂರ್ಣ ಚಂದ್ರ ತೇಜಸ್ವಿ ಈ ಪ್ರೇಮಿಗಳಿಗೆ ಆಶ್ರಯ ನೀಡುತ್ತಾರೆ, ಜಾತಿ ಕಾರಣದಿಂದ ಪ್ರೇಮಿಗಳಿಗೆ ಬೆದರಿಸಲು ಭದ್ರಾವತಿಯಿಂದ ಕಾರಿನಲ್ಲಿ ಅಲ್ಲಿಗೆ ಹೋಗಿದ್ದವರನ್ನ ಪ್ರೋ ನಂಜುಂಡ ಸ್ವಾಮಿ ತರಾಟೆಗೆ ತೆಗೆದು ಕೊಳ್ಳುತ್ತಾರೆ ಹೀಗೆ ಆ ದಿನದ ನೆನಪುಗಳನ್ನ ಮೆಲಕು ಹಾಕಿದವರು ಬಿ.ಕೃಷ್ಣಪ್ಪರ ಆಪ್ತ ಗೆಳೆಯರಾಗಿದ್ದ ಡಿವಿಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ಕಾಗಿದ್ದವರು ಮತ್ತು ಕನ್ನಡ ಸಾಹಿತ್ಯದ ಆಶ್ರಯದಾತರಾಗಿದ್ದ ಹಂಚಿನಾಳ ಇಬ್ರಾಹಿಂ ಸಾಹೇಬರ ಬಲಗೈ ಆಗಿದ್ದ #ಶಿವಮೊಗ್ಗ_ಮುನೀರ್.
  1983-84ರಲ್ಲಿ ನಮ್ಮ ಊರು ಆನಂದಪುರಂನ ರೈತಬಂದು ಗ್ರಾಮೋದ್ಯೋಗದ ರೈಸ್ ಮಿಲ್ ಐಕಾನ್ ಸುಬ್ಬಣ್ಣನಾಯಕರು ಸುಪ್ರ ಸಿದ್ದರು ಆ ಕಾಲದಲ್ಲೇ ಸಂಸ್ಥೆಯ ನಾಲ್ವರು ಕಾರ್ಮಿಕರ ಕೊಲೆ ಆಗುತ್ತದೆ ಇದನ್ನು ತನಿಖೆಗೆ ಒತ್ತಾಯಿಸಿ ನಾನು, ಸಾಗರದ ಆಗಿನ ಜನರಲ್ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ S.S. ನಾಗರಾಜ್, ಆಗಿನ ಸಾಗರ ತಾಲೂಕಿನ ದಲಿತ ಸಂಘರ್ಷ ಸಮಿತಿ ಸಂಚಾಲಕ ಶಿವಾನಂದ ಕುಗ್ವೆ, ಜನಪರ ಹೋರಾಟಗಾರ ನ್ಯಾಯದ ತಕ್ಕಡಿ ಪತ್ರಿಕೆ ಸಂಪಾದಕ ತೀ.ನಾ.ಶ್ರೀನಿವಾಸ್, ಆಗಿನ ವಿದ್ಯಾರ್ಥಿ ಮುಖಂಡ ಅದರಂತೆ ವಿಶ್ವನಾಥ ಗೌಡ, ಯುವ ಮುಖಂಡರಾದ ಕುಗ್ವೆ ವಸಂತ್, ಪ್ರೆಡರಿಕ್, ಆಟೋ ಮೋಹನ್ ಮತ್ತು ಅನೇಕರು ಪ್ರತಿಭಟನೆ ನಡೆಸಿದಾಗ ಲಾಠಿ ಛಾರ್ಜ್, ಬಂದನ ಹೀಗೆ ಅನೇಕ ಹಿಂಸೆ ನಾವು ಅನೇಕರು ಅನುಭವಿಸ ಬೇಕಾಯಿತು ಆಗ ನಮ್ಮ ಬೆಂಬಲಕ್ಕೆ ಬಂದವರು ಬಿ.ಕೃಷ್ಣಪ್ಪನವರು.
   ನಾವು ಆನಂದಪುರಂನಿಂದ ಶಿವಮೊಗ್ಗಕ್ಕೆ ನೂರಾರು ಯುವಕರು ಸೈಕಲ್ ಜಾಥಾ ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮಾಡಿದಾಗ ನಮ್ಮನ್ನ ಸ್ವಾಗತಿಸಲು ಬಿ. ಕೃಷ್ಣಪ್ಪನವರು ಭದ್ರಾವತಿಯಿಂದ ತಮ್ಮ ನೀಲಿ ಬಣ್ಣದ ಬಜಾಜ್ ಸ್ಕೂಟರ್ ನಲ್ಲಿ ಬಂದಿದ್ದರು.
  ಪ್ರತಿಭಟನಾ ಸಭೆಯಲ್ಲಿ ನಮ್ಮ ಹೋರಾಟ ಬೆಂಬಲಿಸಿ ಮಾತಾಡಿದ್ದರು ಆಗ ಶಿವಮೊಗ್ಗದ ಕಾರ್ಮಿಕ ಮುಖಂಡ ವಕೀಲರಾದ ತಿರುಕಪ್ಪನವರು, ಡಿವಿಎಸ್ ಕಾಲೇಜಿನ ಉಪನ್ಯಾಸಕರಾದ ಜನಪರ ಹೋರಾಟಗಾರ ರಾಚಯ್ಯ, ವಿದ್ಯಾರ್ಥಿ ಮುಖಂಡ ಈಸೂರು ಲೋಕೇಶ್ ಮತ್ತು ಗೆಳೆಯರು ನಮ್ಮ ಹೋರಾಟ ಬೆಂಬಲಿಸಿದ್ದರು.
  30 ಏಪ್ರಿಲ್ 1997ರಂದು ತಮ್ಮ 58 ನೆ ವರ್ಷಕ್ಕೆ ಇಹಲೋಕ ಯಾತ್ರೆ ಮುಗಿಸಿದ ಬಿ.ಕೃಷ್ಣಪ್ಪರ ದಲಿತ ಜನ ಜಾಗೃತೆ ಅಸಾಧಾರಣ ಹೋರಾಟವಾಗಿ ದಾಖಲಾಗಿದೆ.
  ಶಿವಮೊಗ್ಗ ಮುನೀರ್ ಅವರು ನನ್ನ ಅತಿಥಿ ಆಗಿದ್ದಾಗ ಬಿ.ಕೃಷ್ಣಪ್ಪರ ನೆನಪುಗಳ ಅವರ ಮೂರು ಸಂದರ್ಶನಗಳು ಬಿ.ಕೃಷ್ಣಪ್ಪರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ ಈ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ ನೋಡಿ

1).https://youtu.be/Cy5U572-nm0?feature=shared

2).https://youtu.be/fqRHd-7LdU8?feature=shared

3).https://youtu.be/aa_Ba3MVCFg?feature=shared

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ