Skip to main content

Blog number 2169. ಈ ವರ್ಷದ ಮೊದಲ ಮುಂಗಾರು ಮಳೆಯಲ್ಲಿ ಬೆಳಗಿನ ವಾಕಿಂಗ್ ಅರ್ಥಮಾಡಿ ಕೊಳ್ಳಲಾಗದ ಭೂಮಿ ಒಳಗಿನ ವಿಜ್ಞಾನ

#ಇವತ್ತಿನ_ಬೆಳಗು_ಮುಂಗಾರು_ಮಳೆಯ_ಸಿಂಚನದಿಂದ

#ನಾನು_ಮತ್ತು_ನನ್ನ_ಪ್ರೀತಿಯ_ಶಂಭೂರಾಮ_ಒದ್ದೆ_ಒದ್ದೆ

#ಸುಮಾರು_8_ತಿಂಗಳಿಂದ_ಪಾಟ್_ಗಳಿಗೆ_ನೀರುಣಿಸುವ_ಕೆಲಸ_ಮುಕ್ತಾಯ

#ಈ_ವರ್ಷದ_ತಾಪಮಾನ_ಮಲೆನಾಡಿನ_ಇತಿಹಾಸದಲ್ಲೇ_ಮೊದಲು

#ಪರಿಸರದ_ವಿಸ್ಮಯ_ಗಮನಿಸಿದ್ದೀರಾ?

#ನನಗೆ_ಅರ್ಥವಾಗದ_ಭೂಮಿ_ಒಳಗಿನ_ನೀರಿನ_ಚಲನೆಯ_ವಿಜ್ಞಾನ.

https://youtu.be/AWZ4NZkrP6E?feature=shared


   ಇವತ್ತು ಬೆಳಿಗ್ಗೆ ಮೋಡ ಕವಿದ ವಾತಾವರಣ ಮಳೆ ಬರುವ ಸಾಧ್ಯತೆ ಅನ್ನಿಸಿದರೂ ನನ್ನ ಮತ್ತು ನನ್ನ ಪ್ರೀತಿಯ ಶಂಭೂರಾಮನಿಗೆ ಒಂದು ಗಂಟೆ ಅವಧಿ ಅವಕಾಶ ಕಲ್ಪಿಸುವು ನಿರೀಕ್ಷೆ ಹುಸಿ ಆಗಿ ನಾವಿಬ್ಬರೂ ಮುಂಗಾರು ಮಳೆಗೆ ಸಂಪೂರ್ಣವಾಗಿ ಒದ್ದೆ ಆದೆವು.
  ನಾಳೆಯಿಂದ ಮಳೆಗಾಲದ ವಾಕಿಂಗ್ ಗೆ ಬೇಕಾದ ಪರಿಕರಗಳ ಜೊತೆ ವಾಕಿಂಗ್ ಪ್ರಾರಂಬಿಸ ಬೇಕು ಇವತ್ತಿನ ಮಳೆ ಶಂಭೂರಾಮನಿಗೆ ಹೆಚ್ಚು ಖುಷಿ ತಂದಿದೆ.
  ಕಳೆದ ವರ್ಷ 2023 ರ ಅಕ್ಟೋಬರ್ ತಿಂಗಳ ಮಧ್ಯದಲ್ಲೇ ನನ್ನ ವಾಕಿಂಗ್ ಪಾತ್ ಅಕ್ಕಪಕ್ಕದ ಹೂವಿನ ಗಿಡಗಳು ಮಳೆ ಇಲ್ಲದೆ ಬಾಡಲು ಪ್ರಾರಂಬಿಸಿದಾಗ ನಾನು ನಿತ್ಯ ನೀರುಣಿಸುವ ಕೆಲಸ ಪ್ರಾರಂಬಿಸಿದೆ.
 ಸಾಮಾನ್ಯವಾಗಿ ಜನವರಿ ಮಧ್ಯದಿಂದ ಅಥವ ತಿಂಗಳ ಕೊನೆಯಿಂದ ಮೇ ತಿಂಗಳ ತನಕ ನೀರು ಕೊಡುತ್ತಿದ್ದೆ ಆದರೆ ಈ ವರ್ಷದ ಹವಾಮಾನದಲ್ಲಿ ಅನೇಕ ರೀತಿಯ ವ್ಯತ್ಯಾಸಗಳು ನೋಡಿದೆ.
  ವಿಪರೀತ ತಾಪಮಾನದ ಏರಿಕೆ ಮಲೆನಾಡಿನ ಇತಿಹಾಸದಲ್ಲೇ ಅತ್ಯಂತ ಹೆಚ್ಚು 45 ಡಿಗ್ರಿಗೆ ತಲುಪಿದ್ದು ನನ್ನ ಮನೆ ಊಷ್ಣ ಮಾಪಕದಲ್ಲಿ ದಾಖಲಾಗಿತ್ತು.
   ಈ ವರ್ಷ ಮಲೆನಾಡಲ್ಲಿ ಮಾರಾಟ ಆದ ಫ್ಯಾನ್ ಗಳ ಸಂಖ್ಯೆ ಅಗಣಿತ, ಪ್ಯಾನ್ ಗಾಳಿ ಸಾಕಾಗದೆ ಅತಿ ಹೆಚ್ಚು ಏರ್ ಕೂಲರ್ ಗಳೂ ಮಾರಾಟವಾಗಿದೆ ಮುಂದಿನ ವರ್ಷ ಇದೇ ರೀತಿ ತಾಪಮಾನ ಆದರೆ ಏರ್ ಕಂಡಿಷನರ್ ಗಳು ನಮ್ಮ ಹಳ್ಳಿಯ ಪ್ರತಿ ಮನೆಗಳನ್ನ ಪ್ರವೇಶಿಸಲಿದೆ.
   ಇಷ್ಟೆಲ್ಲ ತಾಪಮಾನ ಏರಿಕೆಯಿಂದ ಮಲೆನಾಡಿನಲ್ಲಿ ಕೆರೆ ಬಾವಿಗಳು ಮಾತ್ರ ಬತ್ತಲಿಲ್ಲ ಯಾಕೆ?... ಆದರೆ ಅನೇಕ ಬೋರ್ ವೆಲ್ ಗಳು ಮಾತ್ರ ಕೈಚೆಲ್ಲಿದ್ದು ಯಾಕೆ?... ಇದು ಅರ್ಥವಾಗದ ವಿಷಯ.
    ನನ್ನ ಮನೆ ಮತ್ತು ಸಂಸ್ಥೆಯ ಅವರಣದ ಮಳೆ ನೀರು ನಾನು ಸಂಪೂರ್ಣ ಮರುಪೂರಣ ಮಾಡುತ್ತೇನೆ, ನಮ್ಮಲ್ಲಿ ಒಂದು  ಬೋರ್ ವೆಲ್ ಒಂದೂವರೆ ಇಂಚು ನೀರು ನೀಡುತ್ತದೆ ಮತ್ತು ಎರೆಡು ತೆರೆದ ಬಾವಿಗಳು ಇದೆ ಇದರ ಪಕ್ಕದಲ್ಲೇ ಗೋಬರ್ ಗ್ಯಾಸ್ ಗುಂಡಿ ಕಾರ್ಯನಿರ್ವಹಿಸದೆ ನಿಂತಿದ್ದು ಅದನ್ನು ಶಿಲೆ ಕಲ್ಲಿನಿಂದ ಕಟ್ಟಿಸಿದ್ದರು ನಮ್ಮ ತಂದೆ.
  ನಾನು ಅದಕ್ಕೆ ಕಟ್ಟಿದ್ದ ಸೈಜು ಕಲ್ಲು ತೆಗೆಸಿದೆ, ಆ ಗುಂಡಿ ನೆಲದಿಂದ 8 ಅಡಿ ಆಳದವರೆಗೆ ಗಟ್ಟಿ ಮ್ಯಾಂಗನೀಸ್ ಅಂಶದ ಜಂಬಿಟ್ಟಿಗೆ ತೆಗೆದು ಮಾಡಿದ ಗುಂಡಿ ಆದ್ದರಿಂದ ಅದನ್ನು ನಾನು ಬೋಲ್ಡರ್ಸ್ - ಸೋಲಿಂಗ್ - 40 mm ಜಲ್ಲಿ - ನಂತರ 20 mm - ಅದರ ಮೇಲೆ ಮರಳು ಸಾಣಿಸಿ ಉಳಿದ ಊರುಟು ಮರಳು ಕಲ್ಲು- 6 mm ಜಲ್ಲಿ ಇದೆಲ್ಲದರ ಮೇಲೆ ಮರಳು ಹಂತ ಹಂತವಾಗಿ ಹಾಕಿ ಸುತ್ತಲೂ ಕಲ್ಲಿನ ಎತ್ತರದ ಕಟ್ಟೆ ಕಟ್ಟಿ ಮಳೆ ನೀರು ಇಂಗುವಂತೆ ಮಾಡಿದ್ದೇನೆ. 
   ಭೂಮಿ ತನ್ನ ಸಾಮರ್ಥ್ಯದ ಇಂಗುವಿಕೆ ದಾರಣೆ ಮುಗಿದ ಮೇಲೆ ಉಹೂಂ ... ಒಂದು ಹನಿಯನ್ನು ಒಳತೆಗೆದು ಕೊಳ್ಳುವುದಿಲ್ಲ... ಆಗ ಇಂಗದ ಹೆಚ್ಚುವರಿ ನೀರು ತನ್ನಿಂದ ತಾನೇ ಕೆರೆಗೆ ಹೋಗುವಂತೆ ಮಾಡಿದ್ದೇನೆ.
   ಇದು ಕಳೆದ 12 ವರ್ಷದಿಂದ ನಡೆಯುತ್ತಿದೆ ಆದರೂ ನಮ್ಮ ಎರಡು ತೆರೆದ ಬಾವಿಗಳು ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಬೇಸಿಗೆಯ ಕೊನೆಯಲ್ಲಿ ನೀರು ನೀಡಲು ಸಾಧ್ಯವಾಗುತ್ತಿರಲಿಲ್ಲ ಆದರೆ ಈ ವರ್ಷದ ಬಿರು ಬೇಸಿಗೆಯ ಆಶ್ಚರ್ಯ.. ನಮ್ಮ ತೆರೆದ ಬಾವಿಗಳು ಬೋರ್ ವೆಲ್ ಗೆ ಸರಿಸಮನಾಗಿ ಪೈಪೋಟಿಯಿಂದ ನೀರು ನೀಡಿದೆ.
  ಭೂಮಿ ಒಳಗಿನ ವಿಜ್ಞಾನ ನನಗೆ ಅರ್ಥವಾಗುತ್ತಿಲ್ಲ, ಕಡಿಮೆ ಮಳೆ ಮತ್ತು ವಿಪರೀತ ತಾಪ ಮಾನ ನಮ್ಮ ಬಾವಿಗಳು ಕೈ ಕೊಡುತ್ತದೆಂದು ಬಾವಿಸಿದ್ದು ಹುಸಿ ಆಯಿತು ನಿರಂತರ ನೀರು ಇಂಗುವಿಕೆ ಇಂತ ಆಪತ್ಕಾಲದಲ್ಲಿ ತನ್ನ ಚಮತ್ಕಾರ ತೋರಿಸಿತು.
  ಭೂಮಿ ಮೇಲಿನ ಗಿಡಗಳು ಬಳಲಿದವು, ಪರಿಸರದ ಪರಿಣಾಮದ ಸೂಕ್ಷ್ಮ ಬದಲಾವಣೆ ಉಪ್ಪಿನಕಾಯಿ ಮಿಡಿ ಮಾವಿಗೆ, ಮಾವಿನ ಹಣ್ಣಿಗೆ ಬರ ತಂದಿತು ಆದರೆ ಬಾವಿಗಳಲ್ಲಿ ಭರಪೂರ ನೀರು ಪ್ರಕೃತಿಯ ವಿಸ್ಮಯವಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...