Skip to main content

Blog number 2217. ಆನಂದಪುರಂನಿಂದ ಸಿಂಹದಾಮದವರೆಗೆ ಹೊನ್ನಾವರ ಚಿತ್ತೂರು ರಾಷ್ಟ್ರೀಯ ಹೆದ್ದಾರಿ 69 ನಾಲ್ಕು ಲೇನ್ ರಸ್ತೆ.

#ಆನಂದಪುರಂನಿಂದ_ಶಿವಮೊಗ್ಗ_ಸಿಂಹದಾಮದ_ತನಕ

#ಚತುಷ್ಪಾದ_ರಾಷ್ಟ್ರೀಯ_ಹೆದ್ದಾರಿ_ಎಲ್ಲೆಲ್ಲಿಂದ_ಮಾಹಿತಿ

#ಹೊನ್ನಾವರ_ಚಿತ್ತೂರು_ರಾಷ್ಟ್ರೀಯ_ಹೆದ್ದಾರಿ_69

#ಶಿವಮೊಗ್ಗ_ಸಿಂಹದಾಮದಿಂದ_ಆನಂದಪುರಂವರೆಗೆ_ನಾಲ್ಕು_ಲೇನ್

#ಅಪಘಾತ_ವಲಯದ_ಬ್ಲಾಕ್_ಸ್ಪಾಟ್_ಗಳಾದ

#ಗಿಳಾಲಗುಂಡಿ_ಕುಣೇಹೊಸೂರು_ತುಪ್ಪೂರು_ಚೋರಡಿ_ಸ್ಪಾಟ್

#ಬದಲಿಸಿ_ನೇರ_ಮಾಡಿದ್ದಾರೆ

#ಕುಂಸಿಗೆ_ಬೈಪಾಸ್_ಆಗಲಿದೆ

#ಚೊರಡಿ_ತುಪ್ಪೂರು_ಅಯನೂರು_ರಸ್ತೆ_ಅಗಲಿಕರಣ

  ನಿನ್ನೆಯ ಲೇಖನದಲ್ಲಿ ಆನಂದಪುರOನಿಂದ ಶಿವಮೊಗ್ಗ ಮಾರ್ಗದ ಚೆನ್ನಕೊಪ್ಪದವರೆಗಿನ ರಾಷ್ಟ್ರೀಯ ಹೆದ್ದಾರಿ 69 (ಹೊನ್ನಾವರ ಚಿತ್ತೂರು) 4 ಲೇನ್ ಕಾಮಗಾರಿ ಮಾಹಿತಿ ದಾಖಲಿಸಿದ್ದೆ.
 ಈ ಲೇಖನದಲ್ಲಿ ಆನಂದಪುರಂ ಹೋಬಳಿಯ ಆಚಾಪುರ ಗ್ರಾಮಪಂಚಾಯಿತಿಯ ಚೆನ್ನಕೊಪ್ಪದಿಂದ ನೇರವಾಗಿ ರಾ.ಹೆ. ತಂಗಳವಾಡಿ ರಸ್ತೆಯಿಂದ ಕೊಲ್ಲಿಬಚ್ಚಲು ಆಣೆಕಟ್ಟಿನ ಆಚೆ ಬದಿಯಿಂದ ಕುಣೇಹೊಸೂರು ನೇರವಾಗಿ ಸೇರಲಿದೆ.
  ಇದರಿಂದ ಅಪಘಾತದ ಬ್ಲಾಕ್ ಸ್ಪಾಟ್ ಆಗಿದ್ದ ಗಿಳಾಲಗುಂಡಿ ಕ್ರಾಸ್ ಬದಲಾಯಿಸಲಾಗಿದೆ.
  ಕುಣೇಹೊಸೂರು ತುಪ್ಪೂರು ಮಧ್ಯದ ದೀರ್ಘ ತಿರುವಾದ ಇನ್ನೊಂದು ಬ್ಲಾಕ್ ಸ್ಪಾಟ್ ಬದಲಿಸಿ ಕುಣೇಹೊಸೂರು- ತುಪ್ಪೂರು - ಜೋರಡಿ ನೇರ ಮಾರ್ಗ ಮಾಡಲಾಗಿರುವುದರಿಂದ ತುಪ್ಪೂರು ಚೊರಡಿಯಲ್ಲಿ ರಾ.ಹೆ. ನಾಲ್ಕು ಲೇನ್ ಮಾರ್ಗಕ್ಕಾಗಿ ರಸ್ತೆ ಅಗಲಿಕರಣ ಆಗಲಿದೆ.
   ಚೊರಡಿಯಿಂದ ಕುಮದ್ವತಿ ಸೇತುವೆ ಮತ್ತು ದರ್ಗಾದವರೆಗೆ ಅಪಘಾತ ವಲಯ ಆಗಿತ್ತು ಈಗ ರಾ.ಹೆದ್ದಾರಿ ಚೊರಡಿಯಿಂದ ಕುಂಸಿ ತನಕ ನೇರಗೊಳಿಸಿದ್ದು ಕುಮದ್ವತಿ ನದಿಗೆ ಹೊಸದಾದ ಮೂರನೇ ಸೇತುವೆ ನಿರ್ಮಾಣ ಆಗಲಿದೆ.
  ಕುಂಸಿ ಎಪಿಎಂಸಿ ಹಿಂಬಾಗದಿಂದ ದಾನಂದಿ ತನಕ ರಾಷ್ಟ್ರೀಯ ಹೆದ್ದಾರಿಗೆ ಕುಂಸಿ ಬೈಪಾಸ್ ಆಗಲಿದೆ ಇದರಿಂದ ಕುಂಸಿ ನಾಗರೀಕರಿಗೆ ರಸ್ತೆ ಅಗಲೀಕರಣದ ಬಿಸಿ ತಟ್ಟುವುದಿಲ್ಲ.
 ಕುಂಸಿ ದಾನಂದಿಯಿಂದ ಅಯನೂರು ಊರ ಒಳಗಿನಿಂದ ರಸ್ತೆ ಅಗಲೀಕರಣದ ಜೊತೆ ಸಿಂಹ ದಾಮದವರೆಗೆ 4 ಲೇನ್ ರಾ.ಹೆ. 69 ನಿರ್ಮಾಣವಾಗಿ ಈಗಾಗಲೇ ಅಲ್ಲಿಯವರೆಗೆ ಮಾಚೇನಹಳ್ಳಿಯಿಂದ ಬಂದು ತಲುಪಿರುವ 4 ಲೇನ್ ರಾ.ಹೆದ್ದಾರಿಗೆ ತಲುಪಲಿದೆ.
   (ಆನಂದಪುರಂನಿಂದ ಹೊನ್ನಾವರ ರಾ.ಹೆ.69 ರ ಮಾಹಿತಿ ಮುಂದಿನ ದಿನಗಳಲ್ಲಿ)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...