Skip to main content

Blog number 1304. ಕಾಡಿನ ಹೆಜ್ಜೇನು ದಾಳಿಗೆ ಒಳಗಾದ ನಮ್ಮ ಊರಿನ ಜನಾನುರಾಗಿ ಗೆಳೆಯ ಮಾಫೀರ್

#ಬೇಸಿಗೆಯಲ್ಲಿ_ಜೇನುಗಳೇಕೆ_ಉಗ್ರವಾಗುವುದು?
#ಅಪಾಯದಿಂದ_ಪಾರಾದ_ಜನಾನುರಾಗಿ_ಮಾಪೀರ್

   ಮೊನ್ನೆ ರಿಪ್ಪನ್ ಪೇಟೆ ಸಮೀಪದಲ್ಲಿ ಶಾಲೆಗೆ ಸೈಕಲ್ನಲ್ಲಿ ಬರುತ್ತಿದ್ದ ವಿದ್ಯಾಥಿ೯ಗೆ ಜೇನು ಕಚ್ಚಿದ ಬಗ್ಗೆ ಮತ್ತು ಅವನನ್ನು ರಕ್ಷಿಸಲು ಹೋದವರಿಗೂ ಜೇನು ಕಚ್ಚಿ ಆಸ್ಪತ್ರೆ ಸೇರಿಸಿದ ವರದಿ ಪತ್ರಿಕೆಯಲ್ಲಿ ಓದುತ್ತಿರುವಾಗಲೇ ನಮ್ಮ ಗೆಳೆಯ ಜಪ್ರುಲ್ಲಾ ಯಾನೆ ಮಾಪೀರ್ ಸಾಹೇಬರಿಗೆ ಆನಂದಪುರದ ರೈಲ್ವೆ ನಿಲ್ದಾಣದ ರಸ್ತೆಯ ಮರದಲ್ಲಿದ್ದ ಜೇನುಗಳು ಕಚ್ಚಿ ಸಾಗರ ಆಸ್ಪತ್ರೆಗೆ ಒಯ್ದರೆಂದು ಸುದ್ದಿ ಬಂದಾಗ ಬೇಸರ ಆಯಿತು ಮತ್ತು ಆತಂಕ.
  ನನ್ನ ಸಹೋದರ ಸಾಗರ ಆಸ್ಪತ್ರೆಗೆ ಹೋಗಿ ನೋಡಿ ಪೋನ್ ಮಾಡಿ ಆತಂಕ ಪಡುವ ಪ್ರಸಂಗ ಇಲ್ಲ ಅಂದಾಗ ನೆಮ್ಮದಿ ಆಯಿತು.
  ಇವರ ಹೆಸರು ಜಪರುಲ್ಲಾ ಮನೇನಲ್ಲಿ ಅನೇಕ ದೇವರ ಹರಕೆಯಿಂದ ಹುಟ್ಟಿದ ಗಂಡು ಮಗನಾದ್ದರಿಂದ ಮುಸ್ಲಿಂ ಸಂತರೋವ೯ರ ಮಾಪೀರ್ ಎಂಬ ಹೆಸರೆ ಈಗ ಊರಲ್ಲಿ ಚಾಲ್ತಿ, ಜನಾನುರಾಗಿ, ಕನ್ನಡ ಅಭಿಮಾನಿ, ಸವ೯ದಮ೯ದವರೂ ಇಷ್ಟ ಪಡುವ ಮಾಪೀರ್ ಸಾಹೇಬರು ತಮ್ಮ ಮಕ್ಕಳನ್ನು ಸಕಾ೯ರಿ ಕನ್ನಡ ಶಾಲೆಯಲ್ಲೇ ಓದಿಸುತ್ತಾರಾದ್ದರಿಂದ ನಮ್ಮ ಊರಿನ ಸರ್ಕಾರಿ ಶಾಲಾಭಿವೃದ್ಧಿ ಸಮಿತಿಗೆ ಅವಿರೋದ ಅಧ್ಯಕ್ಷರು ಕೂಡ ಇವರು ನಮ್ಮ ಊರ ಶಾಲೆಗೆ 25 ನೇ ವರ್ಷದ ಆಚರಣೆಯ ಬೆಳ್ಳಿಹಬ್ಬ ಸ್ಪಂತ ಹಣದಿಂದ ಅಮೋಘವಾಗಿ ನಡೆಸಿದ್ದು ದಾಖಲೆ, ಶಾಲಾ ಪ್ರಾರಂಭದಿಂದ ಸಹಕರಿಸಿದ ಜನಪ್ರತಿನಿದಿ, ಶಿಕ್ಷಕರನ್ನು, ಹಳೇ ವಿದ್ಯಾಥಿ೯ಗಳನ್ನು ಮರೆಯದೇ ಕರೆತಂದು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಹಬ್ಬದ ಊಟ ಹಾಕಿಸಿ ಊರ ಹಬ್ಬದಂತೆ ನಡೆಸಿದ್ದರು.
   ಶಾಮಿಯಾನ, ಜನರೇಟರ್, ವಿದ್ಯುತ್ ದೀಪಾಲಂಕಾರ, ಸ್ಟೇಜ್, ಕುಚಿ೯, ಡೈನಿಂಗ್ ಟೇಬಲ್ ಮತ್ತು ಅಡುಗೆ ಪಾತ್ರೆಗಳನ್ನು ಬಾಡಿಗೆ ನೀಡುವ ಇವರ ಸಂಸ್ಥೆ ಹೆಸರು VSV ಶ್ಯಾಮಿಯಾನ ಅಂದರೆ ನಮ್ಮ ಊರ ದೇವರಾದ ವರಸಿದ್ಧಿ ವಿನಾಯಕ ನ ಹೆಸರೇ ಇಟ್ಟಿದ್ದಾರೆ.
  ಬಡವ ಬಲ್ಲಿದ ನೋಡದೆ ಅವರ ಅಗತ್ಯಕ್ಕೆ ತಕ್ಕಂತೆ ಶ್ಯಾಮಿಯಾನ, ದೀಪಾಲಂಕಾರ, ಸ್ಟೇಜ್ ಕುರ್ಚಿ, ಪಾತ್ರೆ ಜನರೇಟರು ಹಾಕಿ, ಧ್ವನಿವದ೯ಕದಲ್ಲಿ ಅವರ ಇಷ್ಟದ ಸಂಗೀತ ಹಾಕಿ ಕಾಯ೯ಕ್ರಮಯಶಸ್ವಿ ಮಾಡಿ ಬಂದು ಬಿಡುತ್ತಾರೆ ಹಣವೂ ಕೇಳದೇ, ನಂತರ ಮನೆ ಮಾಲಿಕನೇ ಇವರನ್ನ ಹುಡುಕಿ ಸಂತೋಷದಿಂದ ಹಣ ಪಾವತಿ ಮಾಡುತ್ತಾರೆ.
  ನಮ್ಮೂರ ಜಾತ್ರೆಗೆ ಇವರ ಸೇವೆ  ನಿರಂತರವಾಗಿ ನಡೆಯುತ್ತಿದೆ ಶ್ಯಾಮಿಯಾನ ಪಾತ್ರೆ ಪಡಗ ಉಚಿತ ಸೇವೆ, ವಿದ್ಯುತ್ ದೀಪಾಲಂಕಾರ, ಸ್ಪೇಜ್ ಮತ್ತು ಧ್ವನಿವದ೯ಕಕ್ಕೆ ಹಣ ಜಾತ್ರಾ ಸಮಿತಿಯಿಂದ ನೀಡುತ್ತಾರಾದರು ಕೆಲವೊಮ್ಮೆ ವರ್ಷವಾದರೂ ಹಣ ಪಾವತಿ ಆಗದಿದ್ದರೂ ಸ್ವಲ್ಪ ಕೂಡ ಬೇಸರಿಸದೇ ಮುಂದಿನ ಜಾತ್ರೆ ಯಶಸ್ವಿ ಮಾಡುತ್ತಾರೆ ಅಷ್ಟೇ ಅಲ್ಲ ನಿರಂತರವಾಗಿ ಎಲ್ಲಾ ಜಾತ್ರೆಗೆ ರಶೀದಿ ಪುಸ್ತಕ ಪಡೆದು ಹಣ ಸಂಗ್ರಹಿಸಿ ಕೊಡುತ್ತಾರೆ, ತಮ್ಮ ಶಕ್ತಿಗೆ ತಕ್ಕಂತೆ ಕಾಣಿಕೆ ನೀಡುವುದರಿಂದ ನಮ್ಮ ಊರ ಜಾತ್ರ ಸಮಿತಿ ಸದಸ್ಯರೂ ಇವರನ್ನ ಖಾಯ೦ ಆಗಿ ಜಾತ್ರ ಸಮಿತಿ ಸದಸ್ಯರಾಗಿ ಇಟ್ಟುಕೊಂಡಿದ್ದಾರೆ.
  ಹಾಗಾಗಿ ಮಾಫೀರ್ ಗೆ ದಿಡೀರ್ ಆಗಿ ಜೇನು ಕಚ್ಚಿದ್ದು ಸುತ್ತಲಿನ ಸಾಗರ ಮತ್ತು ಹೊಸನಗರ ತಾಲ್ಲೂಕಿನ ಅನೇಕ ಊರಿನ ಇವರ ಅಭಿಮಾನಿಗಳಿಗೆ ಆತಂಕ ಆಗಿತ್ತು, ಇವರ ಶಿಷ್ಯ ಪ್ರವೀಣ್ ಆಚಾರರಿಗೂ ಜೇನು ಕಚ್ಚಿದೆ.
  ಕಾಡು ಜೇನಿಗೆ ಗಿಡುಗ ಹೊಡೆದರೆ, ಕಾಗೆ ಅಕಸ್ಮಾತ್ ತಾಗಿದರೆ ಜೇನು ಕೆರಳುತ್ತೆ ಅನ್ನುತ್ತಾರೆ ಮತ್ತೆ ಬಿಸಿಲು ಜಾಸ್ತಿ ಆಗಿ ತಾಪಮಾನ ಬದಲಾದರೆ ಕೂಡ ಈ ರೀತಿ ಕೆರಳುತ್ತಂತೆ ಇದರ ಮಧ್ಯೆ ಕಿಲಾಡಿ ಹುಡುಗರು ಚಾಟರ್ ಬಿಲ್ಲಿನಿಂದ ಜೇನುಗೂಡನ್ನು ಕಲ್ಲಿನಿಂದ ಛೇದಿಸುವ ಹುಚ್ಚಾಟದಿಂದಲೂ ಊರ ಮದ್ಯೆಯಲ್ಲಿ ಇಂತಹ ಅನಾಹುತಕ್ಕೆ ಕಾರಣ ಆಗುತ್ತದೆ.
  ಕುರಿ ಉಣ್ಣೆಯ ಕಂಬಳಿ ಮಾತ್ರ ಇಂತಹ ಸಂದಭ೯ದಲ್ಲಿ ಜೇನಿನಿಂದ ರಕ್ಷಣೆ ನೀಡುತ್ತದೆ ಆದರೆ ಈಗ ಯಾರ ಮನೆಯಲ್ಲೂ ಕಂಬಳಿ ಇಲ್ಲ, ಎಲ್ಲೆಲ್ಲೂ ಪ್ಲಾಸ್ಟಿಕ್ ಮಯ ಆಗಿದೆ.
  ಜೇನಿನ ಅಕ್ರಮಣದಿಂದ ಗೆಳೆಯರು ಸುದಾರಿಸಿ ಕೊಳ್ಳುತ್ತಿದ್ದಾರೆ ಯಮ ಯಾತನೆಯ ನೋವು ಬಾವು ಕಡಿಮೆ ಆಗಲು ಒಂದೆರೆಡು ವಾರವಾದರೂ ಬೇಕು.
   ಇವರ ಸಂಪಕ೯ 09449170199

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...