Skip to main content

Blog number 2203. ಪುರುಶೊತ್ತಮ ಬಿಳಿಮಲೆ ಅವರ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೇಡ ಎಂಬ ಹೇಳಿಕೆ ಸರ್ಕಾರದಿಂದ ಜಾರಿ ಸಾಧ್ಯವೇ?...

#ಪುರುಶೋತ್ತಮಬಿಳಿಮಲೆ

#ಕರ್ನಾಟಕ_ಸರ್ಕಾರದ

#ಕನ್ನಡ_ಅಭಿವೃದ್ಧಿ_ಪ್ರಾಧಿಕಾರದ_ಅಧ್ಯಕ್ಷರು

#ಅವರ_ಹೇಳಿಕೆ_ಒತ್ತಾಯ

#ಪ್ರಾಥಮಿಕ_ಶಾಲೆಗಳಲ್ಲಿ_ಆಂಗ್ಲ_ಮಾಧ್ಯಮ_ಬೇಡ

#ಇದರ_ಸಾದಕ_ಭಾದಕ_ಏನು?

  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರ ಹೇಳಿಕೆ ಸ್ವಾಗತಾರ್ಹ ಆದರೂ ಇದು ಸಾಧ್ಯವಾ? ಕರ್ನಾಟಕದಲ್ಲಿನ ಸರ್ಕಾರಿ ಶಾಲೆಗೆ ಮಾತ್ರವಾ? ಅಥವ ರಾಜ್ಯದ ಎಲ್ಲಾ ಖಾಸಾಗಿ ಮತ್ತು ಸೆಂಟ್ರಲ್ ಸಿಲಬಸ್ ಶಾಲೆಗಳಿಗೂ ಅನ್ವಯವಾ? ಸರ್ವೋಚ್ಚ ನಾಯಾಲಯದ ತೀರ್ಪುಗಳು ಏನಿದೆ? ಎಂಬ ಅನೇಕ ರೀತಿ ಚರ್ಚಿಗಳು ಸಾಮಾಜಿಕ ಜಾಲತಾಣದಲ್ಲಿ ಗಮನಿಸಬಹುದು.
  ಪ್ರಾಥಮಿಕ ಶಿಕ್ಷಣ 1 ರಿಂದ 4 ರವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿಸಿ 5 ರಿಂದ 10 ನೇ ತರಗತಿ ತನಕ ಇಂಗ್ಲಿಷ್ ಮಾಧ್ಯಮದ ಅನುಮತಿ ಪಡೆದ ಶಾಲೆಗಳು ಈ ಆದೇಶ ಪಾಲಿಸುವುದೇ ಇಲ್ಲ ರಾಜಾರೋಸ್ತಾಗಿ ಇಂಗ್ಲಿಷ್ ಮಾಧ್ಯಮ ಶಾಲೆ ಅಂತ ಬೋರ್ಡ್ ಹಾಕಿ ಕೊಂಡು ಇಂಗ್ಲೀಷ್ ನಲ್ಲೇ ಪಾಠ ಮಾಡುತ್ತಾರೆ ಕನ್ನಡ ಮಾತಾಡಿದರೆ ದಂಡ ಇದೆಲ್ಲ ಸಣ್ಣ ಸಣ್ಣ ಹಳ್ಳಿಗಳಲ್ಲಿ ಕಾನ್ವೆಂಟ್ ಶಿಕ್ಷಣದ ಪ್ಯಾಶನ್ ಶುರುವಾಗಿದೆ ಇದಕ್ಕೆ ಪ್ರತಿಫಲವಾಗಿ ಶಿಕ್ಷಣ ಇಲಾಖೆಗೆ ನಿಗದಿ ಪಡಿಸಿದ ಲಂಚ ತಲುಪಿಸ ಬೇಕು.
   ನಾನು ನನ್ನ ಮಕ್ಕಳನ್ನ ಸರ್ಕಾರಿ ಅಂಗನವಾಡಿಯಿಂದ ದ್ವಿತೀಯ puc ತನಕ ನಮ್ಮ ಊರಿನ ಸರ್ಕಾರಿ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿಸಿದೆ ನನಗೆ ಇದಕ್ಕೆಲ್ಲ ಪ್ರೇರಣೆ ಆದ ಸಾಹಿತಿಗಳು ಕನ್ನಡ ಹೋರಾಟಗಾರರು ಮಾತ್ರ ಅವರ ಮಕ್ಕಳನ್ನ ಇಂಗ್ಲೀಷ್ ಮಾಧ್ಯಮದಲ್ಲೇ ಶಿಕ್ಷಣ ನೀಡಿದರು.
   ಪ್ರತಿ ವರ್ಷ ನಮ್ಮ ಹಳ್ಳಿಗಳಲ್ಲಿ ಕನ್ನಡ ರಾಜ್ಯೋತ್ಸವ ಮಾಡುವ ಕನ್ನಡ ವೀರರು ಯಾರು ತಮ್ಮ ಮಕ್ಕಳನ್ನ ಕನ್ನಡ ಮಾಧ್ಯಮದಲ್ಲಿ ಓದಿಸುವುದಿಲ್ಲ ಆದ್ದರಿಂದ ಪುರುಶೋತ್ತಮ ಬಿಳಿಮಲೆ ಅವರ ಪತ್ರಿಕಾ ಹೇಳಿಕೆ ಗೊಂದಲ ಉಂಟು ಮಾಡಿದೆ.
   ಶೃಂಗೇರಿಯ ಶ್ರೀನಿವಾಸ ಮೂರ್ತಿ ಅವರ ಪೇಸ್ ಬುಕ್ ನಲ್ಲಿ ಕೆಲ ವಿಚಾರ ವಿನಿಮಯ ಆದ ಆಯ್ದ ಪೋಸ್ಟುಗಳು ವಿಚಾರ ಮಾಡುವಂತದ್ದಾಗಿದೆ ಆದ್ದರಿಂದ ಇಲ್ಲಿ ಓದುಗರ ಅವಾಗಾಹನೆಗಾಗಿ ಇಲ್ಲಿ ದಾಖಲಿಸಿದ್ದೇನೆ ನೋಡಿ ನಿಮ್ಮ ಅಭಿಪ್ರಾಯ ಬರೆಯಿರಿ...

 #ಮನು_ಜೋಗಿಬೈಲು ಬರೆದ ಅಭಿಪ್ರಾಯ...
..... "ಏನೂ ಬೇಕಾಗಿಲ್ಲ ಆಂಗ್ಲಮಾದ್ಯಮವೇ ಇರಲಿ ನಾವೆಲ್ಲ ಕನ್ನಡದಲ್ಲಿ ಓದಿ ತೊಂದರೆ ಪಟ್ಟಿದ್ದು ಸಾಕು. ಮಾತೆತಿದ್ದರೆ ಯಾರೋ ಮಾಹಾನ್ ಸಾದಕರನ್ನು ಅವರು ಕನ್ನಡ ಮಾದ್ಯಮ ಇವರು ಕನ್ನಡ ಮಾದ್ಯಮ ಅನ್ನುವುದು. ನಾವು ನೋಡಬೇಕಾಗಿರುವುದು ಯಾರೋ ಕೆಲವೇ ಕೆಲವು ಜನ ಬುದ್ದಿವಂತರ ಸಾದನೆಯನ್ನಲ್ಲ ಅವರು ಎಲ್ಲಿದ್ದರೂ ಸಾಧನೆ ಮಾಡುತ್ತಾರೆ. ನಾವು ನೋಡಬೇಕಿರುವುದು ಕನ್ನಡ ಮಾದ್ಯಮದಲ್ಲಿ ಓದಿದ ಒಟ್ಟು ವಿದ್ಯಾರ್ಥಿಗಳ ಸರಾಸರಿ ಜೀವನಮಟ್ಟ ಏನು ಇಂಗ್ಲೀಷ್ ಮೀಡಿಯಮ್ಮಿನಲ್ಲಿ ಓದಿದವರ ಸರಾಸರಿ ಜೀವನಮಟ್ಟ ಏನು ಎಂಬುದನ್ನು ತುಲನೆ ಮಾಡಿ ನೋಡಿ. ಆಗ ನಿಜ ತಿಳಿಯುತ್ತದೆ. ಈ ಸಾಹಿತಿಗಳು ಆವು ಇವೆಲ್ಲ ಬರೀ ಕಂಡೋರ ಮಕ್ಕಳನ್ನ ಬಾವಿಗೆ ದೂಡಿ ಮಜಾ ನೋಡುವವರಷ್ಟೇ ಇವರ ಮಕ್ಕಳು ಯಾವುದೋ ಒಳ್ಳೇ ಇಂಗ್ಲೀಷ್ ಮೀಡಿಯಂ ಖಾಸಗಿ ಶಾಲೆಯಲ್ಲಿ ಓದ್ತಾ ಇರ್ತಾರೆ. "

#ಮನೋಹರ_L_G_ಗೌಡರ ಅಭಿಪ್ರಾಯ....
...."ಬೇಡ ಅಂದಮೇಲೆ ಯಾರಿಗೂ ಬೇಡ ಬಿಳಿ ಮಲೆಯವರು ಮೊದಲು ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆ ನಡುವಿನ ವ್ಯತ್ಯಾಸವನ್ನು ಸರಿಪಡಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು ಎಲ್ಲ ಸರ್ಕಾರಿ ಖಾಸಗಿ ಶಾಲೆಗಳಲ್ಲಿ ಒಂದೇ ರೀತಿಯ ಪುಸ್ತಕ ಒಂದೇ ರೀತಿಯ ಪಾಠ ನಡೆಯಬೇಕು ಖಾಸಗಿ ಶಾಲೆಯಲ್ಲಿ  ಬಡವನ ಮಕ್ಕಳು ಕನ್ನಡ ಕಲಿತು ಬೀದಿಗೆ ಬರೋದು ಬೇಡ ಅಂದ್ರೆ ಕನ್ನಡ ಕಲಿತರೆ ಬೀದಿಗೆ ಬರುತ್ತಾರೆ ಅರ್ಥ ಯಾಕೆ ಅಂದ್ರೆ ಇವತ್ತು ಅಯೋಗ್ಯ ಸರ್ಕಾರಗಳು ಜಾರಿಗೆ ತಂದಿರುವ ನೀಟು ವ್ಯವಸ್ಥೆಯಿಂದ ಹಿಡಿದು ಎಲ್ಲ ವ್ಯವಸ್ಥೆಗಳು ಕೂಡ ಅಸಹಾಯಕ ಹಾಗೂ ಬಡ ಮಧ್ಯಮ ವರ್ಗದ ಮಕ್ಕಳಿಗೆ ಮರಣ ಶಾಸನ ಆಗ್ತಾ ಇದೆ.."

#ಶ್ರೀನಿವಾಸಮೂರ್ತಿಗಳ ಅಭಿಪ್ರಾಯ....
...."ಈ ಸಾಹಿತಿಗಳು ಒಂದು ರೀತಿಯ ಗಂಡು ವೇಶ್ಯೆಯರು ಎಂದು ಕುಂವೀರಭದ್ರಪ್ಪ ಕರೆದಿರುವುದು ಸರಿಯಾಗಿದೆ ಇವರ ಮಕ್ಕಳು ವಿದೇಶದಲ್ಲಿರಬೇಕು ಬಡವರ ಮಕ್ಕಳಿಗೆ ಉಪದೇಶ ಕೊಡಬೇಕ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ಯಾವ ಮಾನದಂಡದಲ್ಲೂ ನೀಡಲಾಗುವುದಿಲ್ಲ"....

#ನನ್ನ ಅಭಿಪ್ರಾಯ....
....."5 ನೇ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾಧ್ಯಮ ಅನ್ನುತ್ತಿದ್ದ ಸಕಾ೯ರದ ಅನುಮತಿ ಇದ್ದಾಗ 1ರಿಂದ 4 ನೇ ತರಗತಿ ಕನ್ನಡ ಮಾಧ್ಯಮದಲ್ಲೇ ಬೋದಿಸ ಬೇಕೆಂದಿದ್ದಾಗ ಶಿಕ್ಷಣ ಇಲಾಖೆ ನಿಗದಿ ಮಾಡಿದ ಲಂಚ ನೀಡಿ ಇಂಗ್ಲೀಷ್ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ನೀಡುತ್ತಿದ್ದನ್ನ ನೋಡಿದ್ದೆ,ಕಾನ್ವೆಂಟ್ಗಳಲ್ಲಿ ಮಾತ್ರ ಕನ್ನಡ ಮೀಡಿಯಂ ಇರುವುದಿಲ್ಲ ಅಲ್ಲಿ ನಮ್ಮ ಸಾಹಿತಿಗಳು ಮತ್ತು ಕನ್ನಡ ಹೋರಾಟಗಾರರು ತಮ್ಮ ಮಕ್ಕಳನ್ನ ಓದಿಸುತ್ತಾರೆ...."

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ