Skip to main content

Blog number 2201. ಸಸ್ಯ ತಜ್ಞ ಬರಗಿ ವೆಂಕಟಗಿರಿ ಇನ್ನು ನೆನಪು ಮಾತ್ರ, ಸಜ್ಜನ ಸರಳ ವ್ಯಕ್ತಿತ್ವದ ಹಿರಿಯ ಗೆಳೆಯರು.

#ಸಸ್ಯ_ತಜ್ಞ_ಬರಗಿ_ವೆಂಕಟಗಿರಿರಾವ್

#ಇನ್ನು_ನೆನಪು_ಮಾತ್ರ

#ಆನಂದಪುರಂ_ಕನ್ನಡ_ಸಂಘದಲ್ಲಿ_24_ವರ್ಷದ_ಹಿಂದೆ

#ಕಡಿದಾಳು_ಶಾಮಣರಿಂದ_ಸನ್ಮಾನ_ಮಾಡಿಸಿದ್ದೆ

#ಶಿವಮೊಗ್ಗದ_ಮೀನಾಕ್ಷಿ_ಭವನ_ಅವರ_ಕೇಂದ್ರವಾಗಿತ್ತು

#ತೊಂಬತ್ತರ_ದಶಕದಲ್ಲಿ_ಡಿಎಪ್_ಓ_ಶ್ರೀಕಂಠಪ್ಪ_ಮತ್ತು_ಇವರು

#ಅರಣ್ಯ_ಇಲಾಖೆಯಲ್ಲಿ_ನವಗ್ರಹ_ವನ_ನಕ್ಷತ್ರ_ವನ_ಸ್ಥಾಪಿಸಿ_ಪ್ರಸಿದ್ದರಾಗಿದ್ದರು

   90 ರ ದಶಕದಲ್ಲಿ ಅರಣ್ಯ ಇಲಾಖೆಯಲ್ಲಿ ಪ್ರಸಿದ್ಧರಾಗಿದ್ದ DFO ಶ್ರೀಕಂಠಪ್ಪ ಅರಣ್ಯದಲ್ಲಿ ನಕ್ಷತ್ರ ವನ ಮತ್ತು ನವಗ್ರಹ ವನ ನಿರ್ಮಿಸಿ ಪ್ರಸಿದ್ದರಾಗಿದ್ದರು ನಂತರ ಔಷದ ವನ ಆಯುರ್ವೇದ ವನಗಳೂ ಆಯಿತು ಇದರ ಹಿನ್ನೆಲೆಯಲ್ಲಿ ಹೆಚ್ಚಿನ ಶ್ರಮ ಇದ್ದಿದ್ದು ನಮ್ಮ ಬರಗಿ ವೆಂಕಟಗಿರಿ ಅವರದ್ದು.
  ಸರಳ ಸಜ್ಜನರಾದ ಈ ಸಸ್ಯ ತಜ್ಞರು ಯಾವತ್ತೂ ಪ್ರಚಾರ ಪ್ರಿಯರಾಗಿರಲಿಲ್ಲ ಪ್ರತಿ ನಿತ್ಯ ಶಿವಮೊಗ್ಗದ ಮೀನಾಕ್ಷಿ ಭವನ ದಲ್ಲಿ ಇರುತ್ತಿದ್ದರು ಮೀನಾಕ್ಷಿ ಭವನದ ಮಾಲಿಕ ಸಹೋದರರ ಖಾಸಾ ಮಿತ್ರರು ಇವರು.
   2001ರಲ್ಲಿ 24 ವರ್ಷದ ಹಿಂದೆ ಆನಂದಪುರಂನಲ್ಲಿನ ಕನ್ನಡ ಸಂಘದ ಅವರಣದಲ್ಲಿ ಖ್ಯಾತ ಸಾಹಿತಿ #ನಾ_ಡಿಸೋಜ_ಬಯಲು_ರಂಗಮಂದಿರ ಉದ್ಘಾಟನೆ ರೈತ ಮುಖಂಡ #ಕಡಿದಾಳು_ಶಾಮಣ್ಣರಿಂದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಸ್ಯ ತಜ್ಞ ವೆಂಕಟಗಿರಿ ಅವರನ್ನ ಆಹ್ವಾನಿಸಿದ್ದೆ.
   ಸಂಜೆ ನನ್ನ ಮನೆಯಲ್ಲಿ ಕಡಿದಾಳು ಶಾಮಣ್ಣ, ನಾ ಡಿಸೋಜ ದಂಪತಿಗಳು ಮತ್ತು ವೆಂಕಟಗಿರಿ ಚಹಾ ಸೇವಿಸಿ ಸಭೆಗೆ ಹೋಗಿದ್ದೆವು ಅಲ್ಲಿ ವೆಂಕಟಗಿರಿ ಅವರ ಸಸ್ಯ ಸಂರಕ್ಷಣೆ ಮತ್ತು ಅದರ ಬಗ್ಗೆ ಅವರಿಗಿರುವ ಅಪಾರ ಜ್ಞಾನದ ಬಗ್ಗೆ ನಾನು ಸಭೆಗೆ ಪರಿಚಯಿಸಿದ್ದೆ ಮತ್ತು ಕಡಿದಾಳು ಶಾಮಣ್ಣರಿಂದ ಸನ್ಮಾನಿಸಿದ್ದೆ.
  ಇತ್ತೀಚೆಗೆ ಆರು ತಿಂಗಳ ಹಿಂದೆ ನಮ್ಮ ಊರ ಮಾರ್ಗವಾಗಿ ಬಂದಾಗ ನನ್ನ ಕಛೇರಿಗೆ ಬಂದು ಬೇಟಿ ಆಗಿದ್ದರು ಆಗ ಅವರ ಹೆಣ್ಣು ಮಕ್ಕಳು ವಿವಿದ ದೇಶದಲ್ಲಿರುವ ಬಗ್ಗೆ ಮತ್ತು ಆ ದೇಶಕ್ಕೆ ಕೆಲಕಾಲ ಹೋಗಿ ನೆಲೆಸಿದ್ದ ಬಗ್ಗೆ ಅಲ್ಲಿ ಬೀಳುವ ಹಿಮದಿಂದ ಹೆಚ್ಚು ತಿರುಗಾಟ ಮಾಡದ ಬಗ್ಗೆ ಮಾತಾಡಿದ್ದರು ಕಾಫಿಯ ಆತಿಥ್ಯ ಸ್ವೀಕರಿಸಿ ಹೋಗಿದ್ದರು.
  ನಿನ್ನೆ ಹೊಸಬಾಳೆಯ ಮಂಜುನಾಥ ಹೆಗಡೆ ಅವರ ಪೋಸ್ಟಿನಿಂದ ವೆಂಕಟಗಿರಿ ಅಲ್ಪಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಸುದ್ದಿ ತಿಳಿಯಿತು.
   ವಿರಳಾತಿ ವಿರಳ ಸಸ್ಯ ಸಂರಕ್ಷಣೆಯ ಅಮೋಘ ಕಾರ್ಯ ನಡೆಸಿದ್ದ ಸಜ್ಜನ ವೆಂಕಟಗಿರಿ ಅವರಿಗೆ ಸದ್ಗತಿ ಸ್ವರ್ಗ ಪ್ರಾಪ್ತಿಗೆ ದೇವರಲ್ಲಿ ಪ್ರಾರ್ಥಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...