Skip to main content

Blog number 1330. ಪ್ರದಾನಿ ಇಂದಿರಾ ಗಾಂಧಿ ಹಂತಕರ ಪೋಟೋ ಅಮೃತಸರದ ಸ್ವರ್ಣ ಮಂದಿರ ಸಂಕೀರ್ಣದ ಸೆಂಟ್ರಲ್ ಸಿಖ್ ಮ್ಯೂಸಿಯಂನಲ್ಲಿ ಹುತಾತ್ಮರ ಪಟ್ಟದಲ್ಲಿ ರಾರಾಜಿಸುತ್ತಿದೆ.

#ಪ್ರಧಾನಿ_ಇಂದಿರಾಗಾಂಧಿ_ಹಂತಕರು_ಹುತಾತ್ಮರೆ?

#ಅಮೃತಸರದ_ಗೋಲ್ಡನ್_ಟೆಂಪಲ್_ಸೆಂಟ್ರಲ್_ಸಿಖ್_ಮ್ಯೂಸಿಯಂನಲ್ಲಿ

#ಇಂದಿರಾ_ಹಂತಕರ_ಪೋಟೋಗಳನ್ನು_ಸಿಖ್_ದಮ೯ದ_ಹುತಾತ್ಮರ_ಸಾಲಿನಲ್ಲಿದೆ.

#ಸತ್ವಂತ್_ಸಿಂಗ್_ಮತ್ತು_ಬಿಯಾಂತ್_ಸಿ೦ಗ್_ಪೋಟೋ.

#ಇವರಿಬ್ಬರ_ಪೋಟೋ_ವಿಚಾರಿಸಿದ್ದಕ್ಕೆ_ಶಸ್ತ್ರದಾರಿ_ಕಟ್ಟರ್_ಸಿಖ್_ಯೋದ_ದಿಟ್ಟಿಸಿದ_ಪರಿ

#ಪ್ರಜಾಪ್ರಭುತ್ವ_ದೇಶದ_ಪ್ರದಾನಿ_ಹಂತಕರಿಗೆ_ಈ_ರೀತಿ_ಸಾವ೯ಜನಿಕವಾಗಿ_ಗೌರವಿಸಬಹುದಾ?

#ಆನಂದಪುರಂನಲ್ಲಿ_ಇಂದಿರಾ_ಸಂತಾಪ_ಸಭೆ_ಮೌನಮೆರವಣಿಗೆ_ನೇತೃತ್ವ_ನನ್ನದಾಗಿತ್ತು_ಆಗ_ನನ್ನ_ವಯಸ್ಸು_19.

   1980 ರಲ್ಲಿ ಪುನಃ ಕಾಂಗ್ರೇಸ್ ಅಧಿಕಾರಕ್ಕೆ ಬಂದು ಇಂದಿರಾ ಗಾಂಧಿ ಪ್ರದಾನಿ ಆದಾಗ ಪ೦ಜಾಬ್ ಪ್ರತ್ಯೇಕ ಚಳವಳಿಯ ಖಾಲಿಸ್ತಾನ್ ಹೋರಾಟದಲ್ಲಿ ಬಾಂಬ್ ದಾಳಿ, ವಿಮಾನ ಅಪಹರಣದಂತ ಪ್ರಕ್ಷುಬ್ದತೆ ಇತ್ತು ಇದರ ಅಂತ್ಯ ಕಾಣಿಸಲು ಮತ್ತು ಅಖಂಡ ಭಾರತದ ಹಿತ ಕಾಪಾಡಲು  ಇಂದಿರಾ ಗಾಂಧಿ 1984ರ ಜೂನ್ ನಲ್ಲಿ ಆಪರೇಷನ್ ಬ್ಲೂಸ್ಟಾರ್ ಹೆಸರಲ್ಲಿ ಅಮೃತ್ ಸರದ ಸ್ವರ್ಣ ಮಂದಿರವನ್ನು ಭಯೋತ್ಪಾದಕರಿಂದ ತೆರವು ಮಾಡಿಸಲು ಮಾಡಿದ ಸೈನ್ಯದ ಕಾರ್ಯಾಚಾರಣೆಯಿಂದ ಖಾಲಿಸ್ತಾನ್ ಸರ್ವೋಚ್ಚ ನಾಯಕ ಬಿಂಡ್ರನ್ ವಾಲೆ ಮತ್ತು ಅವರ ಅನುಯಾಯಿಗಳ ಹತ್ಯೆಯ ಸೇಡಿಗಾಗಿ ಕೇವಲ ನಾಲ್ಕು ತಿಂಗಳಲ್ಲಿ ಅಂದರೆ 1984ರ ಅಕ್ಟೋಬರ್ 31 ರಂದು ಇಂದಿರಾ ಅಂಗರಕ್ಷಕರಾದ ಸತ್ವ೦ತ್ ಸಿಂಗ್ ಮತ್ತು ಬಿಯಾಂತ್ ಪ್ರದಾನಿ ಇಂದಿರಾರನ್ನು ಮೆಷಿನ್ ಗನ್ನಿನಿಂದ ಹತ್ಯೆ ಮಾಡುತ್ತಾರೆ.
    ಈ ಘಟನೆಯಿಂದ ಸಾವಿರಾರು ಸಿಖ್ ಸಮುದಾಯದ ನರಮೇದವೇ ನಡೆಯಿತು, ಇಡೀ ದೇಶದಲ್ಲಿ ಇಂದಿರಾ ಹತ್ಯೆಯಿಂದ ತಲ್ಲಣಿಸಿತ್ತು.
   ನಾನು ಮತ್ತು ಗೆಳೆಯರು ಯಡೇಹಳ್ಳಿ ಸರ್ಕಲ್ ನಿಂದ ಆನಂದಪುರಂ ಪ೦ಚಾಯಿತಿ ಕಚೇರಿ ತನಕ ಮೌನ ಮೆರವಣಿಗೆ ಮಾಡಿ ಅಲ್ಲಿ ಇಂದಿರಾ ಗಾಂಧಿ ಅವರಿಗೆ ಸಂತಾಪ ಸೂಚಿಸುವ ಸಭೆ ನಡೆಸಿದ್ದೆವು ಅಲ್ಲಿ ನಾನು ಭಾಷಣ ಕೂಡ ಮಾಡಿದ್ದೆ ಆಗ ನನಗೆ 19 ವರ್ಷ.
  ಆ ದಿನ ಆನಂದಪುರಂನ ಹೋಟೆಲ್ ಮಾಲಿಕರೋರ್ವರು ಇಂದಿರಾ ಹತ್ಯೆ ಬೆಂಬಲಿಸಿ ಸಾರ್ವಜನಿಕವಾಗಿ ಹಾಲು ಕುಡಿದದ್ದು ಆನಂದಪುರಂನಲ್ಲಿ ಬಿಗು ವಾತಾವರಣಕ್ಕೂ ಕಾರಣ ಆಗಿತ್ತು.
  ಈಗ ಪುನಃ ಖಾಲಿಸ್ತಾನ ಚಳವಳಿ ಮುನ್ನಲೆಗೆ ಬರುತ್ತಿದೆ, ಬಿಂಡ್ರನ್ ವಾಲೆ 02 ಅಮೃತ್ ಪಾಲ್ ಸಿಂಗ್ ಸಂದು ಕಾರಣದಿಂದ,ಈ ಸಂದರ್ಭದಲ್ಲಿ ನನ್ನ ಅಮೃತ್ ಸರ ಬೇಟಿಯ ನೆನಪುಗಳು ಇಲ್ಲಿದೆ...

  ಅಮೃತ್ ಸರದ ಸ್ವರ್ಣ ಮಂದಿರಕ್ಕೆ ಹೋದಾಗ ಅದರ ಪಕ್ಕದಲ್ಲೇ ಇರುವ ಸೆಂಟ್ರಲ್ ಸಿಖ್ ಮ್ಯೂಸಿಯಂ ನೋಡದೆ ಬಂದರೆ ಸಿಖ್ ಧರ್ಮಿಯರ ಸಂಪೂರ್ಣ ಮಾಹಿತಿ ಪಡೆಯಲು ಸಾಧ್ಯವಿಲ್ಲ.
  2008ರಲ್ಲಿ ಸ್ವರ್ಣ ಮಂದಿರಕ್ಕೆ ಹೋದಾಗ ನಾನು ಅಲ್ಲಿ ಪ್ರತಿದಿನ ಸೇವೆಗೆ ಬರುವ ಸ್ವಯಂ ಸೇವಕರ ಬಗ್ಗೆ ತುಂಬಾ ಕುತೂಹಲ ಇತ್ತು ಅವರಿಗೆ ಕೆಲಸ ಹಂಚುವ ಸಿಖ್ ಧರ್ಮದ ಗುರುಗಳ ಕಾರ್ಯ ನಿರ್ವಹಿಸುವ ರೀತಿ ತಿಳಿದುಕೊಂಡೆ.    
    ಬೆಳಿಗ್ಗೆ ಬೆಳಿಗ್ಗೆ ಅನೇಕ ವರ್ಷದ ಕಾಯುವಿಕೆಯಿಂದ ಸೇವೆ ಮಾಡುವ ಅವಕಾಶದ ಪತ್ರ ಪಡೆದು ಬರುವವರು, ಅವತ್ತೇ ಸೇವೆ ಸಲ್ಲಿಸಲು ಅವಕಾಶಕ್ಕೆ ಕಾಯುವವರು ಸರದಿ ಸಾಲಿನಲ್ಲಿ ನಿಂತು ಅಲ್ಲಿನ ಪ್ರಮುಖರು ಹಂಚಿದ ಕೆಲಸ ಭಕ್ತಿ ಪೂರ್ವಕವಾಗಿ ನಿರ್ವಹಿಸುತ್ತಾರೆ.
   ಇದರಲ್ಲಿ ಸಾಮಾನ್ಯ ಸಿಖ್ ರಿಂದ ಐಎಎಸ್, ಐಪಿಎಸ್, ಅತ್ಯಂತ ಶ್ರೀಮಂತ, ಮಂತ್ರಿಗಳೂ ಇರುತ್ತಾರೆ ಅವತ್ತು ಅಲ್ಲಿ ಸಾರ್ವಜನಿಕರ ಪಾದರಕ್ಷೆ ಇಡುವಲ್ಲಿ ಭಕ್ತರ ಪಾದರಕ್ಷೆ ಪಡೆದು ಟೋಕನ್ ನೀಡಿ ಆ ಪಾದರಕ್ಷೆಯ ದೂಳು ಒರೆಸಿ ಇಡುವ ಕೆಲಸ ಸಿಕ್ಕಿದರೆ ಅದು ಜೀವನದ ಪರಮೋಚ್ಚ ಪುಣ್ಯ ಪಡೆಯುವ ಕೆಲಸ ಎಂಬ ನಂಬಿಕೆ ಸಿಖ್ ರದ್ದು.
  ಅಲ್ಲಿನ ಲಂಗರ್ (ಊಟದ ಮನೆ) ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಪ್ರತಿನಿತ್ಯ ಕನಿಷ್ಟ ಒ0ದೂವರೆ ಲಕ್ಷ ಜನ ಶುಚಿ-ರುಚಿಯ,ಜಾತ್ಯಾತೀತ, ಮನುಷ್ಯರೆಲ್ಲ ಒಂದೇ ಅನ್ನುವ ಸಾರ್ವಜನಿಕ ಅನ್ನಸಂತರ್ಪಣೆ ನಿರಂತರವಾಗಿ ನಡೆಯುತ್ತಲೇ ಇದೆ.
   ಬಂಗಾರದ ತಗಡು ಹೊದಿಸಿರುವ ಸ್ವರ್ಣ ಮಂದಿರ, ಅಲ್ಲಿ ಪ್ರತಿ ನಿತ್ಯ ಪಠಿಸುವ ಸಿಖ್ ಧರ್ಮಗ್ರಂಥ ಗ್ರಂಥ್ ಸಾಹೀಬ್ .
  ನಂತರ ಬೃಹತ್ ಸೆಂಟ್ರಲ್ ಸಿಖ್ ಮ್ಯೂಸಿಯಂ ನೋಡುತ್ತಾ ಹೋದಾಗಲೆ ಗೊತ್ತಾಗುತ್ತದೆ ಸಿಖ್ ದರ್ಮಿಯರ ಸಾದನೆ - ಹೋರಾಟ - ಆಧ್ಯಾತ್ಮ - ಸಮಾನತೆಗಳು ಮತ್ತು ಇತಿಹಾಸ.
  ಆ ಬೃಹತ್ ಕಟ್ಟಡ ಸಂಕೀರ್ಣದಲ್ಲಿ ಹುತಾತ್ಮಾರ ಪಟ್ಟ ಪಡೆದ ಸಾವಿರಾರು ಸಿಖ್ ದರ್ಮಿಯ ಹುತಾತ್ಮರ ಪೋಟೋಗಳು ವ್ಯವಸ್ಥಿತವಾಗಿ ಜೋಡಿಸಿದ್ದಾರೆ.
  ಕಟ್ಟರ್ ಸಿಖ್ ದಮ೯ದ ಅನುಯಾಯಿ ಶಸ್ತ್ರದಾರಿಗಳು ಈ ಎಲ್ಲಾ ಕೋಣೆಗಳ ಕಾವಲು ಕಾಯುತ್ತಾರೆ, ಅಂತವರಲ್ಲಿ ಒಬ್ಬರನ್ನು ನಾನು ಕೇಳಿದೆ "ಪಾಜಿ ಇದರ್ ಸತ್ವಂತ್ ಸಿಂಗ್ ಔರ್ ಬಿಯಾಂತ್ ಸಿಂಗ್ ತಸ್ವೀರ್ ಹೈ ಕ್ಯಾ" ಅಂದೆ... ಒಂದು ಕ್ಷಣ ಅವರು ತಮ್ಮ ಬಿಗುಮುಖದಲ್ಲಿ ನನ್ನನ್ನೇ ದಿಟ್ಟಿಸಿದರು... ಅವರ ಧಾರ್ಮಿಕ ವೇಷ ಭೂಷಣ, ಶಸ್ತ್ರಾಸ್ತ್ರಗಳ ದರಿಸಿದ ನೀಳ ಗಡ್ಡ, ಬಣ್ಣದ ಪೇಟಾ, ಕೈಯಿಯ ಬಳೆ, ಸೊಂಟದ ಕೃಪಾಣಗಳ ಜೊತೆ ಅವರ ತೀಕ್ಷ್ಣ ಕಣ್ಣುಗಳ ನೋಟ ನನ್ನ ಒಂದು ಕ್ಷಣ ನನಗೆ ಭಯ ಉಂಟು ಮಾಡಿದ್ದು ಸುಳ್ಳಲ್ಲ... ಪ್ರದಾನಿ ಇಂದಿರಾ ಹತ್ಯೆ ಇವರಿಗೆ ಈ ಸಿಟ್ಟು ತರಿಸಿರಬಹುದು ಅನ್ನಿಸಿತು .... ನಂತರ ಆತ ನನ್ನ ಊರು ಮನೆ ಮತ್ತು ನನ್ನ ಉದ್ದೇಶ ತಿಳಿದ ನಂತರ ಕೈಸನ್ನೆ ಮಾಡಿ ಹಿಂಬಾಲಿಸಲು ಸೂಚಿಸಿದ... ಯಾಕೆ? ಏನು? ಅಂತ ಕೇಳಲು ಭಯ...ಹಿಂಬಾಲಿಸಿದೆ, ಒಂದೆರೆಡು ಕೋಣೆ ನಂತರದ ಮೂಲೆಯ ಗೋಡೆ ಮೇಲಿನ ಚಿತ್ರದ ಕಡೆ ಕೈ ಬೆರಳು ತೋರಿಸಿದಾಗ ಕಂಡಿದ್ದೆ ನಮ್ಮ ದೇಶದ ಜನಪ್ರಿಯ ಪ್ರದಾನಿ ಇಂದಿರಾ ಗಾಂಧಿ ಹತ್ಯೆ ಮಾಡಿದ ಅವರ ಅಂಗ ರಕ್ಷಕರಾದ ಸತ್ವಂತ್ ಸಿಂಗ್ ಮತ್ತು  ಬಿಯಾಂತ್ ಸಿಂಗ್ ಪೋಟೋಗಳು ಅದು ಹುತಾತ್ಮ ಪಟ್ಟ ಪಡೆದವರೆಂಬ ಗೌರವದ ಜೊತೆ.
   ಪ್ರಜಾಪ್ರಭುತ್ವ ದೇಶದಲ್ಲಿ ಆ ದೇಶದ ಪ್ರದಾನಿ ಹತ್ಯೆ ಮಾಡಿದವರನ್ನು ಈ ರೀತಿ ಸಾರ್ವಜನಿಕವಾಗಿ ಗೌರವಿಸುವುದು ದೇಶದ್ರೋಹವಾ? ಗೊತ್ತಿಲ್ಲ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ