Skip to main content

Blog number 2174. ವರ್ಷಂಪ್ರತಿ ಜನ ಜಾಗೃತಿಗಾಗಿ ಕರಪತ್ರ ಮುದ್ರಿಸಿ ಹಂಚುತ್ತಿದ್ದನ್ನು 2014ರಿಂದ ನಿಲ್ಲಿಸಿದೆ ಮಳೆ ನೀರು ಇಂಗಿಸಲು ಸಣ್ಣ ಸಣ್ಣ ಇಂಗುಗುಂಡಿ ನಿರ್ಮಿಸಲು ಪ್ರೋತ್ಸಾಹಿಸಲು ಮುದ್ರಿಸಿದ ಅಂತಹ ಒಂದು ಕರ ಪತ್ರ ಇಲ್ಲಿದೆ.

#ಹತ್ತು_ವರ್ಷದ_ಹಿಂದಿನ_ತನಕ_ಜನಜಾಗೃತಿಗಾಗಿ_ಕರಪತ್ರ_ಮುದ್ರಿಸಿ_ಹಂಚುತ್ತಿದ್ದೆ

#ಇಲ್ಲಿ_ಪೋಸ್ಟ್_ಮಾಡಿದ_ಅಂತಹ_ಕರಪತ್ರ_ನೀರು_ಇಂಗಿಸುವ_ಜನಜಾಗೃತಿ_ಕರಪತ್ರ

#ಮಲೆನಾಡಿನಲ್ಲಿ_40x60_ನಿವೇಶನದಲ್ಲಿ_ಮಳೆ_ಬೀಳುವ_ಪ್ರಮಾಣ_11_ಲಕ್ಷ_ಲೀಟರ್

#ಇದನ್ನು_ಭೂಮಿಗೆ_ಇಂಗಿಸಿದರೆ_ನಿಮ್ಮ_ಬಾವಿ_ಬತ್ತಿ_ಹೋಗಲು_ಸಾಧ್ಯವೇ_ಇಲ್ಲ

#ಚಿಕ್ಕದಾದ_ಮೂರು_ಅಡಿ_ಉದ್ದ_ಒಂದೂವರೆ_ಅಡಿ_ಅಗಲ_ಒಂದೂವರೆ_ಅಡಿ_ಆಳದ

#ಇಂಗು_ಗುಂಡಿ_ನಿರ್ಮಾಣದ_ಕರ_ಪತ್ರಗಳು.


   ಮುಂಗಾರು ಪ್ರಾರಂಭ ಆಗಿದೆ ಮಳೆ ನೀರು ಕೊಯ್ಲು ಯಾರು ಬೇಕಾದರು ಪ್ರಾರಂಭಿಸಬಹುದು ಇದೇನು ದೊಡ್ಡ ಕೆಲಸವಲ್ಲ ಆದರೆ ಇದು ನೀಡುವ ಲಾಭ ಸಣ್ಣದಲ್ಲ, ಇದು ನನ್ನ ಸ್ವಯಂ ಅನುಭವ.
      40x60 ಅಡಿ ನಿವೇಶನದಲ್ಲಿ ಮಳೆ ನೀರು ಬೀಳುವ ಪ್ರಮಾಣ ಮಲೆನಾಡಿನಲ್ಲಿ ಹನ್ನೊಂದು ಲಕ್ಷ ಲೀಟರ್ ಇದನ್ನ ಭೂಮಿಗೆ ಇಂಗಿಸಿದರೆ ನಿಮ್ಮ ಬಾವಿ ನೀರು ಬತ್ತಿ ಹೋಗಲು ಸಾಧ್ಯವೇ ಇಲ್ಲ.
   ನಮ್ಮ ಸಂಸ್ಥೆಯ ಉಪಯೋಗಿಸದ ಗೋಬರ್ ಗ್ಯಾಸ್ ಸ್ಥಾವರದ ಬಾವಿಯ ಕಟ್ಟಡದ ಕಲ್ಲುಗಳನ್ನು ತೆರವು ಮಾಡಿ ಅದಕ್ಕೆ ಹಂತ ಹಂತವಾಗಿ ವಿವಿಧ ಗಾತ್ರದ ಕಲ್ಲುಗಳು ಮರಳು ತುಂಬಿಸಿ ಅದಕ್ಕೆ ನಮ್ಮ ಸುಮಾರು 10 ಗುಂಟೆ ಜಾಗದ ಅಂದರೆ 11 ಸಾವಿರ ಚದರಡಿ ಪ್ರದೇಶದ ಮಳೆ ನೀರು ಇಂಗಿಸುವ ಕೆಲಸ ಕಳೆದ 10 ವರ್ಷದಿಂದ ನಿರಂತರವಾಗಿ ನಡೆದಿದೆ.

   #ಕರಪತ್ರ_ಮುದ್ರಿಸಿ_ಹಂಚುತ್ತಿದ್ದ_ಹಳೇ_ಕಾಲದ_ನೆನಪು.
     #ನೀರು_ಇಂಗಿಸಲು_ಪ್ರೋತ್ಸಾಹಿಸುವ_ಕಾರ್ಯ.

   2014ರ ನಂತರ ಇಂತಹ ಸಾಹಸ ಕೈ ಬಿಟ್ಟೆ ಕಾರಣ ನನ್ನ ರಾಜಕಾರದ ನಿವೃತ್ತಿ.... ಅದಕ್ಕೂ ಮೊದಲು ವರ್ಷಕ್ಕೆ ಒಂದೆರೆಡು ಬಾರಿ ಆದರೂ ಜನಪರವಾದ ಕರಪತ್ರ ಮುದ್ರಿಸಿ ಹಂಚುತ್ತಿದ್ದೆ.
  ಬ್ರಾಡ್ ಗೇಜ್ ಗಾಗಿ, ತುಮರಿ ಸೇತುವೆಗಾಗಿ, ಹಂದಿಗೋಡು ಕಾಯಿಲೆ ಬಗ್ಗೆ, ಮಲೆನಾಡು ಗಿಡ್ಡ ತಳಿ ಉಳಿಸಿ ಅಂತ, ಬಗರ್ ಹುಕುಂ ಗಾಗಿ, ಯಶಸ್ವಿನಿ ಯೋಜನೆ, ಈಸೂರು ಸ್ಮರಣೆಗಾಗಿ... ಹೀಗೆ ಅನೇಕ ಕರಪತ್ರಗಳು.
  ಈ ಕರಪತ್ರದಲ್ಲಿ ಅಚ್ಚಿಸಿರುವುದು 3 ಅಡಿ ಉದ್ದ X ಒಂದೂವರೆ ಅಡಿ ಅಗಲ X ಒಂದೂವರೆ ಅಡಿ ಆಳದ ಅತ್ಯಂತ ಚಿಕ್ಕದಾದ,ಅತ್ಯಂತ ಕಡಿಮೆ ವೆಚ್ಚದ ಮತ್ತು ಮನೆ ಮನೆಗಳಲ್ಲಿ ನಿರ್ಮಿಸಿಕೊಂಡು ಇಂತಹ ಒಂದು ಇಂಗು ಗುಂಡಿಯಿಂದ ವಾರ್ಷಿಕ ಕನಿಷ್ಟ 25 ಸಾವಿರ ಲೀಟರ್ ನೀರು ಇಂಗಿಸುವ ಬಗ್ಗೆ ಪ್ರಚಾರ ಮಾಡಿದ ಕರಪತ್ರ ಇದು.
ಸ್ವತಃ ನಾನು ಇವುಗಳನ್ನು ನಿರ್ಮಿಸಿಕೊಂಡು ಅದರ ಪರಿಣಾಮದ ಲಾಭ ನೋಡಿ ಈ ಕರಪತ್ರ ಅನೇಕ ಮುದ್ರಣ ಮಾಡಿದ್ದೆ.
  ಜನಪರ ಸಂಘಟನೆಗಳು ಸಂಘ ಸಂಸ್ಥೆಗಳು ಈ ಕರಪತ್ರವನ್ನು ಅವರ ಸಂಘಟನೆಯ ಹೆಸರಲ್ಲಿ ಮುದ್ರಿಸಿ ಹಂಚುವ ಕೆಲಸ ಕೂಡ ಮಾಡಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...