Skip to main content

Blog number 2203. ಪುರುಶೊತ್ತಮ ಬಿಳಿಮಲೆ ಅವರ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೇಡ ಎಂಬ ಹೇಳಿಕೆ ಸರ್ಕಾರದಿಂದ ಜಾರಿ ಸಾಧ್ಯವೇ?...

#ಪುರುಶೋತ್ತಮಬಿಳಿಮಲೆ

#ಕರ್ನಾಟಕ_ಸರ್ಕಾರದ

#ಕನ್ನಡ_ಅಭಿವೃದ್ಧಿ_ಪ್ರಾಧಿಕಾರದ_ಅಧ್ಯಕ್ಷರು

#ಅವರ_ಹೇಳಿಕೆ_ಒತ್ತಾಯ

#ಪ್ರಾಥಮಿಕ_ಶಾಲೆಗಳಲ್ಲಿ_ಆಂಗ್ಲ_ಮಾಧ್ಯಮ_ಬೇಡ

#ಇದರ_ಸಾದಕ_ಭಾದಕ_ಏನು?

  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರ ಹೇಳಿಕೆ ಸ್ವಾಗತಾರ್ಹ ಆದರೂ ಇದು ಸಾಧ್ಯವಾ? ಕರ್ನಾಟಕದಲ್ಲಿನ ಸರ್ಕಾರಿ ಶಾಲೆಗೆ ಮಾತ್ರವಾ? ಅಥವ ರಾಜ್ಯದ ಎಲ್ಲಾ ಖಾಸಾಗಿ ಮತ್ತು ಸೆಂಟ್ರಲ್ ಸಿಲಬಸ್ ಶಾಲೆಗಳಿಗೂ ಅನ್ವಯವಾ? ಸರ್ವೋಚ್ಚ ನಾಯಾಲಯದ ತೀರ್ಪುಗಳು ಏನಿದೆ? ಎಂಬ ಅನೇಕ ರೀತಿ ಚರ್ಚಿಗಳು ಸಾಮಾಜಿಕ ಜಾಲತಾಣದಲ್ಲಿ ಗಮನಿಸಬಹುದು.
  ಪ್ರಾಥಮಿಕ ಶಿಕ್ಷಣ 1 ರಿಂದ 4 ರವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿಸಿ 5 ರಿಂದ 10 ನೇ ತರಗತಿ ತನಕ ಇಂಗ್ಲಿಷ್ ಮಾಧ್ಯಮದ ಅನುಮತಿ ಪಡೆದ ಶಾಲೆಗಳು ಈ ಆದೇಶ ಪಾಲಿಸುವುದೇ ಇಲ್ಲ ರಾಜಾರೋಸ್ತಾಗಿ ಇಂಗ್ಲಿಷ್ ಮಾಧ್ಯಮ ಶಾಲೆ ಅಂತ ಬೋರ್ಡ್ ಹಾಕಿ ಕೊಂಡು ಇಂಗ್ಲೀಷ್ ನಲ್ಲೇ ಪಾಠ ಮಾಡುತ್ತಾರೆ ಕನ್ನಡ ಮಾತಾಡಿದರೆ ದಂಡ ಇದೆಲ್ಲ ಸಣ್ಣ ಸಣ್ಣ ಹಳ್ಳಿಗಳಲ್ಲಿ ಕಾನ್ವೆಂಟ್ ಶಿಕ್ಷಣದ ಪ್ಯಾಶನ್ ಶುರುವಾಗಿದೆ ಇದಕ್ಕೆ ಪ್ರತಿಫಲವಾಗಿ ಶಿಕ್ಷಣ ಇಲಾಖೆಗೆ ನಿಗದಿ ಪಡಿಸಿದ ಲಂಚ ತಲುಪಿಸ ಬೇಕು.
   ನಾನು ನನ್ನ ಮಕ್ಕಳನ್ನ ಸರ್ಕಾರಿ ಅಂಗನವಾಡಿಯಿಂದ ದ್ವಿತೀಯ puc ತನಕ ನಮ್ಮ ಊರಿನ ಸರ್ಕಾರಿ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿಸಿದೆ ನನಗೆ ಇದಕ್ಕೆಲ್ಲ ಪ್ರೇರಣೆ ಆದ ಸಾಹಿತಿಗಳು ಕನ್ನಡ ಹೋರಾಟಗಾರರು ಮಾತ್ರ ಅವರ ಮಕ್ಕಳನ್ನ ಇಂಗ್ಲೀಷ್ ಮಾಧ್ಯಮದಲ್ಲೇ ಶಿಕ್ಷಣ ನೀಡಿದರು.
   ಪ್ರತಿ ವರ್ಷ ನಮ್ಮ ಹಳ್ಳಿಗಳಲ್ಲಿ ಕನ್ನಡ ರಾಜ್ಯೋತ್ಸವ ಮಾಡುವ ಕನ್ನಡ ವೀರರು ಯಾರು ತಮ್ಮ ಮಕ್ಕಳನ್ನ ಕನ್ನಡ ಮಾಧ್ಯಮದಲ್ಲಿ ಓದಿಸುವುದಿಲ್ಲ ಆದ್ದರಿಂದ ಪುರುಶೋತ್ತಮ ಬಿಳಿಮಲೆ ಅವರ ಪತ್ರಿಕಾ ಹೇಳಿಕೆ ಗೊಂದಲ ಉಂಟು ಮಾಡಿದೆ.
   ಶೃಂಗೇರಿಯ ಶ್ರೀನಿವಾಸ ಮೂರ್ತಿ ಅವರ ಪೇಸ್ ಬುಕ್ ನಲ್ಲಿ ಕೆಲ ವಿಚಾರ ವಿನಿಮಯ ಆದ ಆಯ್ದ ಪೋಸ್ಟುಗಳು ವಿಚಾರ ಮಾಡುವಂತದ್ದಾಗಿದೆ ಆದ್ದರಿಂದ ಇಲ್ಲಿ ಓದುಗರ ಅವಾಗಾಹನೆಗಾಗಿ ಇಲ್ಲಿ ದಾಖಲಿಸಿದ್ದೇನೆ ನೋಡಿ ನಿಮ್ಮ ಅಭಿಪ್ರಾಯ ಬರೆಯಿರಿ...

 #ಮನು_ಜೋಗಿಬೈಲು ಬರೆದ ಅಭಿಪ್ರಾಯ...
..... "ಏನೂ ಬೇಕಾಗಿಲ್ಲ ಆಂಗ್ಲಮಾದ್ಯಮವೇ ಇರಲಿ ನಾವೆಲ್ಲ ಕನ್ನಡದಲ್ಲಿ ಓದಿ ತೊಂದರೆ ಪಟ್ಟಿದ್ದು ಸಾಕು. ಮಾತೆತಿದ್ದರೆ ಯಾರೋ ಮಾಹಾನ್ ಸಾದಕರನ್ನು ಅವರು ಕನ್ನಡ ಮಾದ್ಯಮ ಇವರು ಕನ್ನಡ ಮಾದ್ಯಮ ಅನ್ನುವುದು. ನಾವು ನೋಡಬೇಕಾಗಿರುವುದು ಯಾರೋ ಕೆಲವೇ ಕೆಲವು ಜನ ಬುದ್ದಿವಂತರ ಸಾದನೆಯನ್ನಲ್ಲ ಅವರು ಎಲ್ಲಿದ್ದರೂ ಸಾಧನೆ ಮಾಡುತ್ತಾರೆ. ನಾವು ನೋಡಬೇಕಿರುವುದು ಕನ್ನಡ ಮಾದ್ಯಮದಲ್ಲಿ ಓದಿದ ಒಟ್ಟು ವಿದ್ಯಾರ್ಥಿಗಳ ಸರಾಸರಿ ಜೀವನಮಟ್ಟ ಏನು ಇಂಗ್ಲೀಷ್ ಮೀಡಿಯಮ್ಮಿನಲ್ಲಿ ಓದಿದವರ ಸರಾಸರಿ ಜೀವನಮಟ್ಟ ಏನು ಎಂಬುದನ್ನು ತುಲನೆ ಮಾಡಿ ನೋಡಿ. ಆಗ ನಿಜ ತಿಳಿಯುತ್ತದೆ. ಈ ಸಾಹಿತಿಗಳು ಆವು ಇವೆಲ್ಲ ಬರೀ ಕಂಡೋರ ಮಕ್ಕಳನ್ನ ಬಾವಿಗೆ ದೂಡಿ ಮಜಾ ನೋಡುವವರಷ್ಟೇ ಇವರ ಮಕ್ಕಳು ಯಾವುದೋ ಒಳ್ಳೇ ಇಂಗ್ಲೀಷ್ ಮೀಡಿಯಂ ಖಾಸಗಿ ಶಾಲೆಯಲ್ಲಿ ಓದ್ತಾ ಇರ್ತಾರೆ. "

#ಮನೋಹರ_L_G_ಗೌಡರ ಅಭಿಪ್ರಾಯ....
...."ಬೇಡ ಅಂದಮೇಲೆ ಯಾರಿಗೂ ಬೇಡ ಬಿಳಿ ಮಲೆಯವರು ಮೊದಲು ಖಾಸಗಿ ಶಾಲೆ ಹಾಗೂ ಸರ್ಕಾರಿ ಶಾಲೆ ನಡುವಿನ ವ್ಯತ್ಯಾಸವನ್ನು ಸರಿಪಡಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು ಎಲ್ಲ ಸರ್ಕಾರಿ ಖಾಸಗಿ ಶಾಲೆಗಳಲ್ಲಿ ಒಂದೇ ರೀತಿಯ ಪುಸ್ತಕ ಒಂದೇ ರೀತಿಯ ಪಾಠ ನಡೆಯಬೇಕು ಖಾಸಗಿ ಶಾಲೆಯಲ್ಲಿ  ಬಡವನ ಮಕ್ಕಳು ಕನ್ನಡ ಕಲಿತು ಬೀದಿಗೆ ಬರೋದು ಬೇಡ ಅಂದ್ರೆ ಕನ್ನಡ ಕಲಿತರೆ ಬೀದಿಗೆ ಬರುತ್ತಾರೆ ಅರ್ಥ ಯಾಕೆ ಅಂದ್ರೆ ಇವತ್ತು ಅಯೋಗ್ಯ ಸರ್ಕಾರಗಳು ಜಾರಿಗೆ ತಂದಿರುವ ನೀಟು ವ್ಯವಸ್ಥೆಯಿಂದ ಹಿಡಿದು ಎಲ್ಲ ವ್ಯವಸ್ಥೆಗಳು ಕೂಡ ಅಸಹಾಯಕ ಹಾಗೂ ಬಡ ಮಧ್ಯಮ ವರ್ಗದ ಮಕ್ಕಳಿಗೆ ಮರಣ ಶಾಸನ ಆಗ್ತಾ ಇದೆ.."

#ಶ್ರೀನಿವಾಸಮೂರ್ತಿಗಳ ಅಭಿಪ್ರಾಯ....
...."ಈ ಸಾಹಿತಿಗಳು ಒಂದು ರೀತಿಯ ಗಂಡು ವೇಶ್ಯೆಯರು ಎಂದು ಕುಂವೀರಭದ್ರಪ್ಪ ಕರೆದಿರುವುದು ಸರಿಯಾಗಿದೆ ಇವರ ಮಕ್ಕಳು ವಿದೇಶದಲ್ಲಿರಬೇಕು ಬಡವರ ಮಕ್ಕಳಿಗೆ ಉಪದೇಶ ಕೊಡಬೇಕ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ಯಾವ ಮಾನದಂಡದಲ್ಲೂ ನೀಡಲಾಗುವುದಿಲ್ಲ"....

#ನನ್ನ ಅಭಿಪ್ರಾಯ....
....."5 ನೇ ತರಗತಿಯಿಂದ ಮಾತ್ರ ಇಂಗ್ಲಿಷ್ ಮಾಧ್ಯಮ ಅನ್ನುತ್ತಿದ್ದ ಸಕಾ೯ರದ ಅನುಮತಿ ಇದ್ದಾಗ 1ರಿಂದ 4 ನೇ ತರಗತಿ ಕನ್ನಡ ಮಾಧ್ಯಮದಲ್ಲೇ ಬೋದಿಸ ಬೇಕೆಂದಿದ್ದಾಗ ಶಿಕ್ಷಣ ಇಲಾಖೆ ನಿಗದಿ ಮಾಡಿದ ಲಂಚ ನೀಡಿ ಇಂಗ್ಲೀಷ್ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ನೀಡುತ್ತಿದ್ದನ್ನ ನೋಡಿದ್ದೆ,ಕಾನ್ವೆಂಟ್ಗಳಲ್ಲಿ ಮಾತ್ರ ಕನ್ನಡ ಮೀಡಿಯಂ ಇರುವುದಿಲ್ಲ ಅಲ್ಲಿ ನಮ್ಮ ಸಾಹಿತಿಗಳು ಮತ್ತು ಕನ್ನಡ ಹೋರಾಟಗಾರರು ತಮ್ಮ ಮಕ್ಕಳನ್ನ ಓದಿಸುತ್ತಾರೆ...."

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...