Skip to main content

Blog number 1276.ದೇಶದ ಜಲಪಾತಗಳ ಪಟ್ಟಿ ಪರಿಷ್ಕರಣೆ ಆಗಿ ಹಿಮಾಚಲ ಪ್ರದೇಶದ ದೇಶದ ಅತ್ಯಂತ ಎತ್ತರದ ಜಲಪಾತ ನೋಹಕಾಲಿಕಾ ಕೈ ಬದಿಗೊತ್ತಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡಿನ ದಟ್ಟ ಅರಣ್ಯದ ಮಧ್ಯದಲ್ಲಿ ಜನರ ದೃಷ್ಟಿಗೆ ಬೀಳದ ಕುಂಚಿಕಲ್ ಪಾಲ್ಸ್ ಸೇರಲಿದೆಯಾ?

#ನಮ್ಮ_ದೇಶದ_ಅತ್ಯಂತ_ಎತ್ತರದ_ಜಲಪಾತ_ಯಾವುದು?

#ದಾಖಲೆಯಲ್ಲಿರುವುದು_ಹಿಮಾಚಲಪ್ರದೇಶದ_ನೋಹಕಾಲಿಕೈ_ಜಲಪಾತ.

#ಆದರೆ_ಶಿವಮೊಗ್ಗ_ಜಿಲ್ಲೆಯ_ಮಾಸ್ತಿಕಟ್ಟೆಯ_ನಿಡುಗೋಡಿನ_ಕುಂಚಿಕಲ್_ಪಾಲ್ಸ್_ಅತ್ಯಂತ_ಎತ್ತರ_ಎನ್ನುತ್ತಾರೆ!!.

#ಜೋಗ್_ಪಾಲ್ಸ್_ಗಿಂತ_ಮಾವಿನಗುಂಡಿ_ಹೆಚ್ಚು_ಎತ್ತರ!?

#ದೇಶದ_ನೋಹಾಕಾಲಿಕೈ_
#ಜಲಪಾತಕ್ಕಿಂತ_ಶಿವಮೊಗ್ಗಜಿಲ್ಲೆಯ_ಕುಂಚಿಕಲ್_ಪಾಲ್ಸ್_ಹೆಚ್ಚು_ಎತ್ತರ ?

#ಈ_ಸುದ್ಧಿಗಳ_ಬಗ್ಗೆ_ಸರ್ಕಾರದ_ಉತ್ತರ_ಬೇಕಾಗಿದೆ.

#ಕುಂಚಿಕಲ್_ಪಾಲ್ಸ್_ನೋಡಿದವರು_ಇದ್ದಾರ?

#ಸಾಮಾಜಿಕ_ಜಾಲತಾಣದಲ್ಲಿ_ಹರಿದಾಡುತ್ತಿರುವ_ಚಿತ್ರ_ಕುಂಚಿಕಲ್_ಪಾಲ್ಸ್_ನದ್ದಾ?

#ವರಾಹಿ_ಮುಳುಗಡೆ_ರೈತ_ಕುಣುಬಿ_ಈರಪ್ಪಣ್ಣರ_ಜೊತೆ
#ಕುಂಚಿಕಲ್_ಜಲಪಾತದ_ಅನ್ವೇಷಣೆಗೆ_1990ರಲ್ಲಿ_ನಮ್ಮ_ವಿಪಲ_ಪ್ರಯತ್ನ

#ಈ_ವದಂತಿಗಳು_ಪರಿಶೀಲನೆ_ಆಗಿ_ಸರ್ಕಾರ_ದೃಡೀಕರಿಸಿದರೆ
#ದೇಶದ_ಜಲಪಾತಗಳ_ಪಟ್ಟಿ_ಪರಿಷ್ಕರಣೆ_ಆಗಿ_ನಮ್ಮ_ಜಿಲ್ಲೆಯ_ಕುಂಚಿಕಲ್_ಪಾಲ್ಸ್_ಅಗ್ರಸ್ಥಾನ_ಪಡೆಯಲಿದೆ.

    ಕಣ್ಣೆದುರಿಗೇ ಇರುವ ಜೋಗ ಜಲಪಾತದ ಪಕ್ಕದ ಮಾವಿನಗುಂಡಿ ಜಲಪಾತದ ಬಗ್ಗೆ ಮಾಹಿತಿ ಕೊರತೆ ಮತ್ತು ಅದರ ಅಳತೆ ಆಗದ ಬಗ್ಗೆ ಬರೆದ ಲೇಖನ ಓದಿದ ಸಮಾಜವಾದಿ ಗೋಪಾಲಗೌಡರ ಗೆಳೆಯರಾಗಿದ್ದ ಸುಕುಮಾರರ ಪುತ್ರರಾದ ಬಟ್ಟೆಮಲ್ಲಪ್ಪದ #K_S_ಸುಮ೦ಗದ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡು ವಿಲೇಜ್ ಸಮೀಪದ ಕುಂಚಿಕಲ್ ಪಾಲ್ಸ್ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿನ ಮಾಹಿತಿ ಹಂಚಿಕೊಂಡಿದ್ದರು.
  ಈ ಕುಂಚಿಕಲ್ ಪಾಲ್ಸ್ ಎತ್ತರ 455 ಮೀಟರ್ ಅಂದರೆ 1433 ಅಡಿ ಇದೆ ಎಂಬ ಮಾಹಿತಿ ಆ ಪ್ರಕಾರ ಈ ಅಳತೆ ಸರಿ ಇದ್ದರೆ ನಮ್ಮ ದೇಶದ ಅತಿ ಎತ್ತರದ ಜಲಪಾತ ನಮ್ಮ ಜಿಲ್ಲೆಯ ಕುಂಚಿಕಲ್ ಪಾಲ್ಸ್ ಆಗಲಿದೆ.
  ಏಕೆಂದರೆ ಈಗ ದಾಖಲೆಯಲ್ಲಿರುವುದು ಹಿಮಾಚಲ ಪ್ರದೇಶದ ನೋಹಲಿ ಕೈ ಪಾಲ್ಸ್ ಇದರ ಎತ್ತರ 340 ಮೀಟರ್ ಅಂದರೆ 1115 ಅಡಿ.
   ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಸಮೀಪದ ನಿಡಗೋಡಿ ವಿಲೇಜ್ ಸಮೀಪ ಒಂದು ತುಂಬಾ ಎತ್ತರದಿಂದ ಧುಮುಕುವ ಜಲಪಾತ ಇದೆ, ಅದು ಹೊರ ಜಗತ್ತಿಗೆ ಪರಿಚಯವಾಗಿಲ್ಲ, ಅದನ್ನು ಅನ್ವೇಷಣೆ ಯಾರೂ ಮಾಡಿಲ್ಲ, ಅದನ್ನು ನೋಡಿದವರು ಸ್ಥಳಿಯ ಕೆಲವೇ ಕೆಲವು ರೈತರು ಅನ್ನುವ ಸುದ್ದಿ 1990ರಲ್ಲಿ ನನ್ನ ಕಿವಿಗೆ ಬಿದ್ದಿತ್ತು.
  ಈ ಸಂದರ್ಭದಲ್ಲೇ ನಮ್ಮ ಊರಿನ ಸಮೀಪದ ಘಂಟಿನಕೊಪ್ಪದಲ್ಲಿ ಜಮೀನು ಖರೀದಿಸಿದ ತೀರ್ಥಳ್ಳಿ ತಾಲ್ಲೂಕಿನ ಯಡೂರು ಸಮೀಪದ ಕೆಲವು ವರಾಹಿ ಮುಳುಗಡೆ ರೈತರ ಕುಟುಂಬದಲ್ಲಿ ನನಗೆ ಆತ್ಮೀಯರಾಗಿದ್ದ ಕುಣುಬಿ ಈರಪ್ಪಣ್ಣ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದರು.
  ಅವರಿಗೆ ಅವರ ಅಜ್ಜ0ದಿರು ಈ ಜಲಪಾತದ ಬಗ್ಗೆ ತಿಳಿಸಿದ್ದರಂತೆ ನಂತರ ಇವರ ಪ್ರಾಯದ ದಿನಗಳಲ್ಲಿ ಇವರ ಕೆಲವು ಗೆಳೆಯರ ಜೊತೆ ಸೇರಿ ಕಷ್ಟಪಟ್ಟು ಕಾಡಿನಲ್ಲಿ ದಾರಿ ಮಾಡಿಕೊಳ್ಳುತ್ತಾ ಈ ಜಲಪಾತ ವೀಕ್ಷಿಸಿದ್ದರಂತೆ.
  ಆ ಸಂದರ್ಭದಲ್ಲಿ ಕಾಳಿ೦ಗ ಸರ್ಪ ಬಿದಿರು ಎಲೆಗಳ ಗುಡ್ಡೆ ಮಾಡಿ ಮೊಟ್ಟೆಗೆ ಕಾವು ನೀಡುವ ಅನೇಕ ಜಾಗಗಳು ಅವರಿಗೆ ಎದುರಾಗಿತ್ತಂತೆ.
   ನಾವೊಂದಿಷ್ಟು ಗೆಳೆಯರು ಈ ಜಲಪಾತ ಅನ್ವೇಷಿಸಿದ ಮೊದಲಿಗರಾಗಬೇಕೆಂಬ ಹುಚ್ಚಿಗೆ ಬಿದ್ದು ಎಲ್ಲಾ ತಯಾರಿ ಮಾಡಿಕೊಂಡಿದ್ದೆವು, ಕುಣುಬಿ ಈರಪ್ಪಣ್ಣರ ನೇತೃತ್ವದಲ್ಲಿ ಅವರ ಯಡೂರು ಸಮೀಪದ ಕೆಲ ಗೆಳೆಯರು ಬಂದೂಕುಗಳ ಜೊತೆ, ದಾರಿ ಮಾಡಿಕೊಳ್ಳಲು ಕತ್ತಿ ಮತ್ತು ಕೊಡಲಿ ಜೊತೆ, ದಾರಿಯಲ್ಲಿ ಅಡುಗೆಗಾಗಿ ವ್ಯವಸ್ಥೆ, ಪೋಟೋ ವಿಡಿಯೋ ಇತ್ಯಾದಿ ತಯಾರಿ ಮಾಡಿದೆವು.
  ಈ ಹಿಂದೆ ಈರಪ್ಪಣ್ಣ ಹೇಳಿದ್ದ ಕಾಳಿಂಗ ಸರ್ಪಗಳ ಮೊಟ್ಟೆಗೆ ಕಾವು ನೀಡುತ್ತಿದ್ದ ಕಥೆ ಕೇಳಿದ್ದ ಗೆಳೆಯರು ಒಬ್ಬೊಬ್ಬರೇ ಹಿಂದೆ ಸರಿದು ಕೊನೆಗೆ ಉಳಿದಿದ್ದು ನಾನು ಮತ್ತು ಈರಪ್ಪಣ್ಣ ಮಾತ್ರ ಹೀಗೆ ನಮ್ಮ ದೇಶದ ಅತ್ಯಂತ ಎತ್ತರದ ಜಲಪಾತ? ಅನ್ವೇಷಿಸುವ ಸಾಹಸ ಯಾತ್ರೆ ವಿಪಲವಾಯಿತು.
   ಈ ಬಗ್ಗೆ ಬರೆದ ಕಾದಂಬರಿ ಮುಂದೆ ಯಾವತ್ತಾದರೂ ಪ್ರಕಟಿಸಬೇಕು ಅಂತ ಇದ್ದೇನೆ.
   ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಕು೦ಚಿ ಕಲ್ ಪಾಲ್ಸ್ ಪೋಟೋ ನಿಜಕ್ಕೂ ಕುಂಚಿಕಲ್ ಪಾಲ್ಸ್ ನದ್ದಾ?
ದೇಶದ ಅತ್ಯಂತ ಎತ್ತರ ಎನ್ನುವ ಇದರ ಎತ್ತರ 445 ಮೀಟರ್ ಅಂದರೆ 1433 ಅಡಿ ಎನ್ನುವುದು ನಿಖರ ಅಳತೆಯಾ? ಹಾಗಾದರೆ ಇದನ್ನು ಅಳೆದವರು ಯಾರು? ಈ ಪೋಟೋ ತೆಗೆದವರು ಯಾರು? ಎಂಬ ಪ್ರಶ್ನೆಗಳು ಕಾಡದೇ ಇರುವುದಿಲ್ಲ.
  ಈ ದುರ್ಗಮ ಪ್ರದೇಶದಲ್ಲಿ ನಿಗೂಡವಾಗಿರುವ ಜಲಪಾತ ಇರುವುದು ಮಾತ್ರ ಸತ್ಯ ಸಂಗತಿ, ಅದರ ಎತ್ತರ ಏನಾದರೂ ಹಿಮಾಚಲ ಪ್ರದೇಶದ 1115 ಅಡಿ ಎತ್ತರದ ನೋಹಲಿ ಕೈ ಪಾಲ್ಸ್ ಗಿಂತ ಎತ್ತರ ಇರುವುದೇ ಆದರೆ ನಮ್ಮ ದೇಶದ ಜಲಪಾತಗಳ ಪಟ್ಟಿಯಲ್ಲಿ ದೇಶದ ಅತ್ಯಂತ ಎತ್ತರದ ಜಲಪಾತ ನಮ್ಮ ರಾಜ್ಯದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವರಾಹಿ ನದಿಯ ಕುಂಚಿಕಲ್ ಜಲಪಾತ ಸ್ಥಾನ ಪಡೆಯಲಿದೆ.
   ಈ ಬಗ್ಗೆ ಅಧಿಕೃತ ಅಳತೆ ಮತ್ತು ಜಲಪಾತದ ಚಿತ್ರವನ್ನು ಸರ್ಕಾರ ಪರಿಶೀಲಿಸಿ ದೃಡಿಕರಿಸಬೇಕು ಈ ಪ್ರದೇಶ ಪ್ರವೇಶಕ್ಕೆ  ಅರಣ್ಯ ಇಲಾಖೆ ನಿಷೇದವೂ ಇದೆ ಅಂತೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ