Skip to main content

Blog number 1300. ಜನಪರ ಹೋರಾಟಗಾರ ತೀನಾ. ಶ್ರೀನಿವಾಸ್ ಭಾಗ -2 . ನರಗುಂದ ರೈತರ ಮೇಲಿನ ಗೋಲಿಬಾರ್ ವಿರೋಧಿಸಿ ಸಾಗರದಲ್ಲಿ ಗುಂಡೂರಾವ್ ಗೆ ವೇದಿಕೆ ಮೇಲೆ ದಿಕ್ಕಾರ ಕೂಗಿ ಪ್ರತಿಭಟಿಸಿ ಜೈಲಿಗೆ ಹೋದ ಘಟನೆ

https://youtu.be/rdG0z81rzY4

#ಜನಪರ_ಹೋರಾಟಗಾರ_ತೀನಾ_ಶ್ರೀನಿವಾಸ್_ಭಾಗ_2.

#ಜೈಲಿಗೆ_ಹಾಕಿದ್ದು_ಬೇಜಾರಾಗಿಲ್ಲ_ಮುಖ್ಯಮ೦ತ್ರಿಗೆ_ದಿಕ್ಕಾರ_ಹೇಳಿದ್ದು_ಸಮಾದಾನ

#ಇದು_ಹೋರಾಟಗಾರ_ತೀನಾ_ಶ್ರೀನಿವಾಸ್

#ನರಗುಂದದ_ಪ್ರತಿಭಟನಾ_ನಿರತ_ರೈತರ_ಮೇಲೆ_ಗೋಲಿಬಾರ್_ಮಾಡಿದ್ದ_ಅವತ್ತಿನ_ಗುಂಡೂರಾವ್_ಸರ್ಕಾರ

#ಆ_ಸರ್ಕಾರದಲ್ಲಿ_ಕಾಗೋಡು_ಖರ್ಗೆ_ದರಂಸಿಂಗ್_ಪ್ರಬಾವಿ_ತ್ರಿವಳಿ_ಸಚಿವರು

#ರೈತ_ನಾಯಕರಾದ_ರುದ್ರಪ್ಪ_ಸುಂದರೇಶ್_ನಂಜುಂಡಸ್ವಾಮಿ_ಕರೆಯೇ_ಪ್ರೇರಣೆ

#ಸಾಗರದ_ತಹಸೀಲ್ದಾರ್_ಕಛೇರಿ_ಲೋಕಾರ್ಪಣೆಗೆ_ಮುಖ್ಯಮಂತ್ರಿ_ಗುಂಡೂರಾವ್

#ವೇದಿಕೆಯಲ್ಲಿಯೇ_ದಿಕ್ಕಾರದ_ಬಿಸಿ_ತೋರಿಸಿದ_ವಿದ್ಯಾರ್ಥಿ_ಮುಖಂಡರು

#ಮುಖ_ಭಂಗದಿಂದ_ಕಾಗೋಡು_ಬೆಂಕಿ

#ನರಗುಂದ_ರೈತರ_ಬಲಿ_ಪಡೆದ_ಗೋಲಿಬಾರ್_ಗುಂಡೂರಾವ್_ಸರ್ಕಾರ_ಪತನ.

   ಗುಂಡೂರಾವ್ ಮುಖ್ಯಮಂತ್ರಿ ಆದಾಗ ಅವರನ್ನು ವಿರೋದಿಸುತ್ತಿದ್ದ S ಬಂಗಾರಪ್ಪರನ್ನು ಹಳಿಯಲು ಸಾಗರದಲ್ಲಿ ಕಾಂಗ್ರೇಸ್ ನಿಂದ ಎಲ್.ಟಿ ತಿಮ್ಮಪ್ಪ ಹೆಗ್ಗಡೆಯವರಿಂದ ಸೋತಿದ್ದ ಜನತಾ ಪಕ್ಷದ ಮಾಜಿ ಶಾಸಕ ರಾದ ಕಾಗೋಡು ತಿಮ್ಮಪ್ಪನವರನ್ನು ಸಾಗರದ ಆಹಮದ್ ಆಲೀಖಾನ್ ಸಾಹೇಬರು ಅವರ ಮಿತ್ರ ಮಡಿಕೆರೆಯ ಎಪ್.ಎಂ.ಖಾನ್ (ಸಂಜಯ್ ಗಾಂದಿ ರೈಟ್ ಹ್ಯಾಂಡ್) ರಿಂದ  ಕಾಂಗ್ರೇಸ್ ಗೆ ಸೇರಿಸಿದ್ದರು, ನಂತರದಲ್ಲಿ ಕಾಗೋಡರನ್ನು MLC ಮಾಡಿ ಲೋಕೋಪಯೋಗಿ ಮಂತ್ರಿ ಮಾಡಿದರು ಗುಂಡೂರಾವ್ .
   1980ರ ಜುಲೈ 21 ರಂದು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮಲಪ್ರಭಾ ನದಿಯ ಬೆಟರ್ ಮೆಂಟ್ ಲೇವಿ ಹೆಚ್ಚಳ ವಿರೋದಿಸಿ ರೈತರು ಪ್ರತಿಭಟನಾ ನಿರತರಾಗಿದ್ದನ್ನು ಸಹಿಸದ ಆಗಿನ ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದ ಕಾಂಗ್ರೇಸ್ ಸರ್ಕಾರ ಗೋಲಿಬಾರ್ ಮಾಡಿ ಇಬ್ಬರು ರೈತರ ಸಾವಿಗೆ ಕಾರಣವಾಗಿತ್ತು.
  ಇದನ್ನು ಕರ್ನಾಟಕ ರಾಜ್ಯ ರೈತ ಸಂಘದ ನಾಯಕರುಗಳಾದ ರುದ್ರಪ್ಪ, ಸುಂದರೇಶ್ ಮತ್ತು ನಂಜುಂಡ ಸ್ವಾಮಿ ವಿರೋದಿಸಿ ಗೋಲಿಬಾರ್ ಸರ್ಕಾರದ ವಿರುದ್ದ ಪ್ರತಿಭಟಿಸಲು ಕರೆ ನೀಡಿದ್ದರು.
   ಇದರಿಂದ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ಮುಖಂಡರಾಗಿದ್ದ ತೀ ನಾ. ಶ್ರೀನಿವಾಸ್ ಪ್ರೇರೇಪಿತರಾಗಿ ಗುಂಡೂರಾವ್ ಸಾಗರದ ತಹಸೀಲ್ದಾರ ಕಛೇರಿ ಉದ್ಘಾಟನೆಗೆ ಅವರ ಸಂಪುಟದ ಪ್ರಭಾವಿ ಸಚಿವ ಕಾಗೋಡು ತಿಮ್ಮಪ್ಪರ ಆಹ್ವಾನದ ಮೇಲೆ ಬಂದಾಗ ವೇದಿಕೆ ಏರಿ #ನರಗುಂದ_ರೈತರ_ಮೇಲೆ_ಗೋಲಿಬಾರ್_ಮಾಡಿದ_ಭ್ರಷ್ಟ_ಸರ್ಕಾರಕ್ಕೆ_ದಿಕ್ಕಾರ ಎಂದಿದ್ದು ಸ್ವತಃ ಮುಖ್ಯಮಂತ್ರಿ ಗುಂಡೂರಾವ್ ಗೆ ಕಸಿವಿಸಿ, ಕಾಗೋಡರಿಗೆ ತಮ್ಮ ಊರಲ್ಲಿ ಮುಖ್ಯಮಂತ್ರಿಗೆ ಅವಮಾನ ಅನ್ನಿಸಿದ್ದು ಸಹಜ.
   ಈಗಲೂ ಇಂತಹ ಪ್ರತಿಭಟನೆ ಮಾಡಲು ಹೆದರುವ ಕಾಲ ಇನ್ನು ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದಾಗ ಆ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಲು ಎಂಟು ಎದೆ ಬೇಕು.
   ಈ ಸುದ್ದಿ ರೇಡಿಯೋದಲ್ಲಿ ವಾರ್ತೆಯಾಗಿ,PTI - ಹಿಂದೂ-ರಾಜ್ಯದ ಎಲ್ಲಾ ದಿನಪತ್ರಿಕೆಯ ಮುಖಪುಟದ ಸುದ್ದಿ ಆಯಿತು ಆಗ ದಿನಪತ್ರಿಕೆಗಳು ಈಗಿನಂತೆ ಜಿಲ್ಲಾ ಪತ್ರಿಕೆಗಳಾಗಿಲ್ಲವಾದ್ದರಿಂದ ಈ ಸುದ್ದಿ ರಾಜ್ಯದಾದ್ಯಂತ ಸೆನ್ಸೇಷನಲ್ ಸುದ್ದಿ ಆಗಿ ಮುಂದಿನ ದಿನಗಳಲ್ಲಿ ಗುಂಡೂರಾವ್ ಸರ್ಕಾರದ ವಿರುದ್ದ ದೊಡ್ಡ ಚಳವಳಿ ಪ್ರತಿಭಟನೆಗೆ ಕಾರಣವಾಗಿ ಸರ್ಕಾರದ ಪತನಕ್ಕೆ ಕಾರಣವಾಯಿತು.
TNS ಸಂಪರ್ಕ 94487 74670

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...