Skip to main content

Blog number 1342. ರಾಮಚಂದ್ರಪುರ ಮಠದ ಕೇಸಿನಲ್ಲಿ ಸರ್ಕಾರದ ಪರ ಸಾಕ್ಷಿ ಆಗಿದ್ದ ಅಭಿರಾಮ ಹೆಗ್ಗಡೆ ಅಂಗಾಂಗ ವೈಫಲ್ಯದಿಂದ 31ನೇ ವಯಸ್ಸಿನಲ್ಲಿ ಸಾಗರದ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

#ನಾಲ್ಕು_ವರ್ಷದ_ಹಿಂದೆ_ನಾಡಿನ_ಎಲ್ಲಾ_ಮಾಧ್ಯಮಗಳಲ್ಲಿ_ಸುದ್ದಿ_ಆಗಿದ್ದ_ಅಭಿರಾಮಹೆಗ್ಗಡೆ

#ಬಾಗಿಲ_ಕೀ_ರಂದ್ರದಲ್ಲಿ_ನೋಡಿದ_ರಾಸಲೀಲೆಯ_ಪ್ರತ್ಯಕ್ಷದರ್ಶಿ

#ಈ_ಸ್ಟಾರ್_ವಿಟ್ನೆಸ್_ಮೇಲೆ_5_ಕೋಟೆ_ಮಾನನಷ್ಟ_ದಾವೆ

#ನಿನ್ನೆ_ಸಾಗರದ_ಆಸ್ಪತ್ರೆಯಲ್ಲಿ_ದೇಹಾಂತ್ಯ?

#ಸ್ವಾಮಿಗಳ_ಅತ್ಯಾಚಾರ_ಕೇಸಿನಲ್ಲಿ_ಪ್ರೈಮ್_ವಿಟ್ನೆಸ್

#ಕೇವಲ_31ವರ್ಷದಲ್ಲಿ_ಇಹಲೋಕ_ತ್ಯಜಿಸಿದ_ಸುದ್ದಿ

 

ಅಭಿರಾಮ ಹೆಗ್ಗಡೆ ಸಾಗರ ತಾಲ್ಲೂಕಿನ ಗಡಿ ಕಾನಲೆ ಸೈದೂ ರಿನಿಂದ 5-6 ಕಿಮಿ ದೂರದ ಸಿದ್ದಾಪುರ ಪೇಟೆಗೆ ಸಮೀಪದ ಅಕ್ಕುಂಜಿ ಹತ್ತಿರದ ಅಣಜಿಬೈಲು ಹಳ್ಳಿಯವರು.
  ಇವರಿಗೆ ಬಾಲ್ಯದಲ್ಲಿ ಯಾವುದೋ ಅನಾರೋಗ್ಯ ಇದರಿಂದ  ಅಸಾಧ್ಯ ಹಸಿವು ಇದಕ್ಕೆ ಯಾವುದೋ ಬೂತದ ಕಾಟವೆನ್ನುವ ಭಾವನೆ ಕುಟುಂಬದಲ್ಲಿತ್ತು ಆಗ ಇವರ ಅಜ್ಜ ಸೊರಬ ತಾಲ್ಲೂಕಿನ ಮಳಲಗದ್ದೆಯ ಟಿ.ಜಿ.ರಾಯರು ಮೊಮ್ಮಗ ಅಭಿರಾಮನನ್ನು ರಾಮಚಂದ್ರಪುರ ಮಠಕ್ಕೆ ಸೇರಿಸುತ್ತಾರೆ ಅಲ್ಲಿ ಅಭಿರಾಮ ಆಶ್ಚರ್ಯ ರೀತಿಯಲ್ಲಿ ಗುಣಮುಖರಾಗುತ್ತಾರೆ ಮತ್ತು ಸ್ವಾಮೀಜಿಗಳ ಆಪ್ತ ಸಿಬ್ಬಂದಿಯಲ್ಲಿ ಒಬ್ಬರಾಗಿ ದೇಶದಾದ್ಯಂತ ಪ್ರವಾಸ ಮಾಡುತ್ತಾರೆ.
  ಹಳೆಯ ಸ್ವಾಮಿಗಳ ಕಾಲದಲ್ಲಿ ಟಿ.ಜಿ.ರಾಯರು ಸರ್ವಾಧಿಕಾರಿ ಹುದ್ದೆ ನಿರ್ವಹಿಸಿದ್ದರು ಈಗಲೂ ಅವರಿಗೆ ಮಠದ ಆಡಳಿತ ಮಂಡಳಿಯಲ್ಲಿ ಗೌರವದ ಸ್ಥಾನವಿದೆ.
   ಅಭಿರಾಮ ಅತ್ಯಂತ ಬುದ್ಧಿವಂತ ಮತ್ತು ತಾಳ್ಮೆ ಕಳೆದುಕೊಳ್ಳುವ ಸಿಟ್ಟು ಇದ್ದ ಯುವಕ ಇವರ ಗುಣ ಸ್ಟಭಾವ ಅರಿಯಬೇಕಾದರೆ ಇವರ ಪೇಸ್ ಬುಕ್ ಪೇಜ್ ಗಳನ್ನು ಪೂರ್ತಿ ನೋಡಿದರೆ ಅರಿವಾದೀತು ಇವರು ಮಧ್ಯಪಾನ ದೂಮಪಾನದ ಬಗ್ಗೆ ಹೆಚ್ಚು - ಹೆಚ್ಚು ಸದಾಭಿಪ್ರಾಯ ಬರುವಂತ ಅವುಗಳ ಸ್ವತಃ ಬಳಸುತ್ತಿದ್ದ ಅವರದೇ ಪೋಟೋಗಳು ಪೋಸ್ಟ್ ಮಾಡಿದ್ದಾರೆ.
   ನಂತರ ಇವರು ಇವರಿಗೆ ಆಶ್ರಯ ನೀಡಿದ ಸ್ಟಾಮಿಗಳ ಮೇಲೆ ತಿರುಗಿ ಬಿದ್ದು ಸರ್ಕಾರದ ಪರ ಸಾಕ್ಷಿ ಆದರು, ಆ ಕೇಸ್ ನ್ಯಾಯಾಲಯದಲ್ಲಿ ಮುಕ್ತಾಯವಾಗಿ ಈಗ ಎದರು ಪಾರ್ಟಿಗಳು ಸಲ್ಲಿಸಿದ ಮೇಲ್ಮನವಿ ವಿಚಾರಣೆ ಹಂತದಲ್ಲಿದೆ.
   ಈ ಸಂದರ್ಭದಲ್ಲಿ ಟೀವಿ - ಪತ್ರಿಕೆಗಳು ಅಭಿರಾಮರ ಸಂದರ್ಶನಗಳು ಕಂತು ಕಂತುಗಳಾಗಿ ಪ್ರಕಟಿಸಲು ಪ್ರಾರಂಬಿಸಿದರು, ಈ ಮೂಲಕ ಅಭಿರಾಮ ಸ್ಟಾರ್ ವಿಟ್ನೆಸ್ ಆಗಿ ಪ್ರಸಿದ್ದರಾದರು ಇದರಿಂದ ಮಠ ಇವರ ಯಾವುದೇ ಸಂದರ್ಶನ ಬಹಿರಂಗ ಹೇಳಿಕೆ ಪತ್ರಿಕೆ ಅಥವ ಟೀವಿಯಲ್ಲಿ ಪ್ರಕಟಿಸದಂತೆ ನ್ಯಾಯಾಲಯದ ತಡೆ ಆಜ್ಞೆ ತಂದಿತು ಮತ್ತು 5 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿತು.
  ನಂತರ ಇವರು ಮಠದ ಜೊತೆ ರಾಜಿ ಆದರು, ಈ ಬಗ್ಗೆ ಇವರು ಬರೆದು ಕೊಂಡ ಪೋಸ್ಟ್ ನಲ್ಲಿ ಇವರ ಮತ್ತು ಇವರ ಆರೋಗ್ಯ ಸಮಸ್ಯೆ ಮತ್ತು ಇವರ ತಾತನ ಅಭಿಲಾಷೆಯ೦ತೆ ನ್ಯಾಯಾಲಯದಲ್ಲಿ ವಿಷಾದ ವ್ಯಕ್ತಪಡಿಸಿದ್ದಾಗಿ,ಈ ಬಗ್ಗೆ ಮುಂದುವರಿಯುವುದಿಲ್ಲ ಎಂದು ಹೇಳಿಕೆ ದಾಖಲಿಸಿ ಅದಕ್ಕೆ ಸರಿಯಾಗಿ ಸಂಭಾವನೆ ಪಡೆದಿರುವುದಾಗಿ!? ಹೇಳಿದ್ದಾರೆ.
  ವಿಚಿತ್ರವಾದ ಗುಪ್ತ ಸಂಕೇತದ ಇವರ ಪೋಸ್ಟ್ ಗಳು ಏನಂತ ಅರ್ಥವಾಗುವುದಿಲ್ಲ, ಒಂದು ಪೆನ್ ಡ್ರೈವ್ ಪೋಟೋ ಪೋಸ್ಟ್ ಮಾಡಿ ಬಂಗಾರದ ಅದಿರು ತೆಗೆಯುತ್ತದೆ ಅಂತ ಬರೆದಿದ್ದರು.
   ನಿನ್ನೆ ಸಾಗರದ ಆಸ್ಪತ್ರೆಯಲ್ಲಿ ದೇಹದ ಅಂಗಾಂಗ ವಿಫಲತೆಯಿಂದ ಇಹಲೋಕ ತ್ಯಜಿಸಿದ್ದಾರೆ.
    ಇವರಿಗೆ ಸದ್ಗತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ