Skip to main content

Blog number 1299. ನವಟೂರಿನ ಸುರೇಶ್ ಆಚಾರ್ ಯಾನೆ ಸೂರಿ ಎಂಬ ಕಲಾವಿದನ ನೆನಪುಗಳು.

#ನವಟೂರು_ಸುರೇಶ್_ಆಚಾರ್_ದುರಂತ_ಜೀವನ.

#ಶಿವಮೊಗ್ಗದ_ಮಲೆನಾಡು_ಟುಡೇ_ಲೇಖನ_ನೋಡಿದ_ಮೇಲೆ_ಗೊತ್ತಾಗಿದ್ದು.

#ಶಿವಮೊಗ್ಗ_ಜೈಲಿನಲ್ಲಿ_ಸುರೇಶ್_ಆಚಾರ್_ಪ್ರಸಿದ್ದ_ಕಲಾವಿದರಾಗಿದ್ದರು.

#ಅವರು_ಬರೆದ_ಪೆನ್ಸಿಲ್_ಆರ್ಟ್_ದೊಡ್ಡ_ದೊಡ್ಡ_ಸೆಲಿಬ್ರಿಟಿಗಳ_ಮನೆಯಲ್ಲಿದೆ.
#ನಮ್ಮ_ಮಲ್ಲಿಕಾ_ರೆಸ್ಟೋರಾಂಟ್_ಪೀಠೋಪಕರಣ_ಮಾಡಿದ್ದು_ಇವರೆ.

    2012ರ ಆಗಸ್ಟ್ ತಿಂಗಳಲ್ಲಿ ನಮ್ಮ ಮಲ್ಲಿಕಾ ವೆಜ್ ನ ಪೀಠೋಪಕರಣ ತಯಾರಿಸಲು ಬಂದ ಕಾರ್ಪೆಂಟರ್ ಸುರೇಶ್ ಆಚಾರ್ ಇವರ ಊರು ನಮ್ಮ ಆನಂದಪುರಂ ಸಮೀಪದ ನವಟೂರು.
    ಇದು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಊರು, ಈ ಊರಿನ ಮಧ್ಯದಲ್ಲೇ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಸಾಗಿ ಹೋಗಿದೆ.
   ಈ ಊರಲ್ಲಿನ ವಿಶೇಷ ಅಂದರೆ ವಿಶ್ವಕರ್ಮ ಜನಾಂಗದ ಕುಟುಂಬಗಳ ಹೆಸರುಗಳು ,ರಾಮಾಯಣದ ಪ್ರಸಿದ್ದ ಪುರುಷರದ್ದು, ಬೀಷ್ಮಾಚಾರ್ - ದ್ರೋಣಾಚಾರ್ - ಬೀಮಾಚಾರ್ - ದರ್ಮಾಚಾರ್-ಭದ್ರಾಚಾರ್-ರಾಮಾಚಾರ್- ಲಕ್ಷ್ಮಣಾಚಾರ್..... ಹೀಗೆ ಸಾಲು ಸಾಲು ಮಹಾಬಾರತದ ಹೆಸರುಗಳು,ಈಗಿನ ತಲೆಮಾರಿನವರಲ್ಲಿ ಇದು ಬದಲಾಗಿದೆ.
     ಸುರೇಶ್ ಆಚಾರ್ ಆ ಕಾಲದಲ್ಲಿ ಹುಬ್ಬಳ್ಳಿ ಶಹರದಲ್ಲಿ ಕಾರ್ಪೆಂಟರ್ ಕೆಲಸದಲ್ಲಿ ಒಳ್ಳೇ ಹವಾ ಸೃಷ್ಟಿಸಿಕೊ೦ಡಾತ ನಂತರ ವಿಪರೀತ ಕುಡಿತ ಇವರ ಜೀವನೋತ್ಸವವನ್ನೆ ಕೊಂದು ಬಿಟ್ಟಿತ್ತು ಆ ಸಮಯದಲ್ಲಿಯೇ ಇವರು ಇವರ ಚಿಕ್ಕಪ್ಪನ ಮಗ ಮಂಜುನಾಥ ಆಚಾರ್ ಜೊತೆ ನಮ್ಮ ಕೆಲಸಕ್ಕೆ ಬಂದು ಪರಿಚಯ ಆದರು.
    ಕೆಲ ದಿನಗಳು ಸುರೇಶ್ ಆಚಾರ್ ಬರಲೇಇಲ್ಲ ಒಂದು ದಿನ ಇವರ ಚಿಕ್ಕಪ್ಪನ ಮಗ ಮಂಜುನಾಥ ಆಚಾರ್ ಬಂದು ಬಾಕಿ ಉಳಿದ ಕೆಲಸ ಮುಗಿಸಿ ಕೊಡುವ ಮಾತಾಡಿದರು, ಅವರು ಅವತ್ತು ಹೇಳಿದ್ದು ಸುರೇಶ್ ಆಚಾರ್ ಆರೋಗ್ಯ ಸರಿ ಇಲ್ಲ ಆಸ್ಪತ್ರೆ ಸೇರಿದ್ದಾರೆ ಅಂತ, ನಂತರ ಮಂಜುನಾಥ ಆಚಾರ್ ನನ್ನ ಕೆಲಸ ಪೂರ್ತಿ ಮಾಡಿಕೊಟ್ಟ ನಂತರ ಹೇಳಿದ್ದು ಸೂರಿ ಜೈಲಲ್ಲಿದ್ದಾರೆ ಅಂತ. ಸುರೇಶ್ ಆಚಾರ್ ಗಂಡ-ಹೆಂಡತಿ ಜಗಳದಿಂದ ಜೈಲು ಸೇರಿದ್ದು ಅಂತ ಗೊತ್ತಾದಾಗ ನನಗೂ ಬೇಸರ ಆಯಿತು, ಸುರೇಶ್ ಆಚಾರ್ ಕುಡಿತ ಜಗಳ ಬಿಡಿಸಲು ಅವರ ಕುಟುಂಬದವರು ತಕ್ಷಣ ಜಾಮೀನು ಕೊಡದ ತೀರ್ಮಾನ ಮಾಡಿದ್ದಾರೆ ಅಂದಾಗ ನಾನು ಒಪ್ಪಲಿಲ್ಲ ಯಾಕೆಂದರೆ ಅಂತರ್ಮುಕಿ ವ್ಯಕ್ತಿ ಸುರೇಶ್ ಆಚಾರ್ ಜೈಲಿನಲ್ಲಿ ಬೇರೆ ರೀತಿಯ ಕ್ರಿಮಿನಲ್ ಗಳ ಜೊತೆ ಸೇರಿ ಹಾಳಾಗುವ ಸಾಧ್ಯತೆಗಳ ಬಗ್ಗೆ ನಾನು ಮಂಜುನಾಥ ಆಚಾರ್ ಗೆ ಹೇಳಿದ್ದೆ.
  ಸಣ್ಣ ಕುಟುಂಬ ವ್ಯಾಜ್ಯದಿಂದ ಜೈಲಿಂದ ಹೊರಬಂದ ನಂತರ ಸುರೇಶ್ ಆಚಾರ್ ಕುಡಿತ ಕಡಿಮೆ ಆಗಲೇ ಇಲ್ಲ, ಪತಿ ಪತ್ನಿ ಒಂದಾಗಲೇ ಇಲ್ಲ ಇದರ ಮಧ್ಯೆ ನಮ್ಮ ಊರಿನ ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದ ಹುಂಡಿ ಕಳವು ಸುರೇಶ್ ಆಚಾರ್ ಮಾಡಿದ್ದಾರೆಂದು ಪೋಲಿಸರು ಕರೆದುಕೊಂಡು ಬಂದಾಗ ಯಾರೂ ನಂಬಲೇ ಇಲ್ಲ, ರಿಪ್ಪನ್ ಪೇಟೆಯ ಸುತ್ತಮುತ್ತದ ದೇವಸ್ಥಾನದ ಹುಂಡಿ ಕಳವು ಇವರ ಮೇಲೇ ಬಂತು, ಸುರೇಶ್ ಆಚಾರ್ ತನ್ನ ಜೊತೆ ಯಾರು ಇದ್ದರು ಅನ್ನುವುದೂ ಹೇಳಲಿಲ್ಲ, ತಾನು ಕಳ್ಳತನ ಮಾಡಲಿಲ್ಲ ಅಂತ ನಿರಾಕರಿಸಲೂ ಇಲ್ಲ ಒಂದು ರೀತಿ ಸ್ಥಿತಪ್ರಜ್ಞನಾಗಿ ಜೈಲು ಸೇರಿದರು.
  ನಮ್ಮ ದೇವಾಲಯದ ಆಡಳಿತ ಮಂಡಳಿಯವರು ಇವರ ವಿರುದ್ದದ ವಿಚಾರಣೆಯಲ್ಲಿ ಸುರೇಶ್ ಆಚಾರ್ ವಿರುದ್ದ ಸಾಕ್ಷಿ ಹೇಳಲೂ ಇಲ್ಲ ಕಾರಣ ಈ ಕಳ್ಳತನ ಸುರೇಶ್ ಆಚಾರಿಯದ್ದು ಎಂದು ಅವರು ನಂಬಲು ಸಾಧ್ಯವಿಲ್ಲದ್ದು.
    ಮೊನ್ನೆ ಸುರೇಶ್ ಆಚಾರ್ ಚಿಕ್ಕಪ್ಪನ ಮಗ ಮಂಜುನಾಥ ಆಚಾರ್ "ಸೂರಿ ರೈಲಿಗೆ ಸಿಕ್ಕಿ ಸತ್ತು ಹೋದ"ಅಂತ ದುಃಖದಿಂದ ಹೇಳಿದಾಗಲೇ ಬೇಸರ ಆಯಿತು.
   ಯಾಕಾಗಿ ಆತ್ಮಹತ್ಯೆಗೆ ಶರಣಾದರು ಅನ್ನುವುದಕ್ಕೆ ಉತ್ತರ ಇಲ್ಲ ಆದರೆ ಇವತ್ತು ಶಿವಮೊಗ್ಗದ #ಮಲೆನಾಡು_ಟುಡೇ ಸಾಮಾಜಿಕ ಜಾಲ ತಾಣದ ಸುದ್ದಿ ಸಂಸ್ಥೆಯ ಸುದ್ದಿಯ ತಲೆ ಬರಹ "ಹೊಸನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಈ ಅಪರಿಚಿತ ಎಂತಹ ಸೆಲೆಬ್ರಿಟಿ ಗೊತ್ತಾ? ಈತನಿಗಿತ್ತು ವಿವಿಐಪಿಗಳ ಪ್ಯಾನ್ ಪಾಲೋವಿಂಗ್ " ಜೆಪಿ ಅನ್ನುವವರು ಬರೆದದ್ದು ಓದಿದಾಗಲೇ ಗೊತ್ತಾಗಿದ್ದು ಸೂರಿ 2 ವರ್ಷ ಜೈಲಿನಲ್ಲಿ ಇದ್ದದ್ದು, ಅಲ್ಲಿ ಜೈಲು ಶಿಕ್ಷಕಿ ಲೀಲಾ ಮೇಡಂ ಸೂರಿಗೆ ಸೂಕ್ತ ತರಬೇತಿ ಆತ್ಮವಿಶ್ವಾಸಗಳನ್ನು ತುಂಬಿ ಸೂರಿಯಲ್ಲಿದ್ದ ಅತ್ಯುತ್ತಮ ಕಲಾಕಾರಿಕೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದರ ವಿವರ.
   ಪೆನ್ಸಿಲ್ ಆರ್ಟ್ ಮೂಲಕ ಸೂರಿ ದೇವರು, ದೇಶಭಕ್ತರು, ಸ್ವಾತಂತ್ಯ ಹೋರಾಟಗಾರರು, ನಾಡಿನ ಗಣ್ಯರಾಜಕಾರಣಿಗಳು, ಪೋಲಿಸ್ ಅಧಿಕಾರಿಗಳ ಚಿತ್ರ ಬಿಡಿಸಿದ್ದಾರೆ ಅದನ್ನು ಅನೇಕ ಗಣ್ಯರಿಗೆ ಜೈಲು ಅಧಿಕಾರಿಗಳು ನೆನಪಿನ ಕಾಣಿಕೆ ಆಗಿ ನೀಡಿದ್ದಾರೆ, ಜೈಲಿನ ಸೆಲ್ ಗಳಲ್ಲಿ ಸೂರಿ ಬರೆದ ದೇವರ ಚಿತ್ರ ಸಹ ಖೈದಿಗಳು ನಿತ್ಯ ಪೂಜೆಗೆ ಇಟ್ಟುಕೊಂಡಿದ್ದಾರೆ, ಸೂರಿ ಬರೆದ ಚಿತ್ರ ಪ್ರದಶ೯ನ ಜೈಲಿನಲ್ಲಿ ಮಾಡಿದ್ದಾರೆ ಆದರೆ ಇದಾವುದೂ ಅವರ ಮನೆಯವರಿಗಾಗಲೀ, ಊರವರಿಗಾಗಲೀ ಗೊತ್ತಾಗಿದ್ದು ಸೂರಿ ಆತ್ಮಹತ್ಯೆ ನಂತರ ನಿನ್ನೆ ಬಂದ ಈ ಸಚಿತ್ರ ವರದಿಯಿಂದ, ಸೂರಿಯ ಇನ್ನೊಂದು ಕಲಾವಿದನ ಮುಖ ಪರಿಚಯಿಸಿದ ಈ #ಮಲೆನಾಡು_today ಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ.
  ಇಲ್ಲಿ ಕ್ಲಿಕ್ ಮಾಡಿ https://malenadutoday.com/jp-writes-the-story-of-the-life-of-a-man-who-committed-suicide-in-hosanagara
  ಅಂತರ್ಮುಖಿ, ಮಿತಭಾಷಿ ಸೂರಿ ಕುಟುಂಬ ವ್ಯಾಜ್ಯದಿ೦ದ ಜೈಲಿಗೆ ಹೋಗದಿದ್ದರೆ ಸೂರಿ ಸಾಯುತ್ತಿರಲಿಲ್ಲ ಅನ್ನಿಸುತ್ತೆ, ಸೂರಿಗೆ ಈ ದುರಾಸೆಯ ನಾಟಕದ ಪ್ರಪಂಚದ ಬಗ್ಗೆ ಬೇಸರ ಅನ್ನಿಸಿರಬೇಕು ಇದಕ್ಕಿಂತ ಜೈಲೇ ವಾಸಿ ಆಗಿದ್ದಿರಬೇಕು ಹಾಗಾಗಿ ಖುಲಾಸೆ ಆಗಿ ಜೈಲಿಂದ ಬಂದವರು ರೈಲಿಗೆ ತಲೆ ಕೊಟ್ಟರಾ?....

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...