Skip to main content

Blog number 2211. ಜೀವಮಾನದಲ್ಲಿ ಮರೆಯಲಾರದ ಈ ಕಾರ್ಯ ಇದಕ್ಕೆ ಇರುವ ದಶಕಗಳ ಸಂಬಂದಗಳು.

#ಯೋಗಾ_ಯೋಗ_ಋಣಾನುಬಂದಗಳ_ಸತ್ಯ_ದರ್ಶನ

#ಗಯಾದಲ್ಲಿ_ವಿಷ್ಣುಪಾದದಲ್ಲಿ_ನಮ್ಮ_ಪಿತೃಗಳಿಗೆ_ಪಿಂಡ_ತರ್ಪಣದ

#ಕಾಯ೯ಕ್ರಮ_ನನ್ನ_ಅಣ್ಣನ_ಅನಾರೋಗ್ಯದಿಂದ_ರದ್ದಾಗಿತ್ತು

#ಯೋಗಾ_ಯೋಗ_ಕೆ_ವಿ_ಸುರೇಶರು_ಇದೇ_ತಿಂಗಳು_22ರಂದು_ಗಯಾದಲ್ಲಿ

#ನನ್ನ_ತಂದೆ_ತಾಯಿ_ಮತ್ತು_ನನ್ನ_ತಂದೆಯ_ಸಾಕು_ತಂದೆ_ಸುಬ್ಬಣ್ಣಾಚಾರ್_ಅವರಿಗೆ

#ಕಾರಣ್ಯ_ತರ್ಪಣ_ಅರ್ಪಿಸಿದ್ದಾರೆ.

  ನನ್ನ ತಂದೆ #ಎಸ್_ಕೃಷ್ಣಪ್ಪ ಅನಾಥ ಮಗು ಅದನ್ನ ಎತ್ತಿತಂದವರು #ನಲ್ಲಪ್ಪ ಎಂಬ ಡೇರ್ ಡೆವಿಲ್ ಕ್ಷೌರಿಕರು, ಸಾಕಿದ್ದು ನನ್ನ ಅಜ್ಜಿ ಮೀನುಗಾರರಾದ ಉಡುಪಿ ಜಿಲ್ಲೆಯ ಬಾರ್ಕೂರಿನ ಬೆಣ್ಣೆ ಕುದುರಿನ #ಅಬ್ಬಕ್ಕ ಎಂಬ ದೀರ ಮಹಿಳೆ ಮತ್ತು ಅವರ ಪತಿ ವಿಶ್ವಕರ್ಮ ಜಾತಿಯ #ಸುಬ್ಬಣ್ಣ_ಆಚಾರ್.
   ಸುಬ್ಬಣ್ಣ ಆಚಾರ್ ಇಹಲೋಕ ತ್ಯಜಿಸಿದಾಗ ವೈಕುಂಠ ಸಮಾರಾಧನೆ ದಿನ ದಶದಾನವನ್ನು ನೀಡಿದ್ದರು ಅದನ್ನು ಸ್ವೀಕರಿಸಿದವರು ಮಹಾನ್ ವ್ಯಕ್ತಿ #ವೇದನಾರಾಯಣ_ಭಟ್ಟರು ಅವರು ದ್ವಾರಕೆ ಸಂಶೋಧಿಸಿದ #S_R_ರಾವ್ ಜನಿಸಿದ ಆನಂದಪುರಂನ ಮನೆ ಮಾಲಿಕರು, ಶಾಸಕರು, ಮಂತ್ರಿ ಸಂಸದರು ಆಗಿದ್ದ #ಬದರಿನಾರಾಯಣ_ಅಯ್ಯಂಗಾರರ ಆಪ್ತರು ಅವರು ಈ ದಾನ ಸ್ವೀಕರಿಸಲು ಕಾರಣ ನನ್ನ ತಂದೆ ಬಗ್ಗೆ ಅವರಿಗಿದ್ದ ಪ್ರೀತಿ ಮಾತ್ರ.
  ಆ ಹಿತ್ತಾಳೆ ಹರಿವಾಣ ಅವರ ಮನೆಯಲ್ಲಿದೆ ಅವರ ವೈದಿಕದಲ್ಲಿ ಮಾತ್ರ ಅದನ್ನು ಈ ಕುಟುಂಬ ಬಳಸುತ್ತಾರೆ ಅದಕ್ಕೆ "ಸುಬ್ಬಣ್ಣಾಚಾರರ ಪರಾತ ಕೃಷ್ಣಪ್ಪ ಕೊಟ್ಟಿದ್ದು" ಅಂತನೇ ಹೇಳುತ್ತಾರೆ ನಿನ್ನೆ ವೇದನಾರಾಯಣ ಭಟ್ಟರ ವೈದಿಕದಲ್ಲಿ ಬಳಸಿದ್ದಾರೆ.
  ಈ ವೇದ ನಾರಾಯಣ ಭಟ್ಟರ ಕಿರಿಯ ಪ್ರತ್ರ #ಕೆ_ವಿ_ಸುರೇಶ್ ನಮ್ಮ ತಂದೆಗೆ ಮತ್ತು ನನ್ನ ಅಣ್ಣನಿಗೆ ಅತ್ಯಾಪ್ತರು ಇತ್ತೀಚಿಗೆ ಅವದೂತರಾದ #ಶ್ರೀಕಾಂತಾನಂದ_ಸರಸ್ವತಿ_ಮಹಾರಾಜರು ಪ್ರಾರಂಬಿಸಿರುವ ಲೋಕ ಕಲ್ಯಾಣಕ್ಕಾಗಿ ಒಂದು ಕೋಟಿ ರುದ್ರಪಾರಾಯಣ ಅಭಿಯಾನದಲ್ಲಿ ಕಾಶಿ ವಿಶ್ವನಾಥನ ಸನ್ನಿದಿಯಲ್ಲಿ ನೆರವೇರಿಸಲು ಹೋದವರು ಗಯಾಕ್ಕೆ ಹೋಗಿ ಅವರ ಪಿತೃವರ್ಗದವರಿಗೆ ಪಿತೃತರ್ಪಣ ನೀಡುವಾಗ ನನ್ನ ತಂದೆ ಕೃಷ್ಣಪ್ಪರಿಗೆ, ನನ್ನ ತಾಯಿ ಸರಸಮ್ಮನಿಗೆ, ಅವರ ಸಾಕು ತಾಯಿ ನನ್ನ ಅಜ್ಜಿ ಅಬ್ಬಕ್ಕನಿಗೆ  ಮತ್ತು ಸಾಕು ತಂದೆ ಸುಬ್ಬಣ್ಣಾಚಾರ್ ಅವರಿಗೆ  ಕಾರುಣ್ಯ ತರ್ಪಣ ಅರ್ಪಿಸಿದ್ದಾರೆ.
   ಇದೇ ಯೋಗಾ ಯೋಗ ಕಳೆದ ಏಪ್ರಿಲ್ 13 ರಂದು ಬೆಂಗಳೂರಿಂದ ನಾನು ನನ್ನಣ್ಣ ಸ್ವಪತ್ನಿಕರಾಗಿ ಕಾಶಿ-ಪ್ರಯಾಗ್ ರಾಜ್ - ಆಯೋಧ್ಯೆ ದರ್ಶನ ಮಾಡಿ ಗಯಾದಲ್ಲಿ ಪಿತೃತರ್ಪಣ ನೀಡಿ ನನ್ನ ಕುಟುಂಬಕ್ಕೆ ಸಹಾಯ ಮಾಡಿದವರಿಗೆ ನಲ್ಲಪ್ಪನವರು ಆದಿಯಾಗಿ ನನ್ನ ಅತ್ಯಾಪ್ತರಿಗೆ, ನಮ್ಮ ಸಾಕುಪ್ರಾಣಿಗಳಿಗೆ ಕಾರುಣ್ಯ ತರ್ಪಣ ನೀಡಲು ಪಟ್ಟಿ ಮಾಡಿಕೊಂಡಿದ್ದೆ.
  ಏಪ್ರಿಲ್ 2 ರ ರಾತ್ರಿ ನನ್ನ ಅಣ್ಣನಿಗೆ ಸ್ಟ್ರೋಕ್ ಆಗಿ ನಮ್ಮ ಯಾತ್ರೆ ರದ್ದಾಗಿತ್ತು ಆದರೆ ನಮ್ಮ ಉದ್ದೇಶ ಕೆ.ವಿ.ಸುರೇಶರಿಂದ ದಿನಾಂಕ 22- ಜೂನ್- 2024 ರಂದು ಶುಕ್ರವಾರದಲ್ಲಿ ನೆರವೇರಿತು ಇದೇ ಯೋಗಾ ಯೋಗ ಮತ್ತು ಋಣಾನುಬಂದ.
  ಇವತ್ತು ಅಂಗಾರಕ ಸಂಕಷ್ಟಹರ ಚತುರ್ಥಿಯಂದು ಪ್ರಸಾದ- ಗಂಗಾಜಲ ತಂದ ಕೆ.ವಿ.ಸುರೇಶರಿಗೆ ನಮ್ಮ ಕುಟುಂಬದವತಿಯಿಂದ ಗೌರವಿಸಿ ನೆನಪಿನ ಕಾಣಿಕೆ ಅರ್ಪಿಸುವುದಕ್ಕೆ ನಮಗೆ ಅತ್ಯಂತ ಸಂತೋಷ ಸಂತೃಪ್ತಿ ಜೊತೆಗೆ ಆನಂದಬಾಷ್ಪವೂ ಸೇರಿತು.
   ಈ ವರ್ಷದ ನವೆಂಬರ್ ತಿಂಗಳಲ್ಲಿ ಗಯಾ ತಲುಪಿ ನಮ್ಮ ಸಂಕಲ್ಪ ಪೂರೈಸುವ ಉದ್ದೇಶ ಇದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ