Skip to main content

Blog number 2187. ಭಾರತೀಯ ಹುಲಿ ಜೇಡ / Indian Tiger Spider/Indian ornamental tree spider ಕಡಿತ ಜೀವಕ್ಕೆ ಅಪಾಯವಿಲ್ಲ ನೋವು- ಬಾವು- ಸೋಂಕಿನ ಸಾಧ್ಯತೆ ಹೆಚ್ಚು ನನ್ನ ಆತ್ಮೀಯ ಗೆಳೆಯ ಜೋಗಿ ನಾರಾಯಣರು ಹುಲಿ ಜೇಡದ ಕಡಿತಕ್ಕೆ ಒಳಗಾಗಿದ್ದರು.

#ಆತ್ಮೀಯ_ಗೆಳೆಯ_ಜೋಗಿ_ನಾರಾಯಣರಿಗೆ

#ಹುಲಿ_ಜೇಡ_ಕಡಿತದಿಂದ_ಆತಂಕ_ಉಂಟಾಗಿತ್ತು

#ಕಾಲಿನ_ಪಾದದ_ಬಾವು_ಮತ್ತು_ಶಿವಮೊಗ್ಗದ_ಮೆಗಾನ್_ಆಸ್ಪತ್ರೆಯಿಂದ

#ಮಣಿಪಾಲಿಗೆ_ಅಲ್ಲಿನ_ವೈದ್ಯರಿಗೂ_ಇದು_ಅಪರೂಪದ_ಮೊದಲ_ಕೇಸಂತೆ

#ತೀವ್ರವಾದ_ನೋವು_ಬಾವು_ಉಂಟಾಗುತ್ತದೆ

#ಚಿಕಿತ್ಸೆ_ಮಾಡದಿದ್ದರೆ_ಸೋಂಕಾಗುವ_ಸಾಧ್ಯತೆ

#ಮಿತ್ರ_ನಾರಾಯಣ_ಜೋಗಿ_ಆರೋಗ್ಯವಾಗಿದ್ದಾರೆ.
   ಆನಂದಪುರಂನ ಪಶುವೈದ್ಯ ಆಸ್ಪತ್ರೆ ಎದುರಿನ ಮನೆ ನನ್ನ ಆತ್ಮೀಯ ಗೆಳೆಯ ಜೋಗಿ ನಾರಾಯಣರದ್ದು ಇವರ ತಂದೆ ದಿವಂಗತ ಜೋಗಿ ಹನುಮಂತಪ್ಪನವರು ಆನಂದಪುರಂ ವಿಲೇಜ್ ಪಂಚಾಯಿತಿ ಸದಸ್ಯರಾಗಿದ್ದವರು, ಮಂತ್ರಿಗಳಾಗಿದ್ದ ಬದರಿನಾರಾಯಣ ಅಯ್ಯಂಗಾರ್ ಅಣ್ಣ ವೆಂಕಟಾಚಲಯ್ಯಂಗಾರರ ನಿಕಟವರ್ತಿಗಳು ಮತ್ತು ಅವರ ಕುಟುಂಬದ ವಕೀಲರಾದ ಮುಂದೆ ಮುಖ್ಯಮಂತ್ರಿಗಳಾದ ಕಡಿದಾಳು ಮಂಜಪ್ಪರ ಗೆಳೆಯರು ಹಾಗೂ ನಾಟಕ ನಿರ್ದೇಶಕರು ಆಗಿದ್ದವರು.
 ಕಳೆದ ವಾರ ತೆಂಗಿನ ಮರಗಳ ಹೆಡೆಗಳನ್ನ ಸವರಿ ಊರುವಲು ಕಟ್ಟಿಗೆ ಮಾಡುತ್ತಿರುವಾಗ ಕಾಲಿಗೆ ಏನೋ ಕಚ್ಚಿದಂತೆ ತಕ್ಷಣ ಉರಿ ಪ್ರಾರಂಭವಾದಾಗ ಇವರಿಗೆ ಹಾವಿನ ಕಡಿತ ಇರಬಹುದೆನ್ನಿಸಿದೆ, ಆ ಕಸದ ರಾಶಿ ಶೋದಿಸಿದಾಗ ಸಿಕ್ಕಿದ್ದು ಅಂಗೈ ಅಗಲದ ಬಾರತದ ಹುಲಿ ಜೇಡ (Indian Tiger Spider/Indian ornamental tree spider) ಇದನ್ನು ನೋಡಿದ ಮೇಲೆ ಮೊದಲು ಉಂಟಾಗಿದ್ದ ಹಾವಿನ ಕಡಿತದ ಭಯ ಹೋದರೂ ಸ್ಥಳೀಯವಾಗಿ ಹುಲಿ ಜೇಡ ವಿಷ ಎಂಬ ನಂಬಿಕೆ ತಕ್ಷಣ ಶಿವಮೊಗ್ಗದ ಜಿಲ್ಲಾ  ಮೆಗಾನ್ ಆಸ್ಪತ್ರೆಗೆ ಹೋದರೆ ಅಲ್ಲಿನ ವೈದ್ಯರು TT ಚುಚ್ಚು ಮದ್ದು ನೀಡಿ ಮಣಿಪಾಲಿಗೆ ಕಳಿಸಿದ್ದಾರೆ.
   ಈ ಜೇಡ ಅಕ್ಕ ಪಕ್ಕದವರು ಬಂದು ಹೊಡೆದು ಸಾಯಿಸಿದ್ದಾರೆ ಅಂಗೈ ಅಗಲ ಗಾತ್ರದ ಈ ಹುಲಿ ಜೇಡ ಒಂದು ಮುಷ್ಟಿ ಗಾತ್ರಕ್ಕೆ ಮುರುಟಿಗೊಂಡಿದೆ ಮತ್ತು ಇದರ ಮುಂಭಾಗದ ಕಾಲು 7 ರಿಂದ 8 ಸೆ.ಮಿ ಉದ್ದವಿತ್ತು ಇದರ ಪೋಟೋ ತೆಗೆದು ಕೊಂಡು ವೈದ್ಯರಿಗೆ ತೋರಿಸಿದ್ದರಿಂದ ಚಿಕಿತ್ಸೆಗೆ ಅನುಕೂಲವಾಯಿತು.
  ಮಣಿಪಾಲಿನಲ್ಲಿ ಸೋಂಕು ನಿವಾರಕ ಚಿಕಿತ್ಸೆ ನೀಡಿದ್ದಾರೆ ಒಂದು ವಿಶೇಷ ಅಂದರೆ ಹುಲಿ ಜೇಡದ ಕಡಿತದ ಮೊದಲ ಕೇಸು ಇದಂತೆ ಕಾರಣ ಹುಲಿ ಜೇಡದ ಕಡಿತ ಆದವರು ಅವರ ಹಳ್ಳಿಯಲ್ಲಿ ನಾಟಿ ಚಿಕೆತ್ಸೆ ಪಡೆಯುವುದರಿಂದ ಆಸ್ಪತ್ರೆಗೆ ಬರುವುದಿಲ್ಲ ಎಂದಿದ್ದಾರೆ.
   ನಾರಾಯಣರ ಮತ್ತು ಅವರ ಕುಟುಂಬದ ಆತಂಕ ಭಯ ನಿವಾರಣೆ ಆಗಿದೆ, ಕಾಲಿನ ಬಾವು ಇಳಿಯುತ್ತಿದೆ ಹುಲಿ ಜೇಡದ ಕುಟುಂಬದ ನಾಕಾರು ಮರಿಗಳು ಅಲ್ಲೇ ಇದೆಯಂತೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ