Skip to main content

Blog number 1281. ಶಿವಮೊಗ್ಗ ಜಿಲ್ಲೆಯ ವಿಶೇಷ ವ್ಯಕ್ತಿಗಳು ಭಾಗ-1, ತಂಗಚ್ಚನ್ ಆಂಡ್ರೂಸ್ ಎಂಬ 2012 ರಲ್ಲಿ 19 ರಾಜ್ಯ, ಸ್ಪಿಟಿ ವ್ಯಾಲಿಗಳನ್ನು 47 ದಿನದಲ್ಲಿ ತಮ್ಮ ಬುಲೆಟ್ ಬೈಕ್ ನಲ್ಲಿ ಸುತ್ತಿ ಬಂದ ಮೊದಲ ಶಿವಮೊಗ್ಗ ಜಿಲ್ಲೆಯ ರೈಡಿಂಗ್ ಸಾಹಿಸಿ.

https://youtu.be/DmjCJ_rDKms

#ನಮ್ಮ_ಜಿಲ್ಲೆಯ_ವಿಶೇಷ_ವ್ಯಕ್ತಿಗಳು ಭಾಗ-1

#ಇವತ್ತು_ನನ್ನ_ಅತಿಥಿ

#ರಿಪ್ಪನಪೇಟೆಯ_ಬೆನವಳ್ಳಿ_ತಂಗಚ್ಚನ್_ಅಂಡ್ರೂಸ್‌

#ತಮ್ಮ_ಬುಲೆಟ್_ಬೈಕಿನಲ್ಲಿ_2012ರಲ್ಲಿ_47ದಿನಗಳ_19_ರಾಜ್ಯ_ಸುತ್ತಿದ್ದಾರೆ.

#ಬುಲ್ಸ್_ಆಫ್_ಶಿವಮೊಗ್ಗ_ರೈಡರ್_ಕ್ಲಬ್_ಸದಸ್ಯರು

#ಶಿವಮೊಗ್ಗ_ನೆಹರೂ_ಮೈದಾನದಿಂದ_ಇವರ_ಗೆಳೆಯ_ದೀಪಕ್_ತಿಮ್ಮೋಜಿ_ಕೂಡ_ಅವರ_ಪ್ರತ್ಯೇಕ_ಬೈಕನಲ್ಲಿ_ಜೊತೆಯಾಗಿದ್ದರು

   ಈಗಿನ ಯುವ ಜನಾಂಗದಲ್ಲಿ ಬೈಕ್ ನಲ್ಲಿ ದೇಶ ಸುತ್ತುವ ಖಯಾಲಿ ಹೆಚ್ಚಾಗಿದೆ ಅದಕ್ಕೆ ಪೂರಕವಾಗಿ ಅದುನಿಕವಾದ ಮೋಟಾರ್ ಬೈಕ್ ಗಳು, ಎಲ್ಲಾ ಕಡೆ ಪೆಟ್ರೋಲ್ ಪಂಪ್, ಬೈಕ್ ಗಳ ಅಧಿಕೃತ ಸರ್ವಿಸ್ ಸೆಂಟರ್ ಗಳು, ಲಾಡ್ಜ್ ರೆಸ್ಟೊರಾಂಟ್ ಗಳು, ಪೇಸ್ ಬುಕ್-ವಾಟ್ಸಪ್ ಗಳ ಸಾಮಾಜಿಕ ಜಾಲ ತಾಣ, ರೈಡರ್ ಗಳ ಸಾಹಸಮಯ ಯಾತ್ರೆ ಸೆರೆ ಹಿಡಿಯುವ ಆದುನಿಕ ಗೊಪರಾ ಕ್ಯಾಮೆರಾಗಳು, ಬಿದ್ದರೂ ಪೆಟ್ಟಾಗದಂತ ರೈಡಿಂಗ್ ಉಡುಪು, ಹೆಲ್ಮೆಟ್ ಗಳ ರೈಡಿಂಗ್ ಗೇರ್ಸ್, ಎಲ್ಲಿ ಬೇಕೆಂದರಲ್ಲಿ ಹಣ ಡ್ರಾ ಮಾಡಿಕೊಳ್ಳಬಹುದಾದ ಹಣದ ವಹಿವಾಟಿನ Google pay Phone pay ಇತ್ಯಾದಿ ಪೇಯ್ಮೆಂಟ್ ಗೇಟ್ ವೇಗಳು, ಮನೆಯವರಿಗೆ ಇವರ ಪ್ರಯಾಣದ ಕ್ಷಣ ಕ್ಷಣದ ಮಾಹಿತಿ ಒದಗಿಸುವ ಜಿಪಿಎಸ್ ಉಪಕರಣಗಳು ಇದೆ.
   ಇದಾವುದೇ ವ್ಯವಸ್ಥೆಗಳು ದೊರೆಯದ ಕಾಲದಲ್ಲಿ 47 ದಿನಗಳ ಕಾಲ ದೇಶದ 19 ರಾಜ್ಯಗಳನ್ನು ತಮ್ಮ ಬುಲೆಟ್ ಬೈಕ್ ನಲ್ಲಿ ತಮ್ಮದೇ ಮೂರು ಸಂದೇಶಗಳ ಸಾರುತ್ತಾ ತಮ್ಮ ಸಹ ರೈಡರ್ ಶಿವಮೊಗ್ಗ ಮೂಲದ ಬೆಂಗಳೂರಿನ ಇಂಜಿನಿಯರ್ ದೀಪಕ್ ತಿಮ್ಮೋಜಿ ಅವರು ಅವರದ್ದೇ ಬೈಕಿನಲ್ಲಿ ಇವರ ಜೊತೆ 2012ರಲ್ಲಿ ಶಿವಮೊಗ್ಗದ ನೆಹರೂ ಸ್ಟೇಡಿಯಂನಿಂದ ಪ್ರಯಾಣ ಪ್ರಾರಂಬಿಸುತ್ತಾರೆ.
  ಶಿವಮೊಗ್ಗದ #ಬುಲ್ಸ್_ಆಪ್_ಶಿವಮೊಗ್ಗ ರೈಡರ್ ಕ್ಲಬ್ ನ ಸದಸ್ಯರುಗಳು ಇವರಿಗೆ ಶುಭ ಹಾರೈಸಿ ಬೀಳ್ಕೊಡುತ್ತಾರೆ.
  ಪ್ರತಿಯೊಬ್ಬ ರೈಡರ್ಸ್ ನ ಕನಸಾದ ಸ್ಪಿಟಿ ವ್ಯಾಲಿ ತಲುಪಿ ವಾಪಾಸ್ ನೆಹರೂ ಸ್ಟೇಡಿಯಂ ತಲುಪುವಾಗ 47 ದಿನಗಳಾಗಿತ್ತು.
   ಇನ್ನೊಂದು ಇವರ ವಿಶೇಷ ರೈಡಿಂಗ್ ಅಂದರೆ ಇವರು ತಮ್ಮ ಪ್ರಯಾಣದಲ್ಲಿ ಎಲ್ಲಿ ತಂಗಬೇಕು, ಎಲ್ಲಿ ಊಟ ಮಾಡಬೇಕು, ಎಷ್ಟು ದಿನ ರೈಡಿಂಗ್ ಇತ್ಯಾದಿ ನಿಗದಿ ಮಾಡದೆ ಅಲೆಮಾರಿ ರೀತಿಯ ಬೈಕ್ ರೈಡಿಂಗ್ ಇವರದ್ದಾಗಿತ್ತು.
  ಇವರು ಕೇರಳ ಮೂಲದವರು, ಕೇರಳದಲ್ಲಿ ಬಾಲ್ಯದಲ್ಲಿ ಸೈಕಲ್ ನಲ್ಲಿ, ಬಸ್ಸಿನಲ್ಲಿ ಕೇರಳ ರಾಜ್ಯ ಪೂತಿ೯ಸುತ್ತಿದ್ದಾರೆ, ನಂತರ 1994 ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಬೆನವಳ್ಳಿಯಲ್ಲಿ ಇವರ ತಂದೆ ಕೃಷಿ ಜಮೀನು ಖರೀದಿಸಿ ರಬ್ಬರ್ - ಅಡಿಕೆ - ಮೀನುಗಾರಿಕೆ ಪ್ರಾರಂಬಿಸಿದರು.
  ಇಲ್ಲಿಗೆ ಬಂದ ಮೇಲೆ ಡಿಸೇಲ್ ಬೈಕ್ ನಲ್ಲಿ ಸುಮಾರು 3 ಲಕ್ಷ  ಕಿ.ಮಿ. ರೈಡಿಂಗ್ ಮಾಡಿದ್ದಾರೆ, ಕೃಷಿ ವ್ಯಾಪಾರಗಳ ಜೊತೆ ರೋಟರಿ ಸಂಸ್ಥೆಯಲ್ಲೂ ಸಕ್ರಿಯರಾಗಿರುವ ಇವರ ಈ ಬೈಕ್ ರೈಡಿಂಗ್ ಹವ್ಯಾಸ ಈಗಿನ ಯುವ ಜನಾಂಗಕ್ಕೆ ಉತ್ತೇಜಿಸುವಂತಾದ್ದು ಮತ್ತು ಇಂತಹ ಬೈಕ್ ರೈಡಿಂಗ್ ಹವ್ಯಾಸದ ಸ್ಥಳಿಯ ಯುವ ಜನತೆ ಇವರಿಂದ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
    ಇವರ ಸಂಪರ್ಕದ ವಾಟ್ಸಪ್ ನಂಬರ್ 9448628570

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...