Skip to main content

Blog number 1334.ಜೋತಿಷ್ಯ ರತ್ನ - ದೈವಜ್ಞ ಡಾ.ನೆ.ಶ್ರೀ. ವಿಶ್ವಪತಿ ಶಾಸ್ತ್ರೀ ವಿಜಯನಗರ ಬೆಂಗಳೂರು ಇವರ ಜೋತಿಷ್ಯ ವಾಣಿ ಪಂಚಾಂಗ ಈಗ ಆನ್ ಲೈನ್ ನಲ್ಲಿ ಲಭ್ಯವಿದೆ

#ನೂತನಶಾವ೯ರಿಸಂವತ್ಸರಕ್ಕೆಸ್ವಾಗತಸವ೯ರಿಗೂಯುಗಾದಿಹೊಸವಷ೯ದಶುಭಾಷಯಗಳು
# ಡಾ.ನೆ.ಶ್ರೀ.ವಿಶ್ವಪತಿ ಶಾಸ್ತ್ರಿಗಳು ವಿಜಯನಗರ ಬೆಂಗಳೂರು ಇವರ ಈ ವಷ೯ದ ಶಾವ೯ರಿ ಸಂವತ್ಸರ 2020-2021ರ ಪಂಚಾ೦ಗ ಬಿಡುಗಡೆ ಆಗಿದೆ#
   ನನ್ನ ಗುರುಗಳು, ನಮ್ಮ ಊರಿನಲ್ಲಿ ಶ್ರೀ ವರ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನ ನಿಮಿ೯ಸಲು ಪ್ರೇರೇಕರು ವಾಸ್ತು ಮಾಗ೯ದಶ೯ಕರು, ನನ್ನ ಜೀವನದ ಮಾಗ೯ದಶ೯ಕರು ಆಗಿರುವ ಡಾ. N S ವಿಶ್ವ ಪತಿ ಶಾಸ್ತ್ರಿಗಳು ನಾಳೆ ಅಂದರೆ 25 - ಮಾಚ್೯ - 2020 ರ ಯುಗಾದಿಯಿ೦ದ ಪ್ರಾರಂಭ ಆಗುವ ನೂತನ ಶಾವ೯ರಿ ಸಂವತ್ಸರದ ಪಂಚಾಂಗ ಕಳಿಸಿದ್ದಾರೆ ಅವರ ಜೋತಿಷವಾಣಿ ಪಂಚಾ೦ಗ 1985ರಿಂದ ಪ್ರಕಟ ಆಗುತ್ತಿದೆ.
  ಇವರ ತಂದೆ ಕೂಡ ಮೈಸೂರು ಆಸ್ಥಾನ ಜೊತಿಷಿಗಳಾಗಿದ್ದರು, ಇವರು BEL ನಲ್ಲಿ ಮೊದಲ ಕಂಪ್ಯೂಟರ್ ಇಂಜಿನಿಯರ್ ಆಗಿದ್ದವರು, ಸಾಗರ ತಾಲ್ಲೂಕಿನ ತ್ಯಾಗತಿ೯ಯ ಭೂಮಾಲಿಕರು ಇನಾಂದಾರ್ ಆಗಿದ್ದ ಗುರುಮೂತಿ೯ ರಾಯರ ಕಿರಿ ಅಳಿಯ.
   ದೇವೇಗೌಡರು ಪ್ರದಾನ ಮಂತ್ರಿ ಆಗುತ್ತಾರೆಂದು ಭವಿಷ್ಯ ನುಡಿದವರು ಇವರು, ಡಾ.ರಾಜ್ ಕುಮಾರ್ ರ ಒಡನಾಡಿ ಆಗಿದ್ದವರು ಅವರ ಅಂತಿಮ ಸಮಾದಿ ಸ್ಥಳ ನಿಗದಿ ಮಾಡಿದವರು ಇವರು.
  ಇವರು ಬರೆದ ಪಂಚಾಂಗ ತುಂಬಾ ನಿಕರವಾಗಿರುತ್ತದೆ ಎಂದು ಇವರ ಪಂಚಾ೦ಗ ಓದಿದವರು ಹೇಳುತ್ತಾರೆ.
  ಇವರು ಜಾತಿವಾದಿಗಳಲ್ಲ ನಮ್ಮ ಊರಿನ ದೇವಸ್ಥಾನದಲ್ಲಿ ಭಕ್ತರು ತಯಾರಿಸುವ ಪ್ರಸಾದ ಸ್ವೀಕರಿಸುತ್ತಾರೆ ಅದನ್ನ ನಿರಾಕರಿಸುವ ಉತ್ತಮರಿಗೆ ಅವರು ಬಾಷಣ ಒಂದರಲ್ಲಿ ಪ್ರಶ್ನೆ ಮಾಡಿದ್ದು ನನಗೆ ಇವತ್ತೂ ನೆನಪಿದೆ "ಹೋಟೆಲ್ಲಲ್ಲಿ ಮಸಾಲೆ ದೊಸೆ ತಿಂತಿರಾ! ಬೇಲ್ ಪುರಿ ಮOಡಕ್ಕಿ ತಿಂತಿರಾ!ಇಲ್ಲಿ ನೀವು ಭಕ್ತಿಯಿಂದ ಭಕ್ತರು ಸ್ನಾನ ಮಾಡಿ ಶುದ್ದಿಯಿ೦ದ ಮಾಡಿದ ಅನ್ನವನ್ನ ಜಾತಿ ಕಾರಣದಿಂದ ನಿರಾಕರಿಸುವುದು ಎಷ್ಟು ಸರಿ? ಹೋಟೆಲ್ ಲ್ಲಿ ಅಡುಗೆ ಮಾಡುವವರು ಅಡುಗೆ ಮಾಡಿ ನಂತರ ಸ್ನಾನ ಮಾಡುತ್ತಾರೆ ಗೊತ್ತಾ? ಹಾಗೆ ಇರುವಾಗ ಯಾವುದು ಶುಚಿ?"ಅಂತ.
  ಪಂಚಾಂಗ ಕತ೯ರಾದ ಅವರಿಗೆ ದೇವರು ಆಯುರಾರೋಗ್ಯ, ಆಯುಸ್ಸು ಮತ್ತು  ಯಶಸ್ಸು ದಯಪಾಲಿಸಲಿ ಎಂದು ಪ್ರಾಥಿ೯ಸುತ್ತೇನೆ ಜೊತೆಗೆ ಪೇಸ್ ಬುಕ್ ಗೆಳೆಯರಿಗೆ ನೂತನ ಶಾವ೯ರಿ ಸಂವತ್ಸರದ ಯುಗಾದಿ ಹೊಸ ವಷ೯ದ ಶುಭ ಹಾರೈಕೆ ಹಾರೈಸುತ್ತೇನೆ.
  *ಪಂಚಾoಗ/ ಕೃಷ್ಣಮೂತಿ೯ ಪದ್ದತಿಯ ಜ್ಯೋತಿಷ್ಯವಾಣಿ ಕಂಪ್ಯೂಟರ್ ಜನ್ಮ ಪತ್ರಿಕೆ ಬೇಕಾದವರು ಇವರನ್ನ e-mail:vishwapathi.ns@gmail.com ಅಥವ ಸಂಜೆ 5ರಿಂದ 7ರವರೆಗೆ ಇವರ ಸೆಲ್ ನಂಬರ್ 94480 18711 ಗೆ ಸಂಪಕಿ೯ಸಬಹುದಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...