Skip to main content

Blog number 1323. ಅಯನೂರು ಮಂಜುನಾಥ್ ಚುನಾವಣಾ ರಾಜಕಾರಣದ ಲಕ್ಕಿ ಸ್ಟಾರ್, ಜನಾಕರ್ಷಕ ವಾಗ್ಮಿ, ಬಿಜೆಪಿ ಪಕ್ಷಕ್ಕೆ ಬಿಸಿ ತುಪ್ಪ.

#ಶಿವಮೊಗ್ಗ_ರಾಜಕಾರಣದಲ್ಲಿನ_ವಿಶಿಷ್ಟ_ವ್ಯಕ್ತಿ.

#ಲಕ್ಕಿ_ಸ್ಟಾರ್_ಆಯನೂರು_ಮಂಜುನಾಥ್.

#ವಿದಾನಸಬಾ_ಸದಸ್ಯ_ಸಂಸದ_ರಾಜ್ಯಸಭಾ_ವಿದಾನಪರಿಷತ್_ಹೀಗೆ_ಸಾಲು_ಸಾಲು

#ಬಂಗಾರಪ್ಪರ_ಸೋಲಿಸಿದ_ಮೊದಲ_ಬಿಜೆಪಿ_ಸಂಸದ

#ವಿಜಯಮಲ್ಯರ_ಜನತಾಪಕ್ಷದಲ್ಲಿ_ರಾಜ್ಯಾಧ್ಯಕ್ಷ

#ದರ್ಮಸಿಂಗ್_ಮುಖ್ಯಮಂತ್ರಿ_ಆಗಿದ್ದಾಗ_ಕಾಂಗ್ರೇಸ್_ಪಕ್ಷದಿಂದ_ಮದ್ಯಂತರ_ಸಂಸದ_ಚುನಾವಣೆಗೆ_ಸ್ಪರ್ದೆ 
  
#ಶಿವಮೊಗ್ಗ_ಜಿಲ್ಲೆಯಿಂದ_1994ರಲ್ಲಿ_ಯಡೂರಪ್ಪ_ಈಶ್ವರಪ್ಪ_ಆರಗಜ್ಞಾನೇಂದ್ರ_ಜೊತೆ_ಅಯನೂರು_ಶಾಸಕರು

#ಅವರೆಲ್ಲರೂ_ಮಂತ್ರಿ_ನಿಗಮಗಳ_ಅಧ್ಯಕ್ಷರಾದರು_ಆದರೆ_ಆಯನೂರರನ್ನು_ಮಂತ್ರಿ_ಮಾಡಲಿಲ್ಲ_ಯಾಕೆ?

   ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ವಿದ್ಯಾರ್ಥಿ ಮುಖಂಡರು, ಬಿಎ-ಎಲ್ ಎಲ್ ಬಿ ಪದವೀದರರು, 80 ರ ದಶಕದಲ್ಲಿ ಕಾರ್ಮಿಕ ಮುಖಂಡರು ಆಗಿದ್ದ ಅಯನೂರು ಮಂಜುನಾಥ್ ರು ಬಿಜೆಪಿಯಿಂದ ಯಾರೂ ಹೊಸನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮನಸ್ಸು ಮಾಡದ ಕಾಲದಲ್ಲಿ (1994 ರಲ್ಲಿ) ಸ್ಪರ್ಧೆ ಮಾಡಿ ಹೊಸನಗರದ ಸ್ಟಾಮಿ ರಾವ್ ರನ್ನು ಸೋಲಿಸಿ ಶಾಸಕರಾದವರು.
   ಆಗ ಶಿವಮೊಗ್ಗ ಜಿಲ್ಲೆಯಲ್ಲಿ ಯಡೂರಪ್ಪ, ಈಶ್ವರಪ್ಪ, ಆರಗ ಜ್ಞಾನೇಂದ್ರರ ಜೊತೆ ಅಯನೂರು ಸೇರಿ ನಾಲ್ಕು ಬಿಜೆಪಿ ಶಾಸಕರು ಇವರೆಲ್ಲರೂ ಮಂತ್ರಿಗಳಾದರೂ ಅಯನೂರು ಮಂಜುನಾಥ್ ಏಕೆ ಮಂತ್ರಿ ಆಗಲಿಲ್ಲ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿದೆ.
   1998 ರಲ್ಲಿ ಬಂಗಾರಪ್ಪರನ್ನು ಸೋಲಿಸಿ ಲೋಕಸಭಾ ಸದಸ್ಯರಾದರು,ಇವರು ಬಿಜೆಪಿ ಪಕ್ಷದ ಮೊದಲ ಶಿವಮೊಗ್ಗ ಸಂಸದರು.
   ನಂತರ ಶಿವಮೊಗ್ಗದ ಬಿಜೆಪಿಯಲ್ಲಿ ಇವರನ್ನು ಕಡೆಗಾಣಿಸಲಾಗುತ್ತಿದೆ ಎಂಬ ಕಾರಣದಿಂದ ದೂರವಾದಾಗ ವಿಜಯ ಮಲ್ಯ ಇವರನ್ನು ರಾಜ್ಯ ಜನತಾ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರು ಅಲ್ಲಿ ಇವರಿಗೆ ಸರಿ ಬರದೆ ಕಾಂಗ್ರೇಸ್ ಸೇರಿ ಶಿವಮೊಗ್ಗ ಲೋಕಸಬೆಯ ಮಧ್ಯಂತರ ಚುನಾವಣೆಗೆ ಸ್ವರ್ಧಿಸಿದ್ದರು.
   ಪುನಃ ಬಿಜೆಪಿ ಸೇರಿ 2010 ರಿಂದ 2016ರವರೆಗೆ ರಾಜ್ಯಸಭಾ ಸದಸ್ಯರಾದರು, 2018ರಿಂದ ಕರ್ನಾಟಕ ನೈರುತ್ಯ ಪದವೀದರ ಕ್ಷೇತ್ರದಿಂದ ವಿದಾನ ಪರಿಷತ್ ಸದಸ್ಯರಾಗಿದ್ದಾರೆ.
   ಸದಾ ಕೈಯಲ್ಲಿ ಉರಿಯುವ ಸಿಗರೇಟು, ಆಗಾಗ್ಗೆ ಕಾಫಿ ಹೀರುತ್ತಾ ಯಾವಾಗಲೂ ಶಿವಮೊಗ್ಗದ ಜ್ಯೂವೆಲ್ ರಾಕ್ ಹೋಟೆಲ್ ನಲ್ಲಿ ಎಲ್ಲರಿಗೂ ಸಿಗುವ ಅಯನೂರು ಮಂಜುನಾಥ್ ಶಿವಮೊಗ್ಗ ಪಾರ್ಲಿಮೆಂಟ್ ಕ್ಷೇತ್ರದ ಹಳ್ಳಿ ಹಳ್ಳಿಗೆ ತಲುಪಿದ ಮೊದಲ ಮತ್ತು ಕೊನೆಯ ಪಾಲಿಮೆ೦ಟ್ ಸದಸ್ಯರೆಂದೇ ಹೆಸರಾದವರು.
   ಒಂದು ಸಾದಾ ಬಿಳಿ ಅಂಬಾಸಡರ್ ಕಾರಿನಲ್ಲಿ ಯಾವುದೇ ಪೋಲಿಸ್ ಎಸ್ಕಾರ್ಟ್ ಇಲ್ಲದೆ ತಮ್ಮ ಕ್ಷೇತ್ರ ಸುತ್ತುತ್ತಿದ್ದರು, ಒಮ್ಮೆ ನನ್ನ ಮನೆ ಎದರು ಒ0ದು ಬಿಳಿ ಅಂಬಾಸಡರ್ ಕಾರು ಬಂದು ನಿಂತಿತು ಅದರಿಂದ ಇಳಿದವರು ಸಂಸದ ಆಯನೂರು ಮಂಜುನಾಥ್ ಜೊತೆಗೆ ಪತ್ರಕರ್ತ ಹುಲಿಮನೆ ತಿಮ್ಮಪ್ಪ ನನಗೇ ಆಶ್ಚರ್ಯ.
   ಕಾಂಗ್ರೇಸ್ ನಿಂದ ಮಧ್ಯಂತರ ಚುನಾವಣೆಗೆ ನಿಂತಾಗ ನಕ್ಸಲ್ವೆಟರ್ ಮುಂಜಾಗುರತಿಯಿಂದ ಬಾರೀ ಬಂದೋಬಸ್ತಿನಲ್ಲಿ ಮುಖ್ಯಮಂತ್ರಿ ದರ್ಮಸಿಂಗ್ ಜೊತೆ ಇವರ ಚುನಾವಣಾ ಪ್ರಚಾರದ ಕ್ಯಾರ್ವಾನ್ ನನ್ನ ಮನೆ ಎದುರು ಒ0ದು ರಾತ್ರಿ ಹಾದು ಹೋಗುವಾಗ ಮರೆಯದೆ ನನಗೆ ಕೈ ಬೀಸಿ ಹೋಗಿದ್ದರು.
  ಬಿಜೆಪಿಯಲ್ಲಿನ ಜಿಲ್ಲಾ ಮುಖಂಡರುಗಳು ಇವರನ್ನು ಮಂತ್ರಿ ಮಾಡಬಹುದಿತ್ತು ಆದರೆ ಉದ್ದೇಶ ಪೂರ್ವಕವಾಗಿ ಇವರನ್ನು ಸೈಡ್ ಕಾರ್ನರ್ ಮಾಡಿದರು ಆದರೆ ಚುನಾವಣೆಯಲ್ಲಿ ಮಾತ್ರ ಇವರ ಜನ ಆಕರ್ಷಕ ಬಾಷಣದಿಂದಾಗಿ ಇವರನ್ನು ತಪ್ಪದೇ ಬಳಸಿಕೊಳ್ಳುತ್ತಾರೆ.
   ಇವರು ಸೋಲುತ್ತಾರೆ, ಈ ಕ್ಷೇತ್ರ ಹಾಗಿದೆ ಅನ್ನುವ ಕ್ಷೇತ್ರದಿಂದ ಸ್ಪರ್ದೆಗೆ ಇವರನ್ನು ನಿಲ್ಲಿಸಿದಲ್ಲೆಲ್ಲ ಇವರು ಆಶ್ಚರ್ಯಕರವಾಗಿ ಗೆದ್ದು ಬರುತ್ತಾರಾದ್ದರಿಂದ ಆಯನೂರು ಮಂಜುನಾಥ್ ಲಕ್ಕಿ ಸ್ಟಾರ್ - ಗೆಲ್ಲೋ ಕುದುರೆ ಎಂಬ ಪ್ರಖ್ಯಾತಿ ಪಡೆದಿದ್ದಾರೆ.
   ಈಗ 68 ವಷ೯ ದಾಟಿರುವ ಅಯನೂರು ಮಂಜುನಾಥ್ ಬಿಜೆಪಿ ಪಕ್ಷದಲ್ಲಿನ ಆಂತರಿಕ ಹೊಟ್ಟೆ ಕಿಚ್ಚು ಮತ್ತು ವಂಶ ಪಾರಂಪರ್ಯ ರಾಜಕಾರಣ, ಧರ್ಮದ್ವೇಷದ ಜಾತಿ ದ್ವೇಷದ ರಾಜಕಾರಣದಿಂದ ಬೇಸತ್ತಿರಬೇಕು ಈ ಕಾರಣದಿಂದಲೇ ಬಿಜೆಪಿಯಿಂದ ಶಿವಮೊಗ್ಗ ವಿದಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ,ಬಿಜೆಪಿ ಪಕ್ಷ ಇವರ ಆಸೆಗೆ ತಣ್ಣೀರೆರಚಿದರೆ ಅಯನೂರು ಮಂಜುನಾಥ್ ಕಾಂಗ್ರೇಸ್ ಅಥವ ಜೆಡಿಎಸ್ ಪಕ್ಷ ಸೇರುತ್ತಾರೆ ಹಾಗೇನಾದರು ಆದರೆ ..... ಮುಂದೇನು? ಅನ್ನುವ ಚರ್ಚೆಗೆ ನಿನ್ನೆ ಅವರ ಅಭಿಮಾನಿಗಳ ಹೆಸರಲ್ಲಿ ಶಿವಮೊಗ್ಗದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ ಶುಭಾಶಯದ ಪ್ಲೆಕ್ಸ್ ತುಂಬಾ ಪಂಚಿಂಗ್ ಇರುವ ಟ್ರಯಲರ್ ಆಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ