Skip to main content

Blog number 2179. ಆನಂದಪುರಂನಲ್ಲಿ ಕೆಳದಿ ರಾಜ ನಿರ್ಮಿಸಿರುವ ರಾಣಿ ಚಂಪಕಾರ ಸ್ಮಾರಕ ಚಂಪಕ ಸರಸ್ಸು ವಿನಲ್ಲಿ ಕೊಳದ ಮಧ್ಯ ರಾಣಿ ಪೂಜಿಸುತ್ತಿದ್ದ ಶಿವಲಿಂಗ ತೆಗೆದು ಬಸವಣ್ಣನ ವಿಗ್ರಹ ಸ್ಥಾಪಿಸಲು ಅನುಮತಿ ನೀಡಿದವರು ಯಾರು?

#ಇತಿಹಾಸದ_ಪುಟದಲ್ಲಿ_ಇಕ್ಕೇರಿ_ಇತಿಹಾಸ

#ಮತ್ತಿಕೊಪ್ಪ_ಹೆಸರು_ಮತ್ತಿಮರದಿಂದ_ಬಂದಿದ್ದಲ್ಲ

#ಮದ್ದು_ಅರೆಯುವ_ಸ್ಥಳವಾದ್ದರಿಂದ_ಮತ್ತಿಕೊಪ್ಪ_ಆಯಿತು

#ಅಲ್ಲಿ_ಈಗಲೂ_ಇರುವ_ಮದ್ದು_ಅರೆಯುವ_ಕಲ್ಲು_ಸಾಕ್ಷಿ

#ರಾಜರ_ಸಂಸ್ಥಾನದ_ಸ್ಮಾರಕ_ಸಮಾದಿಗಳ_ಹೆಸರಿನ

#ಹಿನ್ನೆಲೆ_ಅಲ್ಲಿನ_ಇತಿಹಾಸಕ್ಕೆ_ಸಂಬಂದಪಟ್ಟಿರುತ್ತದೆ

#ಈಗಿನ_ಬರಹಗಾರರು_ಊರ_ಹೆಸರಿಗೆ_ಮೂಲ

#ಅಲ್ಲಿನ_ಹೂವಿನ_ಮರಗಳು_ಇತ್ಯಾದಿ_ವಾದ_ಸರಿಯಾ?

#ಆನಂದಪುರಂನ_ಕೆಳದಿ_ರಾಜರ_ಸ್ಮಾರಕ_ಚಂಪಕಸರಸ್ಸು_ಹೆಸರು_ರಾಣಿ_ಚಂಪಕಾಳಿಂದ_ಬಂದದ್ದಲ್ಲ

#ಸಂಪಿಗೆ_ಹೂವಿನಿಂದ_ಬಂದದ್ದು_ಎನ್ನುತ್ತಿದ್ದಾರೆ.

https://youtu.be/f3-Z1nNRk8A?feature=shared


   ಇವತ್ತಿನ ಡಿಜಿಟಲ್ ಮಾಧ್ಯಮದಲ್ಲಿ ಇಕ್ಕೇರಿ ಕೋಟೆ ವೀಕ್ಷಕರಿಗೆ ವಿವರಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಉದಯೋನ್ಮುಖ ಇತಿಹಾಸಕಾರ ಸಾಗರ ತಾಲೂಕಿನ ಹುಲಿ ಮನೆಯ ಹೆಚ್.ಕೆ. ಗಣಪತಿ ಇಕ್ಕೇರಿ ಸಮೀಪದ ಮತ್ತಿಕೊಪ್ಪದಲ್ಲಿ ಕೆಳದಿ ಅರಸರ ಕಾಲದ ಮದ್ದು ಅರೆಯುವ ಕಲ್ಲುಗಳನ್ನ ಮುಚ್ಚಲ್ಪಟ್ಟ ಮಣ್ಣುಗಳನ್ನು ತೆಗೆದು ವಿವರಿಸುವಾಗ ಆ ಊರಿಗೆ #ಮತ್ತಿಕೊಪ್ಪ ಎಂಬ ಹೆಸರು ಬರಲು ಕಾರಣವಾದ ಸ್ವಾರಸ್ಯದ ಕಥೆ ಹೇಳಿದ್ದಾರೆ.
   ಪ್ರತಿಯೊಂದು ಊರಿಗೆ ಸ್ಥಳಕ್ಕೆ ಒಂದು ಹೆಸರು ಇರುತ್ತದೆ ಅದಕ್ಕೆ ಕಾರಣವಾದ ಅಂಶಗಳನ್ನು ಕಾಲ ಕ್ರಮೇಣ ತಲೆಮಾರಿಗೆ ಮರೆತುಹೋಗಿರುತ್ತದೆ ಕೆಲ ಊರಿನ ಮೂಲ ಹೆಸರು ಆಡು ಭಾಷೆಯ ಉಚ್ಚಾರಣೆಯಲ್ಲಿ ಅಳಸಿ ಹೋಗುವುದು ಸಹಜ.
   ಈಗಿನ ಹೊಸ ತಲೆಮಾರು ತಮ್ಮ ಊರಿಗೆ ಇಂತಾ ಹೆಸರು ಬರಲು ಕಾರಣ ಏನು? ಎಂಬ ಪ್ರಶ್ನೆ ಆಯಾ ಕಾಲದ ಬರಹಗಾರರಿಗೆ ಸಾಹಿತಿಗಳಿಗೆ ಸಹಜವಾಗಿ ಕೇಳುತ್ತಾರೆ ಆದರೆ ಸ್ಥಳಿಯ ಇತಿಹಾಸ ಜನಪದ ಮೂಲ ತಿಳಿಯಲು ಹೋಗದ ಅಂತಹ ಕೆಲ ಬರಹಗಾರರು ಸಾಹಿತಿಗಳು ಈ ಊರಲ್ಲಿ ಇಂತಹ ಮರ ಹೆಚ್ಚು ಇದ್ದಿದ್ದರಿಂದ ಅಥವ ಈ ಊರಲ್ಲಿ ಇಂತಹ ಹೂವಿನ ಮರ ಹೆಚ್ಚು ಇದ್ದಿದ್ದರಿಂದ ಈ ಹೆಸರು ಬಂದಿದೆ ಅನ್ನುವುದನ್ನೇ ಜನ ನಂಬುತ್ತಾರೆ ಅಥವ ನಂಬಲೇ ಬೇಕು.
   ಇದೇ ರೀತಿ ಇಕ್ಕೇರಿ ಸಮೀಪದ ಮತ್ತಿಕೊಪ್ಪಕ್ಕೆ ಹೆಸರು ಬರಲು ಅಲ್ಲಿನ ಮತ್ತಿಮರ ಕಾರಣ ಎಂಬ ಸ್ಥಳಿಯರ ನಂಬಿಕೆ ತಪ್ಪು ಅಲ್ಲಿ ಕೆಳದಿ ಅರಸರ ಕಾಲದಲ್ಲಿ ಮದ್ದು ಅರೆಯುವ ಪ್ರದೇಶವಾಗಿತ್ತು ಅದಕ್ಕೆ ಪುರಾವೆ ಅಲ್ಲಿರುವ ಮದ್ದು ಅರೆಯುವ ಕಲ್ಲುಗಳು ಅಂತ ತಿಳಿಸಿದ್ದಾರೆ ಇದರಿಂದ ಮತ್ತಿಕೊಪ್ಪಕ್ಕೆ 400 ವರ್ಷಗಳ ಕೆಳದಿ ಅರಸರ ಇತಿಹಾಸ ಇದೆ ಇದು ಅರಸರ ಮದ್ದಿನ ಕಾರ್ಖಾನೆ ಆಗಿದ್ದ ಸ್ಥಳ ಎಂದರೆ ಆ ಊರಿನವರಿಗೂ ಹೆಮ್ಮೆಯೇ ಆಗಿದೆ.
   ನಮ್ಮ ಆನಂದಪುರಂನಲ್ಲಿ ಕೆಳದಿ ರಾಜ ನಿರ್ಮಿಸಿದ #ಚಂಪಕ_ಸರಸ್ಸು ಇದನ್ನ ಈಗ ಅಲ್ಲಿ ಸಂಪಿಗೆ ಮರ ಇದ್ದಿದ್ದರಿಂದ ಚಂಪಕ ಎಂಬ ಹೆಸರು ಬಂತು ಎಂಬ ಹೊಸ ಸಂಶೋಧನೆಗಳನ್ನು ಹೇಳುತ್ತಿದ್ದಾರೆ
  ಚಂಪಕ ಸರಸ್ಸು ಅಸ್ತಿತ್ವಕ್ಕೆ ಇರುವ ಜನಪದ ಕಥೆ, ಇಟಲಿ ಪ್ರವಾಸಿ ಡೊಲ್ಲಾವಲ್ಲೆ ಉಲ್ಲೇಖ ಮತ್ತು ಮೈಸೂರು ಸರ್ಕಾರದ ಗೆಜೆಟಿಯರ್ ಹಾಗೂ ಅಲ್ಲಿ ಸಾಕ್ಷಿಯಾಗಿ ಇರುವ ತಾಜ್ ಮಹಲ್ ಗಿಂತ ಮೊದಲು ನಿರ್ಮಿಸಿದ ಪ್ರೇಮ ಸೌದ ಚಂಪಕ ಸರಸ್ಸು ಸ್ಮಾರಕ ಸಾಕ್ಷಿಯಾಗಿದೆ.
   ಅಲ್ಲಿ ಕೊಳದ ಮಧ್ಯದ ಗುಡಿಯಲ್ಲಿ ರಾಜ ವೆಂಕಟಪ್ಪ ನಾಯಕ ಇರಿಸಿರುವ ರಾಣಿ ಚಂಪಕ ಪೂಜಿಸುತ್ತಿದ್ದ ಶಿವ ಲಿಂಗ ಕೂಡ ಇತ್ತೀಚಿಗೆ ಬದಲಿಸಿ ಅಲ್ಲಿ ಬಸವಣ್ಣನ ವಿಗ್ರಹ ಇರಿಸಿದ್ದಾರೆ ಇದೆಲ್ಲ ಯಾವ ಕಾರಣದಿಂದ ಈ ಸ್ಮಾರಕ ನಿರ್ಮಾಣದ 400 ನೇ ವರ್ಷಕ್ಕೆ ನಡೆಯುತ್ತಿದೆ ಗೊತ್ತಿಲ್ಲ.
   ಇದನ್ನು ಸ್ಥಳಿಯ ಮುರುಘಾ ಮಠದ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಾಡಿರುವುದಾಗಿ ಹೇಳುತ್ತಾರೆ ಸ್ವಾಮೀಜಿಗಳಿಗೆ ಇದು ಗೊತ್ತಿದೆಯೋ ಇಲ್ಲವೋ ಸ್ವಾಮಿಜೀಗಳೇ ಸೃಷ್ಟಿಕರಣ ನೀಡಬೇಕು.
  ಕೆಳದಿ ಅರಸರ ಶಿಲಾಶಾಸನ ಕಾಶಿಯ ಕೊಳದಲ್ಲಿ ಸ್ಥಳಾಂತರವಾದದ್ದನ್ನ ನಮ್ಮ ಊರಿನ ವಕೀಲರಾದ ಪ್ರಶಾಂತ್ ಅದನ್ನು ಮೂಲಸ್ಥಾನಕ್ಕೆ ತಲುಪಿಸಲು ಹೋರಾಟ ನಡೆಸಿ ಯಶಸ್ವಿ ಆಗಿದ್ದಾರೆ ಕಾಶಿ ಮಠಾದೀಶರು ಸ್ವತಃ ಭಾಗಿ ಆಗಿ ಸ್ಮಾರಕ ರಕ್ಷಣೆ ಮಾಡಿರುವುದು ಶ್ಲಾಘನೀಯ.
   ಈಗಲೂ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿರುವ ಈ ಕೆಳದಿ ಸ್ಮಾರಕ ಪುರಾತತ್ವ ಇಲಾಖೆ ವಶಕ್ಕೆ ತೆಗೆದುಕೊಂಡು ಹೆಚ್ಚಿನ ಸಂಶೋಧನೆ ಮಾಡಬೇಕು.
   ಈಗಾಗಲೇ  ಅಲ್ಲಿ ಕೆಲವು ಟ್ರಸ್ಟ್ ಗಳನ್ನು ಮಾಡಿಕೊಂಡು ಪ್ರಿ ವೆಡ್ಡಿಂಗ್ ಪೋಟೋ ಚಿತ್ರೀಕರಣಕ್ಕೆ 500 ರೂಪಾಯಿ ಶುಲ್ಕ ವಿಧಿಸಿ ಸಂಗ್ರಹಿಸುತ್ತಿರುವುದು ಮುಂದಿನ ದಿನಗಳಲ್ಲಿ ಈ ಪುರಾತನ ಸ್ಮಾರಕ ಖಾಸಾಗಿ ವಶಕ್ಕೆ ತೆಗೆದು ಕೊಳ್ಳುವ ಹುನ್ನಾರವೇ?.
   ಹಂಪೆಯ ರಾಗಿ ಕಾಳು ಗಣಪತಿ ಸಿಡಿಲಿನಿಂದ ಸೀಳು ಬಿಟ್ಟಾಗ ರಾಜ್ಯ ಸರ್ಕಾರ ಅದನ್ನು ಬದಲಿಸಲು ಮುಂದಾದಾಗ ಸಾಹಿತಿ ಶಿವರಾಮ ಕಾರಂತರು ನ್ಯಾಯಾಲಯದಿಂದ ತಡೆ ಆಜ್ಞೆ ತಂದಿದ್ದರು.
  ರಾಣಿ ಚಂಪಕಾ ಪೂಜಿಸುತ್ತಿದ್ದ ಶಿವಲಿಂಗ ಮೂಲಸ್ಥಾನದಲ್ಲಿ ತಂದಿಡದಿದ್ದರೆ ಅದು ಕೆಳದಿ ಇತಿಹಾಸಕ್ಕೆ ನಾವು ಮಾಡುವ ಅಪಚಾರವೇ ಆಗುತ್ತದೆ ಸಂಬಂದ ಪಟ್ಟವರು ತಕ್ಷಣ ಕಾರ್ಯಪ್ರವೃತ್ತರಾಗಲಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ