Skip to main content

Blog number 2209. ಅಂತರಾಷ್ಟ್ರೀಯ ನಿದಿ ಚೋರರಿಂದ ನಮ್ಮ ಗೇರುಸೊಪ್ಪೆ ಸಂಸ್ಥಾನ ಸಂಪೂರ್ಣ ಭಗ್ನವಾಯಿತು.

#ಅಂತರಾಷ್ಟ್ರೀಯ_ನಿದಿ_ಚೋರರ_ತಂಡದಿಂದ

#ಕಾಳು_ಮೆಣಸಿನ_ರಾಣಿ__ಗೇರುಸೊಪ್ಪೆಯ_ಜೈನರಾಣಿ

#ಚೆನ್ನಬೈರಾದೇವಿ_ಸಂಸ್ಥಾನದ_ಸ್ಮಾರಕ_ಭಗ್ನವಾಯಿತು


  1941 ರಲ್ಲಿ SS ಗೇರುಸೊಪ್ಪೆ ಎಂಬ ಬ್ರಿಟೀಷರ ಹಡಗು ಚೆನ್ನಬೈರಾ ದೇವಿಯ ಆಸ್ಥಾನಕ್ಕೆ ಸೇರಿದ್ದ ಟನ್ ಗಟ್ಟಲೆ ಬೆಳ್ಳಿ ಬಾರ್ ಗಳನ್ನು ಒಯ್ಯುತ್ತಿದ್ದಾಗ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿನ ಸಬ್ ಮೆರೀನ್ ಉಡಾಯಿಸಿದ ಟಾರ್ಪೆಡೋ ಒಂದು ಈ ಹಡಗನ್ನು ಮುಳುಗಿಸಿತು.
   ಅನೇಕ ವರ್ಷಗಳ ನಂತರ 2012-13ರಲ್ಲಿ ಸಮುದ್ರದಲ್ಲಿ ಮುಳುಗಿದ ನಿಧಿಯನ್ನು ಸಂಶೋಧಿಸುವ ಅಮೆರಿಕದ ಸಂಸ್ಥೆ ಒಂದು ಈ ಮುಳುಗಿದ ಗೇರುಸೊಪ್ಪೆ ಹಡಗನ್ನು ಕಂಡುಹಿಡಿದು ಆ ಹಡಗಿನಲ್ಲಿ ರವಾನಿಸುತ್ತಿದ್ದ ಬೆಲೆಬಾಳುವ ಬೆಳ್ಳಿ ಬಾರ್ ಗಳನ್ನು ಆಳ ಸಮುದ್ರದಿಂದ ತೆಗೆಯಿತು.
   ಅದು ಯುರೋಪಿನಿಂದ ಕಾಳುಮೆಣಸು ಖರೀದಿಗಾಗಿ ವಿನಿಮಯ ಮಾಡಿಕೊಂಡ ಬೆಳ್ಳಿ ಬಾರ್ ಗಳಾಗಿದ್ದು ಅದು ರಾಣಿ ಚೆನ್ನಬೈರಾ ದೇವಿಯ ಸಂಸ್ಥಾನದ್ದಾಗಿತ್ತು.
  ಈ ಸುದ್ದಿ ಬ್ರಿಟಿಷರು ತಮ್ಮ ಆಡಳಿತಾವಧಿಯಲ್ಲಿ ರಾಣಿ ಚೆನ್ನಬೈರಾ ದೇವಿಯ ಗುಪ್ತ ನಿಧಿಗಳನ್ನು ವಶಪಡೆದದ್ದರು ಎಂಬ ಸುದ್ದಿಗೆ ಪೂರಕವಾಗಿದೆ.    
     ಆ ನಂತರದಲ್ಲಿ ನಮ್ಮ ದೇಶ ಸ್ವಾತಂತ್ರವಾಯಿತು, ಆ ಕಾಲಮಾನದಲ್ಲಿ ಇಟಲಿಯ ಮಾಫಿಯಾ ಸಂಸ್ಥೆ ಇಲ್ಲಿನ ರಾಣಿ ಚೆನ್ನಬೈರಾದೇವಿಯ ಗುಪ್ತನಿಧಿ ಸಂಶೋಧನೆಗೆ ಯೋಜನೆಯೆಂದು ರೂಪಿಸಿತ್ತೆಂದು ಹೇಳುತ್ತಾರೆ.
   ಹಾಗಾದರೆ ಅವರು ಆ ಗುಪ್ತ ನಿಧಿಗಳಿಸಲು ಯಶಸ್ವಿಯಾದರಾ ಗೊತ್ತಿಲ್ಲ? ಆದರೆ ಗುಪ್ತನಿಧಿಯ ಹುಡುಕಾಟದಿಂದ 500 ವರ್ಷಗಳ ಇತಿಹಾಸವನ್ನು ಬುಡಮೇಲು ಮಾಡುವಂತಹ ಕೆಲಸ ಮಾತ್ರ ಯಶಸ್ವಿಯಾಗಿ ನಡೆಯಿತು.
  ಅಲ್ಲಿ ಇದ್ದಂತ ಜೈನ ಬಸದಿಗಳು, ದೇವಾಲಯಗಳು, ಕೋಟೆಗಳು, ದೀಪ ಸ್ತಂಭಗಳು ಶಿಲಾಶಾಸನಗಳು ಹಾಗು ಗುಪ್ತ ಸುರಂಗ ಮಾರ್ಗಗಳನ್ನ ಸಂಪೂರ್ಣ ಆಗೆತದಿಂದ ಬುಡಮೇಲು ಮಾಡಿದ್ದಾರೆ.
  ಇವತ್ತು ಚನ್ನಬೈರಾ ದೇವಿಯ ಗೇರುಸೊಪ್ಪೆಯ ಸಂಸ್ಥಾನವನ್ನು ನೋಡಿದರೆ ಇದು ರಾಜರ ಕಾಲದ ಯುದ್ಧದಲ್ಲಿ ಬುಡಮೇಲು ಮಾಡಿರಬೇಕೆಂದು ಅನ್ನಿಸುತ್ತದೆ ಆದರೆ ಇದು ನಿದಿ ಚೋರರಿಂದ ನಡೆದದ್ದು. 
   ಇದೆಲ್ಲ ನಡೆದಿದ್ದು ದೇಶ ಸ್ವತಂತ್ರವಾದ 30 ವರ್ಷದ ನಂತರ ಅದು ಸತತವಾಗಿ ಹತ್ತು ವರ್ಷ ಜನವಿರಳ ಪ್ರದೇಶವಾದ ದಟ್ಟ ಅರಣ್ಯದಲ್ಲಿ ನಿರಾತಂಕವಾಗಿ ನಡೆಯಿತು ಇದಕ್ಕೆ ಇತಿಹಾಸ ಸಂಶೋಧಕರುಗಳು, ಈ ಭಾಗದ ಪ್ರಮುಖಕರೂ, ಅಧಿಕಾರಿಗಳೂ ಗುಪ್ತ ಸಹಾಯ ನೀಡಿರಬಹುದೆಂಬ ಗುಮಾನಿಗಳಿದೆ.
  ಗೇರುಸೊಪ್ಪೆ ಸಂಸ್ಥಾನದ ಎಲ್ಲಾ ಕಟ್ಟಡಗಳು ನಿಧಿ ಚೂರರ ಕೈಯಲ್ಲಿ ನಲುಗಿ ಹೋಗಿದೆ ಭಗ್ನಗೊಂಡಿದೆ.
 (ಮುಂದಿನ ಭಾಗದಲ್ಲಿ SS ಗೇರುಸೊಪ್ಪೆ ಹಡಗಿನ ಮಾಹಿತಿ)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...