Skip to main content

Blog number 1277. ಗೇರುಸೊಪ್ಪೆ ಸಮೀಪದ ಕೆಪ್ಪ ಜೋಗಕ್ಕೆ ಪರಿಸರವಾದಿಗಳು ಖ್ಯಾತ ಪರಿಸರ ಹೋರಾಟಗಾರ್ತಿ ಡಾಕ್ಟರ್ ಕುಸುಮ ಸೊರಬ ಹೆಸರು ಚಿರಸ್ಥಾಯಿಗೊಳಿಸುವ ಕೆಲಸವಾಗಿ ಬಂಗಾರ ಕುಸುಮ ಜಲಪಾತ ಎಂದು ನಾಮಕರಣ ಮಾಡಿದ್ದಾರೆ.

#ಪರಿಸರವಾದಿ_ಹೆಸರಿನ_ಜಲಪಾತ_ಇದೆ.

#ಗೇರುಸೊಪ್ಪದಿಂದ_ಹೊನ್ನಾವರದ_ರಾಷ್ಟ್ರೀಯ_ಹೆದ್ದಾರಿಯಲ್ಲಿದೆ.

#ಬಂಗಾರ_ಕುಸುಮ_ಜಲಪಾತ

#ಡಾಕ್ಟರ್_ಕುಸುಮಾಸೊರಬ_ಮತ್ತು_ಬ೦ಗಾರಮಕ್ಕಿ_ಹೆಸರು_ಸೇರಿದೆ

#ಸಿದ್ದಾಪುರದ_ಒಳಭಾಗದ_ಲಂಬಾಪುರ_ಇಟಗಿಯಿಂದ_ಹರಿದು_ಬರುವ_ಹೊಳೆ.

#ಸಾಗರ_ತಾಲ್ಲೂಕಿನ_ಹಂದಿಗೋಡು_ನಿಗೂಡ_ಕಾಯಿಲೆ_ಸಂಶೋದನೆಯಲ್ಲಿ_ಭಾಗವಾಗಿದ್ದರು.

#ಶರಾವತಿ_ನದಿ_ಕಾಡು_ಸಂರಕ್ಷಣೆಗೆ_ಧ್ವನಿಯಾಗಿ_ಜಲಪಾತದ_ಹೆಸರಿಂದ_ಚಿರಸ್ಥಾಯಿ

#ಇದರ_ಮೂಲ_ಹೆಸರು_ಕೆಪ್ಪಜೋಗ_ಚಿಕ್ಕಜಲಪಾತ.

#ಉತ್ತರಕನ್ನಡ_ಜಿಲ್ಲೆಯ_ಹೊನ್ನಾವರ_ತಾಲ್ಲೂಕಿನ_ಗೇರುಸೊಪ್ಪೆ_ಸಮೀಪದ_ಮಾಸ್ತಿಕಾಂಬ_ದೇವಾಲಯ_ಸಮೀಪದಲ್ಲಿದೆ.

   ಜೋಗ್ ಜಲಪಾತ ನೋಡಿ ಮಾವಿನಗುಂಡಿ ಜಂಕ್ಷನ್ ನಿಂದ ಹೊನ್ನಾವರದ ಮಾರ್ಗದಲ್ಲಿ ಘಟ್ಟ ಇಳಿದು ಗೇರುಸೊಪ್ಪೆಯಿಂದ ಮುಂದೆ ಸಾಗಿದರೆ ಬಲಬಾಗದಲ್ಲಿ
ಮಾಸ್ತಿಕಾಂಭಾ ದೇವಾಲಯವಿದೆ ಅದರ ಹಿಂಬದಿಯಿಂದ ಗೇರುಸೊಪ್ಪೆ ಡ್ಯಾಂ ನಿರ್ಮಾಣದ ಸಮಯದಲ್ಲಿ ಕಲ್ಲು ಮಣ್ಣು ಸಾಗಿಸಲು ಮಾಡಿದ ಕಚ್ಚಾ ರಸ್ತೆಯಲ್ಲಿ ಒಂದು ಕಿ.ಮಿ ಸಾಗಿದರೆ ಬಂಗಾರ - ಕುಸುಮ ಜಲಪಾದ ಪಾದ ದಶ೯ನವಾಗುತ್ತದೆ.
   ಈ ಮಾರ್ಗದಲ್ಲಿ ಸಂಚರಿಸುವವರಿಗೆ ಅನೇಕ ಕೋನಗಳಿಂದ ಮಳೆಗಾಲದಿಂದ ಜನವರಿ ತಿಂಗಳವರೆಗೆ ಈ ಜಲಪಾತ ದರ್ಶನ ಆಗುತ್ತದೆ.
   ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಒಳಬಾಗದ ಲಂಬಾಪುರ ಮತ್ತು ಇಟಗಿಯ ಹೊಳೆ ಎತ್ತರದ ಗುಡ್ಡದ ಮೇಲಿಂದ ದಟ್ಟ ಅರಣ್ಯದಲ್ಲಿ ಹಂತ ಹಂತವಾಗಿ ಬಿದ್ದು ಚದುರಿ ನಂತರ ಶರಾವತಿ ನದಿಗೆ ಸೇರಿ ಅರಬ್ಬಿ ಸಮುದ್ರ ಸೇರುತ್ತದೆ.
   ಇದನ್ನು ಕೆಪ್ಪ ಜೋಗ ಎಂಬ ಹೆಸರಲ್ಲಿ ಮತ್ತು ಚಿಕ್ಕ ಜಲಪಾತ ಎಂದಲೂ ಜನ ಕರೆಯುತ್ತಿದ್ದರು.
   ಈ ಜಲಪಾತದ ಎತ್ತರವೂ ಅಧಿಕೃತವಾಗಿ ಅಳತೆ ಆಗಿ ದಾಖಲಾಗಿಲ್ಲ!!.
  ಉತ್ತರ ಕನ್ನಡ ಜಿಲ್ಲೆಯ ಪರಿಸರವಾದಿಗಳು ಖ್ಯಾತ ಪರಿಸರವಾದಿ ಡಾ.ಕುಸುಮಾ ಸೊರಬ ಅವರ ಹೆಸರು ಮತ್ತು ಸ್ಥಳಿಯ ಬಂಗಾರು ಮಕ್ಕಿ ದೇವಾಲಯದ ಹೆಸರು ಸೇರಿಸಿ #ಬಂಗಾರ_ಕುಸುಮ_ಜಲಪಾತ ಎಂದು ನಾಮಕರಣ ಮಾಡಿದ್ದಾರೆ.
    ಭಾರತದ ಅತಿ ಎತ್ತರದ ಜಲಪಾತ ಹಿಮಾಚಲ ಪ್ರದೇಶದ ನೋಹಾಕಾಲಿಕಾ ಕೈ ಜಲಪಾತ ಕೂಡ ವಿದವೆ ತನ್ನ ಪ್ರೀತಿಯ ಮಗಳು  ಮಲತಂದೆಯಿಂದ ಹತ್ಯೆ ಆದದ್ದುನ್ನು ಸಹಿಸಲಾರದೆ ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುಃಖದ ಕಥೆಯಿಂದ ನೋಹಾ ಕಾಲಿಕಾ ಕೈ ಹೆಸರನ್ನೆ ಆ ಜಲಪಾತಕ್ಕೆ ಇಟ್ಟಿದ್ದಾರೆ.
   ಡಾ. ಕುಸುಮಾ ಸೊರಬ ಹೊನ್ನಾವರ ಸಮೀಪದ ಕೆರವಳ್ಳಿಯಲ್ಲಿ 1937 ರಲ್ಲಿ ಜನಿಸಿದವರು ನಂತರ MBBS - MS General Surgen ಮಾಡಿ ಮುಂಬೈನಲ್ಲಿ ಸೇವೆ ಸಲ್ಲಿಸಿ ನಂತರ ತಮ್ಮ ಹುಟ್ಟೂರು ಸಮೀಪದ ಹೊನ್ನಾವರದ ಕಾಸರಕೋಡಿನಲ್ಲಿ ಹನ್ನೊಂದು ಎಕರೆ ಜಮೀನು ಖರೀದಿಸಿ ಅಲ್ಲಿ ಸ್ನೇಹ ಕುಂಜ ವಿವೇಕಾನಂದ ಆರೋಗ್ಯ ದಾಮ ನಿರ್ಮಿಸಿದ್ದರು.
   ಗಾಂಧೀವಾದಿ ಪರಿಸರ ಹೋರಾಟಗಾರ್ತಿ ಆದ ಡಾ. ಕುಸುಮಾ ಸೊರಬ ಸಾಗರ ತಾಲ್ಲೂಕಿನ ಹಂದಿಗೋಡು ನಿಗೂಡ ಕಾಯಿಲೆ ಸಂಶೋದನೆಗಾಗಿ 1985 ರಲ್ಲಿ ಸ್ವಯಂ ಬಾಗಿ ಆಗಿದ್ದವರು.
   ಅವರು ರಾತ್ರಿ ಪ್ರಯಾಣದಲ್ಲಿ ಬಸ್ಸಿನಿಂದ ಇಳಿದಾಗ ಅಪಘಾತವಾಗಿ ಇಹಲೋಕ ತ್ಯಜಿಸಿದರು ಅವರ ಪಶ್ಚಿಮ ಘಟ್ಟ ಉಳಿಸುವ, ಪರಿಸರ ಸಂರಕ್ಷಣೆ, ಜಲಮೂಲ - ನದಿ ಮೂಲಗಳ ಸಂರಕ್ಷಣೆಗಾಗಿ ಜನ ಜಾಗೃತಿ ಮತ್ತು ಹೊರಾಟಗಳನ್ನು ಮಾಡಿದವರು.
   ಅವರ ಈ ಹೋರಾಟಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರೋದ ಕಟ್ಟಿಕೊಂಡಿದ್ದರು ಅವರ ಸ್ಮರಣೆಗಾಗಿ ಪರಿಸರವಾದಿಗಳು ಅವರ ಹೆಸರು ಚಿರಸ್ಥಾಯಿ ಮಾಡುವ ಕೆಪ್ಪ ಜೋಗ ಜಲಪಾತಕ್ಕೆ ಬಂಗಾರ ಕುಸುಮ ಜಲಪಾತ ಎ೦ದು ನಾಮಕರಣ ಮಾಡಿ ಯೋಗ್ಯ ಕೆಲಸ ಮಾಡಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...