Skip to main content

Blog number 2188. ಅಂಬ್ರಯ್ಯ ಮಠ ಇವರ ಪತ್ರ

#ಕೆಳದಿ_ಅರಸರ_ಮೂರನೆ_ರಾಜದಾನಿ_ಬಿದನೂರು_ನಗರದ

#ಅಮೋಘ_ವಿವರಣೆ_ಡಿಜಿಟಲ್_ಮಾಧ್ಯಮದಲ್ಲಿ_ನೀಡುತ್ತಿರುವ

#ನಮ್ಮ_ಜಿಲ್ಲೆಯ_ಇತಿಹಾಸ_ಸಂಶೋದಕ_ಅಂಬ್ರಯ್ಯ_ಮಠ್_ಪ್ರತಿಕ್ರಿಯೆ

#ನಾನು_ಅವರಿಗೆ_ಶಿವಮೊಗ್ಗ_ಜಿಲ್ಲೆಯ_ಉದಯೋನ್ಮುಖ_ಇತಿಹಾಸ_ಸಂಶೋಧಕರೆಂದು_ಬರೆದಿದ್ದೆ

#ಕಾರಣ_ಈ_ಹಿಂದೆ_ಖ್ಯಾತ_ಇತಿಹಾಸ_ಸಂಶೋದಕ_ಎಂದು_ಕರೆದಿದ್ದಕ್ಕೆ

#ಕೆಲವರು_ತಗಾದೆ_ವ್ಯಕ್ತ_ಪಡಿಸಿದ್ದರು.


ಅಂಬ್ರಯ್ಯ ಮಠರೆ ನಿಮ್ಮ ಇತಿಹಾಸ ಜ್ಞಾನಕ್ಕೆ ದನ್ಯೋಸ್ಮಿ, 55 ವರ್ಷದಿಂದ ಬಿದನೂರು ಕೋಟೆ ನೋಡುತ್ತಾ ಬಂದಿದ್ದೇನೆ, ಕೋಟೆ ಬಾಗಿಲಿನ ಎದರು ಪ್ರವಾಸಿ ಮಂದಿರ ಇತ್ತು ಅಲ್ಲಿ ನಮ್ಮ ಪ್ರೀತಿಯ ರಂಗಣ್ಣ ಇದ್ದರು ನಂತರ ಅದು ನಶಿಸಿತು ರಂಗಣ್ಣ ಸಾಗರದ ತಹಸೀಲ್ದಾರ್ ಕಛೇರಿಯಲ್ಲಿ ವೃತ್ತಿ ಮಾಡಿ ನಿವೃತ್ತರಾದರು.
  ನಗರ ಕೋಟಿಯಲ್ಲಿ ಪುರಾತತ್ವ ಇಲಾಖೆಯಲ್ಲಿ ಸೇವೆಯಲ್ಲಿದ್ದ ಪ್ರಕಾಶ್ ಗೆ ಅವರ ಮೀಸೆಯಿಂದ ಮೀಸೆ ಪ್ರಕಾಶ್ ಅನ್ನುತ್ತಿದ್ದರು ನಂತರ ಅವರು ಶಿವಮೊಗ್ಗ ಅಬಕಾರಿ ಇಲಾಖೆ ನೌಕರ ಸಂಘದ ಅಧ್ಯಕ್ಷರಾಗಿದ್ದರು.
   ಅವರ ಪುತ್ರಿ ಸಾಗರ ನಗರಸಭಾ ಅಧ್ಯಕ್ಷೆ ಆಗಿದ್ದರು, ನಾನು ಈಜು ಕಲಿತಿದ್ದು ದೇವಗಂಗೆ ಕೊಳ ಹಾಗಾಗಿ ನನಗೂ ನಿಮ್ಮಂತೆ ಬಿದನೂರು ನಗರ ಹೆಚ್ಚು ಆಕರ್ಷಣೆಯ ಸ್ಥಳ ಆದರೆ ಕೋಟೆ ಸ್ಮಾರಕದ ಎದರು ನಿಂತು ನೀವು ಕೆಳದಿ ಅರಸರ ಇತಿಹಾಸ ಹೇಳುವ ಪರಿ ಮಾತ್ರ ಅದ್ವಿತೀಯ.

ಅಂಬ್ರಯ್ಯ ಮಠರ ಪತ್ರ.....
     ನಮಸ್ತೆ ಅರುಣ್ ಪ್ರಸಾದ್ ಅವರೇ .ಮೂಲತಹ ನನ್ನೂರು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಾಳಿಕೋಟಿ ಹತ್ತಿರದ ಕೊಡಗಾನೂರು.ಆದರೆ ಆ ಊರಿನ ಸಂಪರ್ಕ ಕಳೆದುಕೊಂಡು ಸುಮಾರು 50 ವರ್ಷಗಳೇ ಆಯಿತು.ನಾನೀಗ ಬಿದನೂರು ನಗರದವನು.ತಾವು ನನ್ನನ್ನು ಜಿಲ್ಲೆಯ ಉದಯೋನ್ಮುಖ ಇತಿಹಾಸ ಸಂಶೋಧಕ ಎಂದು ಕರೆದದ್ದಕ್ಕೆ ಖಂಡಿತವಾಗಿಯೂ ಬೇಸರವಿಲ್ಲ.ಏಕೆಂದರೆ ನಾನು ಈಗಲೂ ಇತಿಹಾಸಕ್ಕೆ ಹೊಸಬನೇ.ಈಗಲೂ ನಾನು ಉದಯೋನ್ಮುಖನೇ.ನಾನೀಗಲು ಇತಿಹಾಸದ ವಿದ್ಯಾರ್ಥಿಯೇ.ಹಾಗಾಗಿ ತಾವು 'ಉದಯೋನ್ಮುಖ' ಎಂದು ಕರೆದಿದ್ದರಲ್ಲಿ ತಪ್ಪಿಲ್ಲ .ಖ್ಯಾತ ಇತಿಹಾಸ ಸಂಶೋಧಕರ ನಾಡು ಶಿವಮೊಗ್ಗ ಜಿಲ್ಲೆ.ಆ ಇತಿಹಾಸ ಸಂಶೋಧಕರ ಮುಂದೆ ನಾನೀಗಲೂ ಎಳೆ ಯ. ತಾವು ನನ್ನ ಬಗ್ಗೆ ತೋರಿಸುತ್ತಿರುವ ಪ್ರೀತಿಗೆ ಶಿರಭಾಗಿದ್ದೇನೆ .ನನ್ನ ಜಂಗಮವಾಣಿ ಸಂಖ್ಯೆ ಬದಲಾಗಿದ್ದು ಇದೀಗ- 9480402712 ಈ ನಂಬರಿಗೆ ಸಂಪರ್ಕಿಸಬಹುದು.ಇದನ್ನು ತಮ್ಮ ಅವಗಾಹನೆಗೆ  ತರುತ್ತಿದ್ದೇನೆ ತಮ್ಮ ಇತಿಹಾಸ ಪ್ರೀತಿಯನ್ನು ಗಮನಿಸುತ್ತಲೇ ಬಂದವನು ನಾನು.ಆನಂದಪುರದ ಬಗ್ಗೆ ಅದೆಷ್ಟೊಂದು ತಿಳಿದುಕೊಂಡಿದ್ದೀರಿ.ತುಂಬಾ ಸಂತೋಷ ನನಗೆ.ನಿಮ್ಮಂಥವರು ಹೆಚ್ಚಾಗಲಿ ಎನ್ನುವುದೇ ನನ್ನ ಆಶಯ. ಪ್ರೀತಿ ಇರಲಿ.
ಅಂಬ್ರಯ್ಯ ಮಠ
ಬಿದನೂರು ನಗರ
14 -ಜೂನ್-2024

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...