Skip to main content

Blog number 2179. ಆನಂದಪುರಂನಲ್ಲಿ ಕೆಳದಿ ರಾಜ ನಿರ್ಮಿಸಿರುವ ರಾಣಿ ಚಂಪಕಾರ ಸ್ಮಾರಕ ಚಂಪಕ ಸರಸ್ಸು ವಿನಲ್ಲಿ ಕೊಳದ ಮಧ್ಯ ರಾಣಿ ಪೂಜಿಸುತ್ತಿದ್ದ ಶಿವಲಿಂಗ ತೆಗೆದು ಬಸವಣ್ಣನ ವಿಗ್ರಹ ಸ್ಥಾಪಿಸಲು ಅನುಮತಿ ನೀಡಿದವರು ಯಾರು?

#ಇತಿಹಾಸದ_ಪುಟದಲ್ಲಿ_ಇಕ್ಕೇರಿ_ಇತಿಹಾಸ

#ಮತ್ತಿಕೊಪ್ಪ_ಹೆಸರು_ಮತ್ತಿಮರದಿಂದ_ಬಂದಿದ್ದಲ್ಲ

#ಮದ್ದು_ಅರೆಯುವ_ಸ್ಥಳವಾದ್ದರಿಂದ_ಮತ್ತಿಕೊಪ್ಪ_ಆಯಿತು

#ಅಲ್ಲಿ_ಈಗಲೂ_ಇರುವ_ಮದ್ದು_ಅರೆಯುವ_ಕಲ್ಲು_ಸಾಕ್ಷಿ

#ರಾಜರ_ಸಂಸ್ಥಾನದ_ಸ್ಮಾರಕ_ಸಮಾದಿಗಳ_ಹೆಸರಿನ

#ಹಿನ್ನೆಲೆ_ಅಲ್ಲಿನ_ಇತಿಹಾಸಕ್ಕೆ_ಸಂಬಂದಪಟ್ಟಿರುತ್ತದೆ

#ಈಗಿನ_ಬರಹಗಾರರು_ಊರ_ಹೆಸರಿಗೆ_ಮೂಲ

#ಅಲ್ಲಿನ_ಹೂವಿನ_ಮರಗಳು_ಇತ್ಯಾದಿ_ವಾದ_ಸರಿಯಾ?

#ಆನಂದಪುರಂನ_ಕೆಳದಿ_ರಾಜರ_ಸ್ಮಾರಕ_ಚಂಪಕಸರಸ್ಸು_ಹೆಸರು_ರಾಣಿ_ಚಂಪಕಾಳಿಂದ_ಬಂದದ್ದಲ್ಲ

#ಸಂಪಿಗೆ_ಹೂವಿನಿಂದ_ಬಂದದ್ದು_ಎನ್ನುತ್ತಿದ್ದಾರೆ.

https://youtu.be/f3-Z1nNRk8A?feature=shared


   ಇವತ್ತಿನ ಡಿಜಿಟಲ್ ಮಾಧ್ಯಮದಲ್ಲಿ ಇಕ್ಕೇರಿ ಕೋಟೆ ವೀಕ್ಷಕರಿಗೆ ವಿವರಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಇತಿಹಾಸಕಾರ ಸಾಗರ ತಾಲೂಕಿನ ಹುಲಿ ಮನೆಯ ಹೆಚ್.ಕೆ. ಗಣಪತಿ ಇಕ್ಕೇರಿ ಸಮೀಪದ ಮತ್ತಿಕೊಪ್ಪದಲ್ಲಿ ಕೆಳದಿ ಅರಸರ ಕಾಲದ ಮದ್ದು ಅರೆಯುವ ಕಲ್ಲುಗಳನ್ನ ಮುಚ್ಚಲ್ಪಟ್ಟ ಮಣ್ಣುಗಳನ್ನು ತೆಗೆದು ವಿವರಿಸುವಾಗ ಆ ಊರಿಗೆ #ಮತ್ತಿಕೊಪ್ಪ ಎಂಬ ಹೆಸರು ಬರಲು ಕಾರಣವಾದ ಸ್ವಾರಸ್ಯದ ಕಥೆ ಹೇಳಿದ್ದಾರೆ.
   ಪ್ರತಿಯೊಂದು ಊರಿಗೆ ಸ್ಥಳಕ್ಕೆ ಒಂದು ಹೆಸರು ಇರುತ್ತದೆ ಅದಕ್ಕೆ ಕಾರಣವಾದ ಅಂಶಗಳನ್ನು ಕಾಲ ಕ್ರಮೇಣ ತಲೆಮಾರಿಗೆ ಮರೆತುಹೋಗಿರುತ್ತದೆ ಕೆಲ ಊರಿನ ಮೂಲ ಹೆಸರು ಆಡು ಭಾಷೆಯ ಉಚ್ಚಾರಣೆಯಲ್ಲಿ ಅಳಸಿ ಹೋಗುವುದು ಸಹಜ.
   ಈಗಿನ ಹೊಸ ತಲೆಮಾರು ತಮ್ಮ ಊರಿಗೆ ಇಂತಾ ಹೆಸರು ಬರಲು ಕಾರಣ ಏನು? ಎಂಬ ಪ್ರಶ್ನೆ ಆಯಾ ಕಾಲದ ಬರಹಗಾರರಿಗೆ ಸಾಹಿತಿಗಳಿಗೆ ಸಹಜವಾಗಿ ಕೇಳುತ್ತಾರೆ ಆದರೆ ಸ್ಥಳಿಯ ಇತಿಹಾಸ ಜನಪದ ಮೂಲ ತಿಳಿಯಲು ಹೋಗದ ಅಂತಹ ಕೆಲ ಬರಹಗಾರರು ಸಾಹಿತಿಗಳು ಈ ಊರಲ್ಲಿ ಇಂತಹ ಮರ ಹೆಚ್ಚು ಇದ್ದಿದ್ದರಿಂದ ಅಥವ ಈ ಊರಲ್ಲಿ ಇಂತಹ ಹೂವಿನ ಮರ ಹೆಚ್ಚು ಇದ್ದಿದ್ದರಿಂದ ಈ ಹೆಸರು ಬಂದಿದೆ ಅನ್ನುವುದನ್ನೇ ಜನ ನಂಬುತ್ತಾರೆ ಅಥವ ನಂಬಲೇ ಬೇಕು.
   ಇದೇ ರೀತಿ ಇಕ್ಕೇರಿ ಸಮೀಪದ ಮತ್ತಿಕೊಪ್ಪಕ್ಕೆ ಹೆಸರು ಬರಲು ಅಲ್ಲಿನ ಮತ್ತಿಮರ ಕಾರಣ ಎಂಬ ಸ್ಥಳಿಯರ ನಂಬಿಕೆ ತಪ್ಪು ಅಲ್ಲಿ ಕೆಳದಿ ಅರಸರ ಕಾಲದಲ್ಲಿ ಮದ್ದು ಅರೆಯುವ ಪ್ರದೇಶವಾಗಿತ್ತು ಅದಕ್ಕೆ ಪುರಾವೆ ಅಲ್ಲಿರುವ ಮದ್ದು ಅರೆಯುವ ಕಲ್ಲುಗಳು ಅಂತ ತಿಳಿಸಿದ್ದಾರೆ ಇದರಿಂದ ಮತ್ತಿಕೊಪ್ಪಕ್ಕೆ 400 ವರ್ಷಗಳ ಕೆಳದಿ ಅರಸರ ಇತಿಹಾಸ ಇದೆ ಇದು ಅರಸರ ಮದ್ದಿನ ಕಾರ್ಖಾನೆ ಆಗಿದ್ದ ಸ್ಥಳ ಎಂದರೆ ಆ ಊರಿನವರಿಗೂ ಹೆಮ್ಮೆಯೇ ಆಗಿದೆ.
   ನಮ್ಮ ಆನಂದಪುರಂನಲ್ಲಿ ಕೆಳದಿ ರಾಜ ನಿರ್ಮಿಸಿದ #ಚಂಪಕ_ಸರಸ್ಸು ಇದನ್ನ ಈಗ ಅಲ್ಲಿ ಸಂಪಿಗೆ ಮರ ಇದ್ದಿದ್ದರಿಂದ ಚಂಪಕ ಎಂಬ ಹೆಸರು ಬಂತು ಎಂಬ ಹೊಸ ಸಂಶೋಧನೆಗಳನ್ನು ಹೇಳುತ್ತಿದ್ದಾರೆ
  ಚಂಪಕ ಸರಸ್ಸು ಅಸ್ತಿತ್ವಕ್ಕೆ ಇರುವ ಜನಪದ ಕಥೆ, ಇಟಲಿ ಪ್ರವಾಸಿ ಡೊಲ್ಲಾವಲ್ಲೆ ಉಲ್ಲೇಖ ಮತ್ತು ಮೈಸೂರು ಸರ್ಕಾರದ ಗೆಜೆಟಿಯರ್ ಹಾಗೂ ಅಲ್ಲಿ ಸಾಕ್ಷಿಯಾಗಿ ಇರುವ ತಾಜ್ ಮಹಲ್ ಗಿಂತ ಮೊದಲು ನಿರ್ಮಿಸಿದ ಪ್ರೇಮ ಸೌದ ಚಂಪಕ ಸರಸ್ಸು ಸ್ಮಾರಕ ಸಾಕ್ಷಿಯಾಗಿದೆ.
   ಅಲ್ಲಿ ಕೊಳದ ಮಧ್ಯದ ಗುಡಿಯಲ್ಲಿ ರಾಜ ವೆಂಕಟಪ್ಪ ನಾಯಕ ಇರಿಸಿರುವ ರಾಣಿ ಚಂಪಕ ಪೂಜಿಸುತ್ತಿದ್ದ ಶಿವ ಲಿಂಗ ಕೂಡ ಇತ್ತೀಚಿಗೆ ಬದಲಿಸಿ ಅಲ್ಲಿ ಬಸವಣ್ಣನ ವಿಗ್ರಹ ಇರಿಸಿದ್ದಾರೆ ಇದೆಲ್ಲ ಯಾವ ಕಾರಣದಿಂದ ಈ ಸ್ಮಾರಕ ನಿರ್ಮಾಣದ 400 ನೇ ವರ್ಷಕ್ಕೆ ನಡೆಯುತ್ತಿದೆ ಗೊತ್ತಿಲ್ಲ.
   ಇದನ್ನು ಸ್ಥಳಿಯ ಮುರುಘಾ ಮಠದ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಾಡಿರುವುದಾಗಿ ಹೇಳುತ್ತಾರೆ ಸ್ವಾಮೀಜಿಗಳಿಗೆ ಇದು ಗೊತ್ತಿದೆಯೋ ಇಲ್ಲವೋ ಸ್ವಾಮಿಜೀಗಳೇ ಸೃಷ್ಟಿಕರಣ ನೀಡಬೇಕು.
  ಕೆಳದಿ ಅರಸರ ಶಿಲಾಶಾಸನ ಕಾಶಿಯ ಕೊಳದಲ್ಲಿ ಸ್ಥಳಾಂತರವಾದದ್ದನ್ನ ನಮ್ಮ ಊರಿನ ವಕೀಲರಾದ ಪ್ರಶಾಂತ್ ಅದನ್ನು ಮೂಲಸ್ಥಾನಕ್ಕೆ ತಲುಪಿಸಲು ಹೋರಾಟ ನಡೆಸಿ ಯಶಸ್ವಿ ಆಗಿದ್ದಾರೆ ಕಾಶಿ ಮಠಾದೀಶರು ಸ್ವತಃ ಭಾಗಿ ಆಗಿ ಸ್ಮಾರಕ ರಕ್ಷಣೆ ಮಾಡಿರುವುದು ಶ್ಲಾಘನೀಯ.
   ಈಗಲೂ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿರುವ ಈ ಕೆಳದಿ ಸ್ಮಾರಕ ಪುರಾತತ್ವ ಇಲಾಖೆ ವಶಕ್ಕೆ ತೆಗೆದುಕೊಂಡು ಹೆಚ್ಚಿನ ಸಂಶೋಧನೆ ಮಾಡಬೇಕು.
   ಈಗಾಗಲೇ  ಅಲ್ಲಿ ಕೆಲವು ಟ್ರಸ್ಟ್ ಗಳನ್ನು ಮಾಡಿಕೊಂಡು ಪ್ರಿ ವೆಡ್ಡಿಂಗ್ ಪೋಟೋ ಚಿತ್ರೀಕರಣಕ್ಕೆ 500 ರೂಪಾಯಿ ಶುಲ್ಕ ವಿಧಿಸಿ ಸಂಗ್ರಹಿಸುತ್ತಿರುವುದು ಮುಂದಿನ ದಿನಗಳಲ್ಲಿ ಈ ಪುರಾತನ ಸ್ಮಾರಕ ಖಾಸಾಗಿ ವಶಕ್ಕೆ ತೆಗೆದು ಕೊಳ್ಳುವ ಹುನ್ನಾರವೇ?.
   ಹಂಪೆಯ ರಾಗಿ ಕಾಳು ಗಣಪತಿ ಸಿಡಿಲಿನಿಂದ ಸೀಳು ಬಿಟ್ಟಾಗ ರಾಜ್ಯ ಸರ್ಕಾರ ಅದನ್ನು ಬದಲಿಸಲು ಮುಂದಾದಾಗ ಸಾಹಿತಿ ಶಿವರಾಮ ಕಾರಂತರು ನ್ಯಾಯಾಲಯದಿಂದ ತಡೆ ಆಜ್ಞೆ ತಂದಿದ್ದರು.
  ರಾಣಿ ಚಂಪಕಾ ಪೂಜಿಸುತ್ತಿದ್ದ ಶಿವಲಿಂಗ ಮೂಲಸ್ಥಾನದಲ್ಲಿ ತಂದಿಡದಿದ್ದರೆ ಅದು ಕೆಳದಿ ಇತಿಹಾಸಕ್ಕೆ ನಾವು ಮಾಡುವ ಅಪಚಾರವೇ ಆಗುತ್ತದೆ ಸಂಬಂದ ಪಟ್ಟವರು ತಕ್ಷಣ ಕಾರ್ಯಪ್ರವೃತ್ತರಾಗಲಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...