Skip to main content

Blog number 1310. ಸಾಗರ ಪೋಲಿಸ್ ಠಾಣೆಯ ಮೊದಲ ಲಾಕ್ ಅಪ್ ಡೆತ್ ಪುರಪ್ಪೆಮನೆ ರಾಮನ ಕೊಲೆ, ಗುಂಡೂರಾವ್ ಸರ್ಕಾರದ ಸಚಿವ ಬಂಗಾರಪ್ಪ ಬೇಟಿ, ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪ ಅನ್ಯಾಯದ ವಿರುದ್ದ ಹಾಕಿದ ಆ ಘೋಷಣೆ, ಮುಂದೆ .....

https://youtu.be/WCphpbXEcmQ

#ಜನಪರ_ಹೋರಾಟಗಾರ_ತೀನಾ_ಶ್ರೀನಿವಾಸ್_ಭಾಗ_3 

 #ಸಾಗರದ_ಮೊದಲ_ಲಾಕ್_ಅಪ್_ಡೆತ್

#ಪುರಪ್ಪೆಮನೆ_ರಾಮ_ಶವ_ಸಾಗರ_ಠಾಣೆಯಲ್ಲಿ

#ಗುಂಡೂರಾವ್_ಸರ್ಕಾರದಲ್ಲಿ_ಮಂತ್ರಿ_ಆಗಿದ್ದ_ಬಂಗಾರಷ್ಟನವರು_ಸಾಗರದ_ಆಸ್ಟತ್ರೆಗೆ

#ಕಾಗೋಡು_ಹೋರಾಟದ_ರೂವಾರಿ_ಗಣಪತಿಯಪ್ಪರ_ದಿಕ್ಕಾರದ_ಘೋಷಣೆ

#ಗರಡಿ_ಗೋಪಾಲ_ಸಹೋದರರ_ಆಕ್ರೋಶ

#ಸಾಗರ_ಪಟ್ಟಣದಲ್ಲಿ_ಪೋಲಿಸರಿಂದ_ಲಾಠಿ_ಚಾಜ್೯_ಅಶ್ರುವಾಯು

#ವಿದ್ಯಾರ್ಥಿಗಳ_ಮೇಲೂ_ಲಾಠಿ_ಪ್ರಹಾರ

#ಮರುದಿನ_ಎಲ್_ಬಿ_ಕಾಲೇಜು_ವಿದ್ಯಾರ್ಥಿಗಳಿಂದ_ಬೃಹತ್_ಪ್ರತಿಭಟನೆ_ಸಾಗರ_ಪೇಟೆ_ಪ್ರಕ್ಷುಬ್ಧ.

#ತೀನಾ_ಶ್ರೀನಿವಾಸರ_ನೇತೃತ್ವದಲ್ಲಿ.

   1978-79 ಇರಬೇಕು ಆನಂದಪುರಂನಿಂದ ಪ್ರತಿನಿತ್ಯ ಸಾಗರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ನಾವು , ನಾನು 8ನೇ ತರಗತಿ ಇಂಗ್ಲೀಷ್ ಮೀಡಿಯಂ ಮುನ್ಸಿಪಲ್ ಹೈಸ್ಕೂಲ್ ಗೆ ಸೇರಿದ್ದೆ.
  ರೈಲಿಳಿದು ಪೋಲಿಸ್ ಸ್ಟೇಷನ್ ಸರ್ಕಲ್ ಗೆ ಬರುವಾಗ ಗೊತ್ತಾಯಿತು ಪುರಪ್ಪೆಮನೆಯ ರಾಮ ಎಂಬುವ ಬಡ ಕೃಷಿ ಕಾರ್ಮಿಕನನ್ನು ಕಳ್ಳತನದ ಆರೋಪದಲ್ಲಿ ಸಾಗರ ಪೋಲಿಸ್ ಠಾಣೆಗೆ ತಂದು ಏರೋಪ್ಲೇನ್ ಶಿಕ್ಷೆ ನೀಡಲಾಯಿತಂತೆ ಆಗ ಪೋಲಿಸರ ವಿಪರೀತ ಬಾಯಿ ಬಿಡಿಸುವ ಶಿಕ್ಷೆಯಿಂದ ಪುರಪ್ಪೆಮನೆ ರಾಮನ ಜೀವ ಹೋಯಿತು... ಏರೋಪ್ಲೇನ್ ಏರಿಸಲು ಹಿಂದಿನ ರಾತ್ರಿ ಬಸ್ ಸ್ಟ್ಯಾಂಡ್ ಅಂಬಿಕಾ ಹೋಟೆಲ್ ಬಾವಿ ಹಗ್ಗ ಒಯ್ದಿದ್ದರು... ಇದು ಲಾಕ್ ಅಪ್ ಡೆತ್ ... ರಾಮನ ಶವ ಸಾಗರದ ಆಸ್ಪತ್ರೆಯ ಶವಾಗಾರದಲ್ಲಿದೆ... ಸಾಗರ ಆಸ್ಪತ್ರೆ ಎದರು ಸಾವಿರಾರು ಜನ ಸೇರಿದ್ದಾರೆ.... ಎಂಬ ಸುದ್ದಿಗಳು ನನಗೂ ಮತ್ತು ಆಗ ಸಾಗರದ ಎಲ್. ಬಿ .ಕಾಲೇಜಿನ ನಮ್ಮ ಊರಿನ ವಿದ್ದಾರ್ಥಿ ನನ್ನ ಜಿಗಣಿ ದೋಸ್ತ್ ಪುಪ್ಪಾ ಆಲಿಯಾಸ್ ಸಿಲ್ವೆಸ್ಟರ್ ಡಿಕಾಸ್ಟಾಗೆ ಶಾಲೆಗೆ ಚಕ್ಕರ್ ಹೊಡೆದು ಸಾಗರದ ಆಸ್ಪತ್ರೆ ಕಡೆಗೆ ನಮ್ಮ ನಡಿಗೆ ಅ೦ತಾಯಿತು.
  ಆಗ ಶಾಸಕರು ಎಲ್.ಟಿ.ತಿಮ್ಮಪ್ಪ ಹೆಗ್ಗಡೆ ಕಾಗೋಡು ತಿಮ್ಮಪ್ಪ ಇವರಿಂದ ಪರಾಭವಗೊಂಡ ಮಾಜಿ ಶಾಸಕರು.
   ಸಾಗರದ ಆಸ್ಸತ್ರೆ ಆವರಣದಲ್ಲಿ ನಿಂತಿದ್ದ ಪೋಲಿಸ್ ಜೀಪ್... ಅಲ್ಲಿ ಆಗಲೇ ಸಾವಿರಾರು ಸಾಗರದ ಜನ ಪೋಲಿಸರು ರಾಮನ ಕೊಂದ ಆಕ್ರೋಶದಲ್ಲಿ ಅಲ್ಲಿ ಸೇರಿದ್ದರು.
   ಕೆಲವೇ ಕ್ಷಣದಲ್ಲಿ ಬಂಗಾರಪ್ಪನವರು ಆಗಮಿಸಲಿದ್ದಾರೆ ಅನ್ನುವಾಗಲೇ ಕೃಷಿ ಮ೦ತ್ರಿ ಬಂಗಾರಪ್ಪರ ಆಗಮನ ಆಯಿತು, ಬಂದವರು ಶವಾಗಾರಕ್ಕೆ ಹೋಗಿ ಲಾಕ್ ಅಪ್ ಡೆತ್ ಆಗಿದ್ದ ಪುರಪ್ಪೆ ಮನೆ ರಾಮನ ಶವ ವೀಕ್ಷಿಸಿ ಬಂದರು, ನೆರೆದ ಜನ ಬಂಗಾರಪ್ಪರ ಮಾತಿಗೆ ಕಾಯುತ್ತಿದ್ದರು.
  ಬಂಗಾರಪ್ಪನವರು ನೆರೆದ ಜನಸ್ತೋಮಕ್ಕೆ " ನಾನು ಈಗಲೇ ಚೀಪ್ ಮಿನಿಸ್ಟರ್ ಗುಂಡೂರಾವ್ ಗೆ ಲೈಟನಿಂಗ್ ಕಾಲ್ ಮಾಡಿ ಇಲ್ಲಿನ ಪ್ರಸ್ತುತ ವಿಚಾರ ತಿಳಿಸುತ್ತೇನೆ, ತಪ್ಪಿತಸ್ಥ ಪೋಲಿಸರಿಗೆ ಖಂಡಿತಾ ಶಿಕ್ಷೆ ಕೊಡಿಸುತ್ತೇನೆ, ನಿರಪರಾದಿ ಬಡ ಕೃಷಿ ಕಾರ್ಮಿಕ ಪುರಪ್ಪೆಮನೆ ರಾಮನ ಲಾಕ್ ಅಪ್ ಡೆತ್ ವಿರೋದಿಸುತ್ತೇನೆ" ಅಂತ ಜನರಿಗೆ ಕೈ ಮುಗಿದು, ಟಾಟಾ ಮಾಡಿ ಅವರ ಕಾರು ಹತ್ತುವಾಗ, ಬಿಳಿ ಜುಬ್ಬಾ, ಕಚ್ಚೆ ಪಂಜೆ, ಬಿಳಿ ಗಾಂದಿ ಟೋಪಿ ಮತ್ತು ಕಾಕಿ ಬಗಲು ಚೀಲ ಹಾಕಿಕೊಂಡ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪ ಘೋಷಣೆ ಕೂಗಿದರು "ಬ೦ಗಾರಪ್ಪನವರಿಗೆ " ಅಂದಾಗ ನೆರೆದ ಜನಸ್ತೋಮ ಜೈ ಅಂದಿತು, "ಬಡ ರೈತ ರಾಮನ ಕೊಂದ ಪೋಲಿಸರಿಗೆ " ಅಂದಾಗ ಜನ ಸ್ತೋಮ ದಿಕ್ಕಾರ ಅಂದಿತು.
  ಬಂಗಾರಪ್ಪರ ಕಾರು ಆಸ್ಪತ್ರೆ ಗೇಟು ದಾಟಿದ  ಮರುಕ್ಷಣದಲ್ಲೇ ಗೇಟುಗಳನ್ನು ಸಾಗರದ ಶ್ರೀನಗರದ ಗರಡಿಮನೆ ಪೈಲ್ವಾನ್ ಗೋಪಾಲರ ಸಹೋದರರು ಬಂದ್ ಮಾಡಿದರು ಇದರಿಂದ ಬಂಗಾರಪ್ಪರ ಕಾರಿನ ಹಿಂದೆ ಹೊರಟಿದ್ದ ಪೋಲಿಸ್ ಜೀಪ್ ಆಕ್ರೋಷಭರಿತ ಜನರ ನಡುವೆ ಸಿಕ್ಕಿಬಿತ್ತು, ಪೋಲಿಸ್ ಜೀಪ್ ಹುಡಿಯಾಯಿತು, ಪೋಲಿಸರು ಓಡಿ ತಪ್ಪಿಸಿಕೊ೦ಡರು ಈ ರೀತಿ ಜನ ತಿರುಗಿ ಬೀಳುತ್ತಾರೆಂಬ ಮುಂಜಾಗ್ರತೆ ಆಗಿ ಠಾಣೆ ಎದುರು ನಿಂತಿದ್ದ ರಿಸರ್ವ್ ಪೋಲಿಸ್ ವ್ಯಾನ್ ಬಂದು ಸಿಕ್ಕಿದವರಿಗೆಲ್ಲ ಲಾಠಿ ಬೀಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವಾಗ ನಾನು ಮತ್ತು ನನ್ನ ಮಿತ್ರ ನರ್ಸ್ ಒಬ್ಬರು ಬಾಗಿಲು ಭದ್ರಪಡಿಸುತ್ತಿದ್ದ ಆಸ್ಸತ್ರೆ ವಾರ್ಡ್ನಲ್ಲಿ ಒಳ ಸೇರಿದ್ದರಿಂದ ಪೋಲಿಸರ ಲಾಠಿಯಿಂದ ತಪ್ಪಿಸಿಕೊಂಡೆವು.
  ಇಡೀ ಸಾಗರ ಪೇಟೆ ವರ್ತಕರು ಭಯದಿಂದ ಸ್ವಯಂ ಅಂಗಡಿ ಮುಕ್ಕಟ್ಟು ಬಾಗಿಲು ಹಾಕಿದ್ದರಿಂದ ಸಾಗರ ಪೇಟೆ ನೀರವವಾಯಿತು, ಶಾಲಾ ಕಾಲೇಜುಗಳು ರಜಾ ಘೋಷಿಸಲಾಯಿತು, ರಸ್ತೆಯಲ್ಲಿ ಮನೆಗೆ ಸಾಗುವ ಮತ್ತು ರೈಲು ನಿಲ್ದಾಣ, ಬಸ್ ನಿಲ್ದಾಣಕ್ಕೆ ಸಾಗುತ್ತಿದ್ದ ವಿದ್ಯಾರ್ಥಿ ವೃಂದಕ್ಕೂ ಪೋಲಿಸರು ಲಾಠಿ ಪ್ರಹಾರ ಮಾಡಿದರು.
   ಮರು ದಿನ ವಿದ್ಯಾರ್ಥಿ ಮುಖಂಡ ತೀನಾ ಶ್ರೀನಿವಾಸ್ ನೇತೃತ್ವದಲ್ಲಿ ಇಡೀ ಎಲ್.ಬಿ. ಕಾಲೇಜಿನ ವಿದ್ಯಾರ್ಥಿ ವೃಂದ ಸಾಗರದ ಪೋಲಿಸ್ ಠಾಣೆಗೆ ಮೆರವಣಿಗೆಯಲ್ಲಿ ಬಂದು ಮುತ್ತಿಗೆ ಹಾಕಿತು ಅವತ್ತಿನ ಘಟನೆಯಲ್ಲೂ ನಾನು ಮತ್ತು ಗೆಳೆಯ ಸಾಕ್ಷಿ ಆದೆವು ಮತ್ತೆ ವಿದ್ಯಾರ್ಥಿ ವೃಂದದ ಮೇಲೆ ಪೋಲಿಸರು ಲಾಠಿ ಅಶ್ರುವಾಯು ಪ್ರಯೋಗ ಮಾಡಿ ವಿಜೃಂಬಿಸಿದರು ಇಡೀ ಸಾಗರ ಪೇಟಿ ಎರಡನೆ ದಿನವೂ ಅಘೋಷಿತ ಬಂದ್ ಆಯಿತು.
   ಈ ಬಗ್ಗೆ ಅವತ್ತಿನ ಜನಪರ ಹೋರಾಟದ ನೇತೃತ್ವ ವಹಿಸಿದ್ದ ವಿದ್ಯಾರ್ಥಿ ಮುಖಂಡರಾಗಿದ್ದ ತೀ.ನಾ. ಶ್ರೀನಿವಾಸ್ ಈಗ ಕಾಂಗ್ರೇಸ್ ಪಕ್ಷಕ್ಕೆ (ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರೂ ಆಗಿದ್ದವರು) ರಾಜಿನಾಮೆ ನೀಡಿ ಸುದ್ಧಿ ಆಗಿರುವ ಸಂದರ್ಭದಲ್ಲಿ ಅವರ ಅವತ್ತಿನ ನೆನಪಿನ ವಿಡಿಯೋ ಸಂದರ್ಶನ ಇಲ್ಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ