Skip to main content

Blog number 1277. ಗೇರುಸೊಪ್ಪೆ ಸಮೀಪದ ಕೆಪ್ಪ ಜೋಗಕ್ಕೆ ಪರಿಸರವಾದಿಗಳು ಖ್ಯಾತ ಪರಿಸರ ಹೋರಾಟಗಾರ್ತಿ ಡಾಕ್ಟರ್ ಕುಸುಮ ಸೊರಬ ಹೆಸರು ಚಿರಸ್ಥಾಯಿಗೊಳಿಸುವ ಕೆಲಸವಾಗಿ ಬಂಗಾರ ಕುಸುಮ ಜಲಪಾತ ಎಂದು ನಾಮಕರಣ ಮಾಡಿದ್ದಾರೆ.

#ಪರಿಸರವಾದಿ_ಹೆಸರಿನ_ಜಲಪಾತ_ಇದೆ.

#ಗೇರುಸೊಪ್ಪದಿಂದ_ಹೊನ್ನಾವರದ_ರಾಷ್ಟ್ರೀಯ_ಹೆದ್ದಾರಿಯಲ್ಲಿದೆ.

#ಬಂಗಾರ_ಕುಸುಮ_ಜಲಪಾತ

#ಡಾಕ್ಟರ್_ಕುಸುಮಾಸೊರಬ_ಮತ್ತು_ಬ೦ಗಾರಮಕ್ಕಿ_ಹೆಸರು_ಸೇರಿದೆ

#ಸಿದ್ದಾಪುರದ_ಒಳಭಾಗದ_ಲಂಬಾಪುರ_ಇಟಗಿಯಿಂದ_ಹರಿದು_ಬರುವ_ಹೊಳೆ.

#ಸಾಗರ_ತಾಲ್ಲೂಕಿನ_ಹಂದಿಗೋಡು_ನಿಗೂಡ_ಕಾಯಿಲೆ_ಸಂಶೋದನೆಯಲ್ಲಿ_ಭಾಗವಾಗಿದ್ದರು.

#ಶರಾವತಿ_ನದಿ_ಕಾಡು_ಸಂರಕ್ಷಣೆಗೆ_ಧ್ವನಿಯಾಗಿ_ಜಲಪಾತದ_ಹೆಸರಿಂದ_ಚಿರಸ್ಥಾಯಿ

#ಇದರ_ಮೂಲ_ಹೆಸರು_ಕೆಪ್ಪಜೋಗ_ಚಿಕ್ಕಜಲಪಾತ.

#ಉತ್ತರಕನ್ನಡ_ಜಿಲ್ಲೆಯ_ಹೊನ್ನಾವರ_ತಾಲ್ಲೂಕಿನ_ಗೇರುಸೊಪ್ಪೆ_ಸಮೀಪದ_ಮಾಸ್ತಿಕಾಂಬ_ದೇವಾಲಯ_ಸಮೀಪದಲ್ಲಿದೆ.

   ಜೋಗ್ ಜಲಪಾತ ನೋಡಿ ಮಾವಿನಗುಂಡಿ ಜಂಕ್ಷನ್ ನಿಂದ ಹೊನ್ನಾವರದ ಮಾರ್ಗದಲ್ಲಿ ಘಟ್ಟ ಇಳಿದು ಗೇರುಸೊಪ್ಪೆಯಿಂದ ಮುಂದೆ ಸಾಗಿದರೆ ಬಲಬಾಗದಲ್ಲಿ
ಮಾಸ್ತಿಕಾಂಭಾ ದೇವಾಲಯವಿದೆ ಅದರ ಹಿಂಬದಿಯಿಂದ ಗೇರುಸೊಪ್ಪೆ ಡ್ಯಾಂ ನಿರ್ಮಾಣದ ಸಮಯದಲ್ಲಿ ಕಲ್ಲು ಮಣ್ಣು ಸಾಗಿಸಲು ಮಾಡಿದ ಕಚ್ಚಾ ರಸ್ತೆಯಲ್ಲಿ ಒಂದು ಕಿ.ಮಿ ಸಾಗಿದರೆ ಬಂಗಾರ - ಕುಸುಮ ಜಲಪಾದ ಪಾದ ದಶ೯ನವಾಗುತ್ತದೆ.
   ಈ ಮಾರ್ಗದಲ್ಲಿ ಸಂಚರಿಸುವವರಿಗೆ ಅನೇಕ ಕೋನಗಳಿಂದ ಮಳೆಗಾಲದಿಂದ ಜನವರಿ ತಿಂಗಳವರೆಗೆ ಈ ಜಲಪಾತ ದರ್ಶನ ಆಗುತ್ತದೆ.
   ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಒಳಬಾಗದ ಲಂಬಾಪುರ ಮತ್ತು ಇಟಗಿಯ ಹೊಳೆ ಎತ್ತರದ ಗುಡ್ಡದ ಮೇಲಿಂದ ದಟ್ಟ ಅರಣ್ಯದಲ್ಲಿ ಹಂತ ಹಂತವಾಗಿ ಬಿದ್ದು ಚದುರಿ ನಂತರ ಶರಾವತಿ ನದಿಗೆ ಸೇರಿ ಅರಬ್ಬಿ ಸಮುದ್ರ ಸೇರುತ್ತದೆ.
   ಇದನ್ನು ಕೆಪ್ಪ ಜೋಗ ಎಂಬ ಹೆಸರಲ್ಲಿ ಮತ್ತು ಚಿಕ್ಕ ಜಲಪಾತ ಎಂದಲೂ ಜನ ಕರೆಯುತ್ತಿದ್ದರು.
   ಈ ಜಲಪಾತದ ಎತ್ತರವೂ ಅಧಿಕೃತವಾಗಿ ಅಳತೆ ಆಗಿ ದಾಖಲಾಗಿಲ್ಲ!!.
  ಉತ್ತರ ಕನ್ನಡ ಜಿಲ್ಲೆಯ ಪರಿಸರವಾದಿಗಳು ಖ್ಯಾತ ಪರಿಸರವಾದಿ ಡಾ.ಕುಸುಮಾ ಸೊರಬ ಅವರ ಹೆಸರು ಮತ್ತು ಸ್ಥಳಿಯ ಬಂಗಾರು ಮಕ್ಕಿ ದೇವಾಲಯದ ಹೆಸರು ಸೇರಿಸಿ #ಬಂಗಾರ_ಕುಸುಮ_ಜಲಪಾತ ಎಂದು ನಾಮಕರಣ ಮಾಡಿದ್ದಾರೆ.
    ಭಾರತದ ಅತಿ ಎತ್ತರದ ಜಲಪಾತ ಹಿಮಾಚಲ ಪ್ರದೇಶದ ನೋಹಾಕಾಲಿಕಾ ಕೈ ಜಲಪಾತ ಕೂಡ ವಿದವೆ ತನ್ನ ಪ್ರೀತಿಯ ಮಗಳು  ಮಲತಂದೆಯಿಂದ ಹತ್ಯೆ ಆದದ್ದುನ್ನು ಸಹಿಸಲಾರದೆ ಜಲಪಾತಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುಃಖದ ಕಥೆಯಿಂದ ನೋಹಾ ಕಾಲಿಕಾ ಕೈ ಹೆಸರನ್ನೆ ಆ ಜಲಪಾತಕ್ಕೆ ಇಟ್ಟಿದ್ದಾರೆ.
   ಡಾ. ಕುಸುಮಾ ಸೊರಬ ಹೊನ್ನಾವರ ಸಮೀಪದ ಕೆರವಳ್ಳಿಯಲ್ಲಿ 1937 ರಲ್ಲಿ ಜನಿಸಿದವರು ನಂತರ MBBS - MS General Surgen ಮಾಡಿ ಮುಂಬೈನಲ್ಲಿ ಸೇವೆ ಸಲ್ಲಿಸಿ ನಂತರ ತಮ್ಮ ಹುಟ್ಟೂರು ಸಮೀಪದ ಹೊನ್ನಾವರದ ಕಾಸರಕೋಡಿನಲ್ಲಿ ಹನ್ನೊಂದು ಎಕರೆ ಜಮೀನು ಖರೀದಿಸಿ ಅಲ್ಲಿ ಸ್ನೇಹ ಕುಂಜ ವಿವೇಕಾನಂದ ಆರೋಗ್ಯ ದಾಮ ನಿರ್ಮಿಸಿದ್ದರು.
   ಗಾಂಧೀವಾದಿ ಪರಿಸರ ಹೋರಾಟಗಾರ್ತಿ ಆದ ಡಾ. ಕುಸುಮಾ ಸೊರಬ ಸಾಗರ ತಾಲ್ಲೂಕಿನ ಹಂದಿಗೋಡು ನಿಗೂಡ ಕಾಯಿಲೆ ಸಂಶೋದನೆಗಾಗಿ 1985 ರಲ್ಲಿ ಸ್ವಯಂ ಬಾಗಿ ಆಗಿದ್ದವರು.
   ಅವರು ರಾತ್ರಿ ಪ್ರಯಾಣದಲ್ಲಿ ಬಸ್ಸಿನಿಂದ ಇಳಿದಾಗ ಅಪಘಾತವಾಗಿ ಇಹಲೋಕ ತ್ಯಜಿಸಿದರು ಅವರ ಪಶ್ಚಿಮ ಘಟ್ಟ ಉಳಿಸುವ, ಪರಿಸರ ಸಂರಕ್ಷಣೆ, ಜಲಮೂಲ - ನದಿ ಮೂಲಗಳ ಸಂರಕ್ಷಣೆಗಾಗಿ ಜನ ಜಾಗೃತಿ ಮತ್ತು ಹೊರಾಟಗಳನ್ನು ಮಾಡಿದವರು.
   ಅವರ ಈ ಹೋರಾಟಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರೋದ ಕಟ್ಟಿಕೊಂಡಿದ್ದರು ಅವರ ಸ್ಮರಣೆಗಾಗಿ ಪರಿಸರವಾದಿಗಳು ಅವರ ಹೆಸರು ಚಿರಸ್ಥಾಯಿ ಮಾಡುವ ಕೆಪ್ಪ ಜೋಗ ಜಲಪಾತಕ್ಕೆ ಬಂಗಾರ ಕುಸುಮ ಜಲಪಾತ ಎ೦ದು ನಾಮಕರಣ ಮಾಡಿ ಯೋಗ್ಯ ಕೆಲಸ ಮಾಡಿದ್ದಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ