Skip to main content

Blog number 1337. ನನ್ನ ಅನುಭವದ ಅತೀಂದ್ರಿಯ ಶಕ್ತಿ ಭಾಗ-1, ಆ ಗಟ್ಟಿ ಮುಟ್ಟಾದ ಮಾವಿನ ಮರ ಮಳೆ -ಗಾಳಿ ಇಲ್ಲದ ಬಿರು ಬೇಸಿಗೆಯಲ್ಲಿ ಬೀಳುತ್ತದೆಂದು ನನ್ನ ಒಳ ಮನಸ್ಸಿನಲ್ಲಿ ಅನ್ನಿಸಿ ಉಸಿರಾಟ ಎದೆ ಬಡಿತ ಜಾಸ್ತಿ ಮಾಡಿತ್ತು ನಂತರ ಮರ ಬಿದ್ದು ಮನಸ್ಸು ಸಹಜ ಸ್ಥಿತಿಗೆ ಬಂತು.

ಅತೀಂದ್ರಿಯ ಅನುಭವ ಭಾಗ -1.

ಅತೀಂದ್ರಿಯ ಶಕ್ತಿ ನನ್ನಲಿದೆಯ? ಕೆಲವು ಘಟನೆಗಳು ಇದಕ್ಕೆ ಸಾಕ್ಷಿ ಆಗಿದೆ ಆದರೆ ಅದು ನನ್ನ ನಿಯಂಂತ್ರಣದಲ್ಲಿ ಇಲ್ಲ.

 ಎತ್ತರದ ಮಾವಿನ ಮರದ ಕೆಳಗೆ ಕುಳಿತು ಸೆಲ್ ಫೋನಿನಲ್ಲಿ ಸಂಭಾಷಣೆ ಮಾಡುತ್ತಿದ್ದ ಜೆಸಿಬಿ ಯಂತ್ರದ ಸಹ ಚಾಲಕ

 ಆ ಮರ ಕೆಲವೇ ಕ್ಷಣದಲ್ಲಿ ಅವನು ಕುಳಿತ ಜಾಗದ ಮೇಲೆ ಬೀಳುತ್ತದೆ ಅಂತ ಮನಸ್ಸು ಹೇಳಲು ಪ್ರಾರಂಬಿಸಿತ್ತು.

  ನಮ್ಮ ಆರು ಎಕರೆ ರಬ್ಬರ್ ಪ್ಲಾಂಟೇಶನ್ ನಮ್ಮ ಮನೆಯಿಂದ ಸುಮಾರು 3 ಕಿ.ಮಿ. ದೂರದ ತಾವರೇಹಳ್ಳಿ ಗ್ರಾಮದ ಜೇಡಿಸರದಲ್ಲಿದೆ.
  ಅಲ್ಲಿ ಸುತ್ತಲು ಬಿದಿರು ಮೆಳೆಗಳು ಪಕ್ಕದ ಜಮೀನಿನಲ್ಲಿ ಚೊಕ್ಕ ಮಾಡಿಸದಿದ್ದರೆ ಬೇಸಿಗೆಯಲ್ಲಿ ರಬ್ಬರ್ ತೋಟಕ್ಕೆ ಅಪಾಯವಾದ್ದರಿಂದ ಬಾಡಿಗೆ ಜೇಸಿಬಿ ಯಂತ್ರ ಒಂದನ್ನು ಗೊತ್ತು ಮಾಡಿಕೊಂಡು ನಾನು ಮತ್ತು ಸಹಾಯಕ ಗೇರುಬೀಸು ಚೆನ್ನಪ್ಪನ ಜೊತೆ ಹೋಗಿದ್ದೆ.
   ಚೆನ್ನಪ್ಪ ಬೈಕಲ್ಲಿ ಜೇಸಿಬಿ ಮುಂದೆ ದಾರಿಯಲ್ಲಿ ಹೋದರೆ ನಾನು ಜೇಸಿಬಿಯಲ್ಲಿ ಕುಳಿತು ಪ್ರಯಾಣಿಸಿದ್ದೆ ಈ ಸಂದರ್ಭದಲ್ಲಿ ಈ ಯಂತ್ರದ ಇಬ್ಬರು ಚಾಲಕರು ದೂರದ ಬೆಳಗಾವಿಯಿಂದ ಬಂದವರೆಂದು ಒಬ್ಬನ ಹೆಸರು ಈಶ್ವರ ಮತ್ತೊಬ್ಬ ಮಾರುತಿ.
   ಅವರಿಗೆ ಕೆಲಸ ತೋರಿಸಿ ಅವರು ಯಂತ್ರ ಪ್ರಾರಂಬಿಸಿದ ಸಮಯ ಬರೆದು ಕೊಂಡು ಅಲ್ಲೇ ಕುಳಿತುಕೊಂಡಿದ್ದೆ ಸಮೀಪದಲ್ಲಿ ಚೆನ್ನಪ್ಪನೂ ಕುಳಿತಿದ್ದ.
   ಸಹ ಚಾಲಕ ಮಾರುತಿ ಮೊಬೈಲ್ ಪೋನ್ ನಲ್ಲಿ ಮಾತಾಡುತ್ತಾ ಹೋಗಿ ಕೆಳಗಿನ ಗದ್ದೆ ಬಯಲಿನ ದೊಡ್ಡ ಮಾವಿನ ಮರದ ನೆರಳಲ್ಲಿ ಕುಳಿತದ್ದು ನೋಡಿದೆ.
   ಎರೆಡು ಮಾರು ಗಾತ್ರದ 70-80 ಅಡಿ ಎತ್ತರದ ಗದ್ದೆಗಳ ನಡುವಿನ ಏಕೈಕ ಮಾವಿನ ಮರ ಮಾರುತಿ ಕುಳಿತ ದಿಕ್ಕಿಗೆ ಬಾಗಿತ್ತು ಅದರ ನೆರಳು ಮಾರುತಿ ನೆತ್ತೆಗಿತ್ತು... ಆಗಲೇ ನನಗೆ ವಿಚಿತ್ರ ತಳಮಳ ಪ್ರಾರಂಭ ಆಯಿತು ... ಮಾರುತಿ ಅಲ್ಲಿ ಕುಳಿತದ್ದೇ ಅಪಾಯಕಾರಿ ಜಾಗ... ತಕ್ಷಣ ಅವನನ್ನು ಅಲ್ಲಿಂದ ಸ್ಥಳಾ೦ತರಿಸಲೇ ಬೇಕು....ಏನೋ ಅಪಾಯ ಇದೆ.... ಮಾವಿನ ಮರ ಅವನ ಮೇಲೆ ಬಿದ್ದರೆ..... ಕೆಲವೇ ಕ್ಷಣದಲ್ಲಿ ಮಾವಿನ ಬೀಳಲಿದೆ... ಹೀಗೆ ಭಯ ಪ್ರಾರಂಭ ಆಯಿತು.
   ಪಕ್ಕದಲ್ಲಿದ್ದ ಚೆನ್ನಪ್ಪನಿಗೆ ಆ ಮರದ ನೆರಳಲ್ಲಿ ಕುಳಿತ ಮಾರುತಿಗೆ ಬರಲು ಹೇಳು ಇಲ್ಲೇ ಕುಳಿತುಕೊಳ್ಳಲಿ ಅಂದೆ, ಚೆನ್ನಪ್ಪ ಅಲ್ಲಿ ಒಳ್ಳೇ ನೆರಳಿದೆ ಅಲ್ಲೇ ಕುಳಿತಿರಲಿ ಅಂದ.
   ಆ ಮರ ಬಿದ್ದು ಗಿದ್ದರೆ ಮರಾಯ ಅಂದಿದ್ದಕ್ಕೆ ಚೆನ್ನಪ್ಪ "ಆ ಮರ ಇನ್ನು 10- 20 ವರ್ಷ ಜುಪ್ಪು ಅನ್ನೊಲ್ಲ" ಅಂದ ನನ್ನ ಒಳ ಮನಸ್ಸು ಮರ ಬೀಳುವ ಸಮಯದ ಕೌಂಟ್ ಡೌನ್ ಪ್ರಾರ೦ಬಿಸಿತ್ತು... ಇನ್ನು ಹೆಚ್ಚು ಸಮಯ ಇಲ್ಲ... ಮಾರುತಿಗೆ ಅಲ್ಲಿಂದ ಎಬ್ಬಿಸಲೇ ಬೇಕು... ಅವನನ್ನ ಎಚ್ಚರಿಸಲೇ ಬೇಕು... ಅಂತ... ನನ್ನ ಎದೆ ಬಡಿತವೂ ಹೆಚ್ಚಾಯಿತು ...
   ಏಯ್ ಮಾರುತೀ... ಮಾರುತೀ... ಅಂತ ನಾನು ಕೂಗಿ ಕರೆದರೂ ಮಾರುತಿಗೆ ನಮ್ಮ ಕರೆ ಕೇಳಿಸದಂತೆ ಪೋನಿನಲ್ಲಿ ಮಗ್ನ ಚೆನ್ನಪ್ಪನಿಗೆ ಅವನನ್ನ ಅಲ್ಲಿಂದ ಎಬ್ಬಿಸು ಮರಾಯ ಆ ಮಾವಿನ ಮರ ಬೀಳುತ್ತೆ ಅಂತ ಗಡಿಬಿಡಿ ಮಾಡಿದೆ, ಇದೆಂತ ವಿಚಿತ್ರ ಈ ಮರ ಎಲ್ಲಿ ಬೀಳುತ್ತೆ ಅಂತ ಮನಸ್ಸಿನಲ್ಲಿ ಯೋಚಿಸುತ್ತಾ ಚೆನ್ನಪ್ಪ ಅವನನ್ನ ಕರೆಯಲು ನಿದಾನವಾಗಿ ಹೆಜ್ಜೆ ಹಾಕಿದ.
   ನನಗೆ ಸಮಾದಾನ ಆಗಲಿಲ್ಲ... ಜೇಸಿಬಿ ಚಾಲನೆ ಮಾಡುತ್ತಿದ್ದ ಈಶ್ವರನಿಗೆ ಯಂತ್ರ ನಿಲ್ಲಿಸಲು ಹೇಳಿದೆ... ಯಂತ್ರ ನಿಲ್ಲಿಸಿದ ಕೂಡಲೇ ಅವನಿಗೆ ಯ೦ತ್ರದ ಹಾರ್ನ್ ಮಾಡಿ ಮಾರುತಿಗೆ ಅಜೆ೯೦ಟ್ ಆಗಿ ಕರಿ... ಆ ಮರ ಬೀಳುತ್ತೆ ಈಗ ಅಂದೆ... ಅವನು ಹಾರ್ನ್ ಮಾಡಲು ಮಾರುತಿ ಈ ಕಡೆ ತಿರುಗಿದ ಈಶ್ವರ ಕೈ ಸನ್ನೆ ಮಾಡಿ ಅರ್ಜಿಂಟ್ ಬಾ ಇಲ್ಲಿ ಅಂದಾಗ ಮಾರುತಿ ಅಲ್ಲಿಂದ ಎದ್ದು ನಮ್ಮ ಕಡೆ ನಡೆದು ಬರಲು ಪ್ರಾರಂಬಿಸಿದ.
  "ಸಾಹುಕಾರರೆ ಆ ಮರ ಹೆಂಗೆ ಬೀಳುತೇತರಿ... ಅಷ್ಟು ಗಟ್ಟಿ ಮುಟ್ಟು ಐತಿ... ಮಳೆ ಇಲ್ಲ ಗಾಳಿ ಇಲ್ಲ" ಅನ್ನುತ್ತಿರುವಾಗಲೇ ಆ ಮಾವಿನ ಮರ ದಡಾಲ್ ಎಂದು ಬಿತ್ತು, ಶಬ್ದಕ್ಕೆ ಬೆದರಿ ಹಿಂದೆ ತಿರುಗಿದ ಮಾರುತಿಗೆ ತಾನು ಕುಳಿತ ಜಾಗದಲ್ಲೇ ಕುಳಿತಿದ್ದರೆ ಬದುಕುತ್ತಿರಲಿಲ್ಲ ಅನ್ನಿಸಿ ಗಾಭರಿ ಆಯಿತು.
  ಚೆನ್ನಪ್ಪ ಮತ್ತು ಚಾಲಕ ಈಶ್ವರ ನನ್ನನ್ನು ಅಚ್ಚರಿಯಿಂದ ಭಯದಿಂದ ನೋಡುತ್ತಿದ್ದರು, ನನ್ನ ಅಶಾಂತ ಮನಸ್ಸು ಶಾಂತವಾಗುತ್ತಾ ಹೃದಯದ ಬಡಿತದ ಲಯ ಸಾಮಾನ್ಯ ಸ್ಥಿತಿಗೆ ಬಂತು.
   ವಿಚಾರ ತಿಳಿದ ಮಾರುತಿಗೆ ಅವನ ಜೀವ ಉಳಿಸಿದ ದೇವರು ನಾನು ಅನ್ನಿಸಿರಬೇಕು ಸಾಷ್ಟಾಂಗ ನಮಸ್ಕಾರ ಮಾಡಿದ.. ಚೆನ್ನಪ್ಪ ಮತ್ತು ಈಶ್ವರ ಮಾತ್ರ ನನ್ನಲ್ಲಿ ದೆವ್ವ ನೋಡಿದಂತೆ ಭಯದಲ್ಲಿದ್ದರು.
  ನನಗೆ ಅನೇಕ ಇಂತಹ ಅನುಭವಗಳು ಆಗಿದೆ, ಅತೀಂದ್ರಿಯ ಶಕ್ತಿಯಾ? ಕಾಕತಾಳಿಯವಾ? ಗೊತ್ತಿಲ್ಲ ಆದರೆ ಈ ಶಕ್ತಿ ನನ್ನ ನಿಯಂತ್ರಣದಲ್ಲಿ ಇಲ್ಲ.
    ನನ್ನ ರಾಶಿ ಭವಿಷ್ಯ ಮೇಷ ರಾಶಿ ಈ ರಾಶಿಯವರಿಗೆ ಇಂತಹ ಅನುಭವ ಸಹಜ ಅನ್ನುತ್ತಾರೆ. 

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...