Skip to main content

Blog number 1345. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಶಿಕಾರಿಪುರದ ಮನೆ ಮೇಲೆ ಕಲ್ಲು ತೂರಾಟ (27-ಮಾರ್ಚ್ -2023) 43 ವಷ೯ದ ಹಿಂದೆ ಮಂತ್ರಿ ಯ೦ಕಟಪ್ಪರ ಮನೆ ಮೇಲಿನ ದಾಳಿ ನೆನಪಿಸಿತು.

#ಶಿಕಾರಿಪುರದಲ್ಲಿ_ಯಡೂರಪ್ಪರ_ಮನೆ_ಮೇಲೆ_ಕಲ್ಲು_ತೂರಾಟ

#ತಪ್ಪು_ಮಾಡಿದವರನ್ನು_ಬಂದಿಸದಂತೆ_ಕ್ಷಮಿಸಿದ_ಯಡೂರಪ್ಪರ_ಮತ್ಸದ್ಧಿ_ರಾಜಕಾರಣ

#ಮರುಕಳಿಸಿದ_ಶಿಕಾರಿಪುರ_ರಾಜಕೀಯ_ಚರಿತ್ರೆ

#ಗುಂಡೂರಾವ್_ಸಂಪುಟದಲ್ಲಿ_ತೋಟಗಾರಿಕಾ_ಮತ್ತು_ಬಂದಿಖಾನೆ_ಮಂತ್ರಿ_ಆಗಿದ್ದ_ಶಿಕಾರಿಪುರದಿಂದ
#ಎರೆಡು_ಬಾರಿ_ಶಾಸಕರಾಗಿದ್ದ_ಕೆ_ಯ೦ಕಟಪ್ಪರ_ಮನೆ_ಮೇಲೂ_ದಾಳಿ_ಆಗಿತ್ತು

#ಶಿಕಾರಿಪುರ_ವಿದಾನ_ಸಭಾ_ಕ್ಷೇತ್ರದ_ನಿಜ_ಚಾಣಕ್ಯ_ಪದ್ಮನಾಭ_ಭಟ್ಟರು.

#ದುರಂತ_ನಾಯಕ_ನಗರದ_ಮಹಾದೇವಪ್ಪ

 ನಿನ್ನೆ ಇದ್ದಕ್ಕಿದ್ದಂತೆ ಶಿಕಾರಿಪುರದಲ್ಲಿ ಒಳ ಮೀಸಲಾತಿ ವಿರೋದಿಸಿ ನಡೆಯುತ್ತಿದ್ದ ಮೆರವಣಿಗೆ ದಿಕ್ಕು ಬದಲಿಸಿ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಶಿಕಾರಿಪುರ ಶಾಸಕರಾದ ಯಡೂರಪ್ಪರ ಮನೆ ಮೇಲೆ ಕಲ್ಲು ತೂರಾಟವಾಯಿತು, ಅವರ ಹುಟ್ಟು ಹಬ್ಬದ ಕೊಡುಗೆ ಆಗಿ ನೀಡಿದ್ದ ಸೀರೆಗಳನ್ನು ತಂದು ಸುಡಲಾಯಿತು, ಮನೆಯ ಮೇಲಿದ್ದ ಅವರ ಬಾವ ಚಿತ್ರದ ಪ್ಲೆಕ್ಸ್ ಮತ್ತು ಬಿಜೆಪಿ ದ್ವಜ ಕೂಡ ದ್ವಂಸ, ಲಾಠಿ ಚಾರ್ಚ್ ಮಾಡಲಾಯಿತು ಅನೇಕರನ್ನು ಬಂದಿಸಲಾಗಿದೆ ಎಂಬ ಸುದ್ದಿ ಕೇಳಿದವರಿಗೆ ದಿಗ್ಭ್ರಮೆ ಉಂಟಾಗಿದ್ದು ಸುಳ್ಳಲ್ಲ.
  ಇಡೀ ರಾಜ್ಯದಲ್ಲಿ ಒಳ ಮೀಸಲಾತಿ ಬಗ್ಗೆ ಈ ರೀತಿ ಆಕ್ರೋಷ ನಡೆದಿಲ್ಲ ಆದರೆ ಶಿಕಾರಿಪುರದಲ್ಲಿ ಯಾಕೆ? ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಷ್ಟೆ.
   ಯಾರೇ ಆದರೂ ಈ ವಾಮ ಮಾರ್ಗದಲ್ಲಿ ಪ್ರಚೋದನೆ ನೀಡಿದ್ದರೆ ಅದು ಖಂಡನೀಯವಾದದ್ದು.
   ಈ ಬಗ್ಗೆ ಹಾಲಿ ಶಾಸಕರಾದ ಯಡೂರಪ್ಪರ ಪ್ರತಿಕ್ರಿಯೆ ಏನು? ಎಂಬ ಕುತೂಹಲಕ್ಕೆ ನಿನ್ನೆ ಸಂಜೆ ಬೆಂಗಳೂರಿಂದ ಯಡೂರಪ್ಪ ನೀಡಿದ ಹೇಳಿಕೆ " ಯಾರದೋ ಪ್ರಚೋದನೆಯಿಂದ ಈ ಘಟನೆ ನಡೆದಿದೆ.. ಯಾರನ್ನೂ ಬಂದಿಸಬಾರದು ಎಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ತಿಳಿಸಿದ್ದೇನೆ." ಎಂದಿದ್ದು ಅವರ ಪ್ರಭುದ್ಧ ಅನುಭವಿ ರಾಜಕಾರಣಕ್ಕೆ ಕನ್ನಡಿ ಆಗಿದೆ.
  ಶಿಕಾರಿಪುರದ 43 ವಷ೯ಗಳ ಹಿಂದಿನ ರಾಜಕಾರಣದ ಕೆಲ ಘಟನಾವಳಿಗಳನ್ನು ಹಿಂದುರಿಗೆ ನೋಡಿದರೆ ಇಂತದೇ ಒಂದು ಘಟನೆ ನೆನಪಾಗುತ್ತದೆ...
   ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ 1972 ಮತ್ತು 1978 ರಲ್ಲಿ ಎರೆಡು ಬಾರಿ ಶಾಸಕರಾಗಿದ್ದವರು ಪರಿಶಿಷ್ಟ ಜಾತಿಯ ಕೆ.ಯಂಕಟಪ್ಪ ಇವರು 1978ರಿಂದ 1982ರವರೆಗೆ ಗುಂಡೂರಾವ್ ಸರ್ಕಾರದಲ್ಲಿ ತೋಟಗಾರಿಕಾ ಮತ್ತು ಬಂದಿಖಾನೆ ಮಂತ್ರಿಗಳಾಗಿದ್ದರು.
   ಶಿಕಾರಿಪುರದ ಮಂತ್ರಿ ಯಂಕಟಪ್ಪರ ಮನೆ ಮೇಲೆ ಇದ್ದಕ್ಕಿದ್ದಂತೆ ಯುವಕರ ಪಡೆ ದಾಳಿ ನಡೆಸಿದ್ದು ಆಗಿನ ರೇಡಿಯೋ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿ ತಕ್ಷಣ ಇದಕ್ಕೆ ಕಾರಣರಾದವರನ್ನು ಬಂದಿಸಿ ಪೋಲಿಸರ ಟ್ರೀಟ್ಮೆಂಟ್ ನೀಡಿ ಬಳ್ಳಾರಿ ಜೈಲಿಗೆ ಹಾಕಿದ್ದರು.
  ಪ್ರಚೋದನೆ ಮಾಡಿದವರು ಅವರನ್ನು ಬಿಡಿಸಲೇ ಇಲ್ಲ, ಅವರ ತಂದೆ ತಾಯಿಗಳ ರೋದನೆಯಿ೦ದ ನೊಂದ ಆಗಿನ ಕಾಂಗ್ರೇಸ್ ನ  ಯುವ ಮುಂದಾಳು ನಗರದ ಮಹಾದೇವಪ್ಪ ಜಾಮೀನು ನೀಡಿ ಬಿಡಿಸಿಕೊಂಡು ಬಂದರು.
  ನಂತರ ನಡೆದ ಚುನಾವಣೆಯಲ್ಲಿ ಯಡಿಯೂರಪ್ಪನವರು ಗೆದ್ದು ವಿದಾನ ಸಭೆಗೆ ಪ್ರವೇಶ ಪಡೆದರು, ಕಾಂಗ್ರೇಸ್ ಪಕ್ಷ ನಗರದ ಮಹಾದೇವಪ್ಪರಿಗೆ ಟಿಕೇಟು ನೀಡಲೇ ಇಲ್ಲ 1989 ರಲ್ಲಿ ನಗರದ ಮಹಾದೇವಪ್ಪ ಪಕ್ಷೇತರರಾಗಿ ನಿಂತು ಯಡೂರಪ್ಪರ ವಿರುದ್ದ ಕೆಲವೇ ನೂರು ಮತಗಳಿಂದ ಪರಾಭವಗೊ0ಡಿದ್ದು ಇತಿಹಾಸ.
   ಆ ದಿನಗಳಲ್ಲಿ ಮಂತ್ರಿ ಯಂಕಟಪ್ಪರ ಮನೆ ಮೇಲೆ ದಾಳಿ ಮಾಡಿದ್ದ ಆ ದಿನದ ಯ೦ಗ್ ಟರ್ಕ್ ನ ಒಬ್ಬರನ್ನು ಸಂದರ್ಶಿಸಿ ಜನ ಹೋರಾಟ ಪತ್ರಿಕೆಯ ನನ್ನ ಅಂಕಣದಲ್ಲಿ ಬರೆದಿದ್ದೆ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಸೂಪರಿಡೆಂಟ್ ಆಗಿ ನಿವೃತ್ತಿ ಆಗಿದ್ದಾರೆ ಅವರ ಹೆಸರು ರಾಜು ಅಂತ.
   ಇವಾಗೆಲ್ಲ ಯಡೂರಪ್ಪರ ಪುತ್ರ ವಿಜೇಂದ್ರರಿಗೆ ಚಾಣಕ್ಯ ಎಂಬ ಬಿರುದು ನೀಡಿದ್ದಾರೆ ಆದರೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ನಿಜ ಚಾಣಕ್ಯ ಮಾತ್ರ ಪದ್ದಣ್ಣ ಆಲಿಯಾಸ್ ಪದ್ಮನಾಭ ಭಟ್ರು ಅವರಿಲ್ಲದಿದ್ದರೆ ಶಿಕಾರಿಪುರ ವಿಧಾನಸಭಾ ಕ್ಷೇತ್ರ ಬಿಜೆಪಿ ಕ್ಷೇತ್ರ ಆಗುತ್ತಿರಲಿಲ್ಲ, ಯಡೂರಪ್ಪ ಅಲ್ಲಿಂದ ಗೆದ್ದು ಈವರೆಗೆ ತಲುಪುತ್ತಿರಲಿಲ್ಲ.
   ಇದೆಲ್ಲ ಈಗಾಗಲೇ ಜನ ಮಾನಸದಲ್ಲಿ ಮರೆತು ಹೋದ ವಿಚಾರಗಳು ನಿನ್ನೆಯ ಘಟನೆಯಿ೦ದ ನೆನಪಾಯಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ