Skip to main content

Blog number 1300. ಜನಪರ ಹೋರಾಟಗಾರ ತೀನಾ. ಶ್ರೀನಿವಾಸ್ ಭಾಗ -2 . ನರಗುಂದ ರೈತರ ಮೇಲಿನ ಗೋಲಿಬಾರ್ ವಿರೋಧಿಸಿ ಸಾಗರದಲ್ಲಿ ಗುಂಡೂರಾವ್ ಗೆ ವೇದಿಕೆ ಮೇಲೆ ದಿಕ್ಕಾರ ಕೂಗಿ ಪ್ರತಿಭಟಿಸಿ ಜೈಲಿಗೆ ಹೋದ ಘಟನೆ

https://youtu.be/rdG0z81rzY4

#ಜನಪರ_ಹೋರಾಟಗಾರ_ತೀನಾ_ಶ್ರೀನಿವಾಸ್_ಭಾಗ_2.

#ಜೈಲಿಗೆ_ಹಾಕಿದ್ದು_ಬೇಜಾರಾಗಿಲ್ಲ_ಮುಖ್ಯಮ೦ತ್ರಿಗೆ_ದಿಕ್ಕಾರ_ಹೇಳಿದ್ದು_ಸಮಾದಾನ

#ಇದು_ಹೋರಾಟಗಾರ_ತೀನಾ_ಶ್ರೀನಿವಾಸ್

#ನರಗುಂದದ_ಪ್ರತಿಭಟನಾ_ನಿರತ_ರೈತರ_ಮೇಲೆ_ಗೋಲಿಬಾರ್_ಮಾಡಿದ್ದ_ಅವತ್ತಿನ_ಗುಂಡೂರಾವ್_ಸರ್ಕಾರ

#ಆ_ಸರ್ಕಾರದಲ್ಲಿ_ಕಾಗೋಡು_ಖರ್ಗೆ_ದರಂಸಿಂಗ್_ಪ್ರಬಾವಿ_ತ್ರಿವಳಿ_ಸಚಿವರು

#ರೈತ_ನಾಯಕರಾದ_ರುದ್ರಪ್ಪ_ಸುಂದರೇಶ್_ನಂಜುಂಡಸ್ವಾಮಿ_ಕರೆಯೇ_ಪ್ರೇರಣೆ

#ಸಾಗರದ_ತಹಸೀಲ್ದಾರ್_ಕಛೇರಿ_ಲೋಕಾರ್ಪಣೆಗೆ_ಮುಖ್ಯಮಂತ್ರಿ_ಗುಂಡೂರಾವ್

#ವೇದಿಕೆಯಲ್ಲಿಯೇ_ದಿಕ್ಕಾರದ_ಬಿಸಿ_ತೋರಿಸಿದ_ವಿದ್ಯಾರ್ಥಿ_ಮುಖಂಡರು

#ಮುಖ_ಭಂಗದಿಂದ_ಕಾಗೋಡು_ಬೆಂಕಿ

#ನರಗುಂದ_ರೈತರ_ಬಲಿ_ಪಡೆದ_ಗೋಲಿಬಾರ್_ಗುಂಡೂರಾವ್_ಸರ್ಕಾರ_ಪತನ.

   ಗುಂಡೂರಾವ್ ಮುಖ್ಯಮಂತ್ರಿ ಆದಾಗ ಅವರನ್ನು ವಿರೋದಿಸುತ್ತಿದ್ದ S ಬಂಗಾರಪ್ಪರನ್ನು ಹಳಿಯಲು ಸಾಗರದಲ್ಲಿ ಕಾಂಗ್ರೇಸ್ ನಿಂದ ಎಲ್.ಟಿ ತಿಮ್ಮಪ್ಪ ಹೆಗ್ಗಡೆಯವರಿಂದ ಸೋತಿದ್ದ ಜನತಾ ಪಕ್ಷದ ಮಾಜಿ ಶಾಸಕ ರಾದ ಕಾಗೋಡು ತಿಮ್ಮಪ್ಪನವರನ್ನು ಸಾಗರದ ಆಹಮದ್ ಆಲೀಖಾನ್ ಸಾಹೇಬರು ಅವರ ಮಿತ್ರ ಮಡಿಕೆರೆಯ ಎಪ್.ಎಂ.ಖಾನ್ (ಸಂಜಯ್ ಗಾಂದಿ ರೈಟ್ ಹ್ಯಾಂಡ್) ರಿಂದ  ಕಾಂಗ್ರೇಸ್ ಗೆ ಸೇರಿಸಿದ್ದರು, ನಂತರದಲ್ಲಿ ಕಾಗೋಡರನ್ನು MLC ಮಾಡಿ ಲೋಕೋಪಯೋಗಿ ಮಂತ್ರಿ ಮಾಡಿದರು ಗುಂಡೂರಾವ್ .
   1980ರ ಜುಲೈ 21 ರಂದು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಮಲಪ್ರಭಾ ನದಿಯ ಬೆಟರ್ ಮೆಂಟ್ ಲೇವಿ ಹೆಚ್ಚಳ ವಿರೋದಿಸಿ ರೈತರು ಪ್ರತಿಭಟನಾ ನಿರತರಾಗಿದ್ದನ್ನು ಸಹಿಸದ ಆಗಿನ ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದ ಕಾಂಗ್ರೇಸ್ ಸರ್ಕಾರ ಗೋಲಿಬಾರ್ ಮಾಡಿ ಇಬ್ಬರು ರೈತರ ಸಾವಿಗೆ ಕಾರಣವಾಗಿತ್ತು.
  ಇದನ್ನು ಕರ್ನಾಟಕ ರಾಜ್ಯ ರೈತ ಸಂಘದ ನಾಯಕರುಗಳಾದ ರುದ್ರಪ್ಪ, ಸುಂದರೇಶ್ ಮತ್ತು ನಂಜುಂಡ ಸ್ವಾಮಿ ವಿರೋದಿಸಿ ಗೋಲಿಬಾರ್ ಸರ್ಕಾರದ ವಿರುದ್ದ ಪ್ರತಿಭಟಿಸಲು ಕರೆ ನೀಡಿದ್ದರು.
   ಇದರಿಂದ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ಮುಖಂಡರಾಗಿದ್ದ ತೀ ನಾ. ಶ್ರೀನಿವಾಸ್ ಪ್ರೇರೇಪಿತರಾಗಿ ಗುಂಡೂರಾವ್ ಸಾಗರದ ತಹಸೀಲ್ದಾರ ಕಛೇರಿ ಉದ್ಘಾಟನೆಗೆ ಅವರ ಸಂಪುಟದ ಪ್ರಭಾವಿ ಸಚಿವ ಕಾಗೋಡು ತಿಮ್ಮಪ್ಪರ ಆಹ್ವಾನದ ಮೇಲೆ ಬಂದಾಗ ವೇದಿಕೆ ಏರಿ #ನರಗುಂದ_ರೈತರ_ಮೇಲೆ_ಗೋಲಿಬಾರ್_ಮಾಡಿದ_ಭ್ರಷ್ಟ_ಸರ್ಕಾರಕ್ಕೆ_ದಿಕ್ಕಾರ ಎಂದಿದ್ದು ಸ್ವತಃ ಮುಖ್ಯಮಂತ್ರಿ ಗುಂಡೂರಾವ್ ಗೆ ಕಸಿವಿಸಿ, ಕಾಗೋಡರಿಗೆ ತಮ್ಮ ಊರಲ್ಲಿ ಮುಖ್ಯಮಂತ್ರಿಗೆ ಅವಮಾನ ಅನ್ನಿಸಿದ್ದು ಸಹಜ.
   ಈಗಲೂ ಇಂತಹ ಪ್ರತಿಭಟನೆ ಮಾಡಲು ಹೆದರುವ ಕಾಲ ಇನ್ನು ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದಾಗ ಆ ಸರ್ಕಾರದ ವಿರುದ್ದ ಪ್ರತಿಭಟನೆ ಮಾಡಲು ಎಂಟು ಎದೆ ಬೇಕು.
   ಈ ಸುದ್ದಿ ರೇಡಿಯೋದಲ್ಲಿ ವಾರ್ತೆಯಾಗಿ,PTI - ಹಿಂದೂ-ರಾಜ್ಯದ ಎಲ್ಲಾ ದಿನಪತ್ರಿಕೆಯ ಮುಖಪುಟದ ಸುದ್ದಿ ಆಯಿತು ಆಗ ದಿನಪತ್ರಿಕೆಗಳು ಈಗಿನಂತೆ ಜಿಲ್ಲಾ ಪತ್ರಿಕೆಗಳಾಗಿಲ್ಲವಾದ್ದರಿಂದ ಈ ಸುದ್ದಿ ರಾಜ್ಯದಾದ್ಯಂತ ಸೆನ್ಸೇಷನಲ್ ಸುದ್ದಿ ಆಗಿ ಮುಂದಿನ ದಿನಗಳಲ್ಲಿ ಗುಂಡೂರಾವ್ ಸರ್ಕಾರದ ವಿರುದ್ದ ದೊಡ್ಡ ಚಳವಳಿ ಪ್ರತಿಭಟನೆಗೆ ಕಾರಣವಾಗಿ ಸರ್ಕಾರದ ಪತನಕ್ಕೆ ಕಾರಣವಾಯಿತು.
TNS ಸಂಪರ್ಕ 94487 74670

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ