Skip to main content

Blog number 1295. ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಮಾಜಿ ಜಿಲ್ಲಾದ್ಯಕ್ಷ ತೀ.ನಾ.ಶ್ರೀನಿವಾಸ್ ಕಾಂಗ್ರೇಸ್ ಪಕ್ಷಕ್ಕೆ ರಾಜಿನಾಮೆ.

#ಶಿವಮೊಗ್ಗ_ಜಿಲ್ಲಾ_ಕಾಂಗ್ರೇಸ್_ಮಾಜಿ_ಅಧ್ಯಕ್ಷ_ತೀನಾ_ಶ್ರೀನಿವಾಸ್_ರಾಜಿನಾಮೆ

#ಕಾಂಗ್ರೇಸ್_ಪಕ್ಷದಲ್ಲಿ_ಸ್ಪರ್ದಿಸಲು_ಹಣ_ಕೇಳುತ್ತಾರೆ೦ಬ_ಆರೋಪ

#ದಿನೇಶ್_ಗುಂಡೂರಾವ್_ಜಿಲ್ಲಾಧ್ಯಕ್ಷ_ಸ್ಥಾನ_ಕಸಿದುಕೊಂಡ_ಬಗ್ಗೆ

#ಮದು_ಬಂಗಾರಪ್ಪಗೆ_ಮೂರು_ಹುದ್ದೆ_ಇತ್ಯಾದಿ_ಅವರ_ಆರೋಪ.

   ತೀನಾ ಶ್ರೀನಿವಾಸ್ ತಂದೆ ಭಾರತೀಯ ಸೈನ್ಯದಲ್ಲಿ ಸೇವೆ ಮಾಡಿದವರು ತಾಯಿ ಸರ್ಕಾರಿ ಕನ್ನಡ ಶಾಲೆ ಶಿಕ್ಷಕಿ, ಇವರ ಹುಟ್ಟು ತೀರ್ಥಹಳ್ಳಿಯ ಛತ್ರಕೇರಿಯಲ್ಲಿ.
    ನಂತರ ಶಿಕಾರಿಪುರ, ಜೋಗ ಮತ್ತು ಸಾಗರಗಳಲ್ಲಿ ಇವರ ವಿದ್ಯಾಬ್ಯಾಸ ನಡೆಯಿತು.
   ಜೋಗದಲ್ಲಿ ಮತ್ತು ಸಾಗರದ ಕಾಲೇಜಿನಲ್ಲಿ ತೀ.ನಾ. ಶ್ರೀನಿವಾಸ್ ವಿದ್ಯಾರ್ಥಿ ಮುಖಂಡರು ಆಗಲೇ ಸಾಗರದ ಪೋಲಿಸ್ ಠಾಣೆಯಲ್ಲಿ ಕೃಷಿ ಕಾರ್ಮಿಕ ರಾಮನ ಲಾಕ್ ಅಪ್ ಡೆತ್ ನಿಂದ ಸಾಗರದ ವಿದ್ಯಾರ್ಥಿ ವೃಂದವನ್ನು ಹೋರಾಟಕ್ಕೆ ಇಳಿಸಿದವರು ತೀ.ನಾ ಶ್ರೀನಿವಾಸ್.
     ನಂತರ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ಅವರ ಜೊತೆ ಸೇರಿ ಅವರ ದಿನಪತ್ರಿಕೆ ನ್ಯಾಯದ ತಕ್ಕಡಿ ಸಂಪಾದಕರಾಗಿ ನ್ಯಾಯದ ಪರ ಹೋರಾಟಕ್ಕೆ ಬೆಂಬಲಿಸಿ ವರದಿಗಳನ್ನು ಮಾಡಿದ್ದರಿಂದ ಜಮೀಲ್ ಎಂಬ ಪೋಲಿಸ್ ಇನ್ಸ್ಪೆಕ್ಟರ್ ರಿಂದ ದೌಜ೯ನ್ಯ ನಡೆದದ್ದು ಆಗ ರಾಜ್ಯದಲ್ಲೇ ದೊಡ್ಡ ಸುದ್ದಿ ಇದು ವಿಧಾನಸಭೆಯಲ್ಲಿ ದೊಡ್ಡ ಚರ್ಚೆ ಆಗಿತ್ತು.
  ಎರೆಡು ಅವದಿ ಶಾಸಕರಾಗಿದ್ದ ಕಾಂಗ್ರೇಸ್ ನ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ ವಿರುದ್ದ ಇವರು ಪಕ್ಷೇತರರಾಗಿ ತಕ್ಕಡಿ ಗುರುತಲ್ಲಿ ಸ್ಪರ್ಧಿಸಿ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ ವಿರುದ್ದ ಕ್ಷೇತ್ರದಾದ್ಯಂತ ಇವರು ತಮ್ಮ ಆಕರ್ಷಕ ಭಾಷಣದಿಂದ ಎಲ್.ಟಿ. ಹೆಗ್ಗಡೆಯವರು ಆಡಳಿತ ವಿರೋದಿ ಅಲೆಯಲ್ಲಿ ಸೋತು ಜನತಾ ಪಕ್ಷದ ಆನಂದಪುರಂನ ಬಿ. ಧರ್ಮಪ್ಪರು ಗೆಲ್ಲುವಂತಾಗಿತ್ತು.
  ನಂತರ ಸಾಗರ ಪುರಸಬೆಗೆ ನಿರಂತರವಾಗಿ ಪಕ್ಷೇತರರಾಗಿಯೆ ಗೆಲ್ಲುವವರನ್ನು ಕಾಂಗ್ರೇಸ್ ಗೆ ಸೇರಿಸಿಕೊಂಡವರು ಪುತ್ತೂರಾಯರು ಮತ್ತು ಆಹ್ಮದ್‌ ಆಲೀ ಖಾನ್ ಸಾಹೇಬರು ಇದರಿಂದ ಕಾಗೋಡು ತಿಮ್ಮಪ್ಪನವರು ಗೂಂಡೂರಾವ್ ಸರ್ಕಾರದಲ್ಲಿ ಮಂತ್ರಿ ಆದವರು ನಂತರ ದೀರ್ಘಾವದಿ ರಾಜಕೀಯದಿಂದ ದೂರವಿದ್ದವರು ಚುನಾವಣೆಯಲ್ಲಿ ಪುನಃ ಸ್ಪರ್ಧಿಸಿ ಗೆಲ್ಲುವ ಸಂದರ್ಭದಲ್ಲಿ ಇಡೀ ಕ್ಷೇತ್ರದಲ್ಲಿ ತೀ.ನಾ. ಶ್ರೀನಿವಾಸ್ ಅವರು ಕ್ಷೇತ್ರದಲ್ಲಿ ಮಾಡಿದ ಪರಿಣಾಮಕಾರಿ ಭಾಷಣ ಕೂಡ ಕಾರಣವಾಗಿತ್ತು.
   ಅಬಕಾರಿ ಕಾರ್ಮಿಕರ ಸಂಘಟನೆಯಲ್ಲಿ ತೀ.ನಾ. ಶ್ರೀನಿವಾಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರು ಕಾಂಗ್ರೇಸ್ ಪಕ್ಷದವರೇ, ಅವತ್ತು ಅವರನ್ನು ನೋಡಲು ಹುಬ್ಬಳ್ಳಿ ಆಸ್ಪತ್ರೆಗೆ ಹೋಗಿದ್ದಾಗಲೇ ನಾವೆಲ್ಲ ಗೆಳೆಯರು ತೀ.ನಾ.ಶ್ರೀನಿವಾಸ್ ಗೆ ಕಾಂಗ್ರೇಸ್ ನಿಂದ ದೂರ ಆಗಲು ಸಕಾಲ ಅಂದಿದ್ದೆವು ಆದರೆ ಕಾಗೋಡರ ಗೆಳೆತನದಿಂದ ಅಲ್ಲೇ ಉಳಿದರು. ಅವರ ಮುಖದಲ್ಲಿರುವ ಚಾಕುವಿನ ಗಾಯ ಮಾತ್ರ ಮಾಸಿಲ್ಲ.
   ಈವರೆಗೂ ಕಾಂಗ್ರೇಸ್ ಪಕ್ಷ ತೀ.ನಾ ಶ್ರೀನಿವಾಸ್ ಅವರನ್ನು ಬಳಸಿ ಬಿಸಾಡುತ್ತಲೇ ಬಂದಿದೆ ಇದಕ್ಕೆ ಕಾರಣ ಅವರಿಗೆ ಜಾತಿ ಬಲ ಇಲ್ಲದಿರುವುದು ಮತ್ತು ಭ್ರಷ್ಟಾಚಾರ ವಿರೋಧಿ ಆಗಿ ಹಣ ಸಂಪಾದನೆ ಮಾಡದೇ ಇರುವುದು ಕಾರಣ.
   ಸ್ವಯಂ ಬಲದಿಂದ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದರು ಅದನ್ನು ಸಹಿಸದ ಕಾಂಗ್ರೇಸ್ ನಾಯಕರೆಲ್ಲ ಸೇರಿ ಆಗಿನ ಕೆ.ಪಿ. ಸಿ.ಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ಪತ್ರ ಬರೆದು ತೀ.ನಾ. ಶ್ರೀನಿವಾಸ್ ಶಿವಮೊಗ್ಗ ಕೇಂದ್ರದವರಲ್ಲ, ಸಾಗರ ತಾಲ್ಲೂಕು ಕೇಂದ್ರದಿಂದ ಬಂದು ಕಾಂಗ್ರೇಸ್ ಪಕ್ಷ ಸಂಘಟನೆ ಮಾಡುವುದು ಸಾಧ್ಯವಿಲ್ಲ, ಅಷ್ಟೇ ಅಲ್ಲ ನಿಮ್ಮಪ್ಪ ಗುಂಡೂರಾವ್ ಮುಖ್ಯಮಂತ್ರಿ ಆಗಿದ್ದಾಗ ಸಾಗರದಲ್ಲಿ ರಾಜ್ಯದಲ್ಲೇ ಮೊದಲ ಕಪ್ಪು ಬಾವುಟ ಅವರ ಮುಖಕ್ಕೆ ಹಿಡಿದು ಜೈಲಿಗೆ ಹೋದವರು ಅಂತೆಲ್ಲ ದೂರಿ ಜಿಲ್ಲಾ ಕಾಂಗ್ರೇಸ್ ಸ್ಥಾನದಿಂದ ಕೆಳಗೆ ಇಳಿಸಿದರು.
  ಇವರು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದಾಗ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಆಡಳಿತವಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, ಆಗ ಶಿವಮೊಗ್ಗ ಜಿಲ್ಲೆಯಲ್ಲಿ  ಮುಖ್ಯಮಂತ್ರಿ ಭಾಗವಹಿಸುವ ಸರ್ಕಾರಿ ಕಾಯ೯ಕ್ರಮದಲ್ಲಿ ಅಧಿಕಾರಿಗಳು ಆಹ್ವಾನಿಸಿದರೂ ಪಕ್ಷದ ಜಿಲ್ಲಾದ್ಯಕ್ಷ ತಿ.ನಾ. ಶ್ರೀನಿವಾಸ್  ಯಾವುದೇ ಕಾರಣದಿಂದಲೂ ಆ ವೇದಿಕೆಯಲ್ಲಿ ಮಾತ್ರ ಅಸೀನರಾಗದೆ ಒಳ್ಳೆಯ ಪರಂಪರೆ ಬೆಳೆಸಿದ್ದರು.
   ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದಾಗ ಜಿಲ್ಲೆಯಲ್ಲಿ ಬಿಜೆಪಿ ವಿರುದ್ದ ಯಡೂರಪ್ಪರ ವಿರುದ್ದ ತೀ.ನಾ. ಶ್ರೀನಿವಾಸ್ ಮಾಡುತ್ತಿದ್ದ ಕಟು ವಿರೋದಗಳು ಬಿಜೆಪಿ ಸರ್ಕಾರದಿಂದ, ಯಡೂರಪ್ಪರಿಂದ ಲಾಭ ಮಾಡಿಕೊಳ್ಳುತ್ತಿದ್ದ ಕಾಂಗ್ರೇಸ್ ಪಕ್ಷದವರಿಗೆ ಮಾತ್ರ ಆಗಿ ಬರಲಿಲ್ಲ.
    ಹಾಗಂತ ಕಾಂಗ್ರೇಸ್ ಪಕ್ಷದಲ್ಲಿ ಇವತ್ತಿನವರಗೂ ನಿಷ್ಟಾವಂತ ಕಾರ್ಯಕರ್ತರಿಗೆ ಯಾವುದೇ ಗೌರವ ಸ್ಥಾನಮಾನ ಮರಿಚಿಕೆಯೇ ಆಗಿದೆ.
   ಅದೇ ಬಿಜೆಪಿಯಲ್ಲಿ ಯಡಿಯೂರಪ್ಪನವರು ಅವರ ಪಕ್ಷದ ನಿಷ್ಟಾವಂತರಿಗೆ ಹೆಚ್ಚು ಸ್ಥಾನ ಮಾನ ಕೊಡಿಸಿದ್ದಾರೆ, ಇದು ಕಾಂಗ್ರೇಸ್ ನಲ್ಲಿ ಯಾವತ್ತೂ ಕಾರ್ಯರೂಪಕ್ಕೆ ಬರಲಾರದ್ದು.
  ಶಿವಮೊಗ್ಗ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾಗಿರುವ ಮೇಘರಾಜ್ ಕೂಡ ಸಾಗರದವರು, ಶಿವಮೊಗ್ಗ ಕೇಂದ್ರದಲ್ಲಿರದ ಬಿಜೆಪಿ ಜಿಲ್ಲಾಧ್ಯಕ್ಷರು ಅವರ ಪಕ್ಷ ಯಶಸ್ವಿಯಾಗಿ ಸಂಘಟಿಸುತ್ತಾರೆಂದರೆ ಇದು ಕಾಂಗ್ರೇಸ್ ಪಕ್ಷಕ್ಕೆ ಏಕೆ ಸಾಧ್ಯವಿಲ್ಲ ಅಂತ ಕಾಂಗ್ರೇಸ್ ಪಕ್ಷದ ತಾಲ್ಲೂಕ್ ಕೇಂದ್ರದ ಕಾಯ೯ಕರ್ತರು ತಮ್ಮ ನಾಯಕರಿಗೆ ಪ್ರಶ್ನಿಸಬೇಕು.
  ಅಹ೯ತೆಯ ಅನರ್ಹತೆ ಎಂಬುದು ಕಾಂಗ್ರೇಸ್ ನಲ್ಲಿ ಇದ್ದು ಬಂದವರಿಗೆ ಅರಿವಾಗಿರುವುದೇ ಆಗಿದೆ, ಕಾಂಗ್ರೇಸ್ ಅಧಿಕಾರದಲ್ಲಿದ್ದಾಗ ಅವರ ಪಕ್ಷದವರನ್ನೇ ತೇಜೋವದೆ ಮಾಡುವುದು, ಸುಳ್ಳು ಕೇಸ್ ಹಾಕಿಸುವುದು, ಜೈಲಿಗೆ ಕಳಿಸುವುದು, ಪರಸ್ಪರ ಕಾಲೆಳೆದುಕೊಂಡು ಅಧಿಕಾರ ಕಳೆದುಕೊಂಡರೂ ಬುದ್ದಿ ಬರಲಿಲ್ಲ.
   ಕಾರ್ಯಕರ್ತರ ಪ್ರಯತ್ನದಿಂದ ಕಾಂಗ್ರೇಸ್ ಪಕ್ಷಕ್ಕೆ ಗೆಲ್ಲುವ ಸಂದರ್ಭ ಇರುವಾಗ ಬೇರೆ ಪಕ್ಷದಿಂದ ಬಂದವರಿಗೆ ಪಕ್ಷವನ್ನು ದಾರೆ ಎರೆಯುವುದು ಅವರು ಅವರ ಸಂಗಾತಿಗಳನ್ನು ಆಯಾ ಕಟ್ಟಿನಲ್ಲಿ ಸ್ಥಾಪನೆ ಮಾಡುವುದು ನಂತರ ಪಕ್ಷ ತೊರೆದು ಹೋಗುವುದು, ಅನಾಥವಾದ ಪಕ್ಷ ಪುನಃ ಸಂಘಟನೆ ಆಗಿ ಅಧಿಕಾರಕ್ಕೆ ಬರುತ್ತದೆ.ಅಂದಾಗ ಪಕ್ಷ ಬಿಟ್ಟು ಓಡಿ ಹೋದವ ವಾಪಾಸು ಬರುವುದು, ಅವರಿಗೆ ಕೆಂಪು ಹಾಸಿನ ಸ್ವಾಗತ ನೀಡುವುದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷ ಚೇತರಿಸಿಕೊಳ್ಳದೇ ಇರಲು ಕಾರಣವಾಗಿರುವುದು, ಜಿಲ್ಲೆಯ ಎಲ್ಲಾ ನಿಷ್ಟಾವಂತ ಕಾರ್ಯಕರ್ತರಿಗೆ ಗೊತ್ತೇ ಇರುವ ವಿಚಾರವಾಗಿದೆ. ಇದರಿಂದಲೇ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಕಾಂಗ್ರೇಸ್ ಪಕ್ಷಕ್ಕಿಂತ ಸದೃಡವಾಗಿದೆ ಜಿಲ್ಲೆಯಲ್ಲಿ.
  ಶಿವಮೊಗ್ಗ ಜಿಲ್ಲೆಯ ಬಗರ್ ಹುಕುಂ ರೈತರ, ಅರಣ್ಯ ಒತ್ತುವರಿ ರೈತರ ಸಂಘಟನೆಯನ್ನು ಮಾಡಿ ಹೋರಾಟ ಮಾಡುತ್ತಿರುವ ಶ್ರೀನಿವಾಸರ ಕ್ರಿಯಾಶೀಲತೆ ಯಾರೂ ಪ್ರಶ್ನಿಸಲಾರದು.
   ತೀ.ನಾ. ಶ್ರೀನಿವಾಸ್ ಅಂತಹ ನಿಷ್ಟಾವಂತ ಕಾಂಗ್ರೇಸ್ ಮುಖಂಡರನ್ನು ಕಾಂಗ್ರೇಸ್ ಪಕ್ಷ ಉಳಿಸಿಕೊಳ್ಳದೇ ಇರುವುದು ಮುಂದಿನ ದಿನಗಳಲ್ಲಿ ಅದರ ಪರಿಣಾಮ ಬೀರಬಹುದು.
  ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಮತ್ತು ಜೆಡಿಎಸ್ ಪಕ್ಷಕ್ಕೆ ಇರುವ ಹಿಡಿತ ಕಾಂಗ್ರೇಸ್ ಪಕ್ಷಕ್ಕೆ ಇಲ್ಲ, ಈಗ ತಮ್ಮ ಮಾತಿನಿಂದ ಜನರನ್ನು ಆಕರ್ಷಿಸುವ ಮಾತುಗಾರ ತೀ.ನಾ. ಶ್ರೀನಿವಾಸ್ ಕಾಂಗ್ರೇಸ್ ನ ವಿರುದ್ದ ಜನಾಭಿಪ್ರಾಯ ರೂಪಿಸಿದರೆ ಅದರ ಪರಿಣಾಮ ಕಾ೦ಗ್ರೇಸ್ ಅನುಭವಿಸಬೇಕಾದ ಅಪಾಯವೂ ಇದೆ.
     ತೀ.ನಾ. ಶ್ರೀನಿವಾಸ್ ಸಂಪರ್ಕ ಸಂಖ್ಯೆ  9448774670

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ