Skip to main content

Blog number 1346. ಚುನಾವಣಾ ಪಲಿತಾಂಶವೇ ಬದಲಿಸುವು ಶಕ್ತಿಯ ಕೆಲ ಘೋಷಣೆಗಳು

#ಶಿವಮೊಗದಲ್ಲಿ_ಹರಕುಬಾಯಿಗೆ_ಹೊಲಿಗೆ_ಎಂಬ_ಅಯನೂರು_ಮಂಜುನಾಥರ_ಘೋಷಣೆ

#ರಾಮಕೃಷ್ಣ_ಹೆಗ್ಗಡೆ_ಎದರು_ಸಿದ್ದುನ್ಯಾಮೆಗೌಡರ_ಬಾಟಲಿ_ನೀರಿನ_ಘೋಷಣೆ 

#ಚುನಾವಣಾ_ಪಲಿತಾಂಶದ_ಮೇಲೆ_ಬೀರುವ_ಪ್ರಭಾವ

#ಚುನಾವಣೆಯಲ್ಲಿ_ಕೆಲವು_ವಿಚಾರ_ತೆಗೆದುಕೊಳ್ಳುವ_ತಿರುವು.

#ಸಾಗರ_ವಿದಾನಸಭಾ_ಕ್ಷೇತ್ರದಲ್ಲಿ_ಬಂಗಾರಪ್ಪ_ಸೋಲಿಸಲು_ಕಾಗೋಡು_ಗೆಲ್ಲಲು_ಕಾರಣವಾದ_ವಿಚಾರ

#ಬಂಗಾರಪ್ಪರ_ಮತ_ವಿಭಜನೆ_ವಿಪಲವಾಗಿಸಿದ_ಖಾನ್_ಸಾಹೇಬರ_ತಂತ್ರ.

     ನಾಡಿನ ಖ್ಯಾತ ಅಂಕಣಗಾರರು ಪತ್ರಕರ್ತರೂ ಆದ ನಮ್ಮ ಸಾಗರದವರೆ ಆದ #ಆರ್_ಟಿ_ವಿಠಲಮೂರ್ತಿ ಬರೆದ  ಬಾಗಲಕೋಟೆಯಲ್ಲಿ ರಾಮಕೃಷ್ಣ ಹೆಗಡೆ ಸಿದ್ದುನ್ಯಾಮಗೌಡರ ಎದರು ಸೋಲಲು ಕಾರಣವಾದ ಸಿದ್ದುನ್ಯಾಮೇಗೌಡರ  "ನಮ್ಮ ನೀರು ಕುಡಿಯದವರಿಗೆ ನಮ್ಮ ಓಟು ಯಾಕೆ " ಎಂಬ ಡಯಲಾಗು ಕಾರಣವಾದದ್ದು ಬರೆದಿದ್ದರು, ಇದು ನಡೆದ ಸಂದರ್ಭ ಬಾಗಲಕೋಟೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಗಂಟಲು ನೋವಿಂದ ಬಳಲುತ್ತಿದ್ದ ಹೆಗಡೆ ಯವರು ನೀರಿಗಾಗಿ ಕೈ ಸನ್ನೆ ಮಾಡಿದಾಗ ಸ್ಥಳಿಯ ಕಾರ್ಯಕರ್ತ ತಂದ ತಣ್ಣನೆ ನೀರು ನಿರಾಕರಿಸಿ ತನ್ನ ಆಪ್ತನಿಂದ ಬಿಸಿ ನೀರು ಪಡೆದು ಕುಡಿದದ್ದು ಇಷ್ಟೆಲ್ಲ ಅವಾಂತರಕ್ಕೆ ಕಾರಣ ಆಯಿತು ಅಂತ ಇದನ್ನು ಓದಿದಾಗ ಸಾಗರ ವಿದಾನ ಸಭಾ ಕ್ಷೇತ್ರದಲ್ಲಿ ಕಾಗೋಡು ಮತ್ತು ಬಂಗಾರಪ್ಪ ಪರಸ್ಪರ ಸ್ಪರ್ದಿಸಿದಾಗ ಖಾನ್ ಸಾಹೇಬರ ಚಾಣಕ್ಯದಿಂದ ಮತ ವಿಭಜನೆಯ ಬಂಗಾರಪ್ಪರ ಯೋಜನೆ ಕಾರ್ಯಗತ ಆಗದೆ ಕಾಗೋಡು ಗೆದ್ದ ಸಂದರ್ಭ ನೆನಪಾಗಿ ಇಲ್ಲಿ ಬರೆಯುವಂತಾಯಿತು.

  #ಕಾಗೋಡು_ಬಂಗಾರಪ್ಪರ_ನೇರ_ಸ್ಪರ್ಧೆ

  ಒಮ್ಮೆ ಬಂಗಾರಪ್ಪ ಸೊರಬ ಮತ್ತು ಸಾಗರ ಎರೆಡೂ ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ ಸಾಗರ ವಿದಾನ ಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಕಾಗೋಡು ಸೋಲುತ್ತಾರೆಂಬ ಭಯ ಉಂಟಾಗಿತ್ತು.
   ಬ್ರಾಹ್ಮಣ, ಲಿಂಗಾಯಿತ ಮುಖಂಡರು ಕಾಗೋಡರನ್ನು ಸೋಲಿಸಬೇಕೆಂದರೆ ಬಂಗಾರಪ್ಪನವರು ಸಾಗರದಲ್ಲಿ ಸ್ಪರ್ದಿಸಬೇಕು ಮೇಲ್ವರ್ಗದ ಮತಗಳು ಕ್ರೋಡಿಕರಣ ಆಗಿದೆ ಇನ್ನು ದೀವರ ಮತ ವಿಭಜನೆ ಆದರೆ ಕಾಗೋಡು ಸೋಲು ಗ್ಯಾರಂಟಿ ಎಂದು ಬಂಗಾರಪ್ಪರನ್ನು ಒಪ್ಪಿಸುತ್ತಾರೆ.
  ಈ ಚುನಾವಣೆಗೆ ಸರಿಯಾಗಿ ಹತ್ತು ವರ್ಷದ ಹಿಂದೆ ಗುಂಡೂರಾವ್ ಕಾಗೋಡರನ್ನ ಸಾಗರದಲ್ಲಿ ಸ್ಪರ್ದಿಸಲು ಅವಕಾಶ ನೀಡದೇ ಸೊರಬದಲ್ಲಿ ಬಂಗಾರಪ್ಪರ ವಿರುದ್ದ ಸ್ಪರ್ದೆಗೆ ಇಳಿಸಿದಾಗ ಬಂಗಾರಪ್ಪರ ವಿರುದ್ದ ಕಾಗೋಡು ಸಾರ್ವಜನಿಕ ಸಭೆಯಲ್ಲಿ ನಿಂದಿಸಿದ ಮಾತುಗಳು ಬಂಗಾರಪ್ಪರನ್ನು ಕೆರಳಿಸಿತ್ತು.
   ಈ ಚುನಾವಣೆಯಲ್ಲಿ ಕಾಗೋಡು ಸೋತು ಬಂಗಾರಪ್ಪ ಗೆದ್ದಿದ್ದರು, ಇದರ ಹಿಂದಿನ 1978ರಲ್ಲಿ ಸಾಗರದಲ್ಲಿ ಜನತಾ ಪಕ್ಷದಿಂದ ಸ್ಪರ್ದಿಸಿ ಕಾಂಗ್ರೇಸ್ ನ ಎಲ್.ಟಿ. ಹೆಗ್ಗಡೆ ವಿರುದ್ದ ಸೋತು ನಂತರ ಬಂಗಾರಪ್ಪರ ಬಂಡಾಯಕ್ಕೆ ಪರ್ಯಾಯ ನಾಯಕರಾಗಿಸಲು ಕಾಗೋಡರನ್ನು ಜನತಾ ಪಕ್ಷದಿಂದ ಕಾಂಗ್ರೇಸ್ ಗೆ ಕರೆ ತಂದು ವಿದಾನ ಪರಿಷತ್ ಸದಸ್ಯ ನಾಮಕರಣ ಮಾಡಿಸಿ ಗುಂಡೂರಾವ್ ಸಂಪುಟದಲ್ಲಿ ಮಂತ್ರಿ ಮಾಡಿಸಿದವರು ಇಂದಿರಾ ಬ್ರಿಗೇಡ್ ನ ಸಂಜಯ ಗಾಂಧಿ ಪರಮಾಪ್ತ ಎಪ್.ಎಂ.ಖಾನ್ ಇವರು ಸಾಗರದ ಕಾಂಗ್ರೇಸ್ ನೇತಾರ ಆಹ್ಮದ್ ಆಲೀಖಾನ್ ಸಾಹೇಬರ ಆಪ್ತರು.
   ನಂತರ 10 ವಷ೯ ಸಾಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ ಸಿಗದೆ ಕಾಗೋಡು ತಿಮ್ಮಪ್ಪ ಕ್ಷೇತ್ರದಿಂದಲೇ ಅಜ್ಞಾತರಾದಾಗ ಅವರನ್ನು ಪುನಃ ಸಾಗರದಿಂದ ಶಾಸಕರನ್ನು ಮಾಡಲು ಹೊರಟವರು ಈ ಆಹ್ಮದ್ ಆಲೀ ಖಾನ್ ಸಾಹೇಬರು ಅವರಿಗೆ ಕೈ ಜೋಡಿಸಿದವರು ಪುತ್ತೂರಾಯರು, ಕುರಿ ಲಿಂಗಪ್ಪನವರು ಈ ಮೂವರ ಸೇನಾಧಿಕಾರಿಗಳಾಗಿದ್ದವರು ಬೀಮನೇರಿ ಶಿವಪ್ಪ, ತೀ-ನಾ. ಶ್ರೀನಿವಾಸ್ ಮತ್ತು ನಾನು.
   
  ಸೊರಬ ಮತ್ತು ಸಾಗರ ಎರೆಡೂ ಕ್ಷೇತ್ರದಲ್ಲಿ ಸ್ಪರ್ದಿಸಿದ ಬಂಗಾರಪ್ಪ ಇಡೀ ರಾಜ್ಯದಾದ್ಯಂತ ಮಿಂಚಿನ ಚುನಾವಣಾ ಪ್ರಚಾರ ಕೈಗೊಂಡಿದ್ದರಾದ್ದರಿಂದ ಸೊರಬದಲ್ಲಿ ಪ್ರಚಾರಕ್ಕೆ ಹೋಗಲೇ ಇಲ್ಲ ಅಲ್ಲಿ ಅವರ ನೀಲಿ ಕಣ್ಣಿನ ಹುಡುಗ ಶಿವಾನಂದಪ್ಪ ಸಂಪೂರ್ಣ ಜವಾಬ್ದಾರಿ ವಹಿಸಿ ಬಂಗಾರಪ್ಪರನ್ನು ಗೆಲ್ಲಿಸಿದ್ದರು.
   ಬಂಗಾರಪ್ಪನವರು ಸಾಗರದಲ್ಲಿ ಅವರ ಅಭಿಮಾನಿಗಳ ಒತ್ತಾಯಕ್ಕಾಗಿ ಗಾಂಧೀ ಮೈದಾನದಲ್ಲಿ ಒಂದು ಕಿಕ್ಕಿರಿದ ಬೃಹತ್ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯಲ್ಲಿ 23 ನಿಮಿಷ ಭಾಷಣ ಮಾಡಿದ್ದರು ಆಗ ಬಂಗಾರಪ್ಪನವರನ್ನು ಕರೆತಂದ ಸಾಗರದ ಕಾಗೋಡು ವಿರೋದಿ ಪಾಳ್ಯದವರು ಬಂಗಾರಪ್ಪರಿಗೆ "ನೀವು ಚುನಾವಣೆಗೆ ಅರ್ಜಿ ಹಾಕಿ ಹೋಗಿ ಸಾಕು ನಾವು ನಿಮ್ಮನ್ನು ಗೆಲ್ಲಿಸಿ ಕೊಂಡು ಬರುತ್ತೇವೆಂಬ " ಅಶ್ವಾಸನೆ ಕೂಡ ನೀಡಿದ್ದರು.
   ಬಂಗಾರಪ್ಪ ಮತ್ತು ಕಾಗೋಡರ ಸ್ಟಜಾತಿ ದೀವರು ಇತ್ತಲಾಗೆ ಕಾಗೋಡು ಬೇಕು ... ಅತ್ತಲಾಗೆ ಬಂಗಾರಪ್ಪರ ಬಿಡುವಂತಿಲ್ಲ ಅಂತ ಸಂದಿಗ್ದದಲ್ಲಿದ್ದರು, ಬ್ರಾಹ್ಮಣ ಮತ್ತು ಲಿಂಗಾಯಿತರ ಜುಗಲ್ ಬಂದಿ ಕಾಗೋಡರ ಸೋಲಿಸಲು ಪಣ ತೊಟ್ಟಿದ್ದರಿಂದ ಮತ್ತು ಈ ಎರೆಡು ಮೇಲ್ವರ್ಗದ ಪ್ರಭಾವದಲ್ಲಿರುವ ಇತರೆ ಹಿಂದುಳಿದ ಮತ್ತು ದಲಿತ ಓಟುಗಳು ಬಂಗಾರಪ್ಪರಿಗೆ ಖಚಿತ ಎಂಬ ಗ್ರೌಂಡ್ ರಿಪೋರ್ಟ್ ಆಗಿತ್ತು.
   ದೀವರ ಮತಗಳು ವಿಭಜನೆ 100 ಕ್ಕೆ 100 ಶತಸಿದ್ಧ ಎಂಬ ಮಾತುಗಳು ಪೇಟೆ ಪ್ರದೇಶದಲ್ಲಿ ಚಲಾವಣೆ ಇದ್ದಿದ್ದರಿಂದ ಕಾಗೋಡರ ಸೋಲು ಖಚಿತ ಎಂಬ ಗಾಳಿಸುದ್ದಿ ಜೋರಾಗಿತ್ತು.
  ಈ ಸಂದರ್ಭದಲ್ಲೇ ಕಾಂಗ್ರೇಸ್ ರಾಜಕಾರಣದ ಚಾಣಕ್ಯರೇ ಆಗಿದ್ದ  ಸಾಗರದ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾಗಿದ್ದ ಆಹಮದ್ ಅಲೀ ಖಾನ್ ಸಾಹೇಬರು ಒ೦ದು ತಂತ್ರ ಮಾಡಿದರು. ಅದು ಚುನಾವಣಾ ಪಲಿತಾಂಶದ ಮೇಲೆ ಇಷ್ಟು ಪರಿಣಾಮ ಬೀರುತ್ತೆ ಅಂತ ನಾವು ನಂಬಿರಲಿಲ್ಲ.
  ಖಾನ್ ಸಾಹೇಬರು ಆಪ್ತ ಮುಖಂಡರನ್ನು ಮಾತ್ರ ರಹಸ್ಯವಾಗಿ ಅವರ ಮನೇನಲ್ಲಿ ಕರೆದಿದ್ದರು ಅಲ್ಲಿ ಈ ಡಯಲಾಗ್ಗೆ ಹೆಚ್ಚು ಒತ್ತು ನೀಡಬೇಕಾಗಿ, ಯಾವ ಕಾರಣಕ್ಕೂ ಬಂಗಾರಪ್ಪರನ್ನು ತೆಗಳುವ ಮಾತು ನಿಮ್ಮ ಬಾಯಲ್ಲಿ ಬರಬಾರದು ಎಂಬ ಕಟ್ಟಪ್ಪಣೆ ಮಾಡಿದ್ದರು.
  ಕಾಗೋಡು ಸ್ವತಃ ಇದನ್ನು ಹೇಳಲು ಸಾಧ್ಯವಿಲ್ಲ ನಾವು ನಾವೇ ಸೇರಿ ಇದನ್ನು ಜನರ ತಲೆಯಲ್ಲಿ ಹುಳ ಬಿಡಬೇಕು ಅಂತ ಅವರದ್ದೆ ಆದ ವೈಕರಿಯಲ್ಲಿ ವಿವರಿಸಿದ್ದರು.
   ಆಗಿನ ಪ್ರಚಾರ ಕಾಯ೯ದ ಮುಂಚೂಣಿಯಲ್ಲಿದ್ದ ಬೀಮನೇರಿ, ತೀನಾ ಮತ್ತು ನಾವೆಲ್ಲ ಈ ಡಯಲಾಗ್ ಶುರು ಮಾಡಿದೆವು.. ಅದೇನೆಂದರೆ "ಸೊರಬದಲ್ಲಿ ಬಂಗಾರಪ್ಪ ಗೆದ್ದೇ ಗೆಲ್ಲುತ್ತಾರೆ ಸಾಗರದಲ್ಲಿ ಕಾಗೋಡು ಗೆಲ್ಲಲಿ ನಿಮ್ಮ ಜಾತಿಯ ಇಬ್ಬರನ್ನು ಗೆಲ್ಲಿಸುವ ಅವಕಾಶ ನಿಮ್ಮ ಕೈಯಲ್ಲಿದೆ " ಅಂತೆಲ್ಲ ಬಂಗಾರಪ್ಪರ ತೆಗಳದ ಈ ಡಯಲಾಗ್ ಪರಿಣಾಮಕಾರಿ ಆಗಿತ್ತು ಮತ್ತು ಕಾಗೋಡು ಗೆದ್ದರು.
  ಆಹಮದ್ ಅಲೀ ಖಾನರ ಚಾಣಕ್ಯತನಕ್ಕೆ ಇದು ಒಂದು ಉದಾಹರಣೆ
   ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 23 ನಿಮಿಷ ಭಾಷಣ ಮಾಡಿದೆ ಇದರಿಂದ 23 ಸಾವಿರ ಮತ ಬಂತು, ಕಾಲಾವಕಾಶ ಇದ್ದಿದ್ದರೆ ಕಾಗೋಡರನ್ನು ಸೋಲಿಸಿ ಬಿಡುತ್ತಿದ್ದೆ ಎಂಬ ಸಮಾದಾನದ ಮಾತು ಬಂಗಾರಪ್ಪ ಸಾಗರದಲ್ಲಿ ಸೋತ ನಂತರ ಹಮ್ಮಿಕೊಂಡಿದ್ದ ಬೃಹತ್ ಅಭಿನಂದನಾ ಸಭೆಯಲ್ಲಿ ಆಡಿದರು.
   ನಂತರ ಮುಖ್ಯಮಂತ್ರಿ ಸ್ಥಾನ ಬಿಟ್ಟ ನಂತರ ಶಿವಮೊಗ್ಗ ಲೋಕಸಬೆಗೆ ಪಕ್ಷೇತರರಾಗಿ ಸ್ಪರ್ದಿಸಿ ಗೆದ್ದ ನಂತರ ನಾವೆಲ್ಲ ಅವರ ಜೊತೆ ಸೇರಿ ಅಭಿನಂದನಾ ಸಭೆಗಾಗಿ ತುಮರಿ ಭಾಗಕ್ಕೆ ಹೋಗುವಾಗ ಬಂಗಾರಪ್ಪರ ಕಾರಿನಲ್ಲಿ ನಾನು ಮತ್ತು ಆ ಭಾಗದ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ.ಜಿ.ಕೃಷ್ಣಮೂರ್ತಿ ಇದ್ದೆವು, ಆಗ ಈ ವಿಚಾರ ಬಂಗಾರಪ್ಪನವರ ಹತ್ತಿರ ಕಾರಿನಲ್ಲಿ ಉಲ್ಲೇಖಿಸಿದಾಗ ಅವರು ಹೇಳಿದ್ದು "ಹೌದು ಇದರಿಂದ ದೀವರ ಜಾತಿ ಮತ ಒಡೆಯಲಿಲ್ಲ, ಮತ ವಿಭಜನೆ ಆಗುತ್ತೆ ಅಂತಲೇ ಇತರ ಜಾತಿ ಮತ 23 ಸಾವಿರ ಬಂದಿದ್ದು" ಅಂದಿದ್ದರು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ