Skip to main content

Blog number 1278. ಆನಂದಪುರಂನ ಸಮಸ್ತ ಅಭಿವೃದ್ದಿಗಾಗಿಆಗಿನ ವಿದ್ಯಾ ಮಂತ್ರಿ ಎ.ಆರ್. ಬದರಿನಾರಾಯಣ ಅಯ್ಯಂಗಾರರ ಕನಸಿಗೆ ವೇಗ ನೀಡಿದ ಶಿಕಾರಿಪುರದ ಎಸ್.ಆರ್.ಕೃಷ್ಣಪ್ಪನವರಿಗೆ ಸಮಸ್ತ ಆನಂದಪುರಂ ನಿವಾಸಿಗಳ ಶ್ರದ್ಧಾಂಜಲಿಗಳು

#ಶ್ರದ್ದಾಂಜಲಿಗಳು

#ಎಸ್_ಆರ್_ಕೃಷ್ಣಪ್ಪ_ಶಿಕಾರಿಪುರ

#ಆನಂದಪುರಂ_ಮಾದರಿ_ಊರು_ಮಾಡಲು_ಶ್ರಮಿಸಿದವರು.

#ಮಂತ್ರಿಗಳಾಗಿದ_ಎ_ಆರ್_ಬದರಿನಾರಾಯಣರ_ಅಭಿವೃದ್ಧಿ_ಕನಸಿಗೆ_ವೇಗ_ನೀಡಿದವರು.

#ಅಪ್ಪಟ_ಗಾಂಧೀವಾದಿ 

#ಆ_ಕಾಲದಲ್ಲಿ_ಸೇವಾದಳದಿಂದ_ಆನಂದಪುರಂನಲ್ಲಿ_ನಡೆಯುತ್ತಿದ್ದ_ಪ್ರಬಾತ್_ಪೇರಿ.

#ಅದನ್ನ_ನೋಡಲು_ಸುತ್ತ_ಮುತ್ತಲಿನ_ಹಳ್ಳಿಯಿಂದ_ಜನ_ಬಂದು_ಸೇರುತ್ತಿದ್ದರು.

#ನನ್ನ_ಗೆಳೆಯ_ಕೃಷ್ಣಪ್ಪನ_ಮಗ_ಇಷ್ಟು_ಚೆನ್ನಾಗಿ_ನನ್ನ_ಚಿತ್ರಿಸಿದ್ದಿಯಪ್ಪ_ಎಂಬ_ಅವರ_ಮಾತು_ಮರೆಯಲಾರೆ

   ನಿನ್ನೆ ರಾತ್ರಿ (3- ಮಾರ್ಚ್ -2023 ಶುಕ್ರವಾರ) ನಮ್ಮ ಆನಂದಪುರಂ ಊರನ್ನು ಮಾದರಿ ಊರಾಗಲು ಶ್ರಮಿಸಿ ಯಶಸ್ವಿ ಆಗಿದ್ದ ನಮ್ಮ ಊರಿನ ಜನರು ಪ್ರೀತಿಯಿಂದ SRK ಎಂದು ಕರೆಯುತ್ತಿದ್ದ ಶಿಕಾರಿಪುರದ ತಾಲ್ಲೂಕ್ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಆಗಿದ್ದ ಎಸ್ ಆರ್ ಕೃಷ್ಣಪ್ಪನವರು ಇಹ ಲೋಕ ತ್ಯಜಿಸಿದರು ಎಂಬ ಸುದ್ದಿ ಸಾಗರದ ಇಂದಿರಾ ಗಾಂಧಿ ಕಾಲೇಜಿನ ಉಪನ್ಯಾಸಕರು ಆಗಿರುವ SRK ಅವರ ಅಳಿಯ ಗಣಪತಿ ವಾಟ್ಸಪ್ ಸಂದೇಶ ಕಳಿಸಿದ್ದರು.
  ಆನಂದಪುರಂಗೆ ಕಾಲೇಜು ತರಬೇಕು, ಸೈನ್ಸ್ ವಿಭಾಗ ಬೇಕೇ ಬೇಕು ಅದರಿಂದ ಈ ಭಾಗದ ವಿದ್ಯಾರ್ಥಿಗಳು ಡಾಕ್ಟರ್ ಇಂಜಿನಿಯರ್ ಆಗಬೇಕು, ಆನಂದಪುರಂಗೆ ಬ್ಯಾಂಕ್ ಬೇಕು, ಊರಿಗೆ ಕುಡಿಯುವ ನೀರಿನ ನಲ್ಲಿ ವ್ಯವಸ್ಥೆ ಆಗಬೇಕು ಅಂತೆಲ್ಲ ಆಗಿನ ಶಿಕ್ಷಣ ಮಂತ್ರಿಗಳಾದ ನಮ್ಮ ಊರಿನ ಎ.ಆರ್ ಬದರಿನಾರಾಯಣ ಅಯ್ಯಂಗಾರ್ ಮತ್ತು ಊರಿನ ವಿಲೇಜ್ ಪಂಚಾಯತ್ ಚೇರ್ ಮನ್ ಆಗಿದ್ದ ಅವರ ಸಹೋದರ ಎ.ಆರ್.ವೆಂಕಟಾಚಲ ಅಯ್ಯಂಗಾರ್ ರನ್ನು ಹುರಿದುಂಬಿಸುತ್ತಿದ್ದವರು ಅಯ್ಯಂಗಾರ್ ಕುಟುಂಬ ಊರಿಗಾಗಿ ಭೂಮಿ ನೀಡಿ ಕಟ್ಟಿಸಿಕೊಟ್ಟ ಪ್ರೌಡ ಶಾಲೆಗೆ ಹಾಸನ ಜಿಲ್ಲೆಯಿಂದ ವರ್ಗವಾಗಿ ಬಂದ ಶಿಕಾರಿಪುರ ಊರಿನ  SR ಕೃಷ್ಣಪ್ಪನವರು.
   ಇಡೀ ವಿದ್ಯಾರ್ಥಿ ವೃಂದ ಮಾತ್ರವಲ್ಲ ಇಡೀ ಊರನ್ನೇ ಶಿಸ್ತಿನಲ್ಲಿ ತಂದವರು ಅವರು, ಅವರಿಗೆ ಊರಲ್ಲಿ ಪೋಲಿಸರಿಗಿಂತ ಹೆಚ್ಚು ಹೆದರುತ್ತಿದ್ದರು, SRK ಮಾತು ಇಡೀ ಆನಂದಪುರಂಗೆ ವೇದ ವಾಕ್ಯ, ಆನಂದಪುರಂನ ಎಲ್ಲಾ ಸರ್ಕಾರಿ ನೌಕರರು ಅವರ ಆದೇಶದಂತೆ ಆನಂದಪುರಂ ಅಭಿವೃದ್ದಿಗಾಗಿ ಕೈ ಜೋಡಿಸುತ್ತಿದ್ದರೆಂದರೆ ಈ ಕಾಲದಲ್ಲಿ ನಂಬಲು ಸಾಧ್ಯವೇ ಇಲ್ಲ.
   ಇವರ ಬಗ್ಗೆ ಕೆಲ ವರ್ಷದ ಹಿಂದೆ ಅಭಿನಂದನಾ ಗ್ರಂಥದ ಸಂಪಾದಕರಾಗಿದ್ದ ಇವರ ಅಳಿಯ ನನ್ನಿಂದ ಲೇಖನ ಒಂದನ್ನು ಬರೆಸಿದ್ದರು ಆ ಲೇಖನ ಓದಿದ್ದ SRK ಸ್ವತಃ ನನ್ನ ಆಫೀಸಿಗೆ ಬಂದು ನನ್ನ ತಂದೆ ಅವರ ಗೆಳೆಯರಾಗಿದ್ದ "ಕೃಷ್ಣಪ್ಪನ ಮಗ ಇಷ್ಟು ಚೆನ್ನಾಗಿ ನನ್ನ ಚಿತ್ರಿಸಿದ್ದಿಯಪ್ಪ" ಎನ್ನುವ ಮಾತು ನನ್ನ ಜೀವಮಾನ ಪೂತಿ೯ ನೆನಪಿನಲ್ಲಿಡುವಂತದ್ದು.
  ಈ ಬಗ್ಗೆ ನಾನು ಬರೆದ ಬ್ಲಾಗ್ ಮತ್ತು ಅವರ ಅಭಿನಂದನಾ ಗ್ರಂಥದ ಲೇಖನದ ಪುಟಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಓದಬಹುದು 
https://arunprasadhombuja.blogspot.com/2023/01/blog-number-1186-srk.html
  ಮುಂದಿನ ದಿನದಲ್ಲಿ ಆನಂದಪುರಂನ ಅಭಿವೃದ್ದಿಯ ಕನಸು ಕಂಡು ಸಾರ್ಥಕ ಜೀವನ ನಡೆಸಿ ಮುಕ್ತಿ ಹೊಂದಿದ SRK ಸ್ಮರಣೆಯ ಹೆಸರು ಹೊಂದಿದ ರಸ್ತೆ - ರಂಗಮಂದಿರಗಳು ಆನಂದಪುರಂನಲ್ಲಿ ಸದಾ SRK ನೆನಪು ಚಿರಸ್ಥಾಯಿ ಆಗುವ ಕೆಲಸ ಆನಂದಪುರಂನ ಅವರ ವಿದ್ಯಾರ್ಥಿಗಳು ನೆರವೇರಿಸಲಿ ಎಂದು ಹಾರೈಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ