Skip to main content

Blog number 1299. ನವಟೂರಿನ ಸುರೇಶ್ ಆಚಾರ್ ಯಾನೆ ಸೂರಿ ಎಂಬ ಕಲಾವಿದನ ನೆನಪುಗಳು.

#ನವಟೂರು_ಸುರೇಶ್_ಆಚಾರ್_ದುರಂತ_ಜೀವನ.

#ಶಿವಮೊಗ್ಗದ_ಮಲೆನಾಡು_ಟುಡೇ_ಲೇಖನ_ನೋಡಿದ_ಮೇಲೆ_ಗೊತ್ತಾಗಿದ್ದು.

#ಶಿವಮೊಗ್ಗ_ಜೈಲಿನಲ್ಲಿ_ಸುರೇಶ್_ಆಚಾರ್_ಪ್ರಸಿದ್ದ_ಕಲಾವಿದರಾಗಿದ್ದರು.

#ಅವರು_ಬರೆದ_ಪೆನ್ಸಿಲ್_ಆರ್ಟ್_ದೊಡ್ಡ_ದೊಡ್ಡ_ಸೆಲಿಬ್ರಿಟಿಗಳ_ಮನೆಯಲ್ಲಿದೆ.
#ನಮ್ಮ_ಮಲ್ಲಿಕಾ_ರೆಸ್ಟೋರಾಂಟ್_ಪೀಠೋಪಕರಣ_ಮಾಡಿದ್ದು_ಇವರೆ.

    2012ರ ಆಗಸ್ಟ್ ತಿಂಗಳಲ್ಲಿ ನಮ್ಮ ಮಲ್ಲಿಕಾ ವೆಜ್ ನ ಪೀಠೋಪಕರಣ ತಯಾರಿಸಲು ಬಂದ ಕಾರ್ಪೆಂಟರ್ ಸುರೇಶ್ ಆಚಾರ್ ಇವರ ಊರು ನಮ್ಮ ಆನಂದಪುರಂ ಸಮೀಪದ ನವಟೂರು.
    ಇದು ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಸಮೀಪದ ಊರು, ಈ ಊರಿನ ಮಧ್ಯದಲ್ಲೇ ಶಿವಮೊಗ್ಗ ತಾಳಗುಪ್ಪ ರೈಲು ಮಾರ್ಗ ಸಾಗಿ ಹೋಗಿದೆ.
   ಈ ಊರಲ್ಲಿನ ವಿಶೇಷ ಅಂದರೆ ವಿಶ್ವಕರ್ಮ ಜನಾಂಗದ ಕುಟುಂಬಗಳ ಹೆಸರುಗಳು ,ರಾಮಾಯಣದ ಪ್ರಸಿದ್ದ ಪುರುಷರದ್ದು, ಬೀಷ್ಮಾಚಾರ್ - ದ್ರೋಣಾಚಾರ್ - ಬೀಮಾಚಾರ್ - ದರ್ಮಾಚಾರ್-ಭದ್ರಾಚಾರ್-ರಾಮಾಚಾರ್- ಲಕ್ಷ್ಮಣಾಚಾರ್..... ಹೀಗೆ ಸಾಲು ಸಾಲು ಮಹಾಬಾರತದ ಹೆಸರುಗಳು,ಈಗಿನ ತಲೆಮಾರಿನವರಲ್ಲಿ ಇದು ಬದಲಾಗಿದೆ.
     ಸುರೇಶ್ ಆಚಾರ್ ಆ ಕಾಲದಲ್ಲಿ ಹುಬ್ಬಳ್ಳಿ ಶಹರದಲ್ಲಿ ಕಾರ್ಪೆಂಟರ್ ಕೆಲಸದಲ್ಲಿ ಒಳ್ಳೇ ಹವಾ ಸೃಷ್ಟಿಸಿಕೊ೦ಡಾತ ನಂತರ ವಿಪರೀತ ಕುಡಿತ ಇವರ ಜೀವನೋತ್ಸವವನ್ನೆ ಕೊಂದು ಬಿಟ್ಟಿತ್ತು ಆ ಸಮಯದಲ್ಲಿಯೇ ಇವರು ಇವರ ಚಿಕ್ಕಪ್ಪನ ಮಗ ಮಂಜುನಾಥ ಆಚಾರ್ ಜೊತೆ ನಮ್ಮ ಕೆಲಸಕ್ಕೆ ಬಂದು ಪರಿಚಯ ಆದರು.
    ಕೆಲ ದಿನಗಳು ಸುರೇಶ್ ಆಚಾರ್ ಬರಲೇಇಲ್ಲ ಒಂದು ದಿನ ಇವರ ಚಿಕ್ಕಪ್ಪನ ಮಗ ಮಂಜುನಾಥ ಆಚಾರ್ ಬಂದು ಬಾಕಿ ಉಳಿದ ಕೆಲಸ ಮುಗಿಸಿ ಕೊಡುವ ಮಾತಾಡಿದರು, ಅವರು ಅವತ್ತು ಹೇಳಿದ್ದು ಸುರೇಶ್ ಆಚಾರ್ ಆರೋಗ್ಯ ಸರಿ ಇಲ್ಲ ಆಸ್ಪತ್ರೆ ಸೇರಿದ್ದಾರೆ ಅಂತ, ನಂತರ ಮಂಜುನಾಥ ಆಚಾರ್ ನನ್ನ ಕೆಲಸ ಪೂರ್ತಿ ಮಾಡಿಕೊಟ್ಟ ನಂತರ ಹೇಳಿದ್ದು ಸೂರಿ ಜೈಲಲ್ಲಿದ್ದಾರೆ ಅಂತ. ಸುರೇಶ್ ಆಚಾರ್ ಗಂಡ-ಹೆಂಡತಿ ಜಗಳದಿಂದ ಜೈಲು ಸೇರಿದ್ದು ಅಂತ ಗೊತ್ತಾದಾಗ ನನಗೂ ಬೇಸರ ಆಯಿತು, ಸುರೇಶ್ ಆಚಾರ್ ಕುಡಿತ ಜಗಳ ಬಿಡಿಸಲು ಅವರ ಕುಟುಂಬದವರು ತಕ್ಷಣ ಜಾಮೀನು ಕೊಡದ ತೀರ್ಮಾನ ಮಾಡಿದ್ದಾರೆ ಅಂದಾಗ ನಾನು ಒಪ್ಪಲಿಲ್ಲ ಯಾಕೆಂದರೆ ಅಂತರ್ಮುಕಿ ವ್ಯಕ್ತಿ ಸುರೇಶ್ ಆಚಾರ್ ಜೈಲಿನಲ್ಲಿ ಬೇರೆ ರೀತಿಯ ಕ್ರಿಮಿನಲ್ ಗಳ ಜೊತೆ ಸೇರಿ ಹಾಳಾಗುವ ಸಾಧ್ಯತೆಗಳ ಬಗ್ಗೆ ನಾನು ಮಂಜುನಾಥ ಆಚಾರ್ ಗೆ ಹೇಳಿದ್ದೆ.
  ಸಣ್ಣ ಕುಟುಂಬ ವ್ಯಾಜ್ಯದಿಂದ ಜೈಲಿಂದ ಹೊರಬಂದ ನಂತರ ಸುರೇಶ್ ಆಚಾರ್ ಕುಡಿತ ಕಡಿಮೆ ಆಗಲೇ ಇಲ್ಲ, ಪತಿ ಪತ್ನಿ ಒಂದಾಗಲೇ ಇಲ್ಲ ಇದರ ಮಧ್ಯೆ ನಮ್ಮ ಊರಿನ ಶ್ರೀ ವರಸಿದ್ಧಿವಿನಾಯಕ ದೇವಸ್ಥಾನದ ಹುಂಡಿ ಕಳವು ಸುರೇಶ್ ಆಚಾರ್ ಮಾಡಿದ್ದಾರೆಂದು ಪೋಲಿಸರು ಕರೆದುಕೊಂಡು ಬಂದಾಗ ಯಾರೂ ನಂಬಲೇ ಇಲ್ಲ, ರಿಪ್ಪನ್ ಪೇಟೆಯ ಸುತ್ತಮುತ್ತದ ದೇವಸ್ಥಾನದ ಹುಂಡಿ ಕಳವು ಇವರ ಮೇಲೇ ಬಂತು, ಸುರೇಶ್ ಆಚಾರ್ ತನ್ನ ಜೊತೆ ಯಾರು ಇದ್ದರು ಅನ್ನುವುದೂ ಹೇಳಲಿಲ್ಲ, ತಾನು ಕಳ್ಳತನ ಮಾಡಲಿಲ್ಲ ಅಂತ ನಿರಾಕರಿಸಲೂ ಇಲ್ಲ ಒಂದು ರೀತಿ ಸ್ಥಿತಪ್ರಜ್ಞನಾಗಿ ಜೈಲು ಸೇರಿದರು.
  ನಮ್ಮ ದೇವಾಲಯದ ಆಡಳಿತ ಮಂಡಳಿಯವರು ಇವರ ವಿರುದ್ದದ ವಿಚಾರಣೆಯಲ್ಲಿ ಸುರೇಶ್ ಆಚಾರ್ ವಿರುದ್ದ ಸಾಕ್ಷಿ ಹೇಳಲೂ ಇಲ್ಲ ಕಾರಣ ಈ ಕಳ್ಳತನ ಸುರೇಶ್ ಆಚಾರಿಯದ್ದು ಎಂದು ಅವರು ನಂಬಲು ಸಾಧ್ಯವಿಲ್ಲದ್ದು.
    ಮೊನ್ನೆ ಸುರೇಶ್ ಆಚಾರ್ ಚಿಕ್ಕಪ್ಪನ ಮಗ ಮಂಜುನಾಥ ಆಚಾರ್ "ಸೂರಿ ರೈಲಿಗೆ ಸಿಕ್ಕಿ ಸತ್ತು ಹೋದ"ಅಂತ ದುಃಖದಿಂದ ಹೇಳಿದಾಗಲೇ ಬೇಸರ ಆಯಿತು.
   ಯಾಕಾಗಿ ಆತ್ಮಹತ್ಯೆಗೆ ಶರಣಾದರು ಅನ್ನುವುದಕ್ಕೆ ಉತ್ತರ ಇಲ್ಲ ಆದರೆ ಇವತ್ತು ಶಿವಮೊಗ್ಗದ #ಮಲೆನಾಡು_ಟುಡೇ ಸಾಮಾಜಿಕ ಜಾಲ ತಾಣದ ಸುದ್ದಿ ಸಂಸ್ಥೆಯ ಸುದ್ದಿಯ ತಲೆ ಬರಹ "ಹೊಸನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಈ ಅಪರಿಚಿತ ಎಂತಹ ಸೆಲೆಬ್ರಿಟಿ ಗೊತ್ತಾ? ಈತನಿಗಿತ್ತು ವಿವಿಐಪಿಗಳ ಪ್ಯಾನ್ ಪಾಲೋವಿಂಗ್ " ಜೆಪಿ ಅನ್ನುವವರು ಬರೆದದ್ದು ಓದಿದಾಗಲೇ ಗೊತ್ತಾಗಿದ್ದು ಸೂರಿ 2 ವರ್ಷ ಜೈಲಿನಲ್ಲಿ ಇದ್ದದ್ದು, ಅಲ್ಲಿ ಜೈಲು ಶಿಕ್ಷಕಿ ಲೀಲಾ ಮೇಡಂ ಸೂರಿಗೆ ಸೂಕ್ತ ತರಬೇತಿ ಆತ್ಮವಿಶ್ವಾಸಗಳನ್ನು ತುಂಬಿ ಸೂರಿಯಲ್ಲಿದ್ದ ಅತ್ಯುತ್ತಮ ಕಲಾಕಾರಿಕೆಯನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದ್ದರ ವಿವರ.
   ಪೆನ್ಸಿಲ್ ಆರ್ಟ್ ಮೂಲಕ ಸೂರಿ ದೇವರು, ದೇಶಭಕ್ತರು, ಸ್ವಾತಂತ್ಯ ಹೋರಾಟಗಾರರು, ನಾಡಿನ ಗಣ್ಯರಾಜಕಾರಣಿಗಳು, ಪೋಲಿಸ್ ಅಧಿಕಾರಿಗಳ ಚಿತ್ರ ಬಿಡಿಸಿದ್ದಾರೆ ಅದನ್ನು ಅನೇಕ ಗಣ್ಯರಿಗೆ ಜೈಲು ಅಧಿಕಾರಿಗಳು ನೆನಪಿನ ಕಾಣಿಕೆ ಆಗಿ ನೀಡಿದ್ದಾರೆ, ಜೈಲಿನ ಸೆಲ್ ಗಳಲ್ಲಿ ಸೂರಿ ಬರೆದ ದೇವರ ಚಿತ್ರ ಸಹ ಖೈದಿಗಳು ನಿತ್ಯ ಪೂಜೆಗೆ ಇಟ್ಟುಕೊಂಡಿದ್ದಾರೆ, ಸೂರಿ ಬರೆದ ಚಿತ್ರ ಪ್ರದಶ೯ನ ಜೈಲಿನಲ್ಲಿ ಮಾಡಿದ್ದಾರೆ ಆದರೆ ಇದಾವುದೂ ಅವರ ಮನೆಯವರಿಗಾಗಲೀ, ಊರವರಿಗಾಗಲೀ ಗೊತ್ತಾಗಿದ್ದು ಸೂರಿ ಆತ್ಮಹತ್ಯೆ ನಂತರ ನಿನ್ನೆ ಬಂದ ಈ ಸಚಿತ್ರ ವರದಿಯಿಂದ, ಸೂರಿಯ ಇನ್ನೊಂದು ಕಲಾವಿದನ ಮುಖ ಪರಿಚಯಿಸಿದ ಈ #ಮಲೆನಾಡು_today ಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ.
  ಇಲ್ಲಿ ಕ್ಲಿಕ್ ಮಾಡಿ https://malenadutoday.com/jp-writes-the-story-of-the-life-of-a-man-who-committed-suicide-in-hosanagara
  ಅಂತರ್ಮುಖಿ, ಮಿತಭಾಷಿ ಸೂರಿ ಕುಟುಂಬ ವ್ಯಾಜ್ಯದಿ೦ದ ಜೈಲಿಗೆ ಹೋಗದಿದ್ದರೆ ಸೂರಿ ಸಾಯುತ್ತಿರಲಿಲ್ಲ ಅನ್ನಿಸುತ್ತೆ, ಸೂರಿಗೆ ಈ ದುರಾಸೆಯ ನಾಟಕದ ಪ್ರಪಂಚದ ಬಗ್ಗೆ ಬೇಸರ ಅನ್ನಿಸಿರಬೇಕು ಇದಕ್ಕಿಂತ ಜೈಲೇ ವಾಸಿ ಆಗಿದ್ದಿರಬೇಕು ಹಾಗಾಗಿ ಖುಲಾಸೆ ಆಗಿ ಜೈಲಿಂದ ಬಂದವರು ರೈಲಿಗೆ ತಲೆ ಕೊಟ್ಟರಾ?....

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ